Saturday, June 28, 2025

ಅನಿರೀಕ್ಷಿತ ಬದುಕಿನಲ್ಲಿ...

ಅನಿರೀಕ್ಷಿತ ಬದುಕಿನಲ್ಲಿ, ಜವಾಬ್ದಾರಿಗಳ ಸ್ಪೋಟದಲ್ಲಿ—

ಹೆಗಲು ಭಾರ, ಮನಸ್ಸು ಭಾರ, ಹೃದಯವು ಭಾರ‌ ಕೊನೆಗೆ ಆತ್ಮವು ಭಾರ.


ಬಾಲ್ಯದ ಮುಗ್ಧತೆ ಕಣ್ಮರೆ.

ಹಮ್ಮು ಬಿಮ್ಮಿನ ಕೈಸೆರೆ.

ಸರಳ ಜೀವನದ ಕೊನೆಯಾತ್ರೆ.

ಹಗುರವಾಗಿಸುವುದು ಕಣ್ಣೀರೇ...

ಮನಸ್ಸು ನಾಳೆಗಳ್ಹಿಂದೆಯೇ ಓಡಿದೆ.

ಹೃದಯ ಒಳ-ಒಳಗೇ ಅತ್ತಿದೆ.

ಆತ್ಮವು 'ಈ ಕ್ಷಣದಲ್ಲಿ' ಸೋತಿದೆ.

ಸಮಾಜದ ಹೇರಿಕೆ ಏರಿದೆ.

ಜವಾಬ್ದಾರಿಗಳೇ ಗೆದ್ದಿದೆ...

ಜವಾಬ್ದಾರಿಗಳೇ ಗೆದ್ದಿದೆ...


ಇಂತಹ ಎಡೆಬಿಡದ 'ನಿನ್ನೆ-ನಾಳೆಗಳ' ಚಿಂತೆಯೆಂ ಭಾರಗಳ ನಡುವೆ;

'ಇಂದಿನ' ಆತ್ಮಘಾತ ಸರಿಯೇ...!?


             ----ಚಿನ್ಮಯಿ

No comments:

Post a Comment