Sunday, September 8, 2024

ತ್ರಿಪದಿ- ೪

ಅಧರ್ಮೋ ಪರಮಪೂಜ್ಯಂ ಬಂಧು-ಮಿತ್ರರ್—
"ಅಂಧಕಾರಂ-ಅಜ್ಞಾನಂ-ಅಹಂ" ತ್ರಿವಳಿ ಹಿತ ಶತ್ರುಗಳ್—
ಮಾದೇವ ಅಗ್ನಿ ಸ್ಪರ್ಶದಿಂ ನಶಿಸೋ ಚಿನ್ಮಯಿ


"ಭಾವಾರ್ಥ:"
ಅಧರ್ಮವನ್ನು ಆತ್ಮೀಯತೆಯಿಂದ ಪೂಜಿಸೋ ಬಂಧುಗಳು-ಮಿತ್ರರೆಂದರೇ— "ಅಂಧಕಾರ-ಅಜ್ಞಾನ-ಅಹಂಕಾರ"ಗಳು. ಅಧರ್ಮದ ಜೊತೆಗಿ‌ನ ಆತ್ಮೀಯ ಒಡನಾಟದಿಂದಲೇ ನಮಗೆಲ್ಲರಿಗೂ ಈ ಮೂರು ಹಿತಶತ್ರುಗಳು. ನಾವುಗಳು ನಮ್ಮ ದೇಹಕ್ಕೆ ಮಹಾದೇವನ ಅಂಶವಾದ ಅಗ್ನಿಯ ಪವಿತ್ರ ತೇಜಸ್ಸನ್ನು ಸ್ಪರ್ಶಿಸಿ, ಅದರ ಪಾವಿತ್ರತೆಯಿಂದಲೇ ಇವುಗಳನ್ನು ನಶಿಸಿ, ಆತ್ಮವನ್ನು ಶುದ್ಧೀಕರಿಸಿ, ಪರಮಾತ್ಮನ ಸಾಕ್ಷಾತ್ಕಾರಗೊಳ್ಳಿಸಿ ಧರ್ಮವನ್ನು ಕಾಪಾಡಬೇಕು...


         ----ಚಿನ್ಮಯಿ

No comments:

Post a Comment