ಸೇವಿಸಿದರೆ ತೆಗಳಿಕೆಯೆಂ ಖಾದ್ಯ,
ಹೊಗಳಿಕೆಯಿಂ ಬೆಳವಣಿಗೆ ಸಾಧ್ಯ.
----ಚಿನ್ಮಯಿ
ಮನಸ್ಸಿಗೆ ಕಾಮದೂಟ ಉಣಿಸಿದರೆ ಮನುಷ್ಯನಾಗುವನು ಕಾಮಾಸುರ.
ಮನಸ್ಸಿಗೆ ಪ್ರೇಮದೂಟ ಉಣಿಸಿದರೆ ಮನುಷ್ಯನ ಹೃದಯ ಪ್ರೇಮ ಮಂದಿರ.
----ಚಿನ್ಮಯಿ
ಅಂಕು-ಡೊಂಕಿನ ರಸ್ತೆಯ ಮೇಗಡೆ ದಿನವೂ ಸವಾರಿ.
ಗಾಡಿ ಜೊತೆ ಬಾಡಿ ಬೌಂಸಿಂಗ್ ಹ್ಯಾಂಡಲ್ ಸ್ವಿಂಗಿಂಗ್.
ಬೇಸಿಗೆ-ಚಳಿಗಾಲದಲ್ಲಿ ಪರವಾಗಿಲ್ಲ ರಸ್ತೆ ಕಾಣುವುದು,
ಬೈಕ್-ಕಾರ್ ಓಡ್ಸ್ಬೋದು.
ಮಳೆಗಾಲದ ಕಥೆಯೇ ಬೇರೆ,
ಆಗಲೇ ಉದಯಿಸುವುದು ಸಿಟ್ಟಿನ ಮೋರೆ.
ಗಾಡಿ ಓಡ್ಸೋ ಕಷ್ಟಕ್ಕೆ ಆಗಾಗ ನೆನೆಸ್ಕೊಂಡ್ ನೆನೆಸ್ಕೊಂಡ್ ಉಗಿಯುವೆವು,
"ಎಂಎಲ್ಎ - ಎಂಎಲ್ ಸಿ - ಎಂಪಿ" ಗಳಿಗೆ "ಥೂ ಬ್ಯಾವರ್ಸಿಗಳ ನಿಮ್ಮ್ ಮಕ್ಕೆ, ಉದ್ದಾರ ಆಗಕ್ಕಿಲ್ಲ ದ್ಯಾವ್ರಾಣೆ" ಎಂದು.
----ಚಿನ್ಮಯಿ
ಮಾಡಿ ನೋಡು ಅಹಂಕಾರದ ಸಂಹಾರ,
ಮರುಚಣವೇ ಉದ್ಭವಿಸುತ್ತದೆ ಸಂಸ್ಕಾರ.
'ಸಂಸ್ಕಾರ'ದಿಂದಲೇ 'ಅಹಂಕಾರ'ದ ಸಂಹಾರ...
----ಚಿನ್ಮಯಿ
ಮನುಷ್ಯ ಇತರ ಮನುಷ್ಯರನ್ನು ಹಾಗೂ ಸಕಲ ಜೀವರಾಶಿಗಳನ್ನು ತನ್ನಲ್ಲಿ ಒಬ್ಬರೆಂದು ಮಾನವೀಯತೆಯಿಂದ ಕಂಡರೆ ಪ್ರಪಂಚ ಎಷ್ಟೋ ಸುಂದರಮಯ
----ಚಿನ್ಮಯಿ
ದೇವರೇ ಈ ಬದುಕು ನಿನ್ನಯ ಭಿಕ್ಷೆ.
ತಪ್ಪಿಗೆ ಅನುಭವಿಸಲೇಬೇಕು ಶಿಕ್ಷೆ.
ಬಂದಂತೆ ಬದುಕುವುದೇ ಧರ್ಮ.
ಇಲ್ಲವೇ ಕಾದು ಕುಳಿತಿರುವುದು ಕರ್ಮ.
----ಚಿನ್ಮಯಿ
ಬದುಕ- ಬಂದಂತೆ ಜೀವಿಸು.
ಎಲ್ಲರ ನಿಷ್ಕಲ್ಮಶದಿ ಪ್ರೀತಿಸು.
ಇಷ್ಟಿದ್ದರೆ ದ್ವೇಷ-ಆಕ್ರೋಷ ಇನ್ನೇತಕೆ?
ಖುಷಿಯಿಂದ ಜೀವಿಸಿದರೆ ಸಾರ್ಥಕವು ಬದುಕೇ..
----ಚಿನ್ಮಯಿ
There are two successes to be achieved in life:
•The first one (which everyone needs it desperately and almost all achieve it) is to earn name, fame, and money- All comprises of getting settled.
•The second one and the most important one (which only few achieve but most fail to achieve) is to lead a peaceful, happy life by "being human".
----chinmayi
ಚೊಚ್ಚಲ ಚಲನಚಿತ್ರದ ಸಾಹಿತ್ಯ ಬರವಣಿಗೆ
ಹಾಡು: ನಿಜವಾ ಇದು
ಚಲನಚಿತ್ರ: ಲವ್ ಲೆಟರ್
ಸಾಹಿತ್ಯ: ಚಿನ್ಮಯಿ
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಕೈಹಿಡಿದು ನೀನು ಸಪ್ತಪದಿ ತುಳಿದು.
ಕೈಹಿಡಿದು ನೀನು ಸಪ್ತಪದಿ ತುಳಿದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಬೆನ್ನಿಂದೆಯೇ ಪ್ರೀತಿ ಕೊಂದೆ ಇಂದು. ||೧||
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ! ||ಅನು ಪ||
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ನಗುಮುಖದೀ ಮುಖವಾಡವ ಧರಿಸಿ.
ನಗುಮುಖದೀ ಮುಖವಾಡವ ಧರಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ಮನಃಶಾಂತಿಯ ಕೆಡಿಸಿ ದೂರಾದೆ ನೀ. ||೨||
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||
----ಚಿನ್ಮಯಿ
ಎದೆ ಮುಗಿಲ ಮೋಡಗಳು ಭಾರವಾಗಲು—
ನಯನಗಳು ಸುರಿಸುತ್ತಿವೆ ಧಾರಾಕಾರ ಮಳೆಯ.
ಕರಿ ಮೋಡಗಳ್ಹಿಂದೆ ಎಲ್ಲೋ ನಗೆ—
ಸೂರ್ಯನು ಮರಳಿ ಉದಯಿಸಬಹುದೇನೋ ಪ್ರಾಯಶಃ!
ಎದೆದೋಟದ ಹೂಗಳೆಲ್ಲವೂ ಬಾಡಿ—
ಕಳೆದುಕೊಂಡಿರುವ ಹಾಗಿದೆ ಬದುಕಿನ ಉತ್ಸಾಹವ.
ಯಾರಾದರೂ ನವ ಚೈತನ್ಯವೆಂ—
ನೀರುಣಿಸಿ ಮರಳಿ ಬದುಕಿಸಬಹುದೇನೋ ಪ್ರಾಯಶಃ!
----ಚಿನ್ಮಯಿ
"Information" is the infinite dots hidden in nature.
"Knowledge" is how one tries to acquire as many dots as possible.
"Intelligence" is how one connects to the acquired dots.
"Wisdom" is how one leads life to the fullest after connecting with the dots.
----Chinmayi
"ನಾ ತಿನಿಸುವೆ, ನಾ ತಿನಿಸುವೆ."
'ನಾ ತಿನ್ನುವೆ, ನಾ ತಿನ್ನುವೆ.'
"ನೀ ಮೊದಲೋ ನಾ ಮೊದಲೋ ನೋಡುವೆ."
'ಓಹೋ! ಸರಿ ನಾನು ಸಹ ನೋಡುವೆ.'
"ಇಗೋ ಶುರುವು ಆಟ,
ಇದೇ ನಿನಗೆ ಊಟ.
ಅಗಲಿಸು ಬಾಯಿಯನ್ನ,
ಕೈಯಿಗೆ ಕೊಡು ಕೆಲಸವನ್ನ."
'ಬಟಾಣಿ, ಈರುಳ್ಳಿ, ಟೊಮ್ಯಾಟೊ, ಮಿಕ್ಸ್ಚರ್,
ಮಸಾಲೆ, ಪಾನಿಯ ಪರ್ಫೆಕ್ಟ್ ಮಿಕ್ಸ್ಚರ್.
ಆಹಾ! ರುಚಿಯೋ ರುಚಿಯು,
ನಾಲಗೆಗೇನೋ ಸಡಗರದ್ಕುಣಿತವು.'
'ಮೊದಮೊದಲು ನಾ ಮೊದಲು,
ತದನಂತರ ನೀನೇ ಮೊದಲು.'
"ಒಂದರಿಂದಿನ್ನೊಂದು ಪಾನಿಪುರಿ,
ತಿನಿಸುವುದರಲ್ಲಿ ನಾನೇ ಕಿಂಗು ರೀ.
ಇನ್ನಷ್ಟು ತಿನಿಸುವೆ ಬಾ ಬಾರೋ,
ತಿಂದು ಗೆದ್ದರೆ ನೀನೇ ಹೀರೋ."
'ಅಯ್ಯೋ! ಶುರುವಿನಲ್ಲಿ ಮಸ್ತೋ ಮಸ್ತು,
ತಿಂದು ಸಾಕಾಗೀಗ ಸುಸ್ತೋ ಸಸ್ತು.'
----ಚಿನ್ಮಯಿ
Do you know who the Real INDIANS are?
'Undercover Agents' and 'RAW Agents', who work anonymously to safeguard India from any threats even after knowing that they doesn't receive any benefits, medals, name, fame etc in return for their sevice towards India are the Real INDIANS.
----Chinmayi
ಹೇಗೆ ಕಾಮನಬಿಲ್ಲು ಬಿಸಿಲು-ಮಳೆಯ ಮಿಲನದ ಫಲವೋ,
ಹೇಗೆ ಹಣತೆಯ ಬೆಳಕು ಎಣ್ಣೆಯ ಅವಲಂಬಿತವೋ,
ಹಾಗೆಯೇ,
ಎಲ್ಲರೂ ಇಲ್ಲಿ ಸಮಯದ ಗೊಂಬೆಯೇ.
ಸಮಯಕ್ಕೆ ಮಾತ್ರ ನೆನೆಯುವ ಸ್ವಾರ್ಥಿಗಳೇ.
ಹೇಗೆ ಊಸರವಳ್ಳಿಯು ಬೇಕಾದಾಗ ಬಣ್ಣವ ಬದಲಿಸುವುದೋ,
ಹೇಗೆ ಕೋಗಿಲೆಯು ತನ್ನ ಮೊಟ್ಟೆಗಳನ್ನ ಕಾಗೆಯ ಮೊಟ್ಟೆಗಳ ಜೊತೆ ಬೆರೆಸುವುದೋ,
ಹಾಗೆಯೇ,
ಎಲ್ಲರೂ ಇಲ್ಲಿ ಕೆಲಸ ಮುಗಿಯುವವರೆಗೂ ಜೊತೆಗಾರರೇ.
ಕೆಲಸ ಮುಗಿದ ನಂತರ ಹಠಾತನೇ ಕಣ್ಮರೇ.
ಹೇಗೆ ರಸ್ತೆಯಲಿ ಓಡುವ ಗಾಡಿಗೂ ಡೆಡ್ ಎಂಡ್ ಇರುವುದೋ,
ಹೇಗೆ ಬಲುದೂರ ಕರೆದೊಯ್ಯೋ ಗಾಡಿಗೂ ಕೆಲವು ಸಲ ಬಯ್ಯುವೆವೋ,
ಹಾಗೆಯೇ,
ಕೆಲಸ ಮುಗಿದ ನಂತರ ನಮ್ಮನ್ನು ಮರೆಯುವರು.
ಧನ್ಯವಾದಗಳು ಕೂಡ ಹೇಳದೆ ಹೊರಟೋಗುವರು ಹಾಗೂ ಮತ್ತೆ ಕೆಲಸದ ನಿಮಿತ್ತ ಬರುವರು.
ಮನುಜನು ಗಾಳಿ-ನೀರು-ಬೆಳಕು-ಆಹಾರಗಳ ಬಂಧಿತನು,
ಇಷ್ಟಿದ್ದರೂ ಜಂಭದಿ "ನಾನು, ನಾನೇ" ಎಂದು ಮೆರೆವನು.
ಒಳಿತು ಮಾಡು ಮನುಸ,
ಕಷ್ಟದಿ ಕೈಯಿಡಿದವರ ನೆನೆಯುತಿರು ದಿವಸ.
----ಚಿನ್ಮಯಿ
ಹೂವಿನೆಡೆಗೆ ದುಂಬಿಯ ಪಯಣ,
ಅವನೆಡೆಗೆ ನನ್ನಯ ಗಮನ,
ದುಂಬಿಗೆ ಸಿಹಿಯ ಸುಖಭೋಗ,
ನನ್ನಲ್ಲಿ ಶುರುವು ಪ್ರಣಯ ಯಾಗ,
ಹಾ! ಹಾ! ಇದುವೆಯಾ ಒಲವ ರಾಗ!?
ಧರೆಗೂ ಬಾನಿಗೂ ನಡುವೆ ಅಂತರ,
ಅವನನ್ನು ಸೇರಲು ಮನಸ್ಸಿಗೆ ಆತುರ,
ಮಳೆಯ ಸೇತುವೆ ಪ್ರಣಯ ಮಾರ್ಗ,
ಎದೆಯೊಳಗಿನ ಅನುಭವ ಅಮೋಘ,
ಹಾ! ಹಾ! ಇದೆಂಥಹ ಒಲವ ರಾಗ!
ಚಿಗುರೆಲೆಗಳ ನರ್ತನಕ್ಕೆ ಗಾಳಿಯೇ ಮಾಲಿಕ,
ಅವನ ಸ್ಪರ್ಶದಿಂದಲೇ ಪ್ರೇಮವು ದ್ಯೋತಕ,
ಮರಗಳಿಗಂತು ಮಿಲನವ ಸವಿಯುವ ಸುಯೋಗ,
ಇದುವೇ ಇರಬಹುದೇನೋ ವಾಸಿಯಾಗದ ಪ್ರೇಮರೋಗ!
ಹಾ! ಹಾ! ಸುಮಧುರವು ಒಲವ ರಾಗ.
----ಚಿನ್ಮಯಿ
ಒಲವ ದಾರಿಯಲಿ ನಡೆವಾಗ ಎದುರು ಬಂದಳೋರ್ವ ಮನಮೋಹಿನಿ,
ನಯನಗಳ್ಕುಣಿಯಲು ಮೊಗವರಳಲು ಕಾರಣ-
ಎದೆದೋಟದ ಸುಹಾಸಿನಿ.
ಕೇಶವ ಕೆದರುತ ಹಿಂದಿರುಗಿ ನೋಡುತ ಮರೆತೆ ಮನೆದಾರಿಯ,
ಆಕೆಯು ಹಿಂದಿರುಗಲು ತಲೆಯ ಕೆಳಗಿಳಿಸಲು ಮೇಲ್ನೋಡಿ-
ಜಿಗಿಯಲು ಪ್ರೇಮೋದಯ.
ಉದಯರಾಗ ಮೂಡಲು ಪ್ರಣಯಗೀತೆ ಹಾಡಲು ಶುರುವಾಯ್ತು ಪಯಣವು,
ಎದುರು ಬಂದು ನಿಂತರು ಪಕ್ಕಕ್ಕೆ ಸರಿದು ಹೋದಳು-
ಪ್ರಣಯವಾಯ್ತು ವಿರಹವು.
ಒಮ್ಮೆ ಹಿಂದೆ ನೋಡಲು ಹಕ್ಕಿ ಇನೋರ್ವ ಹೆಗಲೇರಿದೆ ಪ್ರಣಯಗೂಡು ಮುರಿದಿದೆ,
ನಾನೇ ತಪ್ಪು ತಿಳಿದೆನೋ ಅವಳೇ ಬಿಟ್ಟು ಹೋದಳೋ ಅರಿಯದೆ-
ಮನೆಯೆಡೆಗೆ ಸಾಗುತ ವಿರಹಗೀತೆ ಹಾಡಿದೆ.
----ಚಿನ್ಮಯಿ
ಮನಸ್ಸನ್ನು ಮನಸೂರೆಗೊಳ್ಳಿಸಿ
ಪ್ರೇಮ ಬಲೆಯೊಳು ಬಂಧಿಸಿ
ಅಭಿಸಾರಿಕೆಯಾಗಿ ಎನಗಾಗಿ ಕಾಯುವವಳಾಕೆ.
ತುಷಾರ ಹವಾಮಾನವಿದ್ದರು
ಹಜಾರ ಬಳಿಯೇ ಕೂತು
ಎನಗಾಗಿ ಪ್ರೇಮಯೋಗಿ ಆಗುವವಳಾಕೆ.
ಮುಂಜಾನೆ ಮುಗುಳ್ನಗುತ ಕಳುಹಿಸಿ
ಸಾಯಂಕಾಲ ಬರುವುದು ತಡವಾದರೆ
ಎನಗಾಗಿ ವಿಹ್ವಲವಾಗುವವಳಾಕೆ.
ಸಂಬಳ ಅಪೇಕ್ಷೆ ಕೊಂಚವಿಲ್ಲದೆ
ಸ್ನಿಗ್ಧ ಪ್ರೇಮವ ಮಾತ್ರ ನೀಡುವ
ನಿಸ್ವಾರ್ಥ ಪ್ರೇಮದರಸಿಯು ಆಕೆ.
ಎನ್ನ ಎದೆ ಅಂಗಳದೊಳು
ಅವಳದೇ ಹೆಜ್ಜೆಗುರುತಿರಲು
ಪ್ರೇಮ ಗೆಜ್ಜೆನಾದದ ಸೆಲೆ ಅವಳದಲ್ಲದೆ ಇನ್ಯಾರದಿರಲು ಸಾಧ್ಯವು!
ಅವಳೇ
ಬಾಳಶೋಭಿತೆ.
ಗೃಹಭೂಷಿತೆ.
----ಚಿನ್ಮಯಿ
1) RCB not winning IPL.
2) The Irritating Traffic.
3) Other State people not speaking KannaDa and telling "KannaDa" as "KannaD".
4) Our State people showing "Shoki" by speaking other languages even knowing "KannaDa".
5) Disgusting Hindi Imposition by Northies.
----Chinmayi
1) Existence of RCB and BFC
2) The Weather
3) Gully Cricket
4) Weekend Parties and Night Life
5) Variety of Mouth Watering Food
----Chinmayi
ಎತ್ತ ಸಾಗಲಿ— "ಮುಂದೆ ಸಾಗಲ? ಹಿಂದೆ ಸಾಗಲ ಚೆನ್ನಕೇಶವ!"
" 'ಎತ್ತ ಎತ್ತ' ಎಂಬ ಚಿಂತೆ ಬಿಡು ಸಮಚಿತ್ತ ಸಸಿಯ ನೆಡು
ದಿಟ್ಟ ಉತ್ತರ ಒಳಗಿಹುದೋ- ಚಿನ್ಮಯಿ"||
"ಭಾವಾರ್ಥ:"
ನಿನ್ನೆಯ ಬಗ್ಗೆ ಯೋಚಿಸಿ ಕೊರಗುತ ಬದುಕಲ? ಅಥವಾ ನಾಳೆಯ ಚಿಂತೆಯಂಬ ಚಿತೆಯಲ್ಲಿ ಸುಡುತ ಬದುಕಲ? ಏನು ಮಾಡಲೆಂದು, ಹೇಗೆ ಬದುಕಲೆಂದು ನಾನು ಶ್ರೀ ಕೃಷ್ಣನತ್ರ ಕೇಳುವಾಗ, ಹೀಗೆಂದು ನನ್ನೊಳಗೆ ನೆಲೆಸಿಹ ಶ್ರೀ ಕೃಷ್ಣನು ಉತ್ತರಿಸುತ್ತಾನೆ— ನಿನ್ನೆ-ನಾಳೆ, ಏನು-ಹೇಗೆ ಎಂಬ ಗಾಬರಿ-ಭಯಬೀರಿತ ಪ್ರಶ್ನೆಗಳ ಬಿಟ್ಟು, ಯೋಚನೆ-ಚಿಂತೆಗಳ ಅಂತೆ-ಕತೆಗಳ ಬಿಟ್ಟು ಮೊದಲು ನಿನ್ನ ಮನಸ್ಸಿನ ಹಿಡಿತ ಸಾಧಿಸುತ, ಪಂಚೇಂದ್ರಿಯಗಳ ಮೇಲಿಡಿತ ಸಾಧಿಸಿ ಈ ಕ್ಷಣದಲ್ಲಿ ಬದುಕಲಾರಂಭಿಸು ಆಗ ನಿನಗೆ ತಾನಾಗಿಯೇ ನಿನ್ನೊಳಗಿನಿಂದಲೇ ಉತ್ತರ ದೊರಕುವುದು, ಆ ಉತ್ತರವೇ ಬದುಕಲು ದಾರಿದೀಪವಾಗುವುದು, ಆ ಉತ್ತರದ ಸೂತ್ರಧಾರ ನಾನೇ ಆಗಿರುವೆನು...
----ಚಿನ್ಮಯಿ
ಮೋಡ ಬಿಕ್ಕಿಬಿಕ್ಕಿ ಅಳಲು-
ಜಗಕ್ಕೆ ಪರಿಚಯ ಹರುಷ.
ಪಂಚ ಭೂತಗಳ ಸಮ್ಮಿಲನ-
ಜನಿಸಿತು ಹೊಸ ವರುಷ.
ಬಂತೋ ವರುಷದ ಕೊನೆಯ ಮಳೆ..
ಬಾಳ ಸಾಗರವ ಸೇರಲಿ ಸಡಗರ ಹೊಳೆ.
ಹನಿಗಳ ತೋರಣ,
ಮಣ್ಣಿಗೆ ಹೂರಣ.
—ಇಬ್ಬರ ಸಂಗಮ,
ಯುಗದ ಉಗಮ.
ಬಂತೋ ವರುಷದ ಕೊನೆಯ ಮಳೆ..
ಮನವ ತೊಳೆದು ಅಳಿಸಲಿ ಕೊಳೆ.
----ಚಿನ್ಮಯಿ
ಬೆಂಗಳೂರು ಮಹಾನಗರ
—ನೂಕುನುಗ್ಗಲು ಜನ ಸಾಗರ
—'ಬಿಎಂಟಿಸಿ', 'ಮೆಟ್ರೋ' ಅನುದಿನ ಸಂಚಾರ.
ಬೆಂಗಳೂರ ಮೇಲ್ನೋಟ
—ದಿನನಿತ್ಯ 'ಟ್ರಾಫಿಕ್' ಜಂಜಾಟ
—'ಸೌಂಡ್ ಪೊಲ್ಯೂಷನ್', 'ವಾಟರ್ ಪೊಲ್ಯೂಷನ್', 'ಏರ್ ಪೊಲ್ಯೂಷನ್' ಗಳ ಪೀಕಲಾಟ.
----ಚಿನ್ಮಯಿ
ಎಲ್ಲರ ಮನೆಯ ಕಥೆಯೇ
ನಮ್ಮನೆದೂನು
ಕಾರು ಖರೀದಿಸಿ ಕಾರಿನ
ಸವಾರಿಯ ತೃಪ್ತಿ
ಯೊಳು ಅತೀತ ಖುಷಿ
ಪಡುವುದು
ಯಾರಿಗಿರಲ್ಲ ಸ್ವಾಮಿ ಆಸೆ ಹೇಳಿ!
ಎನಗೂ ಎನ್ನಣ್ಣನಿಗೂ ಅಷ್ಟಾಗಿ
ಓಡಿಸಲು ಬರದ ಕಾರಣ
ಒಂದ್ 'ಸೆಕೆಂಡ್ ಹ್ಯಾಂಡ್ ಕಾರ್'
ಸಾಕು ಎಂದೇ ನಿರ್ಧರಿಸಿದ್ದೆವು
ಅದರ ಹುಡುಕಾಟದಲ್ಲಿಯೇ
ಅದೆಷ್ಟು ಕಡೆ ಅದೆಷ್ಟು ಶೋರೂಂ
ಹುಡುಕಿದೆವೋ ಲೆಕ್ಕವಿಲ್ಲಾ
ಈ ಪುಣ್ಯಾತ್ಮನಿಗೋ
'ಟಾಪ್ ಎಂಡ್' ಕಾರೇ ಬೇಕಿತ್ತು
ಅದು ಸೆಕೆಂಡ್ಸ್ನಲ್ಲೇ
ಇದಕ್ಕಾಗಿಯೇ ಕೊಂಚ ಲೇಟ್ ಆಯ್ತು.
ಎಲ್ಲಾ ಕಡೆ ಹುಡುಕಿ ಹುಡುಕಿ ಸಾಕಾಗಿ
ಈಗೆ ಒಂದಿನ
ನನ್ 'ಕುಚಿಕು'ವಿನ ಸಂಬಂಧಿಕರೊಬ್ಬರ
'ಪ್ರೀ-ಓನ್ಡ್ ಕಾರ್ ಶೋರೂಂ'ಗೆ ಹೋದೆವು—
ಅಲ್ಲಿ ಸಿಕ್ಕರು ಸಿಗಬಹುದೇನೋ ಎಂಬ
ಮಹದಾಶಯದಲ್ಲಿ
'ಓಲ್ಡ್ ಆದ್ರೂ ಲೇಟೆಷ್ಟ್' ('ಲೇಟ್ ಆದ್ರೂ ಲೇಟೆಷ್ಟ್')
ಎಂಬಂತೆ
ದೇವರು ಅವನ ಕರೆಯ ಆಲಿಸಿ ಅಸ್ತು ಎಂ
ದಂತೆ ಸಿಕ್ತು ಕೊನೆಗೂ ಅವನಿಚ್ಛೆಯ ಕಾರು
ಕಾರೇನೋ ಬೊಂಬಾಟಾಗಿತ್ತು
ನಮ್ಮಿಬ್ರಿಗೂ, ಅಪ್ಪ-ಅಮ್ಮನಿಗೂ ಇಷ್ಟವಾಯಿತು
ಎಲ್ರಿಗೂ ಅದೇನೋ ನಿರ್ಲಿಪ್ತ ಭಾವ ಕೊನೆಗೂ.
ಹಾ ಹಾ ಅದೆಷ್ಟು ಚೆಂದ ಸ್ವಾಮಿ
'ಏರ್ಬ್ಯಾಗ್ ಗಳು, ಎಬಿಎಸ್, ಇನ್ಫೋಟೇನ್ಮೆಂಟ್, ರಿವರ್ಸ್ ಕ್ಯಾಮೆರ, ಮ್ಯಾಗ್ ವೀಲ್ ಗಳು, ಸ್ಪೋರ್ಟಿ ಲುಕ್, ಅದು ಇದು ಇತ್ಯಾದಿ'
—ಎಲ್ಲಾ ಸೌಕರ್ಯಗಳುಳ್ಳಂತಹ ಅದ್ಭುತ ಇಷ್ಟವಾದ ಕಾರು
'ಒಂದು ಲಕ್ಷ ಚಿಲ್ರೆ ಕಿ.ಮೀ.' ಓಡಿದ್ದರೂ
ಬಲು ಸ್ಮೂತಾಗಿತ್ತು ಕಾರು
ಅಷ್ಟಾಗಿ ಎಕ್ಸ್ಟ್ರಾ ಖರ್ಚು ಬೀಳಲಿಲ್ಲ
—ಅದರಿಂದ ಇನ್ನೂ ಕೊಂಚ ಖುಷಿಯೋ ಖುಷಿ.
ಏತನ್ಮಧ್ಯೆ ನಾವಿಬ್ರೂ ಪರಿಪೂರ್ಣವಾಗಿ ಕಲಿಯ
ಲೆಂದು ದಿನನಿತ್ಯ 'ರೌಂಡ್' ಹೊಡೆಯುವ ಮಜ ಒಂದ್ಕಡೆ ಆದ್ರೆ
ಇನ್ನೊಂದ್ಕಡೆ
'ಕ್ಲಚ್ಚು, ಬ್ರೇಕು ಹಾಗು ಆಕ್ಸಿಲರೇಟರ್'
ಗಳು ಕಾಲುಗಳ ಸ್ಪರ್ಶಕ್ಕೆ ಸಿಲುಕಿ
'ಗೇರು ಹಾಗು ಸ್ಟೇರಿಂಗ್'
ಗಳು ಕೈಗಳನ್ನು ಸೋಕಿ
ಸುಖಮಯ ನೋವನ್ನು ಒಂದೇ ಸಮನೆ
ಅನುಭವಿಸಿದವು.
ಅವನೇನೋ ಪುಸ್ಸುಕನೆ
ಬಹು ಬೇಗ ಕಲಿತು ಬಿಟ್ಟ
ಎನಗೋ ಬರೋಬ್ಬರಿ
ಎರಡ್ಮೂರು ವಾರಗಳೇ ಬೇಕಾಯ್ತು
ಕಲಿಯುವ ಆತುರದಲ್ಲಿ ಎರಡ್ ಸಲ
ಡಿಕ್ಕಿ ಹೊಡೆದದ್ದು ಉಂಟು
ಕಾರ್ 'ಡೆಂಟ್' ಆದದ್ದು ಉಂಟು
ಅದೆಷ್ಟು ನೋವಾಯ್ತೋ ಏನೋ
ಪಾಪ ಕಾರಿಗೆ
ಎಷ್ಟೇ ಆದರೂ ಕಲಿಯುವಾಗ
ಇದೆಲ್ಲಾ ಮಾಮೂಲಿ ಬಿಡಿ
ಆದರೇ ಕಲಿತ ಮೇಲಂತೂ ಅವನು
ಪರ್ಫೆಕ್ಟ್ ಡ್ರೈವರ್ ಆದ
ನಾನು ಕೂಡ ಅವನಷ್ಟಿಲ್ಲ ಅಂದ್ರೂ ಓಡಿಸುವೆ—
ಕೂತವರಿಗೆ ಭಯ ಇರ್ಬಾರ್ದಷ್ಟೆ.
ಇದುವೆ ನೋಡಿ 'ನಮ್ಮನೆಯ ಮೊದಲ ಕಾರಿನ ಕಥೆ'.
(ಅಂದ್ಹಾಗೆ ಕಾರ್ ಯಾವ್ದು ಅಂತ ಹೇಳೇ ಇಲ್ಲ ಅಲ್ವಾ
—ಥೂ ಹೋಗಪ್ಪ ಈ ಅರ್ಧಂಬರ್ಧ ನೆನಪಿಂದ ಮರ್ತೆಬಿಟ್ಟಿದೆ
'ಮಾರುತಿ ಸುಜ಼ುಕಿ ಸ್ವಿಫ್ಟ್ ೨೦೧೩ ನೇ ಲಿಮಿಟೆಡ್ ಎಡಿಷನ್ ಪೆಟ್ರೋಲ್ ಮಾಡೆಲ್' ಯೇ ನಮ್ಮ ಕಾರು)
----ಚಿನ್ಮಯಿ
ಹಾಡು: "ನಗುತ ತಾಯಿ"
ಚಿತ್ರ: "ಮದಗಜ"
ಮೂಲ ಸಾಹಿತ್ಯ: "ಕಿನ್ನಾಲ್ ರಾಜ್"
ಮೂಲ ಗಾಯನ: "ಸಂತೋಷ್ ವೆಂಕಿ"
ಸಂಗೀತ: "ರವಿ ಬಸ್ರೂರ್"
ಮರುಸಾಹಿತ್ಯ ಹಾಡು: "ಸೋದರ-ಸೋದರಿ ಗೀತೆ"
ಅವಳೇ ಜೀವ ಎನಗೆ ದೈವ ಆಕಾಶದ ಮಿನುಗು ತಾರೆ,
ಬೇರೇ ಯಾವ ಜಾಗವು ಬೇಕಿಲ್ಲ ಅವಳ ಮಡಿಲಲ್ಲೆನ್ನ ಡೇರೆ.
ಉದರದ ಗೆಳತಿ ಸೋದರಿ ಎಂದು ಪದೇಪದೇ ಅಭ್ಯಾಸ ಅವಳಿಂದ ನಂಗೆ,
ಹಾಜರಿ ನಾನೇ ನೆನೆದರೆ ಒಮ್ಮೆ ಭಯದ ಕಡುರಾತ್ರಿಯಲ್ಲೂ ಆ ಕರೆಗೆ. ||ಪ||
ಹಿತ ಸ್ವರದಿಂದ ಕಣ ಕಣದಲ್ಲೂ ಶೃತಿಗೂ ಲಯಕ್ಕೂ ಸುಮಧುರ ನಂಟು,
ಎದೆಯ ಗೂಡೇ ದೇವರಸ್ಥಾನ ಅವಳೇ ದೇವತೆಯ ಪ್ರತಿ ಧ್ವನಿಯಂತೆ.
ಅರೆ ಘಳಿಗೆ ಬಿಡೆನು ಸ್ವಂತವೆಂದೂ ಆಕೆ,
ರವಿ ಇರುವ-ತನಕ ಅವಳಂತು ಕ್ಷೇಮ.
ಪ್ರಭೆ-ಯಂತೆ ಬೆಳಗೋ ಮೋರೆ ಕಂಡಾಗ,
ಮನದೊಳಗೆ ಉಗಮ ಹೊಸತು ಮಧುರ ಪ್ರೇಮ. ||೧||
ಲಕುಮಿ ನಾಥ ಹರನ ಭಾರ್ಯೆ ಜಗದ ಮೊದಲ ರಕುತ ಬಂಧ,
ಅವರೇ ನಾಚಿ ಬೆರಗೋ ಹಾಗೆ ಮೋಹಕ ಪ್ರೀತಿ ನಮ್ಮದೆ ಸ್ವಂತ.
ಅವಳೆಜ್ಜೆ-ಧರೆಗೆ ಸೋಕಿದರೆ ಸಾಕು,
ಕಹಿಬೇನೆ-ಸೋತು ಮಂಡಿ ಊರಿ ಶರಣು.
ಕಾದಾಟದಲ್ಲೂ ಸ್ವರ್ಗ ಸುಖವ ನೀಡೋ,
ಆಂತರ್ಯ ಜ್ಯೋತಿ ಆಕೆ ಬಾಳ ಭಾನು. ||೨|
----ಚಿನ್ಮಯಿ
| ಚಿತ್ರಕ್ಕೆ ಪದ್ಯ/ ಸಾಕ್ಷ್ಯಚಿತ್ರ ಅನುವಾದ- ೫೭ |
ಬನ್ನಿ ವೀಕ್ಷಕರೇ, ಇವತ್ತು 'ವಿಷಕಾರಿಯಲ್ಲದ' ಒಂದು ಬಗೆಯ ಜೀವಿಯ ಬಗ್ಗೆ ತಿಳಿಯೋಣ. "ಅದೇ ಹಾವು". ಅರೇ ಏನಪ್ಪ ಇದು ಹಾವು ಅಂತಿದ್ದಾರೆ ಅಂತ ಆಶ್ಚರ್ಯ ಆಯ್ತ!? ಚಿಂತೆ ಬೇಡ, ಬನ್ನಿ ಅದೇನು ಅಂತ ವಿವರವಾಗಿ ಹೇಳ್ತಿನಿ ಕೇಳಿ.
ವಿಷಕಾರಿಯಲ್ಲದ ಹಾವಿನ ಜಾತಿಯೊಂದಿದೆ, ಇದೆ ಸತ್ಯ. ಅದುವೇ 'ಏಷ್ಯಾದ ನೀರಾವು'. ಇದು ಸಾಮಾನ್ಯವಾಗಿ ಭಾರತದಲ್ಲಿ ಕಾಣುವಂತಹ ಹಾವುಗಳು. ಆದರೇ, ಇವುಗಳಿಗೆ ತೊಂದರೆಯುಂಟಾಗುವಂತಹ ಪರಿಸ್ಥಿತಿ ಬಂದರೆ ಕಚ್ಚಬಹುದು ಜೋಕೆ...! ಇವುಗಳು ನೆಸರ್ಗಿಕ ಹಾವುಗಳು ಅಥವಾ ಬೆನ್ನೇಣು ಹಾವುಗಳು. ಇವುಗಳು ಸರಿಸುಮಾರಾಗಿ ಮಧ್ಯದ ಗಾತ್ರದಲ್ಲಿರುವವು ಹಾಗೆಯೇ ಅಡಿಹಲಗೆ ಮಾಪಕಗಳನ್ನು ಹೊಂದಿರುವವು, ಇಷ್ಟಿದ್ದರೂ ಸಹಾ ಹೊಳಪಿನಿಂದ ಕಂಗೊಳಿಸುತ್ತವೆ. ಇವುಗಳ ಮೈಯೆಲ್ಲಾ ರಂಗುರಂಗಿನ ಮಾದರಿಯಂತೆ ಹಸಿರು, ಹಳದಿ ಹಾಗೂ ಕಂದು ಬಣ್ಣಗಳಿಂದ ರಾರಾಜಿಸುತ್ತದೆ. ಇವುಗಳು ಸರಾಸರಿಯಾಗಿ ೩-೪ ಅಡಿಯವರೆಗೂ ಬೆಳೆಯುತ್ತದೆ, ಕೆಲವು ೫ ಅಡಿಯವರೆಗೂ ಬೆಳೆಯಬಲ್ಲವು.
ಇವುಗಳು ಭಾರತದಲ್ಲೆಲ್ಲಾ ತುಂಬಾನೇ ಸಾಮಾನ್ಯ. ಇವುಗಳ ವಾಸ ಸ್ಥಳಗಳು- ಕೊಳಗಳು, ಕೆರೆಗಳು, ನದಿಗಳು ಅಥವಾ ಬತ್ತದ ಗದ್ದೆಗಳು. ಇವುಗಳ ಆಹಾರ- ಕಪ್ಪೆಗಳು, ಮೀನುಗಳು, ಕೆಲವು ಸಲ ದಂಶಕಗಳನ್ನು ಹಾಗು ಪಕ್ಷಿಗಳನ್ನು ಸಹ ಸೇವಿಸುತ್ತವೆ. ಇವುಗಳನ್ನು 'ನೀರಾವು' ಎಂದು ಕರೆಯಲು ಕಾರಣ ಇವುಗಳ 'ಮೀನು ಬೇಟೆಯ ಚಾಣಾಕ್ಷತನ'ದಿಂದ. ಹೇಗೆ ನಾಗರಹಾವುಗಳು ತನ್ನ ಪ್ರಾಣರಕ್ಷಣೆಗೋಸ್ಕರ ಹೆಡೆಯೆತ್ತುತ್ತವೋ ಹಾಗೆಯೇ ಇವುಗಳು ದೇಹ ಹಾಗು ಹೆಡೆಯೆತ್ತಿ ನಾಗರಹಾವಿನಂತೆ ಅನುಕರಿಸುತ್ತವೆ. ಇದರಿಂದಲೇ ಇವುಗಳನ್ನು ನಾವು 'ಕೃತಕ ನಾಗರಹಾವು' ಎಂದು ಕರೆಯುತ್ತೇವೆ ಹಾಗೂ ಇವುಗಳನ್ನು ಕ್ರೂರವಾಗಿ ಹಿಡಿದಾಡಿದರೇ ಖಚಿತ ಕಚ್ಚುವವು.
----ಪರಿಕಲ್ಪನೆ ಹಾಗು ಕಯ್ಬರಹ, ಎರಿಕ್
----ಕನ್ನಡಕ್ಕೆ ಅನುವಾದ, ಚಿನ್ಮಯಿ
ಹಾಡು: ಬರ್ತಡೇ ಪಾರ್ಟಿ ಸಾಂಗ್
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).
ಹೇ ಬಾ ಮಗ.
ಹೇ ಹೇ ಬಾರೋ ಮಗ.
ನಾ ready, ನೀ readyನಾ?
Shirtu ಹಾಕು suitu ಹಾಕು,
Pantu ಯಾಕೆ chaddi ಸಾಕು.
ಬಾ ಬೇಗ ಆಚೆ party ಶುರು.
ಹೇ ರಂಗು ರಂಗು ನಮ್ಮ ಬಾರು.||ಪ||
ಅಲ್ಲಿ ನೋಡು ಗೆಳೆಯ,
ಜೋರು ಜೋರು ಸಂಭ್ರಮ.
Birthday boy ನೋಡಲು,
ರಂಭೆ ಮೇನಕೆ ಸಂಗಮ.
ಅವರ ಜೊತೆ ನಾವೀಗ,
ಶುರು ಮಾಡುವ Hungama.||೧||
We wish you happy birthday
We wish you happy birthday
ಹೇ ಹೇ ಹೇ
Shirtu ಹಾಕು suitu ಹಾಕು,
Pantu ಯಾಕೆ chaddi ಸಾಕು.
ಬಾ ಬೇಗ ಆಚೆ party ಶುರು.
ನೀ ಬಾಯ್ಗೆ ಸ್ವಲ್ಪ ಬಿಟ್ಕೋ ಗುರು.
||ಅನು ಪ||
Joshu Songu ಬರಲಿ,
ಎಲ್ರೂ ಸೇರಿ ಕುಣಿಲಿ.
ತಮಟೆ Music ಜೊತೆಗೆ,
ಮೋಜು ಮಸ್ತಿ ಹೆಚ್ಚಲಿ.
ನಮ್ಮ್ ಹುಡುಗ ಬರ್ತಡೇ,
DJ ಸೌಂಡು ಏರ್ಸಲಿ. ||೨||
We wish you happy birthday
We wish you happy birthday
ಹೇ ಹೇ ಹೇ
ಎಣ್ಣೆ ಸಾಕು ಊಟ ಸಾಕು,
Party Super ನಿದ್ದೆ ಬೇಕು.
ನೀ ನಡಿ ಮಗ ಮನೆಗ್ ಬೇಗ.
ನಾ ಕೂಡ ಬಂದೆ ಹಿಂದೆ ಈಗ.
||ಅನು ಪ||
ಹೇ ಬಾ ಮಗ.
ಬಾ ಬಾ ಮಲ್ಗಣ ಮಗ.
ನಾ ಸುಸ್ತು, ನೀನು ಸುಸ್ತು.
Shirtu ಸಾಕು suitu ಸಾಕು,
Pantu chaddi ಎರಡು ನೂಕು.
ಆ ಕುಣ್ದು ಕುಣ್ದು ಬೆನ್ನು ನೋವು.
ಲೋ ಬಾರೋ ಗುರು ಮಲ್ಕೋ ಇನ್ನು.
||ಪ||
We wish you happy birthday maga.
----ಚಿನ್ಮಯಿ
ನೂರಾರು ಹೃದಯದೊಳು ಗೂಡು ಕಟ್ಟು,
ಝಣ ಝಣ ಕಾಂಚಾಣವ ದೂರವಿಟ್ಟು.
ತನ್ನ ಗರ್ಭದೊಳು ಚಿರನಿದ್ರಾ ಲಾಲಿಯಾಡುವಾಗ ಭೂಮಿ,
ಹೊತ್ಕೊಂಡ್ ಹೋಗೋದ್ ಏನಿದೆ ಸ್ವಾಮಿ?
ಒಳ್ಳೆತನದಿ ಬಾಳಿದರಷ್ಟೇ ನೀ ಸಿರಿವಂತ,
ಸ್ನೇಹ ಪ್ರೀತಿ ವಿಶ್ವಾಸದಿಂದಲೇ ನೀ ಜೀವಂತ.
ಮೂರ್ನಾಲ್ಕ್ ದಿನದ ಬಾಳಿದು.
ಇರುವಷ್ಟ್ ದಿನ ಒಳ್ಳೆದ್ ಮಾಡು.
'ನಾನು'ವೇ ಅಂಧಕಾರ.
'ನಾವು'ವೇ ಸಾಕ್ಷಾತ್ಕಾರ.
----ಚಿನ್ಮಯಿ
ಜೀವನದ ಸಂಚಾರದಲ್ಲಿ ಕಣ್ಮರೆಯಾದರೂ,
ನಮ್ಮೆಲ್ಲರ ನೆನಪಲ್ಲಿ ಸದಾಕಾಲವೂ "ಸಂಚಾರಿಯಾಗಿಯೇ" ನಿಶ್ಯಬ್ಧದಿಂದ ಸಂಚರಿಸುವಿರಿ.
"ಸಂಚಾರಿ ವಿಜಯಣ್ಣ"🙏🏽💔
----ಚಿನ್ಮಯಿ
ಓ ಪುನೀತ, ನೀ ವಿನೀತ.
ನೀ ವಿನೀತ, ನೀ ಪುನೀತ.
ಆ ಮಗುವಿನ ನಗು ಎಂದಿಗು ಜೀವಂತ.
ಈ ಮುಗುಳ್ನಗು ಎನ್ನೆದೆಯಲಿ ಶಾಶ್ವತ.
'ಪುನೀತ'ನಂತೆ ಬಾಳಿದ 'ರಾಜಕುಮಾರ'ನ ಸುತ.
ಯುವರತ್ನ "ಪುನೀತ್ ರಾಜ್ಕುಮಾರ್"🙏🏽💔
----ಚಿನ್ಮಯಿ
There are 'few people' called "IPL Cricket Pans" who will be 'only alive for two months of IPL period' and 'they vanish when India plays cricket.'
There are 'so many people' called "True Cricket Fans" who will be 'alive forever' and 'they enjoy both IPL and Indian Cricket Campaign.'
Only the second category people will "watch, love and respect cricket."
🏏🇮🇳💛❤️
----chinmayi
In any debate, one must listen first and then speak. Also one must strictly just stick to the point and speak about it only and must avoid nonsense, unnecessary, irrelevant and past personal talks. This is the rule/law of any debate and it's called as an "Healthy Argument."
----chinmayi
Our youths, specifically North Indian youths are leaning towards Western Culture probably for these below couple of reasons-
1) Thinking that "Present India" is unfit for youths in many aspects due to various political reasons.
2) Thinking that Western Culture is the most elegant culture.
But, my dear youths let me correct you that it's "Bharath" and not "India". Bharath has got an immense and great history which everyone should learn from scratch since it's been rewritten and manipulated by westerns so many times and many of our historical evidences have been burnt and destroyed which should be researched (Some has been searched). Then must remember it and document it in a proper way and finally not to be forgotten. Let's all strive hard to bring back the glory of World's Ancient and Best Existing Cultural Civilization called as "Sanathana Dharma-The Way Of Living."
Always be a proud "Bharathiya🇮🇳"
----chinmayi
ಹಾಡು: "ನೂರು ಜನ್ಮಕೂ"
ಚಿತ್ರ: "ಅಮೇರಿಕ ಅಮೇರಿಕ"
ಮೂಲ ಸಾಹಿತ್ಯ: "ನಾಗತಿಹಳ್ಳಿ ಚಂದ್ರಶೇಖರ್"
ಮೂಲ ಗಾಯನ: "ರಾಜೇಶ್ ಕೃಷ್ಣನ್"
ಮರುಸಾಹಿತ್ಯ ಹಾಡು: "ಸ್ನೇಹ ಗೀತೆ"
ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಮನದ ಭಾವನೆ ಎದೆಯುಸಿರ ಪ್ರಾರ್ಥನೆ-
ನನ್ನ ಆತ್ಮ, ನನ್ನ ಪ್ರಾಣ ನೀವೆಂದು.
ನೂರು ಜನ್ಮಕೂ ನೂರಾರು ಜನ್ಮಕೂ
ಮನದ ಭಾವನೆ ಎದೆಯುಸಿರ ಪ್ರಾರ್ಥನೆ-
ನಾನು ನೀವು, ನೀವು ನಾನು ಒಂದೆಂದು
ನೂರು ಜನ್ಮಕೂ... ||ಪ||
ಇರುಳಲ್ಲಿಯೂ ಬೆಳಕಾಗೊ 'ಸ್ನೇಹ' ಹಣತೆ, ಇನ್ನೆಲ್ಲಿ ಅಜ್ಞಾನ!?
ಹಗಲಾದರೆ ಬೆಳದಿಂಗ್ಳ ಜ್ಞಾನ
ನನ್ನುಸಿರ ಜೀವಗಳೇ
ಓ.. ಓ.. ಓ.ಓ.
ನನ್ನುಸಿರ ಜೀವಗಳೇ ನೀವೆಂದು ನನ್ನವರು
ಕಣ್ಣೊಳ ಕಂಬನಿಯ ಸಂತೈಸೊ ನಮ್ಮವರು
ನನ್ನೊಳಗೆ ಹಾಯಾಗಿ ಕುಳಿತವರು. ||೧||
ನೂರು ಜನ್ಮಕೂ ನೂರಾರು ಜನ್ಮಕೂ
ನೂರು ಜನ್ಮಕೂ ನೂರಾರು ಜನ್ಮಕೂ
ಮನದ ಭಾವನೆ ಎದೆಯುಸಿರ ಪ್ರಾರ್ಥನೆ-
ನನ್ನ ಆತ್ಮ, ನನ್ನ ಪ್ರಾಣ ನೀವೆಂದು
ನೂರು ಜನ್ಮಕೂ.. ||ಅನು ಪ||
ಈ ಸ್ನೇಹದ ಅತಿರೇಕ ಸವಿಯೋ ಘಳಿಗೆ ಝೇಂಕಾರ ಎಲ್ಲೆಡೆಯೂ,
ಈ ಆತ್ಮಕೆ ಸವಿರಾಗ ನೀವೂ
ಕಷ್ಟಕೆ ಹೆಗಲಾಗಿ,
ಓ.. ಓ.. ಓ.ಓ.
ಕಷ್ಟಕೆ ಹೆಗಲಾಗಿ ಜೊತೆಯಲ್ಲೇ ನಿಂತವರು
ಸಿರಿವಂತ ಆತ್ಮಗಳು ಇವರಿವರೇ ನನ್ನವರು
ಜೀವನದ ಎದೆಬಡಿತ ಸ್ನೇಹಿತರು. ||೨||
ನೂರು ಜನ್ಮಕೂ ನೂರಾರು ಜನ್ಮಕೂ.
ನೂರು ಜನ್ಮಕೂ ನೂರಾರು ಜನ್ಮಕೂ.
ಮನದ ಭಾವನೆ ಎದೆಯುಸಿರ ಪ್ರಾರ್ಥನೆ-
ನನ್ನ ಆತ್ಮ, ನನ್ನ ಪ್ರಾಣ ನೀವೆಂದು.
ನೂರು ಜನ್ಮಕೂ.. ||ಅನು ಪ||
----ಚಿನ್ಮಯಿ
ಯಾರು 'ಆಧ್ಯಾತ್ಮಿಕತೆ'ಯನ್ನು 'ವಿಜ್ಞಾನ'ದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವರೋ ಅಥವಾ ಅನುಭವಿಸುವರೋ, ಅಂತಹವರು ಮಾತ್ರ "ದೇವರ"ನ್ನು ಅನುಭವಿಸಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಏಕೆಂದರೆ, 'ಆಧ್ಯಾತ್ಮಿಕತೆಯೇ ವಿಜ್ಞಾನವಾಗಿದೆ'- ಇದನ್ನು ಅನುಭವಿಸಲು ಅರ್ಥಮಾಡಿಕೊಳ್ಳಬೇಕು ಹಾಗೂ ಅರ್ಥಮಾಡಿಕೊಳ್ಳಲು ಅನುಭವಿಸಬೇಕು. ಇನ್ನಷ್ಟೂ ನಿರ್ದಿಷ್ಟವಾಗಿ ಹೇಳುವುದಾದರೆ, ಇದು 'ಆಧುನಿಕ ವಿಜ್ಞಾನ'ಕ್ಕಿಂತಲೂ ತುಂಬಾನೇ ಮುಂದುವರಿದಿದ್ದ 'ಪ್ರಾಚೀನ ವಿಜ್ಞಾನ'.
ಆದ್ದರಿಂದಲೇ, 'ರಾಮಾಯಣ' ಹಾಗೂ 'ಮಹಾಭಾರತ' ಎರಡೂ ಸಹ ನಮ್ಮ ಹೆಮ್ಮೆಯ 'ಇತಿಹಾಸ'ವಾಗಿದೆ. ಇವುಗಳನ್ನು 'ಕಲ್ಪಿತ ಕಥೆ'ಗಳೆಂದು ಹೇಳುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ.
----ಚಿನ್ಮಯಿ
When anyone learns to understand or experience 'Spirituality' in perspective of 'Science', then that person will experience or understand "GOD" ultimately. This is because, 'Spirituality is Science' itself which is to be understood to experience and experienced to understand. To be more specific, it is an 'Ancient Science' which was much more advanced than 'Modern Science'.
Hence, both 'Ramayana' and 'Mahabharata' are our great 'History' or 'Itihasa'. Labeling them as 'Mythology' makes no sense.
----chinmayi
ನಿನ್ನ ನೋಡಿದೆ ಒಂದು ಸಂಜೆ,
ಜಾಗವೇನೋ ಊರ ಸಂತೆ.
ನನ್ನ ಚಿತ್ತವ ಸೆಳೆದೆ ನೀನು,
ಇಳೆಯು ರವಿಯ ಸುತ್ತುವಂತೆ.
ನಿನ್ನ ಹೆಜ್ಜೆಯ ಸೋಕಿದ ಕ್ಷಣ-
ಸುತ್ತಲೂ ಆವರಿಸಿತು ನಿಶೆ.
ನಿನ್ನ ಗೆಜ್ಜೆಯ ಸದ್ದಿನಿಂದಲೇ-
ಮೆಲ್ಲ-ಮೆಲ್ಲನೆ ಏರಿತು ನಶೆ.
ಹಿಂದೆ-ಹಿಂದೆಯೇ ಬಂದೆ ನಾ-
ತಿಳಿಯಲು ಮನೆ ವಿಳಾಸ.
ತಿಳಿದ ಮರುಕ್ಷಣದಿಂದಲೇ-
ಎದೆಯ ತುಂಬಾ ವಿಲಾಸ.
ಅಂದಿನಿಂದಲೇ ಶುರುವು-
ಮಾಡಿದೆ ಪ್ರೇಮ ವ್ಯವಸಾಯ.
ದಿನವೂ ನಿನದೆ ಗುಂಗಿನಲ್ಲಿ-
ಮುಳುಗಿ ಕಳೆದೆ ಸಮಯ.
ನಿನ್ನ ಕಂಡ ಹಳೆಯ ದಿನಗಳ-
ನಿನಗೇ ಹೇಳಿದೆ ಇಂದು.
ನಿನ್ನ ಎದುರೇ ನಿಂತು ಈಗ-
ಪ್ರೇಮವೇಳುವೆ ಕೇಳು.
ಪ್ರೇಮವೇನೋ ರೇಸಿಮೆಯಂತೆ,
ನಾನೇ ಆಗುವೆ ರೇಸಿಮೆಯ ಧಾರ.
ಮಾಡಬಾರದೇ ನೀ ಕಸೂತಿಯ,
ಎನ್ನೆದೆಯಲಿ ಹೂಡಿ ಬಿಡಾರ!?
----ಚಿನ್ಮಯಿ
ನಾಲಿಗೆ ತಿಳಿದರೂ ಬೇವು-ಬೆಲ್ಲದ ರುಚಿಯ,
ಸದಾ ಬಯಸುವುದು ಮಾತ್ರ ಬೆಲ್ಲದ ಸ್ನೇಹವ.
ಮನವೇ ಆದರೂ ನೋವು-ಸಂತಸದ ಒಡೆಯ,
ಸದಾ ಬಯಸುವುದು ಮಾತ್ರ ನೋವಿನ ಕ್ಷಣವ.
ನಾಲಿಗೆಗೆ ಕಹಿ ಬೇಡ, ಮನಕ್ಕೆ ಸಿಹಿ ಬೇಡ,
ಒಂದೇ ದೇಹದಲ್ಲಿದ್ದರೂ, ಇಬ್ಬರ ಬಯಕೆಯು ವಿರುದ್ಧ.
ಏತಕ್ಕೆ ಈ ರೀತಿ ಎಂಬುದಕ್ಕೆ ಉತ್ತರ ನಿಗೂಢ!
ನಿಗೂಢತೆಯ ಭೇದಿಸಲು ಆತ್ಮವಾಗಬೇಕು ಪರಿಶುದ್ಧ.
----ಚಿನ್ಮಯಿ
ನನಗೆ ತಿಳಿದಿರುವುದೊಂದೆ-
" 'ನಾನು' ಶೂನ್ಯ" ವೆಂಬುದು.
----ಚಿನ್ಮಯಿ
All I know is-
" ' 'I' (is) am' Nothingness."
----chinmayi
ಸೆಕೆಗಾಲದಿ ನನಗೂ-
ಪ್ರಕೃತಿಗೂ ಭಾರಿ ಕಾದಾಟ,
ರಾತ್ರಿ ಮಲಗಲಾಗದೆ-
ಬೈಯುತ ಗೊಣಗುತ ಒದ್ದಾಟ.
ತಂಪು ಗಾಳಿಯೊಡನೆ-
ಸರಸವಾಡಲಾಸೆ ಛಾವಣಿಗೆ,
ಮುನಿಸಿದ ಗಾಳಿಗೆ-
ಆತ್ಮೀಯ ಸ್ನೇಹಿತ ಬೀಸಣಿಗೆ.
----ಚಿನ್ಮಯಿ
"ಏನ್ರೀ, ಸ್ವಲ್ಪ ಅಂಗ್ಡೀಗ್ ಹೋಗಿ ಮನೆ ಸಾಮಾನ್ ತರ್ಬಾರ್ದೇ, ಯಾವಾಗ್ಲೂ ಆ ಹಾಳಾದ್ ನ್ಯೂಸ್ ನೋಡ್ಕೊಂಡೇ ಇರ್ತೀರಲ್ಲ" ಎಂದು ಹೆಂಡ್ತಿ ಹೇಳಲು,
ದಿಢೀರನೆ ಹೆಂಡ್ತಿಯ ಕಾಟ ತಡೆಯದೇ ಗಂಡ ಒಮ್ಮೆಲೆ ಎದ್ದು ಹೋದನು ಅಂಗ್ಡಿಯ ಕಡೆಗೆ, ಆ ಅಂಗ್ಡಿಯವ ಬಾಗಿಲ ಮುಚ್ಚುವ ಒಳಗೆ.
ನಿಟ್ಟುಸಿರ ಬಿಡುತ್ತ ಅಂಗ್ಡಿಯವನಿಗೆ ಗಂಡ ಹೇಳಿದ- "ಹೇ ಸ್ವಲ್ಪ ತಡಿಯೋ ಮಾರಾಯ, ತಿಂಗಳಿನ ಸಾಮಾನು ಕೊಟ್ಟು ಬಾಗಿಲಾಕಯ್ಯ",
ಹಳೆಯ ಗಿರಾಕಿ ಎನ್ನುವ ಸಲಿಗೆಯಿಂದ ಗಂಡ ಕೇಳಲು ರಿಯಾಯಿತಿ, ಒಲ್ಲದ ಮನಸ್ಸಿನಿಂದಲೇ ಅಂಗ್ಡಿಯವ ಕೊಟ್ಟನು ರಿಯಾಯಿತಿ.
ಮನೆಗೆ ವಾಪಸ್ಸಾದ ಗಂಡನಿಗೆ ಇನ್ನೊಂದು ಕೆಲಸ ಕೊಡಲು ಹೆಂಡ್ತಿ, "ಸರಿ ಆಯ್ತು ಕಣೆ ಎನ್ನಲ್ಲಷ್ಟೇ ಅಲ್ಲವೇ ಆದೀತು" ಎಂದು ಗೊಣಗಿದ ಗಂಡ,
ಗೊಣಗಲು ನಿಲ್ಲಿಸದ ಗಂಡ ಮತ್ತೆ ಹೀಗೆ ಗೊಣಗಿದನು-"ಯಾರಿಗೆ ಬೇಕು ಸ್ವಾಮಿ ಇದ್ದೆಲ್ಲಾ, ಏನೂ ಬೇಕಾದರೂ ತಡೆಯಬಹುದು ಈ ಹೆಂಡ್ತೀರ ಕಾಟ ತಡೆಯಲು ಆಗದು".
ಗಂಡನ ಗೊಣಗಾಟ ಕೆಳಿಸಿಕೊಂಡ ಹೆಂಡ್ತಿ- "ಏನ್ರೀ ಅದು ಗೊಣಗ್ತಾಯಿರೋದು" ಎಂದೊಂಡನೆಯೇ, "ಹೇ ಏನಿಲ್ಲ ಕಣೆ" ಎಂದು ಕೆಲಸವನ್ನು ಗೊಣಗುತ್ತಲೇ ಮುಂದುವರೆಸಿದ,
ಗಂಡ ಓದುಗರಿಗೆ ಗೊಣಗುತ್ತಲೇ ಹೀಗೆಂದನು- "ಹೀಗೇ ನೋಡಿ ಸ್ವಾಮಿ ಗಾಳಿ ಹೋದ ಬಲೂನಿನಂತೆಯೇ ಅಲ್ಲವೇ ಗಂಡಂದಿರ ಪರಿಸ್ಥಿತಿ, ಓಹೋ ನಿಮಗೆ ಮದುವೆ ಆಗಿಲ್ಲವೇ!? ಆಗಿ ನೋಡಿ ತಿಳಿಯುತ್ತೆ ಮದುವೆಯ ನಂತರದ ಫಜೀತಿ".
ಈ ವಿನೋದಮಯ ಸತ್ಯವನ್ನು ಓದುವ ನಿಮಗೆ ನಗಲು ಆಗದೇ ಅಳಲು ಆಗದೇ ಉಂಟಾಗಬಹುದು ಇಕ್ಕಟ್ಟಿನ ಸ್ಥಿತಿ, ನೆನೆಸಿಕೊಂಡು ಮದುವೆಯ ನಂತರದ ಫಜೀತಿ!?
----ಚಿನ್ಮಯಿ
ಇದುವರೆಗೂ ಎಷ್ಟೋ ವಿಜ್ಞಾನಿಗಳು ಈಗಾಗಲೇ ಪ್ರಕೃತಿಯಲ್ಲಡಗಿದ್ದ ಎಷ್ಟೋ ವಿಚಾರಗಳ ಕುರಿತು ಆವಿಷ್ಕಾರ ಮಾಡಿದ್ದಾರೆ. ಸಾಮಾನ್ಯ ಮನುಷ್ಯರೇ ಇಷ್ಟೆಲ್ಲಾ ಮಾಡುವರೆಂದರೆ, ಇನ್ನೂ ಭಗವಂತನು ಪ್ರತಿಯೊಂದನ್ನು ಮುಂಚೆಯೇ ಸೃಷ್ಟಿಸಿರಲು ಸಾಧ್ಯವಿರುವುದಿಲ್ಲವೇ? ಹಾಗೂ ಮನುಷ್ಯನಿಗೆ ಎಲ್ಲವನ್ನೂ ಅರಿತುಕೊಳ್ಳಲು ಒಂದವಕಾಶ ಕೊಟ್ಟಿರಬಹುದಲ್ಲವೇ?
ಒಮ್ಮೆ ನೀವೇ ಯೋಚಿಸಿ ನೋಡಿ...!
----ಚಿನ್ಮಯಿ
In this long run of life on Earth, so many scientists have invented and discovered so many things which already had been hidden in nature. If a mere human beings can do all this, then will God not be responsible for been created everything already before humans? and will God not be responsible for giving a chance for humans to understand everything?
At least think about it once...!
----chinmayi
ಹೇ ಯೋಧನೆ ಹೇ ಯೋಧನೆ
ನೀ ನಮ್ಮಯ ಕಣ್ಗಾವಲು.
ಹೇ ವೀರನೆ ಹೇ ವೀರನೆ
ನಿನ್ನಿಂದಲೇ ಹಗಲ್-ಇರುಳು.
ನಮ್ಮ ಹೆಮ್ಮೆ ನೀವು,
ನಮ್ಮ ಹೆಮ್ಮೆss ನೀವು. ||ಪ||
ಶತ್ರುಗೆ ಯಮನಿವ ಸರದಾರ,
ವಜ್ರದ ಕವಚವು ಭಾರತಿಗೆ.
ತಲೆಯೇ ಬಾಗದೀ ಯುವಶೂರ,
ಸ್ಪೂರ್ತಿಯ ಧಾತ ತಾಯ್ನಾಡಿಗೆ.
ಹೇ ಬಿಸಿಲು ಚಳಿಗೆ ನಡುಗದೀ,
ರೋಷ-ಆವೇಷದ ಗುಂಡಿಗೆ.
ಕೊಂಚವು ಅಂಜದ ಯೋಧನ,
ಭಿಕ್ಷೆಯೇ ಈ ಉಸಿರು ನಮಗೆ.||೧||
ನಮ್ಮ ಹೆಮ್ಮೆ ನೀವು,
ನಮ್ಮ ಹೆಮ್ಮೆss ನೀವು.
ನಿನ್ನ ನಂಬಿದ್ದ ಬಾಳಿಗೆಲ್ಲಾ,
ನೀನೇ ಧೈರ್ಯದ ಹೊಂಗಿರಣ.
ನಮ್ಮ ದೇಶದ ಬಾವುಟವು,
ಹಾರಲು ನೀನೊರ್ವ ಕಾರಣ.
ಕೋಟಿ ಕಾಲಕೂ ಮರೆವೆವು,
ಇಂತಹ ಪವಿತ್ರ ಬಲಿದಾನ.
ದೇಶದ ಜನರ ಕೂಗಿದು,
ನಿನಗೆ ಇದುವೇ ಗುಣಗಾನ. ||೨||
ನಮ್ಮ ಹೆಮ್ಮೆ ನೀವು,
ನಮ್ಮ ಹೆಮ್ಮೆss ನೀವು.
ದೇಶವ ಕಾಯುವ ಸೈನಿಕನಲ್ಲಿ,
ದೇಶಾಭಿಮಾನವು ಅಳಿಯದು.
ಎಷ್ಟೋ ಆಯುದ್ಧ ಇದ್ದರು,
ಧೈರ್ಯವೇ ಆಯುದ್ಧ ಅವನದು.
ವೀರತ್ವ ಮೆರೆದ ಓ ವೀರನೇ,
ನಿನಗಿದು ಅರ್ಪಣೆ ಈ ಹಾಡು.
ನಮ್ಮಯ ಸೌಭಾಗ್ಯವು ಇದು,
ನಿನ್ನ ನಿವಾಸ ಎದೆ-ಗೂಡು. ||೩||
ನಮ್ಮ ಹೆಮ್ಮೆ ನೀವು,
ನಮ್ಮ ಹೆಮ್ಮೆss ನೀವು.
ಹೇ ಯೋಧನೆ ಹೇ ಯೋಧನೆ
ನೀ ನಮ್ಮಯ ಕಣ್ಗಾವಲು.
ಹೇ ವೀರನೆ ಹೇ ವೀರನೆ
ನಿನ್ನಿಂದಲೇ ಹಗಲ್-ಇರುಳು.
ನಮ್ಮ ಹೆಮ್ಮೆ ನೀವು,
ನಮ್ಮ ಹೆಮ್ಮೆss ನೀವು. ||ಪ||
----ಚಿನ್ಮಯಿ