ತುಂಬಾ ನೊಂದಿದೆ ಹೃದಯ-ಮನಸ್ಸು. ಆದರೂ, ಬದುಕಿನ ಜೊತೆಗಿನ ಬೆಸುಗೆ-ಸ್ನೇಹ ಹಾಗೆಯೇ ಹಚ್ಚ ಹಸುರೇ, ಕಾರಣವಿಷ್ಟೇ—
ಪ್ರೀತಿಯು ಮಾಗಿದೆ-
"ನಾನು ಬದುಕನ್ನ ಪ್ರೀತಿಸುತ್ತೇನೆ.
ಬದುಕು ನನ್ನನ್ನ ಪ್ರೀತಿಸುತ್ತದೆ."
ಬಹುಶಃ ಇದುವೇ ನಿರಂತರ ಧ್ಯಾನ...
----ಚಿನ್ಮಯಿ
ತುಂಬಾ ನೊಂದಿದೆ ಹೃದಯ-ಮನಸ್ಸು. ಆದರೂ, ಬದುಕಿನ ಜೊತೆಗಿನ ಬೆಸುಗೆ-ಸ್ನೇಹ ಹಾಗೆಯೇ ಹಚ್ಚ ಹಸುರೇ, ಕಾರಣವಿಷ್ಟೇ—
ಪ್ರೀತಿಯು ಮಾಗಿದೆ-
"ನಾನು ಬದುಕನ್ನ ಪ್ರೀತಿಸುತ್ತೇನೆ.
ಬದುಕು ನನ್ನನ್ನ ಪ್ರೀತಿಸುತ್ತದೆ."
ಬಹುಶಃ ಇದುವೇ ನಿರಂತರ ಧ್ಯಾನ...
----ಚಿನ್ಮಯಿ
ಓರ್ವ ಮನುಷ್ಯ ಇನ್ನೋರ್ವ ಮನುಷ್ಯನನ್ನ ಕಂಗಳಿಂದ ಹಾಗೂ ಮನಸ್ಸಿನಿಂದಷ್ಟೇ ಇಷ್ಟಪಟ್ಟರೇ ಅದು ಆಕರ್ಷಣೆ, ಅದೇ ಹೃದಯದಿಂದ ಇಷ್ಟಪಟ್ಟರೇ ಅದು ಪ್ರೇಮ.
ಹಾಗೆಯೇ, ಎಲ್ಲಾ ಪ್ರಾಣಿ, ಪಕ್ಷಿ, ಪ್ರಕೃತಿಯ ನಿಗೂಡತೆ-ಸೌಂದರ್ಯ ಹಾಗೂ ವಸ್ತುಗಳ ವಿಚಾರದಲ್ಲಿಯೂ ಅದುವೇ ವ್ಯತ್ಯಾಸ.
ಹಾಗೆಯೇ, ಆಹಾರ-ಪಾನೀಯಗಳ ವಿಚಾರದಲ್ಲಿಯೂ ನಾಲಗೆಯಿಂದಷ್ಟೇ ಇಷ್ಟಪಟ್ಟರೇ ಅದು ಕೇವಲ ರುಚಿ ಹಾಗೂ ಆಕರ್ಷಣೆ, ಅದೇ ಹೃದಯದಿಂದ ಇಷ್ಟಪಟ್ಟರೇ ಅದು ಅಮೃತ, ಗೌರವ ಹಾಗೂ ಪ್ರೇಮ.
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ/ಉಲ್ಲೇಖ- ೭೮ |
Albert Einstein's famous equation of "Theory of Relativity, E=mc²" was already stated in our puranas in the form of slokhas for "Ardhanaareeshwara Thathva."
Let me explain this in a simple way to make everyone understand,
From modern physics, we know that the quantity of matter within a given object is called "Mass" and when Shiva is known as the "Ultimate Matter (Paramaathma)" in this whole multiverse, it's obvious that "Infinite Mass" also is himself. Wherein, on the other hand from modern physics, we know that the ability to do work, which is the ability to exert a force causing displacement of an object is called an "Energy" and when Paarvathi is known as the "Ultimate Energy (Parama Shakthi)" in this whole multiverse, it's obvious that she's the prime source of everything in this whole multiverse.
Also, we know that when they are together there's always an "Ultimate Speed of Light (Parama Divya Jnaana)."
So, now finally by combining the above stated statements, we understand that, Shiva and Paarvathi (Shakthi)— together manifested form is called as "Ardhanaareeshwara." Hence the "Ardhanaareeshwara Thathva" states that Shakthi (Ultimate Energy) is directly proportional to Shiva (Ultimate Mass) and also to the Parama Divya Jnaana (Ultimate Speed of Light).
----Chinmayi
🙏🏽🙇🏾♂️🕉️🤍
ಭವದ ಭಾವವೇ ನಗೆಯು.
ಜಗದ ಸಾರವೇ ಒಲವು.
ಕೂಡಲಿ ಹೃದಯ-ಮನವು.
ದ್ವೇಷ-ಅಸೂಯೆ-ಜಾತಿ—
ಸಂದಿಗ್ಧತೆಯ ಸಾರಥಿ.
ಬೆಳಗಲಿ ಪ್ರೇಮ ಜ್ಯೋತಿ.
ಇರುಳ ಮೌನ ಬಹಳ..
ಬೆಳಕ ಮಾತು ಸರಳ.
ಸಾಗೋ ಕಾಲ ವಿರಳ.
ನಗಲು ಕಾರಣ ಬೇಕೆ?
ತುಟಿಯ ಹೊಳಪು ಸಾಕೆ?
ನಲಿಯಲಿ ಮೊಗದ ರೇಖೆ.
----ಚಿನ್ಮಯಿ
Sometimes anger leading to the destruction of Adharma will be the path towards upholding Dharma just like Kurukshetra Warfare. Hence, first one must try to make peace deal and if that doesn't work out for good, then getting angry is a must, only when it's required.
But, one has to make sure that the same anger if it's leading towards Hatred and Ego, then it must be avoided strictly. Hence, getting angry unnecessarily is creating a void within oneself which affects both mentally and physically.
If one understands this thin difference between the above two statements, then they will master their anger which in turn masters their calmness.
----Chinmayi
The day I stop learning and stop seeking from the universe will be the last day of mine on this beautiful planet "Earth."
----Chinmayi
ಧರೆಗೆ ಆದಿತ್ಯನ ಮುಂಜಾನೆ ನಮನ—
ಶಶಿಯ ಅತಿ ವಿನಯ ನಿರ್ಗಮನ.
ಆಗಸದಿ ಸಂಜೆಯ ಕೇಸರಿ ಚಿತ್ರಣ—
ಕಪ್ಪು ಚುಕ್ಕೆ ಶ್ವೇತವರ್ಣೀಯನ ಆಗಮನ.
ತ್ರಿನಂಟು ಎದೆಯಾಳದಷ್ಟಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
ಭೋರ್ಗರೆಯುವ ಅಲೆಗಳು ಶಾಂತ—
ಕಡಲೆದೆಯ-ತೀರದ ಗೆಳೆತನದಿಂದ.
ಮರಗಳು ಜೀವರಾಶಿಗಳು ಆನಂದ—
ಸಿಹಿನೀರು-ಉಪ್ಪುನೀರಿನ ಮಿಲನದಿಂದ.
ನೆಲದ ಖುಷಿ ಮುಗಿಲು ಮುಟ್ಟಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
ಮೇಘಗಳ ನಗೆ ತೋರಣ ಭುವಿಯೆಡೆ ಪಯಣ—
ಚಿಗುರೆಲೆಗಳೊಡನೆ ಹನಿಗಳ ಸ್ಪಂದನ.
ಗಿಡ-ಮರಗಳ ಸುಖಾಭಿಲಾಷೆ ನರ್ತನ—
ಗಾಳಿಯೊಡಗಿನ ಮಧುರ ಸಂಕಲನ.
ಪ್ರಕೃತಿಯ ಚಮತ್ಕಾರವಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
ಬೇರು ತಾ ನೀರ ಕುಡಿಯದೆ—
ತ್ಯಾಗದಿ ಉಣಿಸಲು ಚಿಗುರೆಲೆಗಳಿಗೆ.
ಹೂವು ತಾ ಜೇನ ಅನುಭವಿಸದೆ—
ವಾತ್ಸಲ್ಯದಿ ಎರೆಯಲು ದುಂಬಿಗೆ.
ಜಗದಿ ಪ್ರೇಮೋದಯವಾಗಿದೆ.
ಅತ್ಯುನ್ನತ ಅನಂತ ಪ್ರೇಮವಿದೆ.
----ಚಿನ್ಮಯಿ
ಕೇಶರಾಶಿಯ ಬಾಚುವಂಬಲವಾದಾಗ—
ತಂಗಾಳಿಯ ತಾಳಕ್ಕೆ ಕೇಶವು ಕುಣಿದಿದೆ!
ನಾಜೂಕಾಗಿ ಪ್ರೇಮದಿ ಬಾಚೆಂದಾಗ—
ಹೃದಯದುಲ್ಲಾಸವು ಮುಗಿಲನು ತಾಕಿದೆ.
ಕೆಂದಾವರೆ ಕಣ್ಣ ಕಾಂತಿ ಸ್ಪರ್ಶಿಸಲೆಂದಾಗ—
ರೆಪ್ಪೆಗಳ ಸರಸ-ಸಲ್ಲಾಪ ಕಹಿ ಬೇನೆ.
ಹತ್ತಿರ ಬಂದೊಮ್ಮೆ ಕಣ್ಣ ತೆರೆ ಎಂದಾಗ—
ಕಹಿ ಬೇನೆಯೆಲ್ಲವೂ ಸಿಹಿ ಜೇನೆ.
ಕೆಂದುಟಿಯ ಜೇನ ಸವಿಯಲೆಂದಾಗ—
ತಡೆಯಾಜ್ಞೆ ಸರಿಯೇ ಹೇಳೇ ತಂಗಾಳಿ?
ತಂಗಾಳಿ-ತನ್ನೊಡನೆ ಸನಿಹ ಬಾ ಎಂದಾಗ—
ಎದೆಯೊಳಗೆ ಮಜದ ಸಜೆಯೇ ಕಚಗುಳಿ.
ಕೊರಳ ಕೊಳಲ ನಿನಾದ ಆಲಿಸಲೆಂದಾಗ—
ಸರತಿ ಸಾಲೇ ತುಂಬಿರಲು ಸಪ್ಪೆ ಮೋರೆ.
ದೂರದ ದನಿಯೊಂದು ಸಮೀಪಿಸೆಂದಾಗ—
ನನ್ನೊಡನೆ ಮುಗಿಬಿದ್ದವು ಚುಕ್ಕಿತಾರೆ.
ಕಾದಂಬರಿ ಬರೆಯುವಾಗ ಹೊಕ್ಕಳು ತಡೆವಾಗ—
ಬೆರಳುಗಳ ಆಸೆಗೆ ಮೂಡಿತು ಹತಾಶೆ!
ನಡುವು ಬಳುಕುತ ಹೊಕ್ಕಳ ಜರುಗೆಂದಾಗ—
ಶುರುವಾಯ್ತು ನಡುವ-ಬೆರಳ ವರಸೆ.
----ಚಿನ್ಮಯಿ
Not only living things can impact "us" (human beings) to live, also non-living things, which don't live can make an impact on us to live by inspiring us.
The only thing is that we must make ourselves ready to grasp all the signs from nature and the universe.
----Chinmayi
ಈ ಸಕಲ ಬ್ರಹ್ಮಾಂಡಗಳಲ್ಲಿ ನನಗೆ ಸಮಾಧಾನ ಮಾಡುವ ಹಾಗೂ ಎಲ್ಲಾ ನೋವು-ದುಃಖಗಳನ್ನು ಅನುಭವಿಸಿ, ಜೀವಿಸಿ, ಆನಂದಿಸಿ ಜೊತೆ-ಜೊತೆಗೆ ಬಾಳುವ ಏಕೈಕ ವ್ಯಕ್ತಿಯಂದರೆ ಅದು "ನಾನಷ್ಟೇ"—
ಈ ಸತ್ಯದ ಅರಿವಾಗಲು ನಾ ಪ್ರೀತಿಗೆ ಬೀಳಬೇಕಾಯ್ತು...
----ಚಿನ್ಮಯಿ
'ಅಧರ್ಮ-ಧರ್ಮ'ಗಳ ನಡುವಿನ ಸಂಘರ್ಷಗಳ ಫಲಿತಾಂಶವಾಗಿ ಪ್ರತಿ ಕ್ಷಣ ಪ್ರತಿ ನಿತ್ಯ ಧರ್ಮಸ್ಥಾಪನೆಗೋಸ್ಕರ ಯುಗಪೂರ 'ಕಲಿ'ಯುವುದೇ 'ಕಲಿ'ಯುಗ...
----ಚಿನ್ಮಯಿ
ಸಕಲ ಜಗವನು ಜಗದ ನರನನು ನರನ—
ಅಖಿಲ ತನುವನು ನಡುಗಿಸುತ್ತ ವೈರಾಣು
ಸಕಲ ಮನದಲಿ "ನಾನು" ನಶಿಸಿದೆ ಚಿನ್ಮಯಿ
"ಭಾವಾರ್ಥ:"
ಸಮಸ್ತ ಬ್ರಹ್ಮಾಂಡಗಳಲ್ಲಿರೋ ಎಲ್ಲಾ ಮನುಷ್ಯರ ದೇಹಕ್ಕೆ ಖಾಯಿಲೆ ಬರುವುದು ಸಾಮಾನ್ಯ ಹಾಗೂ ಆ ಖಾಯಿಲೆಯ ಮೂಲ ಸೂತ್ರಧಾರನೇ "ವೈರಾಣು." ಮನುಷ್ಯರ ಕಣ್ಣಿಗೂ ಕಾಣದ ಈ ಸಣ್ಣಗಾತ್ರದ ಜೀವಿಯಾದ ವೈರಾಣುವು ದೊಡ್ಡ ಗಾತ್ರದ ಮನುಷ್ಯರ ದೇಹವ ಸೇರಿ ಅದೆಷ್ಟೋ ನೋವು ನರಳಾಟ ಸಂಕಟಗಳಿಗೆ ಕಾರಣವಾಗುತ್ತದೆ ಹಾಗೂ ದೇಹವನ್ನೇ ನಡುಗಿಸುತ್ತದೆ. ಬಹುಶಃ ಇದೆಲ್ಲದರ ಹಿಂದಿರೋ ಮುಖ್ಯ ಕಾರಣವು ಮನುಷ್ಯರ "ನಾನು- ನಾನೇ" ಎಂಬ ಅಹಂ ಅನ್ನು ನಶಿಸುವುದೇ ಅನಿಸುತ್ತದೆ...
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ/ಉಲ್ಲೇಖ- ೭೭ |
If you have a thought- "your worth and hard work means nothing in this universe". Then, just look at this stone called "Krishna Shile." People thought it was a normal stone, fit for nothing and it was just sitting in the same place for several years. But, now the same stone has been carved as "Rama Idol" in Ayodhya. Isn't this the finest example to give a thought about "waiting patiently for an amazing results in the whole universe...!?"
Hence, just wait patiently for your time and just keep going with the flow and when it is time, your worth will be valued and hard work will be paid.
----Chinmayi
![]() |
| ಚಿತ್ರಕ್ಕೆ ಪದ್ಯ/ಉಲ್ಲೇಖ- ೭೬ |
It took 496 years to bring back the lost glory and I'm blessed as others are for living in this era to witness this Epic moment. I'll relive this day for an infinite number of times...
I'm awaiting for much more lost glories to be revived ASAP.
Jai Sri Raama
🥹🙏🏽🙇🏾♂️🤍🕉️🥹
----Chinmayi
![]() |
| ಚಿತ್ರಕ್ಕೆ ಪದ್ಯ- ೭೫ |
ನನ್ನ ಇದುವರೆಗಿನ ಜೀವನವನ್ನು ಇಬ್ಬರ ಜೀವನ ಚರಿತ್ರೆಯನುಸಾರವಾಗಿ ಜೀವಿಸಲು ಪ್ರಯತ್ನಿಸಿದ್ದೇನೆ ಹಾಗೂ ಇನ್ನು ಮುಂದೆಯೂ ಹಾಗೆಯೇ ಜೀವಿಸಲು ಪ್ರಯತ್ನಿಸುವೆನು—
ಅವರಿಬ್ಬರೇ "ರಾಮ-ಕೃಷ್ಣರು."
ಅವರಿಬ್ಬರ ಯಶೋಗಾಥೆ ಹಾಗೂ ಧರ್ಮ ಹೋರಾಟದ ಕುರಿತು ಓದಿ, ಕೇಳಿ, ನೋಡಿ ಜ್ಞಾನೋದಯವಾಗಿದ್ದೇನೆಂದರೆ—
ಓರ್ವರು ಸಂಬಂಧಗಳಿಗೆ ಗೌರವ ನೀಡಿದರು-
ತಂದೆಗೆ ತಕ್ಕ ಮಗನಾಗಿ ಬಾಳಿದರು.
ಒಡವುಟ್ಟಿದವರು, ಸ್ನೇಹಿತರು, ಮಕ್ಕಳಿಗಾಗಿ ಜೀವಿಸಿದರು.
ಏಕ ಪತ್ನಿಯ ಪ್ರಿಯಕನಾಗಿದ್ದರು.
ಬಹು ಮುಖ್ಯವಾಗಿ ತನ್ನ ಪ್ರಿಯ ಮಡದಿಗೆ ಕೆಡುಕಾದಾಗ ಇಡೀ ಸ್ರ್ತೀ ಕುಲವನ್ನು ಕಾಪಾಡುವ ಸಲುವಾಗಿ ಧರ್ಮ ಯುದ್ಧವನ್ನೇ ಮಾಡಿ ಅಧರ್ಮವನ್ನು ನಶಿಸಿದರು.
ತನ್ನ ಬದುಕನ್ನು ಕಷ್ಟದಲ್ಲಿ ಸಾಗಿಸಿ ನಂತರ ಸುಖ ಕಂಡರು.
ಇನ್ನೊರ್ವರು-
ಎರಡೂ ತಂದೆ ತಾಯಿಯ ಮುದ್ದು ಮಗನಾಗಿದ್ದರು.
ಒಡಹುಟ್ಟಿದವರು, ಸ್ನೇಹ ಬಳಗ, ಮಕ್ಕಳೊಡನೆ ಲವಲವಿಕೆಯಿಂದ ಜೀವಿಸಿದರು.
ಪ್ರೇಯಸಿ ಸಿಗದಿದ್ದರೂ ಆಕೆಯ ಅನಂತ ಪ್ರಿಯತಮನಾಗಿದ್ದರು.
ಎಂಟು ಪತ್ನಿಗಳ ಪ್ರಿಯಕರನಾಗಿದ್ದರು ಹಾಗೂ ಜೊತೆಗೆ ಹದಿನಾರು ಸಾವಿರ ಜೊತೆಗಾರ್ತಿಯರ ರಕ್ಷಕನಾಗಿದ್ದರು.
ಬಹು ಮುಖ್ಯವಾಗಿ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯನ್ನು ಸ್ರ್ತೀ ಕುಲದ ರಕ್ಷಣೆಯೆಂದೇ ಭಾವಿಸಿ ಧರ್ಮಯುದ್ಧ ಕುರುಕ್ಷೇತ್ರವನ್ನೇ ನಡೆಸಿದರು.
ಸಂಬಂಧಗಳಿಗೆ ಗೌರವ ನೀಡಿದ್ದಾದರೂ ಸಂಬಂಧಿಕರನ್ನೇ ಧರ್ಮಕ್ಕಾಗಿ ಕೊಂದು ಧರ್ಮವನ್ನೇ ಜಯಭೇರಿಯನ್ನಾಗಿಸಿದರು.
ತನ್ನ ಬದುಕನ್ನು ಪರಿಪೂರ್ಣತೆಯಿಂದ ಜೀವಿಸಿದರು.
"ರಾಮನು ಮರ್ಯಾದ ಪುರುಷೋತ್ತಮನು."
"ಕೃಷ್ಣನು ಯುಗ ಯುಗಗಳ ಮಹಾಪುರುಷನು."
----ಚಿನ್ಮಯಿ
![]() |
| ಚಿತ್ರಕ್ಕೆ ಹಾಡು- ೭೪ |
ಹಾಡು: ಅಖಿಲ ಬ್ರಹ್ಮಾಂಡಗಳ ಅನ್ನದಾತ— "ರೈತ"
ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಎಚ್)
ದೇವರ ರೂಪಿ ದೈವ ಸ್ವರೂಪಿ
ಅನ್ನಪೂರ್ಣೆಯ ಮಗನು.
ನಿಸ್ವಾರ್ಥ ಹೃದಯೀ ಕರುಣಾಮಯೀ
ವೈಕುಂಠವಾಸಿಯವತಾರನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ಧರೆಯ ತಾಕಿ ಭಕ್ತಿಯ ತೋರಿ
ಎತ್ತುಗಳೊಡನೆ ಉಳುವನು.
ಭತ್ತವ ನಾಟಿ ಪ್ರೇಮದಿ ಸಾಕಿ
ನೀರುಣಿಸುತಲೇ ಬೆಳೆಸುವನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ಬಿಸಿಲಲೂ ಗೆಯ್ಮೆ ಚಳಿಯಲೂ ಗೆಯ್ಮೆ
ಹಗಲಿರುಳ ಲೆಕ್ಕಿಸದವನು.
ಮಳೆಯೇ ವರ ಮಳೆಯೇ ಶಾಪ—
ಆದರೂ ಬಿಡದ ಚಲಗಾರನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ಒಮ್ಮೊಮ್ಮೆ ಲಾಭ ಒಮ್ಮೊಮ್ಮೆ ನಷ್ಟ
ಇಷ್ಟ-ಕಷ್ಟಗಳೊಡನೆ ಜೀವಿಸುವನು.
ಬರೀ ನಷ್ಟ ಭಾರೀ ನಷ್ಟ—
ಏನೇ ಆದರೂ ನಿಸ್ವಾರ್ಥನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
ದೈವಕ್ಕೆ ಅನ್ನವ ಪ್ರೀತಿಯ ಜೊತೆಗೆ
ಉಣಿಸುವ ಮಹಾನುಭಾವನು.
ಭೇದವೇ ತೋರದೆ ಎಲ್ಲರ ತೃಪ್ತಿಗೆ
ಏಕೈಕ ಕಾರಣವು ಇವನು.
ಅವನೇ ನಮ್ಮವ ರೈತನು.
ಅಖಿಲ ಬ್ರಹ್ಮಾಂಡಗಳ ಅನ್ನದಾತನು.
----ಚಿನ್ಮಯಿ
ಮಕ್ಕಳಿಗೆ ವಿದ್ಯೆ, ಬುದ್ಧಿಗಳ ಜೊತೆ ಜೊತೆಯಲ್ಲಿ ಸಂಸ್ಕಾರ ಅವಶ್ಯವಾಗಿ ಕಲಿಸಲೇಬೇಕು- ಏಕೆಂದರೆ, ಸಂಸ್ಕಾರದಿಂದಲೇ ನಿಜವಾದ ಜೀವನದ ಪಾಠ ಅರ್ಥವಾಗೋದು, ಅದುವೇ ಜೀವನಕ್ಕೆ ಬೇಕಾಗಿರೋದು, ವಿದ್ಯೆ ಬುದ್ಧಿಯೆಲ್ಲವೂ ನಂತರವಷ್ಟೇ. ಆದರೇ, ಈಗಿನ ಕಾಲದ ಮುಕ್ಕಾಲೂ ಭಾಗ ತಂದೆ ತಾಯಂದಿರು ಈ ಅತೀ ಸೂಕ್ಷ್ಮ ಹಾಗೂ ಪ್ರಮುಖ ವಿಚಾರವನ್ನು ಕಡೆಗಣಿಸಿ, ಮರೆತು ತಮ್ಮ ಮಕ್ಕಳಿಗೆ ಕಲಿಸದಿರುವುದು ವಿಷಾದದ ಸಂಗತಿ ಹಾಗೂ ಅರ್ಧಮಕ್ಕೆ ಸಮ.
ಮನುಷ್ಯನಿಗೆ ವಿದ್ಯೆ, ಬುದ್ಧಿಗಳು ದೊರಕದಿದ್ದರೂ ಪರವಾಗಿಲ್ಲ ಆದರೇ, ಸಂಸ್ಕಾರ ಅಂತೂ ದೊರಕಲೇ ಬೇಕು- ಏಕೆಂದರೆ, "ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ..."
ಸಂಸ್ಕಾರವಿಲ್ಲದ ದೇಶವು ದೇಶವೇ ಅಲ್ಲ.
ಸಂಸ್ಕಾರವಿಲ್ಲದ ಮನೆಯು ಮನೆಯೇ ಅಲ್ಲ.
ಸಂಸ್ಕಾರವಿಲ್ಲದ ಮನುಷ್ಯನು ಮನುಷ್ಯನೇ ಅಲ್ಲ.
----ಚಿನ್ಮಯಿ
"Then:"
For each and everyone, childhood is so special. Our back in the old days when we were young were just amazing. If we just rewind it and think, those days were the golden days of our lives—
So much innocence.
So much fun and cute fights.
So much playful nature.
So many games (both outdoor and indoor) we used to play.
So many wounds and smiles and pains behind them.
So many heartful friendships.
At last, yeah we used to study sometimes when we felt like.
See, this was the life which we can remember always and wish to rewind and live it yet again during our adulthood and older ages. Indeed, our parents were supportive and strict back then.
"Now:"
But parents nowadays, probably have forgotten how they grew up and making their kids live a "Machine Life" rather than "Human Life". The sad part is they are only strict and not supportive at all. There's also studying and it's a part of it I agree but only studying is not good at all. However, most importantly there is adulthood to struggle hard in life to build a so-called "Good Life."
If this is the case of true life, then why snatch that beautiful phase of life from your kids. A humble request from my side is that please allow your kids to live the most beautiful phase of their life to the fullest and please don't make them regret in their adulthood and older ages that they didn't enjoy their life at all because that's the only phase of life where kids laugh, smile, cry, shout, play, enjoy and do N number of things.
"Heartfelt Conclusion:"
The only phase of life to enjoy the most with a true heart along with nature and true people and learn as much as we can is the "Childhood" and that's the beautiful phase of everyone's life.
----Chinmayi
ಹಿಂದೆ ಮೋಸ ಮಾಡಿ ಮುಂದೆ ಬುದ್ಧಿವಂತ ಎಂದು ಕರೆಸಿಕೊಂಡು ನೂರು ಕಾಲ ಬದುಕುವುದಕ್ಕಿಂತ,
ಹಿಂದೆ-ಮುಂದೆ ಎರಡೂ ಕಡೆಯಲ್ಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಕೋರುತ ದಡ್ಡ ಎಂದು ಕರೆಸಿಕೊಂಡು ಕೊಂಚ ಕಾಲ ಬದುಕುವುದೇ ಲೇಸು...
----ಚಿನ್ಮಯಿ
Always wanting to be perfect in life is not necessary, because sometimes, imperfections are way too good that they alone become perfection.
----Chinmayi
ದೀಪಾವಳಿಯು ಬೆಳಕಿನ ಹಬ್ಬ— ಎಲ್ಲಾ ಕಾಲಘಟ್ಟದಲ್ಲೂ ಸುಮಾರು ಕಥೆಗಳಿವೆ. "ಧರ್ಮ-ಅಧರ್ಮ", "ಸತ್ಯ-ಅಸತ್ಯ" ಗಳ ನಡುವಿನ ಮಹಾ ಸಂಘರ್ಷಗಳಿವೆ. ಇಷ್ಟೆಲ್ಲದರಲ್ಲೂ ಗೆದ್ದಿರುವುದು "ಧರ್ಮ-ಸತ್ಯ" ಗಳೇ ಎಂಬುದನ್ನು ನಾವುಗಳೆಲ್ಲರೂ ಅರಿತು ಕೆಳಗಿನ ಪ್ರಮುಖ ಕಥೆಗಳ ಉದಾಹರಣೆಯಂತೆಯೇ ಜೀವಿಸುತ್ತ ನಮ್ಮೊಳಗಿನ ಅಂಧಕಾರವು ನಶಿಸಿ ಬೆಳಕಿನ ಉಗಮದಿಂದ ಬಾಳು ಬೆಳಕಿನೋತ್ಸವವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತ ಹಬ್ಬದಾಚರಣೆಯ ಸಂಭ್ರಮಿಸೋಣ...
"ಸತ್ಯ ಯುಗ (ಚಿನ್ನದ ಯುಗ):"
ಸಮುದ್ರ ಮಂಥನ— ಅಮೃತ-ಮಹಾಲಕ್ಷ್ಮೀಯ ಉಗಮ.
"ತ್ರೇತಾ ಯುಗ:"
ಬಲಿಯು ಪಾತಾಳದೆಡೆಗೆ— ವಾಮನನ ಪವಿತ್ರ ಪಾದ ಸ್ಪರ್ಶದಿಂದ.
ರಾವಣನ ಅಂತ್ಯ— ರಾಮ-ಸೀತೆ-ಲಕ್ಷ್ಮಣರ ಅಯೋಧ್ಯೆಯ ಆಗಮನ.
"ದ್ವಾಪರ ಯುಗ:"
ನರಕಾಸುರನ ವಧೆ— ಕೃಷ್ಣ-ಸತ್ಯಭಾಮೆಯರ ಸಂಗಮದಿಂದ.
ದ್ರೌಪದಿ-ಪಾಂಡವರು— ವನವಾಸ-ಅಜ್ಞಾತವಾಸಗಳಿಂದ ಮುಕ್ತ.
"ಕಲಿ ಯುಗ (ಅಂಧಕಾರ ಯುಗ):"
ಮಹಾಕಾಳಿಯ ರಕ್ಕಸ ರಕ್ತದೋಕುಳಿ— ಮಹಾದೇವನಿಂದಲೇ ಶಾಂತಿಯು ಕೊನೆಗೆ.
ಮಹಾವೀರನ ನಿರ್ವಾಣ— ಜ್ಞಾನೋದಯದಿಂದ ಸರ್ವ ಮುಕ್ತ.
ಮೊಘಲರ ಸೆರೆಯಿಂದ— ಗುರು ಹರಗೋಬಿಂದರ ಬಿಡುಗಡೆಯ ಸಂಭ್ರಮ.
----ಚಿನ್ಮಯಿ
ನನ್ನ ಮಾತೃ ಭಾಷೆ 'ತೆಲುಗು' ಆದರೇ ನಾ ಹುಟ್ಟಿದ್ದು-ಬೆಳದದ್ದು ಹೊನ್ನಿನ ನಾಡಾದ ಕರುನಾಡಲ್ಲಿ, ಪ್ರೇಮದಿಂದ ಕಲಿತದ್ದು ಕನ್ನಡವನ್ನು.
ನಾ ಅನುದಿನ ಅನುಕ್ಷಣ ಸವಿಯೋದು-ಆನಂದಿಸೋದು-ಆರಾಧಿಸೋದು-ಅನುಭವಿಸೋದು-ಜೀವಿಸೋದು ಜೇನಿನಂತಿರೋ ಬಾನೆತ್ತರದ "ಕನ್ನಡ"ವನ್ನೇ
— ಇದು ನನ್ನ ಆರಾಧ್ಯ ಕವಿಯಾದ ರಾಷ್ಟ್ರ ಕವಿ 'ಕುವೆಂಪು' ರವರ ಸಾಕ್ಷಿಯಾಗಿ ಸತ್ಯವು.
----ಚಿನ್ಮಯಿ
ನೀ ನಮ್ಮ್ ಒಲವಿನ ಧಾರಾವಾಹಿಯ ಮಧುರ ಸಂಚಿಕೆ.
ಮರಳಿ ರಂಜಿಸೆಂಬುದು ಹೃದಯದಭಿಮಾನಿಯ ಕೋರಿಕೆ...!
ಓ ಸಖಿಯೇ ಮರೆತೆಯ,
ಸಿನಿ ಪರದೆಯಿಂದೆ ನಮ್ಮೆರಡು ಹೃದಯಗಳ ಅನುರಾಗದ ಸಂಗಮ.
ಪ್ರೇಮ ಪರದೆಯ ನೀ ಒಮ್ಮೆ ಸರಿಸಿದರೆ ಕಾಣುವ ನೋಟ ವಿಹಂಗಮ.
ಓ ಪ್ರೇಯಸಿ ಕೇಳೇ ನೀ,
ಒಲುಮೆಯ ರಂಗಭೂಮಿಯಲ್ಲೇ ಅವಿಸ್ಮರಣೀಯ ಪ್ರಣಯ ಪಕ್ಷಿಗಳು ನಾವು.
ನಿನ್ನ ಹಿಂತಿರುಗುವಿಕೆಯಿಂದಲೇ ವಾಸಿಯಾಗುವುದೀ ವಿರಹ ನೋವು.
ನೀ ನಮ್ಮ್ ಒಲವಿನ ಧಾರಾವಾಹಿಯ ಮಧುರ ಸಂಚಿಕೆ.
ಮರಳಿ ರಂಜಿಸೆಂಬುದು ಹೃದಯದಭಿಮಾನಿಯ ಕೋರಿಕೆ...!
----ಚಿನ್ಮಯಿ
ಯಾವಾಗಲೂ ಮನಸ್ಸಿನಿಂದಲೇ ಯೋಚಿಸಬೇಕೆಂದಿಲ್ಲ,
ಕೆಲವೊಮ್ಮೆ ಹೃದಯದಿಂದ ಯೋಚಿಸುವುದೇ ಸರಿಯಾಗಿರುತ್ತದೆ.
ಸಂಬಂಧಗಳಲ್ಲಿ 'ಅಹಂ' ನಶಿಸಲು ಹೃದಯದ ಯೋಚನೆಯೇ ಸೂಕ್ತ...
----ಚಿನ್ಮಯಿ
ನಿನ್ನ ಕಾಡಿಗೆ ಕಪ್ಪು ಕಮಲದ ಕಾಂತಿ,
ಅದ ಕಾಣೋ ನನಗೆ ದೊರೆತಿದೆ ಶಾಂತಿ.
ನಿನ್ನಯ ನಿಷ್ಕಲ್ಮಶ ಹೃದಯದ ಒಡೆಯ—
ನಾನಾಗುತ ಸುರಿಸುವೆ ಪ್ರೇಮದ ಮಳೆಯ...
ಕೇಳೇ ಓ ನನ್ನ ಜೀವ.
ನೀನೇ ಈ ಹಾಡ ಭಾವ.
ಅದೆಷ್ಟು ಪುಣ್ಯ ಮಾಡಿದೆಯೋ ನನ್ನಯ ಕೈ ಬೆರಳು,
ಸ್ಪರ್ಶ ಸುಖ ಅನುಭವಿಸುವಾಗ ನಿನ್ನಯ ಮುಂಗುರುಳು.
ಚಂದ್ರನಂತೊಳೆವ ಮುಗುಳುನಗೆಯ ಆ ಸಿಹಿ ಕೆನ್ನೆಗೆ—
ಸೋತು ಶರಣಾಗಿ ಒಲವ ಸಹಿ ಹಾಕುವಾಸೆ ಈ ತುಂಟ ತುಟಿಗೆ...
ನಿನ್ನ ಮೈಯ ಹಚ್ಚೆಗಳಷ್ಟು ಪುಣ್ಯ ನನಗೆ ಸಾಕು,
ಆ ಬಿಸಿಯುಸಿರಲ್ಲಿಯೇ ಜೀವಿಸಲು ನನ್ನನ್ನು ನೂಕು!
ನಾಟ್ಯ ಸರಸ್ವತಿಯ ಒಲಿಸಿರುವ ನಾಟ್ಯಮಯೂರಿಯೇ—
ನನ್ನೆದೆಯ ಪ್ರೇಮ ಕವನವಿದೋ ಸ್ವೀಕರಿಸಿ ಕುಣಿಯೇ...!
ನಿನ್ನ ಸೆರಗ ದಾರಿ ಹಿಂಬಾಲಿಸೋ ಅಭ್ಯಾಸ,
ಇನ್ನೂ ಮುಂದೆ ನನಗೆ ಖಾಯಂ ಹವ್ಯಾಸ.
ಬಾಳ ದೀಪವೇ ನೀ ಪ್ರಕಾಶಿಸು ಸಾಕಷ್ಟೇ—
ನಿನಗಾಗಿಯೇ ಮುಡಿಪೆನ್ನ ಪ್ರೇಮ ನಿಷ್ಠೆ...
ಕೇಳೇ ಓ ನನ್ನ ಜಾನು.
ನೀನೇ ಈ ಬಾಳ ಜೇನು.
----ಚಿನ್ಮಯಿ
ಎನ್ನೆದೆಗೆ ಕಣ್ಣೆಂಬ ಬಿಲ್ಲಿಂದ ಪ್ರೀತಿಯ ಬಾಣವ ಹಾಕಿದವಳು ನೀನೆ...
ಆ ಬಾಣದ ನಿವಾಸ ಇನ್ನೆಂದೂ ಎನ್ನೆದೆಯೇ, ಆ ನೋವು ಸಿಹಿ ಜೇನೆ...
💘
----ಚಿನ್ಮಯಿ
ಬಾಳ ಗೆಳತಿಯೊಡನೆ ಸಪ್ತಸಾಗರದೊಳು ಕೈಯಿಡಿದು ಈಜುವಾಗ ರಕ್ಕಸ ಸುನಾಮಿಯೊಂದಪ್ಪಳಿಸಲು ಒಬ್ಬರಿಗೊಬ್ಬರು ಕಾಣಿಸಲಾಗದೆ ಸೇರಲಾಗದೆ ಇಬ್ಬರ ದಿಕ್ಕೇ ಬೇರೆ ಬೇರೆ ಆಯಿತು— ಬಹುಶಃ ವಿಧಿಯಾಟದನುಸಾರ ಅವಳ ತೀರ ಹಾಗೂ ನನ್ನ ತೀರ ಬೇರೆ ಬೇರೆ ಇರಬಹುದು...
----ಚಿನ್ಮಯಿ
ಏಕತೆ, ಐಕ್ಯತೆ, ಸಮಾನತೆ
ಕುರಿತಾಗಿ ಮಾತನಾಡುವ ಯೋಗ್ಯತೆ—
ಮೊದಲು ಸಂಪಾದನೆ ಮಾಡಬೇಕು
ಹಾಗೂ
ಸಂಪಾದನೆ ಮಾಡಕ್ಕೆ ಜೀವನದಲ್ಲಿ ಕಾರ್ಯರೂಪವಾಗಿ ಅದನ್ನೇ ಅಳವಡಿಸಿಕೊಳ್ಳಬೇಕು.
----ಚಿನ್ಮಯಿ
Don't wait for a CHANGE to happen. Instead CHANGE YOURSELF, then automatically CHANGE happens.
----Chinmayi
ಮೋರಿಯೊಳ ಮಳೆ ಮಿಂದರೂ ಶುಚಿ ಆಪುದಿಲ್ಲ.
ಸೇರಬೇಕು ಆತ್ಮದೊಳು ಪರಮಾತ್ಮನ ಸದ್ಭಾವನೆ—
ಅರಿವಿನ ಶುಚಿಯ ಉಗಮಕ್ಕೆ ಚಿನ್ಮಯಿ.
"ಭಾವಾರ್ಥ:"
ಮೋರಿಯೊಳಗೆ ಅದೆಷ್ಟೇ ಮಳೆ ನೀರು ಸೇರಿದರೂ ಮೇಲ್ನೋಟಕ್ಕೆ ಶುಚಿ ಕಾಣುವುದೇ ಹೊರತು ಆಳದಲ್ಲಿ ಕೊಳಕು ಆಗೆಯೇ ಕೊಳೆತು ನಾರುತ್ತಿರುತ್ತದೆ ಹಾಗೂ ತನ್ನ ಸೇರೋ ಮಳೆ ನೀರನ್ನು ಕೊಳಕು ಮಾಡುತ್ತದೆ. ಆಳದಿಂದ ಶುಚಿಯಾದಾಗಲೇ ಶುದ್ಧ ನೀರಿನ ರೂಪ ಪಡೆಯುವುದು.
ಹಾಗೆಯೇ, ಮನುಷ್ಯರ ವಿಚಾರದಲ್ಲೂ ಸಹ ಮೇಲ್ನೋಟಕ್ಕೆ ಆಡಂಬರ ಪೂಜೆ-ಪನಸ್ಕಾರಗಳು ಅದೆಷ್ಟೇ ಮಾಡಿದರೂ ಸಹ ಪರಮಾತ್ಮನು ಒಲಿಯಲ್ಲ, ಅಂಧಕಾರವ ದೂಡಿ ಪರಿಶುದ್ಧತೆ ಹಾಗೂ ಸದ್ಭಾವದ ಅರಿವಿಂದ ಆತ್ಮದಲ್ಲಿ ನೆಲೆಸಿಹ ಪರಮಾತ್ಮನನ್ನು ಒಲಿಸಿದರೇ ಭಕ್ತಿಯ ಉಗಮದಿಂದ ಪರಮಾತ್ಮನ ಸಾಕ್ಷಾತ್ಕಾರವಾಗುವುದು.
----ಚಿನ್ಮಯಿ
Worshipping through pure mind and heart is the best way to access the best portal of life called GOD.
----Chinmayi
ನವ ದಂಪತಿಗಳ
ನವ ಜೀವನದ
ವಿರಹ ಯಾತನೆ
ಅದುವೇ ಆಷಾಢ ಪ್ರೇಮ.
ಬಳಿ ಸೇರಲಾಗದೆ
ಕಾಯೋ ತವಕದಿ
ಸನಿಹ ಭಾವನೆ
ಎದೆಯೊಳಗೆ ಉಗಮ.
ಇರುವೆ ಬಳಿಯಲಿ
ಸಿಹಿಯನ್ನಿರಿಸಿ
ತಾಕದಂಗೆ ತಡೆಯುವ
ಅಪರಾಧ ಬಲು ಘೋರ.
ಹೀಗೆಯೇ ಆಗಿರಲು
ನವಜೋಡಿ ಪರಿಸ್ಥಿತಿ
ಹೇಗೆ ತಾನೆ ಇಳಿಸಲು
ಸಾಧ್ಯವು ಎದೆಯ ಭಾರ...!
ಕುಸುಮದಲ್ಲಡಗಿಹ
ಸವಿಯನ್ನೀರುತ
ಮಕರಂದ ತಯಾರಿಗೆ
ಜೇನು ಹುಳುವಿಗೇರಪ್ಪಣೆ...?
ಹಾಗೆಯೇ ಸಖ-ಸಖಿಯ
ಒಲವ ಸಂಗಮಕ್ಕೆ
ಅಡಚಣೆಯ ಕುರಿತು
ಹೃದಯ ಬೇಡಿದೆ ಸ್ಪಷ್ಟನೆ...!
ಎಲ್ಲೆ ಮೀರಿದ ಚಳಿಗೆ
ನಲುಗಿ ಹೋಗುತ
ವಿಯೋಗ ಸವಿಯುತ
ಒಂದು ಮಾಸವು ಕಳೆದಾಯ್ತು.
ಪ್ರೇಯಸಿ ಹಾದಿಯ
ಎದುರು ನೋಡುತ
ಮುಗುಳುನಗುತ
ಎದೆ ಕುಣಿಯಲು ನೋವೇ ಮರೆಯಾಯ್ತು..
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ- ೭೧ |
ಹೇ ಮಾತೆ ಜಗತ್ಜನನಿ ನಿನ್ನಿಂದಲೇ ಎನಗೆ ಆರೋಗ್ಯ-ಶಕ್ತಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...
ಹೇ ಮಾತೆ ಮಹಾಲಕ್ಷ್ಮಿ ನಿನ್ನಿಂದಲೇ ಎನಗೆ ಹಣ-ಐಶ್ವರ್ಯದ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...
ಹೇ ಮಾತೆ ಸರಸ್ವತಿ ನಿನ್ನಿಂದಲೇ ಎನಗೆ ವಿದ್ಯೆ-ಬುದ್ಧಿಯ ಭಿಕ್ಷೆಯು. ಇದೋ ನಿನ್ನ ಪುತ್ರನ ನಮನಗಳು...
ತ್ರಿದೇವಿಗಳಲ್ಲಿ ವಾಣಿಯೇ ಎನ್ನ ಪ್ರೀತಿಯ ಮಾತೇ. ಇದೋ ನಿನ್ನ ಪ್ರೀತಿಯ ಪುತ್ರನ ಶತಕೋಟಿ ನಮನಗಳು...
----ಚಿನ್ಮಯಿ
ಇದೀಗ ಜನಿಸಿರುವ ಹಸುಳೆಯಿಂದಿಡಿದು,
ಇನ್ನೇನು ಸಾಯುತ್ತಿರುವ-ಸತ್ತಿರುವ ಮನುಷ್ಯರವರೆಗೂ—
ಪಂಚಭೂತಗಳಿಂದಿಡಿದು,
ಸಕಲಜೀವರಾಶಿಗಳವರೆಗೂ—
ಎಲ್ಲರೂ ಎನಗೆ ಗುರುವೇ.
ಎಲ್ಲರಿಗೂ ತಲೆ ಬಾಗಿರುವೇ.
ಎಲ್ಲರಿಗೂ ನಮಿಸಿರುವೇ.
ಎಲ್ಲರೊಳಗೊಂದಾಗಿರುವೇ...
----ಚಿನ್ಮಯಿ
![]() |
| ಚಿತ್ರಕ್ಕೆ ಪದ್ಯ- ೬೯ |
ಗೋಧೂಳಿ ವೇಳೆಯಲಿ ತಂಗಾಳಿ ಬೀಸುತಲಿ,
ಬಾನಿಗೆ ಭಾನು ಉಡಿಸುವಾಗ ಕೇಸರಿ—
ಒಲವ ಮಂಟಪದಡಿ ನಮ್ಮಿಬ್ಬರ ಮಿಲನ.
ನದಿಯೊಳ ಸವಿದೆವು ಆ ಸುಂದರ ಕ್ಷಣ.
ಮೇಘಗಳು ಗದರಿ ತಾ ಬಿಕ್ಕಿ ಬಿಕ್ಕಿ ಅಳುವಾಗ,
ಇಳೆಯು ಆಗಸ ತಾಕಿ ಉಡುವಂತೆ ಹಸಿರ—
ನಮ್ಮಿಬ್ಬರ ಸಿಹಿ ಕಾದಾಟದ ಸವಿ ಸಮಯ.
ಅದರಿಂದಿರೋ ಮಧುರ ಸುಮಧುರ ಪ್ರಣಯ.
ಶಶಿಯ ಆಗಮನ ಬೇಡವೆನಿಸುವಷ್ಟು,
ಒಳ ಮನಸ್ಸನ್ನು ಹೊಕ್ಕಿರಲು ವಾತಾವರಣ—
ಈಗೆಯೇ ಸದಾ ಇದ್ದುಬಿಟ್ಟರೇ ಅದೆಷ್ಟು ಸಂತಸ!
ಅದಾಗದೆಂದಿಗೂ ಜೊತೆ ಆವರಿಸಿರಲು ನೀರಸ...!
----ಚಿನ್ಮಯಿ
ತಣ್ಣನೆಯ ಗಾಳಿಯೊಡನೆ ಆ ರವಿಯ ಬಿಸಿ ಶಾಖ ಸೇರಿ ಸುಖದ ಭಾಸವಾದಂತೆಯೇ—
ಈ ವಿರಹದ ಬೇಗುದಿಯಲಿ ಬೇಯುತ್ತಿರುವ ಹೃದಯಕ್ಕೆ ಆಕೆಯ ಸನಿಹದ ಅಪ್ಪುಗೆ...
----ಚಿನ್ಮಯಿ
Sanathana Dharma teaches us everything for living a life, but one must follow these below three steps to become a "Complete Human"—
As the first step, the one who decodes it.
As the second step, the one who learns from it.
As the third and final step which is most important, the one who follows and practices it in life.
----Chinmayi
Inject kindness and good thinking inside everyone's mind by helping others or being there for them in their tough times not only who you know even for unknown people also,
then automatically everyone starts—
believing in Humans,
believing in Humanity,
believing in Good and
most importantly believing in God.
----Chinmayi
Things are broken from various External Pressure.
Mind and Heart are broken from our own Internal Pressure.
----Chinmayi
ತನ್ನ ಬಳಿ ಏನೂ ಇಲ್ಲದಿದ್ದರೂ ಅಥವಾ ಸ್ವಲ್ಪವೇ ಇದ್ದರೂ, ಕೊಂಚವು ಯೋಚಿಸದೇ-ಏನನ್ನೂ ಅಪೇಕ್ಷಿಸದೇ ದಾನ ಮಾಡುವವ—
ತನಗೆಷ್ಟೇ ಕಷ್ಟ ಬಂದರೂ, ಅದೇನೇ ಆದರೂ ದೇವರನ್ನು ನಂಬುವವ—
ಈ ಮೇಲಿನೆರಡು ಗುಣವುಳ್ಳವರು ಸರ್ವ ಶ್ರೇಷ್ಠರು ಅಖಂಡ ವಿಶ್ವಗಳಲ್ಲಿಯೂ...
----ಚಿನ್ಮಯಿ
ತಾಯಿ ಹೆತ್ತರು, ತಂದೆಯ ಕಂಗಳಲಿ ಆನಂದಭಾಷ್ಪ.
ಪುಟ್ಟ ಕೈ ಕಾಲುಗಳ ಮೆಲ್ಲನೆ ತಾಕುತ ಅನುಭವಿಸುವವ- ಅಪ್ಪ.
ಎತ್ತಾಡಿಸಿ, ಕೈ ಹಿಡಿದು ನಡೆಸಿ, ಹೆಗಲೇರಿಸಿ ತೋರಿದರು ಪ್ರಪಂಚ-
ಅದೇನೇ ಕಂಡರು ಅವರ ಆ ನಗುವೊಂದೇ ಸುಂದರ ಪ್ರಪಂಚ.
ತುಂಬು ಹೃದಯದಿ ಪ್ರೇಮ ಧಾರೆಯೆರೆದು ಕೋಪದಿಂದಲೇ ಪ್ರೀತಿಸೋ ಏಕೈಕ ವ್ಯಕ್ತಿ.
ಬೇಕು ಬೇಡವ ತಿಳಿದು ತನಗೆ ಕಷ್ಟವಾದರೂ ಇಷ್ಟದಿ ಕೊಡಿಸೋ ಮಹಾನ್ ಶಕ್ತಿ.
ಮನೆಯನ್ನು ಒಬ್ಬರೇ ಮುನ್ನಡೆಸಿ ತನಗೆಷ್ಟೇ ದುಃಖವಿದ್ದರೂ ತೋರದ ಜೀವ.
ಮನೆಯವರ ಸುಖ ಸಂತೋಷವಷ್ಟೇ ಅವರ ಬಾಳಿನ ಮುಖ್ಯ ಧ್ಯೇಯ.
ಬಾಳಿನುದ್ದಕ್ಕೂ ಬೆವರಿಳಿಸಿ ದುಡಿದ ಅಪ್ಪನಿಗೇ ಸರಿಸಾಟಿ ಯಾರಿರಲು ಸಾಧ್ಯ!
ಆ ಪವಿತ್ರ ಬೆವರಿಂದಲೇ ಈ ದೇಹ ಬೆಳೆದು ಜೀವದ ಉಸಿರಾಗಿರುವುದು ಪರಮ ಸತ್ಯ.
ತಾಯಿ ಮಕ್ಕಳಿಗೆ ಗುರುವಾದರೇ ತಂದೆಯೇ ಕುಟುಂಬಕ್ಕೆ ಗುರುವು.
ತಾಯಿ ಆತ್ಮವಾದರೇ ತಂದೆಯೇ ಆತ್ಮದಲ್ಲಡಗಿಹ ಪರಮಾತ್ಮನು.
----ಚಿನ್ಮಯಿ
ಅನುಮಾನದ ಬೆಳಕಿನಲ್ಲಿ
ಸತ್ಯದ ನೆರಳು—
ಪ್ರೀತಿ-ನಂಬಿಕೆಗಳ ಗೋರಿಯೊಳಗೆ...
ಅನುಮಾನದ ಬೆಳಕಿನಲ್ಲಿ
ಪ್ರೀತಿ-ನಂಬಿಕೆಯು—
ಸುಳ್ಳಿನ ನೆರಳಿನ ಗೋರಿಯೊಳಗೆ...
----ಚಿನ್ಮಯಿ