ಜೀವನದಲ್ಲಿ ಒಳ್ಳೆಯ, ಸ್ಪೂರ್ತಿದಾಯಕ ವ್ಯಕ್ತಿತ್ವದ ವ್ಯಕ್ತಿಯ ಅನುಸರಣೆ ಇರಬೇಕೇ ಹೊರತು ಅನುಕರಣೆ ಅಲ್ಲ.
----ಚಿನ್ಮಯಿ
ಜೀವನದಲ್ಲಿ ಒಳ್ಳೆಯ, ಸ್ಪೂರ್ತಿದಾಯಕ ವ್ಯಕ್ತಿತ್ವದ ವ್ಯಕ್ತಿಯ ಅನುಸರಣೆ ಇರಬೇಕೇ ಹೊರತು ಅನುಕರಣೆ ಅಲ್ಲ.
----ಚಿನ್ಮಯಿ
One should never judge or jump to conclusions about many things in life. True understanding comes only through research, reflection, and rediscovering the facts.
----Chinmayi
ಹಾಡು: ನನ್ನೊಳು ನಿನ್ನೊಳು
ಸಾಹಿತ್ಯ: ಚಿನ್ಮಯಿ
=============================
ಮೇಘರಾಜನ ದನಿಯಿಂದ ರಾಗಹನಿಗಳು ಉದುರಿವೆ.
ಧರೆಯೊಳೆಲ್ಲಾ ಜೀವರಾಶಿ ತಾಳಮೇಳದಿ ಹಾಡಿವೆ.
ನನ್ನಂತರಂಗ ದನಿಯು ಮೆಲ್ಲ ಮೆಲ್ಲನೆ ಏರಿದೆ.
ನಿನ್ನಂತರಂಗ ತಾಳಕ್ಕೆ ಬೆಸೆಯಲು ಕಾದಿದೆ.
ಸಂಗೀತ ಸಮಾಗಮ ಜಗದೊಳು ನನ್ನೊಳು.
ಪ್ರೇಮವು ಸಂಗಮ ನನ್ನೊಳು ನಿನ್ನೊಳು. ||ಪ||
ಹೂವು ಹಣ್ಣು ಸಸ್ಯ ಕಾಶಿ ಸಕಲ ಜೀವರಾಶಿ
ಹರುಷದಿ ನಲಿದು ಕುಣಿದು ಮಣ್ಣಾಗಿದೆ ಜೀವಾಮೃತ.
ನಿನ್ನ ಕಣ್ಣು ನನ್ನ ನೋಟ ಎರಡು ಸೇರಲು
ಹೃದಯವು ಮನದಿ ಮನವು ಹೃದಯದಿ ಅಂಕಿತ. ||೧||
ಸಂಗೀತ ಸಮಾಗಮ ಜಗದೊಳು ನನ್ನೊಳು.
ಪ್ರೇಮವು ಸಂಗಮ ನನ್ನೊಳು ನಿನ್ನೊಳು. || ಅನು ಪ||
ಕೊಳ ಕೆರೆ ನದಿ ಸಾಗರ ಒಂದೊಂದಾಗಿ ಸೇರಲು
ನಯವಾದ ಲಯದಿ ಧರೆಯೇ ನಾಟ್ಯಮಂಜರಿಯ ವೇದಿಕೆ.
ನಿನ್ನ ಕರೆ ನನ್ನ ದನಿ ಜೊತೆಜೊತೆಗೂಡಿಸಿ
ಹಾಡುತಲೆ ನನದು ನಿನದು ಶುರುವು ಪ್ರೇಮ ಸಂಚಿಕೆ. ||೨||
ಸಂಗೀತ ಸಮಾಗಮ ಜಗದೊಳು ನನ್ನೊಳು.
ಪ್ರೇಮವು ಸಂಗಮ ನನ್ನೊಳು ನಿನ್ನೊಳು. || ಅನು ಪ||
----ಚಿನ್ಮಯಿ
Even after nurturing a hundred positive thoughts and doing a hundred good deeds, a few negative thoughts and a few wrong actions can still steal our peace of mind. It mirrors a simple truth:
"100 multiplied by 0 becomes 0."
So, to protect our inner peace, we must consciously choose to dwell only on those hundred positive thoughts and hundred good deeds, gently ignoring what is negative and harmful. Because when the mind chooses positivity:
"100 multiplied by 1 remains 100."
----Chinmayi
The Places and Photographs are the Gateway for Memories—
some Miserable and some Memorable.
----Chinmayi
ಹಾಡು: ನೀನೇ ಮುಗಿಲು ನಾನೇ ಕಡಲು
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ನೀನೇ ಮುಗಿಲು ನಾನೇ ಕಡಲು
ಪ್ರೇಮಧಾರೆಯ ಚಲನ.
ನೀನೇ ಹಗಲು ನಾನೇ ಇರುಳು
ಸಂಧಿಕಾಲದಿ ಮಿಲನ.
ನಾ ನೀನು, ನೀ ನಾನು ಇಬ್ಬರೊಂದೇ..
ದೇಹವೆರಡಾದರೂ ಆತ್ಮವೊಂದೇ.. ||ಪ||
ಎನ್ನಂತರಂಗ ತೋಟದಲ್ಲಿ ಕುಸುಮವು ನೀನು ದುಂಬಿಯು ನಾನು.
ಮನ್ಮಥನ ಬಾಣದಿ ನಿನ್ನಂತರಂಗಕ್ಕೆ ಹರಿಯಲಿ ಪ್ರೇಮ ಜೇನು.
ರತಿರೂಪಿಭಗವತಿಗೇ ಮುಡಿಪಾಗುವ ಬಾ.
ಪ್ರೇಮಜ್ಯೋತಿ ಶಾಖದಿ ಒಂದಾಗುವ ಬಾ. ||೧||
ನೀನೇ ಮುಗಿಲು ನಾನೇ ಕಡಲು
ಪ್ರೇಮಧಾರೆಯ ಚಲನ.
ನೀನೇ ಹಗಲು ನಾನೇ ಇರುಳು
ಸಂಧಿಕಾಲದಿ ಮಿಲನ. ||ಅನು ಪ||
ಮರಗಿಡದಿ ಸಿಹಿಯಾದ ಫಲಾಮೃತ ನಾನು ಬೇರುಗಳೇ ನೀನು.
ನಿನ್ನೊಳಗೆ ಜೀವಿಸಿ ಪ್ರೇಮಾಮೃತವುಣುವೆ ನೀನಾದರೆ ಧೇನು...!
ಪ್ರಕೃತಿಯೇ ನಾಚುವಂತೆ ಸರಸವಾಡುವ ಬಾ.
ಪ್ರೇಮಯೋಗಕ್ಕೆ ನಾಂದಿಯಾಗುವ ಬಾ. ||೨||
ನೀನೇ ಮುಗಿಲು ನಾನೇ ಕಡಲು
ಪ್ರೇಮಧಾರೆಯ ಚಲನ.
ನೀನೇ ಹಗಲು ನಾನೇ ಇರುಳು
ಸಂಧಿಕಾಲದಿ ಮಿಲನ.
ನಾ ನೀನು, ನೀ ನಾನು ಇಬ್ಬರೊಂದೇ..
ದೇಹವೆರಡಾದರೂ ಆತ್ಮವೊಂದೇ.. ||ಪ||
----ಚಿನ್ಮಯಿ
Miracles are nothing but Science which are beyond Human Imagination, Intelligence and Perception—
Until one experiences it, it's just a hypothesis which is called Superstitious in the world of Atheists.
----Chinmayi
ಹಾಡು: ಹೃದಯ-ಮನಗಳೊಡನೆ ಆತ್ಮ ಸಂಭಾಷಣೆ...
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ನಿನ್ನೂರು ತೊರೆದರೇನಂತೆ.
ಊರೂರು ಕರೆದರೇನಂತೆ.
ಹೋದೂರು ನಿನ್ನದಿದ್ದಂತೆ.
ಹೊಂದಿಕೊಂಡು ಬಾಳು ಮನವೆ..
ಬಾಳ ನಿತ್ಯ ರಾಗ ಮೊಳಗಲು.
ಬಾಳ ದಿವ್ಯ ಜ್ಯೋತಿ ಬೆಳಗಲು.
ಇದು ಅನಿವಾರ್ಯವಂತೆ.
ಒಳಗೊಳಗೆ ದುಃಖವಂತೆ.
ದಿನವಿಡೀ ಬರೀ ಚಿಂತೆ.
ಬಾಳೆಂದರೆ ಇದೇ ಸಂತೆ.
ಓಡಿಹೋದರೆ ತರವೇ ಮನವೆ...!?
ಜಗವು ಸಾಗೋ ರೀತಿ ಇದುವೆ.
ಜಗವ ಗೆಲ್ಲೋ ನೀತಿ ಇದುವೆ.
ಮತ್ತೆ ದಿನಕರನುಟ್ಟುವಂತೆ.
ದಿನಗಳುಚ್ಚು ಕುದುರೆಯಂತೆ.
ಗುರಿಯಾಗಬೇಕು ಕರ್ಮವಷ್ಟೇ.
ಆಗು ನೀ ಕಡಲಲೆಗಳಂತೆ.
ಮತ್ತೆ ಮರಳುವೆ ತೀರಕೆ ಮನವೆ..
ಪ್ರತಿ ಕ್ಷಣಗಳ ಹೋರಾಟ.
ಕೆಲವು ದಿನಗಳ ಒದ್ದಾಟ.
ಎಲ್ಲವೂ ಮೃಷ್ಟ ಭೋಜನಕ್ಕಂತೆ.
ಬಾಳ ಚಕ್ರ ತಿರುಗಿದಂತೆ.
ಎಲ್ಲಾ ಸವೆದೋಗುವುದಂತೆ.
ಬದುಕಿಬಿಡು ಈ ಕ್ಷಣದ ಜೊತೆ.
ಜಂಜಾಟಕಷ್ಟೇ ಸಿಲುಕಬೇಡ ಮನವೆ..
ಖಗ-ಮೃಗ, ಸಸ್ಯಕಾಶಿ, ವೃಕ್ಷಗಳು ನಲಿಯುವಂತೆ.
ಪ್ರಕೃತಿಯೊಡನೆ ಸಾಂಗತ್ಯವು ನೃತ್ಯ ನಾಕವಂತೆ.
ಅದುವೇ ನಿಜ ಜೀವನವಂತೆ..
----ಚಿನ್ಮಯಿ
ಹಾಡು: ನಾ ನಿನ್ನನ್ನು ಸೇರಲು...
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ನಾ ನಿನ್ನನ್ನು ಸೇರಲು ಕಾತುರ.
ಈ ಹೃದಯ ಹಠವೇ ಸಡಗರ. ||ಪ||
ಮಾಯದ ಗಾಯವೇ ಪ್ರೇಮವು ಅಲ್ಲವೇ!
ಸಾವಿಗೂ ಅಂಜಿಕೆ ಕಾಯುವ ಕೋರಿಕೆ.
ಬೀಸುವ ಗಾಳಿಯು ವೃಕ್ಷವ ಅಪ್ಪಿದೆ.
ಸಾಗರ ಆಳವು ಆಗಸ ಮೋಡವು ಸೇರಿದೆ... |ಅನು ಪ|
ನಾ ನಿನ್ನನ್ನು ಸೇರಲು ಕಾತುರ.
ಈ ಹೃದಯ ಹಠವೇ ಸಡಗರ. ||ಪ||
ಬಾ ಕೇಳು ಬಾ ಈ ಬಡಿತವ.
ನನ್ನೆದೆಯ ಭಾವ ಲಹರಿಯ.
ಗಾಢ ಪ್ರೇಮಕ್ಕೂ ಕಾಯೋ ಬೇಗುದಿ!
ಈ ಖಾಯಿಲೇಗೆ ನೀನೆ ಔಷಧಿ. ||Verse||
ಭಾವದ ಗಾಳಕೆ ಸಿಲುಕಿದೆ ರಾಗವು.
ಜೀವನ ಸಾಥಿಯೇ ಬೇಕಿದೆ ಸನಿಹವು.
ಸೋಲುವೆ ಈಗಲೇ ನಿನ್ನನ್ನು ಗೆಲ್ಲಲು.
ಕನಸಲೂ ನಿನ್ನನೇ ಹೃದಯವು ಬೇಡಿದೆ ಸೇರು ಬಾ... |ಅನು ಪ|
ನಾ ನಿನ್ನನ್ನು ಸೇರಲು ಕಾತುರ.
ಈ ಹೃದಯ ಹಠವೇ ಸಡಗರ. ||ಪ||
----ಚಿನ್ಮಯಿ