ಅನಿರೀಕ್ಷಿತ ಬದುಕಿನಲ್ಲಿ, ಜವಾಬ್ದಾರಿಗಳ ಸ್ಪೋಟದಲ್ಲಿ—
ಹೆಗಲು ಭಾರ, ಮನಸ್ಸು ಭಾರ, ಹೃದಯವು ಭಾರ ಕೊನೆಗೆ ಆತ್ಮವು ಭಾರ.
ಬಾಲ್ಯದ ಮುಗ್ಧತೆ ಕಣ್ಮರೆ.
ಹಮ್ಮು ಬಿಮ್ಮಿನ ಕೈಸೆರೆ.
ಸರಳ ಜೀವನದ ಕೊನೆಯಾತ್ರೆ.
ಹಗುರವಾಗಿಸುವುದು ಕಣ್ಣೀರೇ...
ಮನಸ್ಸು ನಾಳೆಗಳ್ಹಿಂದೆಯೇ ಓಡಿದೆ.
ಹೃದಯ ಒಳ-ಒಳಗೇ ಅತ್ತಿದೆ.
ಆತ್ಮವು 'ಈ ಕ್ಷಣದಲ್ಲಿ' ಸೋತಿದೆ.
ಜವಾಬ್ದಾರಿಗಳೇ ಗೆದ್ದಿದೆ...
ಜವಾಬ್ದಾರಿಗಳೇ ಗೆದ್ದಿದೆ...
ಇಂತಹ ಎಡೆಬಿಡದ 'ನಿನ್ನೆ-ನಾಳೆಗಳ' ಚಿಂತೆಯೆಂ ಭಾರಗಳ ನಡುವೆ;
'ಇಂದಿನ' ಆತ್ಮಘಾತ ಸರಿಯೇ...!?
----ಚಿನ್ಮಯಿ