Thursday, January 8, 2026

ಒಂಬತ್ತನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಹೃದಯ-ಮನಗಳೊಡನೆ ಆತ್ಮ ಸಂಭಾಷಣೆ...

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)


ನಿನ್ನೂರು ತೊರೆದರೇನಂತೆ.

ಊರೂರು ಕರೆದರೇನಂತೆ.

ಹೋದೂರು ನಿನ್ನದಿದ್ದಂತೆ.

ಹೊಂದಿಕೊಂಡು ಬಾಳು ಮನವೆ..

ಬಾಳ ನಿತ್ಯ ರಾಗ ಮೊಳಗಲು.

ಬಾಳ ದಿವ್ಯ ಜ್ಯೋತಿ ಬೆಳಗಲು.

ಇದು ಅನಿವಾರ್ಯವಂತೆ.


ಒಳಗೊಳಗೆ ದುಃಖವಂತೆ.

ದಿನವಿಡೀ ಬರೀ ಚಿಂತೆ.

ಬಾಳೆಂದರೆ ಇದೇ ಸಂತೆ.

ಓಡಿಹೋದರೆ ತರವೇ ಮನವೆ...!?

ಜಗವು ಸಾಗೋ ರೀತಿ ಇದುವೆ.

ಜಗವ ಗೆಲ್ಲೋ ನೀತಿ ಇದುವೆ.

ಮತ್ತೆ ದಿನಕರನುಟ್ಟುವಂತೆ.


ದಿನಗಳುಚ್ಚು ಕುದುರೆಯಂತೆ.

ಗುರಿಯಾಗಬೇಕು ಕರ್ಮವಷ್ಟೇ.

ಆಗು ನೀ ಕಡಲಲೆಗಳಂತೆ.

ಮತ್ತೆ ಮರಳುವೆ ತೀರಕೆ ಮನವೆ..

ಪ್ರತಿ ಕ್ಷಣಗಳ ಹೋರಾಟ.

ಕೆಲವು ದಿನಗಳ ಒದ್ದಾಟ.

ಎಲ್ಲವೂ ಮೃಷ್ಟ ಭೋಜನಕ್ಕಂತೆ.


ಬಾಳ ಚಕ್ರ ತಿರುಗಿದಂತೆ.

ಎಲ್ಲಾ ಸವೆದೋಗುವುದಂತೆ.

ಬದುಕಿಬಿಡು ಈ ಕ್ಷಣದ ಜೊತೆ.

ಜಂಜಾಟಕಷ್ಟೇ ಸಿಲುಕಬೇಡ ಮನವೆ..

ಖಗ-ಮೃಗ, ಸಸ್ಯಕಾಶಿ, ವೃಕ್ಷಗಳು ನಲಿಯುವಂತೆ.

ಪ್ರಕೃತಿಯೊಡನೆ ಸಾಂಗತ್ಯವು ನೃತ್ಯ ನಾಕವಂತೆ.

ಅದುವೇ ನಿಜ ಜೀವನವಂತೆ..



      ----ಚಿನ್ಮಯಿ

Tuesday, January 6, 2026

ಎಂಟನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ನಾ ನಿನ್ನನ್ನು ಸೇರಲು...

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||

ಮಾಯದ ಗಾಯವೇ ಪ್ರೇಮವು ಅಲ್ಲವೇ!

ಸಾವಿಗೂ ಅಂಜಿಕೆ ಕಾಯುವ ಕೋರಿಕೆ.

ಬೀಸುವ ಗಾಳಿಯು ವೃಕ್ಷವ ಅಪ್ಪಿದೆ.

ಸಾಗರ ಆಳವು ಆಗಸ ಮೋಡವು ಸೇರಿದೆ... |ಅನು ಪ|


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||


ಬಾ ಕೇಳು ಬಾ ಈ ಬಡಿತವ.

ನನ್ನೆದೆಯ ಭಾವ ಲಹರಿಯ.

ಗಾಢ ಪ್ರೇಮಕ್ಕೂ ಕಾಯೋ ಬೇಗುದಿ!

ಈ ಖಾಯಿಲೇಗೆ ನೀನೆ ಔಷಧಿ. ||Verse||

ಭಾವದ ಗಾಳಕೆ ಸಿಲುಕಿದೆ ರಾಗವು.

ಜೀವನ ಸಾಥಿಯೇ ಬೇಕಿದೆ ಸನಿಹವು.

ಸೋಲುವೆ ಈಗಲೇ ನಿನ್ನನ್ನು ಗೆಲ್ಲಲು.

ಕನಸಲೂ ನಿನ್ನನೇ ಹೃದಯವು ಬೇಡಿದೆ ಸೇರು ಬಾ... |ಅನು ಪ|


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||


       ----ಚಿನ್ಮಯಿ