Tuesday, January 27, 2026

ಹತ್ತನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ನೀನೇ ಮುಗಿಲು ನಾನೇ ಕಡಲು

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)



ನೀನೇ ಮುಗಿಲು ನಾನೇ ಕಡಲು

ಪ್ರೇಮಧಾರೆಯ ಚಲನ.

ನೀನೇ ಹಗಲು ನಾನೇ ಇರುಳು

ಸಂಧಿಕಾಲದಿ ಮಿಲನ.

ನಾ ನೀನು, ನೀ ನಾನು ಇಬ್ಬರೊಂದೇ..

ದೇಹವೆರಡಾದರೂ ಆತ್ಮವೊಂದೇ.. ||ಪ||


ಎನ್ನಂತರಂಗ ತೋಟದಲ್ಲಿ ಕುಸುಮವು ನೀನು ದುಂಬಿಯು ನಾನು.

ಮನ್ಮಥನ ಬಾಣದಿ ನಿನ್ನಂತರಂಗಕ್ಕೆ ಹರಿಯಲಿ ಪ್ರೇಮ ಜೇನು.

ರತಿರೂಪಿಭಗವತಿಗೇ ಮುಡಿಪಾಗುವ ಬಾ.

ಪ್ರೇಮಜ್ಯೋತಿ ಶಾಖದಿ ಒಂದಾಗುವ ಬಾ. ||೧||


ನೀನೇ ಮುಗಿಲು ನಾನೇ ಕಡಲು

ಪ್ರೇಮಧಾರೆಯ ಚಲನ.

ನೀನೇ ಹಗಲು ನಾನೇ ಇರುಳು

ಸಂಧಿಕಾಲದಿ ಮಿಲನ. ||ಅನು ಪ||


ಮರಗಿಡದಿ ಸಿಹಿಯಾದ ಫಲಾಮೃತ ನಾನು ಬೇರುಗಳೇ ನೀನು.

ನಿನ್ನೊಳಗೆ ಜೀವಿಸಿ ಪ್ರೇಮಾಮೃತವುಣುವೆ ನೀನಾದರೆ ಧೇನು...!

ಪ್ರಕೃತಿಯೇ ನಾಚುವಂತೆ ಸರಸವಾಡುವ ಬಾ.

ಪ್ರೇಮಯೋಗಕ್ಕೆ ನಾಂದಿಯಾಗುವ ಬಾ. ||೨||


ನೀನೇ ಮುಗಿಲು ನಾನೇ ಕಡಲು

ಪ್ರೇಮಧಾರೆಯ ಚಲನ.

ನೀನೇ ಹಗಲು ನಾನೇ ಇರುಳು

ಸಂಧಿಕಾಲದಿ ಮಿಲನ.

ನಾ ನೀನು, ನೀ ನಾನು ಇಬ್ಬರೊಂದೇ..

ದೇಹವೆರಡಾದರೂ ಆತ್ಮವೊಂದೇ.. ||ಪ||



    ----ಚಿನ್ಮಯಿ

Monday, January 19, 2026

Miracles = Science

Miracles are nothing but Science which are beyond Human Imagination, Intelligence and Perception—

Until one experiences it, it's just a hypothesis which is called Superstitious in the world of Atheists.


         ----Chinmayi

Thursday, January 8, 2026

ಒಂಬತ್ತನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ಹೃದಯ-ಮನಗಳೊಡನೆ ಆತ್ಮ ಸಂಭಾಷಣೆ...

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)


ನಿನ್ನೂರು ತೊರೆದರೇನಂತೆ.

ಊರೂರು ಕರೆದರೇನಂತೆ.

ಹೋದೂರು ನಿನ್ನದಿದ್ದಂತೆ.

ಹೊಂದಿಕೊಂಡು ಬಾಳು ಮನವೆ..

ಬಾಳ ನಿತ್ಯ ರಾಗ ಮೊಳಗಲು.

ಬಾಳ ದಿವ್ಯ ಜ್ಯೋತಿ ಬೆಳಗಲು.

ಇದು ಅನಿವಾರ್ಯವಂತೆ.


ಒಳಗೊಳಗೆ ದುಃಖವಂತೆ.

ದಿನವಿಡೀ ಬರೀ ಚಿಂತೆ.

ಬಾಳೆಂದರೆ ಇದೇ ಸಂತೆ.

ಓಡಿಹೋದರೆ ತರವೇ ಮನವೆ...!?

ಜಗವು ಸಾಗೋ ರೀತಿ ಇದುವೆ.

ಜಗವ ಗೆಲ್ಲೋ ನೀತಿ ಇದುವೆ.

ಮತ್ತೆ ದಿನಕರನುಟ್ಟುವಂತೆ.


ದಿನಗಳುಚ್ಚು ಕುದುರೆಯಂತೆ.

ಗುರಿಯಾಗಬೇಕು ಕರ್ಮವಷ್ಟೇ.

ಆಗು ನೀ ಕಡಲಲೆಗಳಂತೆ.

ಮತ್ತೆ ಮರಳುವೆ ತೀರಕೆ ಮನವೆ..

ಪ್ರತಿ ಕ್ಷಣಗಳ ಹೋರಾಟ.

ಕೆಲವು ದಿನಗಳ ಒದ್ದಾಟ.

ಎಲ್ಲವೂ ಮೃಷ್ಟ ಭೋಜನಕ್ಕಂತೆ.


ಬಾಳ ಚಕ್ರ ತಿರುಗಿದಂತೆ.

ಎಲ್ಲಾ ಸವೆದೋಗುವುದಂತೆ.

ಬದುಕಿಬಿಡು ಈ ಕ್ಷಣದ ಜೊತೆ.

ಜಂಜಾಟಕಷ್ಟೇ ಸಿಲುಕಬೇಡ ಮನವೆ..

ಖಗ-ಮೃಗ, ಸಸ್ಯಕಾಶಿ, ವೃಕ್ಷಗಳು ನಲಿಯುವಂತೆ.

ಪ್ರಕೃತಿಯೊಡನೆ ಸಾಂಗತ್ಯವು ನೃತ್ಯ ನಾಕವಂತೆ.

ಅದುವೇ ನಿಜ ಜೀವನವಂತೆ..



      ----ಚಿನ್ಮಯಿ

Tuesday, January 6, 2026

ಎಂಟನೆ ಸ್ವಂತ ಸಾಹಿತ್ಯ ಬರವಣಿಗೆ

ಹಾಡು: ನಾ ನಿನ್ನನ್ನು ಸೇರಲು...

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||

ಮಾಯದ ಗಾಯವೇ ಪ್ರೇಮವು ಅಲ್ಲವೇ!

ಸಾವಿಗೂ ಅಂಜಿಕೆ ಕಾಯುವ ಕೋರಿಕೆ.

ಬೀಸುವ ಗಾಳಿಯು ವೃಕ್ಷವ ಅಪ್ಪಿದೆ.

ಸಾಗರ ಆಳವು ಆಗಸ ಮೋಡವು ಸೇರಿದೆ... |ಅನು ಪ|


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||


ಬಾ ಕೇಳು ಬಾ ಈ ಬಡಿತವ.

ನನ್ನೆದೆಯ ಭಾವ ಲಹರಿಯ.

ಗಾಢ ಪ್ರೇಮಕ್ಕೂ ಕಾಯೋ ಬೇಗುದಿ!

ಈ ಖಾಯಿಲೇಗೆ ನೀನೆ ಔಷಧಿ. ||Verse||

ಭಾವದ ಗಾಳಕೆ ಸಿಲುಕಿದೆ ರಾಗವು.

ಜೀವನ ಸಾಥಿಯೇ ಬೇಕಿದೆ ಸನಿಹವು.

ಸೋಲುವೆ ಈಗಲೇ ನಿನ್ನನ್ನು ಗೆಲ್ಲಲು.

ಕನಸಲೂ ನಿನ್ನನೇ ಹೃದಯವು ಬೇಡಿದೆ ಸೇರು ಬಾ... |ಅನು ಪ|


ನಾ ನಿನ್ನನ್ನು ಸೇರಲು ಕಾತುರ.

ಈ ಹೃದಯ ಹಠವೇ ಸಡಗರ. ||ಪ||


       ----ಚಿನ್ಮಯಿ