Friday, October 11, 2024

ತಪ್ಪೊಪ್ಪಿಗೆ. The Confession

ನಾನು ಆಗಿನ ಹರೀಶ್ ಆಗಿದ್ದಾಗ—

ನನ್ನ ತಂದೆ-ತಾಯಿಗೆ ಕೋಪದಿಂದ, ಅಹಂಕಾರದಿಂದ ಎದುರುತ್ತರ ಕೊಟ್ಟಿದ್ದೇನೆ, ಕಿರುಚಾಡಿದ್ದೇನೆ, ಬೈದಿದ್ದೇ‌ನೆ, ತಳ್ಳಿದ್ದೇನೆ, ಬಿದ್ದಾಗ ಮೇಲಕ್ಕೆತ್ತದೆ ಹಾಗೆ ನಿಂತಿದ್ದೇನೆ, ತುಂಬಾನೆ ನೋಯಿಸಿದ್ದೇನೆ...

ಇಷ್ಟೆಲ್ಲಾ ಮಾಡಿದರೂ ಅವರು ನನ್ನನ್ನು ಪ್ರೀತಿಸಿದರು ಹಾಗೂ ಪ್ರೀತಿಸುತ್ತಲೇ ಇರುವರು.

ಹಾಗೆಯೇ ನನ್ನ ಮಾಜಿ ಪ್ರೇಯಸಿಯೊಡನೆಯೂ ಕೂಡ ಅದೇ ವರ್ತನೆಯಗಿತ್ತು- ಕೋಪದಿಂದ, ಅಹಂಕಾರದಿಂದ ಕಿರುಚಾಡಿದ್ದೇನೆ, ಹೊಡೆದಿದ್ದೇನೆ,‌ ಬೈದಿದ್ದೇ‌ನೆ, ತಳ್ಳಿದ್ದೇನೆ, ಬಿದ್ದಾಗ ಮೇಲಕ್ಕೆತ್ತದೆ ಹಾಗೆ ನಿಂತಿದ್ದೇನೆ, ತುಂಬಾನೆ ನೋಯಿಸಿದ್ದೇನೆ...

ಇಷ್ಟೆಲ್ಲಾ ಮಾಡಿದರೂ ಅವಳು ನನ್ನನ್ನು ೮ ವರ್ಷ ಪ್ರೀತಿಸಿದಳು.

ಹಾಗೆಯೇ ನನ್ನ ಎಷ್ಟೋ ಸ್ನೇಹಿತರೊಡನೆ ಕೂಡ ಮೇಲಿನ ರೀತಿಯದೇ‌ ವರ್ತನೆಯಾಗಿತ್ತು...

ಆದರೂ ಅವರೆಲ್ಲರೂ ಸಹ ನನ್ನನ್ನು ಪ್ರೀತಿಸಿದರು ಹಾಗೂ ಪ್ರೀತಿಸುತ್ತಲೇ ಇರುವರು.

ಇಷ್ಟೆಲ್ಲಾ ಮಾಡಿದ ನಾನೊಬ್ಬ ಮಹಾಪಾಪಿ, ಅವರೆಲ್ಲರ ಪ್ರೀತಿಗೆ ನಾನು ಅರ್ಹನಲ್ಲದವನು...

ಆದರೇ ನನ್ನ ತಪ್ಪುಗಳನ್ನು ಅರಿತುಕೊಂಡು, ತಿದ್ದಿಕೊಂಡು ಹೊಚ್ಚ ಹೊಸ ಮನುಷ್ಯನಾಗಿರುವ ಈಗಿನ ಹರೀಶ್ ಬೇರೆ. ಈಗ ಅದೆಷ್ಟು ಆಗತ್ತೋ ಅಷ್ಟು ಪ್ರೀತಿಯನಷ್ಟೇ ನೀಡುತ್ತಿದ್ದೇನೆ ಎಲ್ಲರಿಗೂ ಬಗೆ-ಬಗೆಯ ರೀತಿಯಲ್ಲಿ...

ಅದೇನೆ ಆದರೂ ಸಹ ಆಗಿನ ಹರೀಶ್ ಮಾಡಿರುವ ಮಹಾಪಾಪಗಳಿಗೆ ಈಗಿನ ಹರೀಶ್ ಅವುಗಳನ್ನು ನೆನೆ-ನೆನೆದು ಕೊರಗುವುದೇ ಪ್ರಾಯಶ್ಚಿತ್ತ. ಆದರೇ, ಮಾಡಿರುವ ಎಲ್ಲಾ ಕರ್ಮಗಳಿಗೂ ತಕ್ಕ ಶಿಕ್ಷೆಗೋಸ್ಕರ ಕಾಯುತ್ತಿದ್ದೇ‌ನೆ, ಶಿಕ್ಷೆ ಹತ್ತಿರ ಬಂದಾಗ ಸಂತೋಷದಿಂದ ಸ್ವೀಕರಿಸುತ್ತೇನೆ...

ಕರ್ಮಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ.


 ‌‌         ----ಚಿನ್ಮಯಿ


When I was the old Harish—

In the sense of anger and ego, I've given back answers, shouted, scolded, pushed away my parents and when they had fallen down did not lend any helping hand and stood and watched them, mainly given so much pain and sorrow to them... Despite that also, they loved me unconditionally all these years and kept on loving me always. 

Similarly, in the sense of anger and ego, I've shouted, beaten up, scolded, pushed away my Ex-girlfriend and when she had fallen down did not lend any helping hand and stood and watched her, mainly given so much pain and sorrow to her... Despite that also, she loved me unconditionally for 8 long years.

Also I've acted similarly as I said above with most of my friends too... Despite that also, they loved me unconditionally all these years and kept on loving me always. 

After doing so much, I'm the biggest sinner and I'm unworthy of all their love towards me... But, I've become a new human being- the new Harish after analysing and correcting my sins and I'm an entirely different person now. For now, I'm only giving love how much ever it's possible in abundance for everyone in different varieties as per the Life...

However, the new Harish has to suffer by always remembering all the great sins done by the old Harish and that's the atonement. But, I'm eagerly waiting for the severe punishment to be imposed on me for all the karma's done, and when the punishment is nearby, I'll be very happy to receive it since I abide by the law of Karma.


           ----Chinmayi

Thursday, October 10, 2024

ಪ್ರೇಮದ ಕರೆಯೋಲೆ

ನೆರಳಿಗೆ ನೆರಳು ಸೋಕಲೀಗ ಅದೇನೋ ಸೋಜಿಗ.

ಉಸಿರಿಗೆ ತಾ ಉಸಿರಾಗೆಂಬ ಮನವಿಯೇ ಮೋಹಕ.

ಸರಸ ಸಲ್ಲಾಪದಿ ಹುಬ್ಬಿನೆರಡರ ಸುಖಾಭಿಲಾಷಿ ನೃತ್ಯ ಕಾಳಗ.

ಪ್ರೇಮೋದಯಕ್ಕೀಗ ಮುಗುಳುನಗೆಯೇ ಕಾಯಂ ವೀಕ್ಷಕ.


               ----ಚಿನ್ಮಯಿ

"Bhaarath 'Rat(n)a"n Tata'

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೨

In the whole world full of selfishness and egocentric, there was a great man who was born in and who lived in and who gave everything back to the greatest country in the world and through his selflessness, humility and simplicity, his Legacy will be forever eternal.

"LEGENDS NEVER DIE"

🙏🏽🙇🏾‍♂️🤍

                ----Chinmayi

Wednesday, October 2, 2024

अल्वीदा...

कभी कभी जीवन मे अल्वीदा केहना बहुत मुश्किल का काम है—

लेकिन केहना तो बहुती ज़रूरत...

क्यूंकि आज का अल्वीदा से कल का नहे जीवन है—

कल का अनुभव के मुलाकात के साथ...


            ----चिन्मयी

Monday, September 23, 2024

ಬದುಕಿಗೆ ಮಹಾಗುರುಗಳು— "ಡಾ|| ಪುನೀತ್ ರಾಜ್‍ಕುಮಾರ್"

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೧


ಹೇಗೆ ಬದುಕಬೇಕೆಂಬುದನ್ನು ಹೇಳಿಕೊಟ್ಟು ಬದುಕಿದರಿವರ ತಂದೆ— 

"ಡಾ|| ರಾಜ್‍ಕುಮಾರ್."

ಅವರ ಹಾದಿಯಲ್ಲಿಯೇ ಸಾಗುತ, ತಂದೆಯನ್ನೇ ಮೀರಿಸುವಂತೆ-ತಂದೆಗೆ ತಕ್ಕ ಮಗನಾಗಿ ಬದುಕುತ, ನಮಗೆಲ್ಲರಿಗೂ 'ಬದುಕ' ಕಲಿಸಿದವರಿವರು ನಗುವಿನ ಒಡೆಯ—

"ಡಾ|| ಪುನೀತ್ ರಾಜ್‍ಕುಮಾರ್."


             ----ಚಿನ್ಮಯಿ

Sunday, September 15, 2024

ನನ್ನಣೆಯ ಪುಸ್ತಕದಲ್ಲಿ...

ನನ್ನಣೆಯ ಪುಸ್ತಕದಲ್ಲಿ—


ಈಗಿನವರೆಗಿನ ಬದುಕಿನ ಪುಟಗಳಲ್ಲಿ—

ಆ ಬ್ರಹ್ಮದೇವ ಬರೆಯಲಿಲ್ಲ ಪ್ರೇಮದ ಅಧ್ಯಾಯ...

ಬರೆದಿದ್ದರೂ ಅದು ಕೊಂಚ ಕಾಲಕ್ಕೆ ಸೀಮಿತವಾಯಿತಷ್ಟೇ...


ಇನ್ಮುಂದಿನ ಬದುಕಿನ ಪುಟಗಳಲ್ಲಿ— 

ಬಹುಶಃ ಇದ್ದರೂ ಇರಬಹುದೇನೋ ಪ್ರೇಮ ಪ್ರಣಯ...

ಇದ್ದರೆ ಸಂಪೂರ್ಣ ಭಾಗ್ಯಶಾಲಿ, ಇಲ್ಲದಿದ್ದರೆ ಕನಸಿನ ಪ್ರೇಮಲೋಕಕ್ಕೆ ಭಾಗಶಃ ಚಕ್ರವರ್ತಿಯಾಗುವೆನಷ್ಟೇ...


               ----ಚಿನ್ಮಯಿ

Saturday, September 14, 2024

ಓ ದೇವರೇ ನೀನೆಲ್ಲಿರುವೇ...!?

"ಓ ದೇವರೇ ನೀನೆಲ್ಲಿರುವೇ...!?"—


"ನಾನಿರುವಾಗ ನಿನ್ನೊಳಗೆ ಬೇರೆಲ್ಲಿ ಹುಡುಕುವೆ...!?

ನಿನ್ನೊಳಗೆ ನೀನಾಗಿಯೇ ನಾನು ಬದುಕಿರುವೆ...

ಒಳ ಕಣ್ತೆರೆದು ನೋಡೊಂದು ಸಲ.

ಕಾಣುತ್ತಲೇ ಬಳಿ ಇರುವೆನು ಅನಂತ ಕಾಲ."


                ----ಚಿನ್ಮಯಿ

Sunday, September 8, 2024

ತ್ರಿಪದಿ- ೪

ಅಧರ್ಮೋ ಪರಮಪೂಜ್ಯಂ ಬಂಧು-ಮಿತ್ರರ್—
"ಅಂಧಕಾರಂ-ಅಜ್ಞಾನಂ-ಅಹಂ" ತ್ರಿವಳಿ ಹಿತ ಶತ್ರುಗಳ್—
ಮಾದೇವ ಅಗ್ನಿ ಸ್ಪರ್ಶದಿಂ ನಶಿಸೋ ಚಿನ್ಮಯಿ


"ಭಾವಾರ್ಥ:"
ಅಧರ್ಮವನ್ನು ಆತ್ಮೀಯತೆಯಿಂದ ಪೂಜಿಸೋ ಬಂಧುಗಳು-ಮಿತ್ರರೆಂದರೇ— "ಅಂಧಕಾರ-ಅಜ್ಞಾನ-ಅಹಂಕಾರ"ಗಳು. ಅಧರ್ಮದ ಜೊತೆಗಿ‌ನ ಆತ್ಮೀಯ ಒಡನಾಟದಿಂದಲೇ ನಮಗೆಲ್ಲರಿಗೂ ಈ ಮೂರು ಹಿತಶತ್ರುಗಳು. ನಾವುಗಳು ನಮ್ಮ ದೇಹಕ್ಕೆ ಮಹಾದೇವನ ಅಂಶವಾದ ಅಗ್ನಿಯ ಪವಿತ್ರ ತೇಜಸ್ಸನ್ನು ಸ್ಪರ್ಶಿಸಿ, ಅದರ ಪಾವಿತ್ರತೆಯಿಂದಲೇ ಇವುಗಳನ್ನು ನಶಿಸಿ, ಆತ್ಮವನ್ನು ಶುದ್ಧೀಕರಿಸಿ, ಪರಮಾತ್ಮನ ಸಾಕ್ಷಾತ್ಕಾರಗೊಳ್ಳಿಸಿ ಧರ್ಮವನ್ನು ಕಾಪಾಡಬೇಕು...


         ----ಚಿನ್ಮಯಿ

Tuesday, August 27, 2024

ದಶಮುಖ ರಾವಣ V/S ದಶಾವತಾರಿ ಮಹಾವಿಷ್ಣು

ಚಿತ್ರಕ್ಕೆ ಪದ್ಯ / ಉಲ್ಲೇಖ- ೯೦


ಮನುಷ್ಯರೆಲ್ಲರಲ್ಲೂ ಸಹ ಅಡಗಿರುವ ದಶಗುಣಗಳೆಂದರೆ— 

ಅಹಂ, ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ, ಬುದ್ಧಿ, ಮನಸ್ಸು, ಚಿತ್ತ.

ಇವುಗಳಿಂದಲೇ ರಾವಣನನ್ನು ಸಹ ದಶಕಂಠ, ದಶಮುಖ ಎಂದು ಕರೆಯಲಾಗುವುದು. ರಾವಣನಿಗೆ ಇವುಗಳಲ್ಲೆದರ ಮೇಲೂ ಹಿಡಿತವಿತ್ತು ಆದರೇ ನಿಯಂತ್ರಣವಿರಲಿಲ್ಲ. ಆದ್ದರಿಂದಲೇ ಅವನ ಸರ್ವನಾಶವಾಗಿದ್ದು. ಇದರಲ್ಲಿ ಹೇಗೆ ನಮ್ಮ ಸ್ವಂತ ದಶಗುಣಗಳೇ ನಿಯಂತ್ರಣವಿಲ್ಲದಿದ್ದರೆ ನಮಗೆ ಹಿತಶತ್ರುವಾಗಬಹುದೆಂಬುದನ್ನು ಕಲಿಸುತ್ತದೆ.

ಮಹಾವಿಷ್ಣುವಿನ ದಶಾವತಾರದಿಂದ ಹೇಗೆ ಪ್ರಾಣಿಗಳಿಂದ ನಾವೆಲ್ಲರೂ ಮನುಷ್ಯರಾದೆವು ಹಾಗೂ ಬುದ್ಧಿವಂತಿಕೆಯ ಅಧಿಪತಿಯಾದ ಮೇಲೆ ಅದೇ ದಶಗುಣಗಳ ಹಿಡಿತ ಹಾಗೂ ನಿಯಂತ್ರಣದಿಂದ ಮಹಾಜ್ಞಾನಿ, ಪುರುಷೋತ್ತಮನಾಗಬಹುದೆಂಬುದನ್ನು ಒಂದೊಂದೇ ವಿಭಾಗವಾಗಿ ಅವತಾರಗಳ ರೂಪದಿಂದ ಕಲಿಸುತ್ತದೆ.

ಎರಡೂ ಕಥೆಗಳಿಂದ ಎಲ್ಲಾ ಮನುಷ್ಯರು ಸಹ ದಶಗುಣಗಳ ಮೇಲೆ ಹಿಡಿತದ ಜೊತೆಗೆ ನಿಯಂತ್ರಣವು ಇದ್ದರೇ ಮೇಧಾವಿ ಜೊತೆಗೆ ಪುರುಷೋತ್ತಮರಾಗಿಯೂ ಬದುಕಬಹುದೆಂಬುದನ್ನು ಕಲಿಸುತ್ತದೆ ಅದರದೇ ವಿಶಿಷ್ಟ ರೀತಿಯಲ್ಲಿ, ಆದರೇ ನಾವುಗಳು ಅದನ್ನು ಗ್ರಹಿಸಿ, ಅರ್ಥೈಸಿಕೊಂಡು, ಬದುಕಿ ಬಾಳಬೇಕಷ್ಟೇ...


       ‌         ----ಚಿನ್ಮಯಿ

Monday, August 26, 2024

This is how Sri Krishna changed the course of my life....

ಚಿತ್ರಕ್ಕೆ ಪದ್ಯ / ಉಲ್ಲೇಖ- ೮೯

In the initial days of my youth, I was never like this. I was a different Harish, I was an "Atheist" and "Ignorant" at the early stage of my life. I was an "Angry youth with too much Ego" residing inside me. I was not listening to even my parents and was scolding them and have hurt them so much.

But, Sri Krishna changed my entire life when he made me understand the true essence of life. I always even now till my last breath feel guilty for my mistakes and at the same time, I'm eternally thankful to the lord for bringing out the real me, a brand new human being who was already inside me.

I've surrendered myself to you oh Paramaathma.

"I'm nothing. You are everything. As you reside inside everyone including me, I'm everything."

Thank You for an infinite number of times for letting me know this ultimate truth of life.


ನನ್ನ ಪ್ರಕಾರ:

ಕಲಿಯುಗದಲ್ಲಿ ನಾನೇ ಅರ್ಜುನನು.

ನೀನೇ ಸದಾಕಾಲಕ್ಕೂ ಶ್ರೀ ಕೃಷ್ಣನು.


            ----Chinmayi

Sunday, August 25, 2024

Are we Bhaarathiyas really free...!?

It's been 77 years since earning independence from the bloody Britishers, Portugese and French, so many martyrs have been given their blood, body and soul to see Bhaarath free and to set Bhaarath free.

But I think their sacrifice is not respected since even now indirectly we are under slavery in the form of Politics (Political Leaders) who are ruling us from our own country, Jobs (Corporate and Industrial companies) especially from all over the world who are ruling us from our own country. No one bothers and addresses these things which are actually serious issues since no one wants to do it due to their fear, comfort zones etc. 


So we have to question ourselves: "are we really free even after 77 years of Independence...!?"


               ----Chinmayi

Tuesday, August 20, 2024

Never ever fail as Being Human

One can or may fail in any aspect of life but must and should never ever fail as being human, which completes life on the whole.

                 ----Chinmayi

Friday, August 16, 2024

A Solid and True Statement on Rape

ಚಿತ್ರಕ್ಕೆ ಪದ್ಯ / ಉಲ್ಲೇಖ- ೮೮

If at all—

We Men are raised properly in the environment where it respects Women.

We Men know the true value of Women and respect them.

We Men stop behaving like insane creatures.

We Men are humanely educated.

We Men learn to control our lust through mastering to control our thoughts.

Then—

Rest everything will automatically fall into place.


We Men are the sole reason for this heinous crime and it's a severe punishable offence even if it takes a death penalty, it must be exercised else Humanity will be at its highest stake.


                    ----Chinmayi

Thursday, August 15, 2024

ನನ್ನ ತಂದೆ ನನ್ನ ಹೆಮ್ಮೆ. ನನ್ನ ತಾಯಿ ನನ್ನ ಗೌರವ.

ಚಿತ್ರಕ್ಕೆ ಪದ್ಯ / ಉಲ್ಲೇಖ- ೮೭

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಮೊಟ್ಟ ಮೊದಲಿಗೆ 'ಕಾನ್ ಸ್ಟೇಬಲ್', ನಂತರ 'ಹೆಡ್ ಕಾನ್ ಸ್ಟೇಬಲ್' ಹಾಗೂ ತದನಂತರ ನಿವೃತ್ತಿ ಹೊಂದುವ ಸಮಯದಲ್ಲಿ 'ಅಸಿಸ್ಟೆಂಟ್ ರಿಸರ್ವ್‌ ಸಬ್ ಇನ್ಸ್ಪೆಕ್ಟರ್' ಆಗಿ ಸುಧೀರ್ಘ ೩೪ ವರ್ಷ ರಾಜ್ಯದ ಹೆಮ್ಮೆಯ ಪೊಲೀಸಾಗಿ ರಾಜ್ಯ ಹಾಗೂ ದೇಶಸೇವೆ ಸಲ್ಲಿಸಿದ ನಿಷ್ಠಾವಂತ ಅಧಿಕಾರಿಯು ನನ್ನ ತಂದೆ. ಅವರ ವೃತ್ತಿ ಸಮಯದಲ್ಲಿ ಎಷ್ಟೋ ಕಾಲ ಮನೆಯಿಂದ ಹೊರಗೆ ಉಳಿದಿದ್ದು ಇದೆ ಹಾಗೂ ಅದೆಷ್ಟೋ ಅನಾರೋಗ್ಯ, ಕಷ್ಟಗಳನ್ನ ಅನುಭವಿಸಿ ಕೂಡ ವೃತ್ತಿ ಧರ್ಮವ ಪ್ರಾಮಾಣಿಕವಾಗೇ ನಿರ್ವಹಿಸಿ ಗೆದ್ದ ವೀರನು ನನ್ನ ತಂದೆ. ನಿವೃತ್ತಿ ಹೊಂದೋ ಸಮಯದಲ್ಲಿ ವಾಸಿಯೇ ಆಗದಂತಹ ಬೆನ್ನಿನ ಅನಾರೋಗ್ಯದ ನಡುವೆಯೂ ಅದೆಷ್ಟೇ ನೋವಿದ್ದರೂ ಲೆಕ್ಕಿಸದೇ ತಮ್ಮ ೬೦ ವರ್ಷ ತುಂಬುವವರೆಗೂ ಸೇವೆ ಸಲ್ಲಿಸಿ ನೆಮ್ಮದಿಯಿಂದ, ಹೆಮ್ಮೆಯಿಂದ ನಿವೃತ್ತಿ ಹೊಂದರು ನನ್ನ ತಂದೆ.

ಅವರು ಬದುಕಿದ ರೀತಿಯೇ ನನಗೆ ಸ್ಪೂರ್ತಿ ಹಾಗೂ ಇಂತಹ ಯೋಧನಿಂದ ಪರೋಕ್ಷವಾಗಿ ಕಲಿತ ಜೀವನದ ಪಾಠಗಳು— ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಧರ್ಮ, ಕರ್ಮ ಇನ್ನೂ ಅನೇಕ ವಿಚಾರ-ಆಚಾರಗಳಿಂದಲೇ ನನ್ನ ಈಗಿನ ಬದುಕು ಬೆಳಗಿದೆ, ಇದಕ್ಕೆಲ್ಲದಕ್ಕೂ ಕಾರಣವಾದ ಈ ಯೋಧನಿಗೆ ನನ್ನ ಸಲಾಂ.

ಇಷ್ಟೆಲ್ಲದರ ಮಧ್ಯೆ ನನ್ನ ತಾಯಿಯ ತ್ಯಾಗ, ಕಷ್ಟ ಹಾಗೂ ಅವಳು ನಮ್ಮಪ್ಪನ ಅನುಪಸ್ಥಿತಿಯಲ್ಲಿ ನನ್ನನ್ನು ಹಾಗೂ ನನ್ನ ಅಣ್ಣನನ್ನು ಕೋಪದಿಂದಲೇ ಪ್ರೇಮ ಧಾರೆಯೆರೆದು ಬೆಳೆಸಿದ ರೀತಿಯನ್ನು ನೆನಪಿಸಿಕೊಳ್ಳಲೇಬೇಕು. ಇಂತಹ ತ್ಯಾಗಮಯಿಗೆ ನನ್ನ ಸಲಾಂ.

ಅದೇಷ್ಟೋ ಕಷ್ಟ ನೋಡಿ ಬೆಳೆದ ನಾನು-ನನ್ನಣ್ಣ ಆದರೂ ಸಹ ನಮಗೆ ಕಷ್ಟವೇ ಅನಿಸಬಾರದಂತೇ ಬೆಳೆಸಿದ ನಮ್ಮ ತಂದೆ-ತಾಯಿ, ಇವರಿಬ್ಬರೂ ಕಟ್ಟಿಕೊಟ್ಟಂತಹ ಈ ಬಂಗಾರದ ಬಾಳು ನಮಗೆ ದೀಕ್ಷೆ.

ಪ್ರತಿಯೊಂದಕ್ಕೂ ಇಬ್ಬರಿಗೂ ಸದಾಕಾಲವೂ ನಾವು ಚಿರಋಣಿ...


               ----ಚಿನ್ಮಯಿ

ಎಲ್ಲಿಹುದು ಜಾತಿ...!?

ಕರ್ಮದ ಹಾಗೂ ಪರಿಸ್ಥಿತಿಯ ಅನುಸಾರವಾಗಿ ಒಮ್ಮೊಮ್ಮೆ—

ನಾ ಬ್ರಾಹ್ಮಣನು.

ನಾ ಕ್ಷತ್ರಿಯನು.

ನಾ ವೈಶ್ಯಯನು.

ನಾ ಶೂದ್ರನು.


ಚತುರ್ವರ್ಣದಲ್ಲಿ ಎಲ್ಲವೂ ನಾನೇ ಆಗಿರುವಾಗ ಇನ್ನೆಲ್ಲಿಹುದು ಮನುಜನ ಸೃಷ್ಟಿಯ ಜಾತಿಯು...!?


      ----ಚಿನ್ಮಯಿ

ಪ್ರೇಮ ಭಕ್ತ

ಹೃದಯದ ಬೀದಿಯಲ್ಲಿ

ಒಲವಿನ ತೇರಿನಲ್ಲಿ

ಪ್ರೇಮ ದೇವತೆಯು ನೀನೇ.

ಅನುಕ್ಷಣ ತೇರ ಎಳೆಯುತ್ತ

ಮನದಲ್ಲೇ ಆರಾಧಿಸೋ

ಪ್ರೇಮ ಭಕ್ತನು ನಾನೇ.


    ----ಚಿನ್ಮಯಿ

Wednesday, August 14, 2024

ಮೊಟ್ಟಮೊದಲ ಸ್ಪೂರ್ತಿ

ಚಿತ್ರಕ್ಕೆ ಪದ್ಯ - ೮೬


ಚಿಕ್ಕಂದಿನಿಂದಲೂ ನನ್ನ ಜೀವನಕ್ಕೆ—

ಮೊಟ್ಟಮೊದಲ ಪ್ರತ್ಯಕ್ಷ ಸ್ಪೂರ್ತಿ ನನ್ನಮ್ಮ.

ಮೊಟ್ಟಮೊದಲ ಪರೋಕ್ಷ ಸ್ಪೂರ್ತಿ ನನ್ನಪ್ಪ ಹಾಗೂ ನನ್ನಣ್ಣ.


ಈ ಮೂವರಿರುವಿಕೆಗೆ ನಾ ಮಾಡಿರುವೆ ಪುಣ್ಯ.

ಇವರಿಲ್ಲದ ನನ್ನ ಬಾಳು ಅಸಂಖ್ಯಾತ ಶೂನ್ಯ.

   

              ----ಚಿನ್ಮಯಿ

Sunday, August 11, 2024

ದಶಾವತಾರ

ಚಿತ್ರಕ್ಕೆ ಪದ್ಯ / ಉಲ್ಲೇಖ- ೮೫

ಸಕಲ ಬ್ರಹ್ಮಾಂಡಗಳ ಪರಮಾತ್ಮ ಹಾಗೂ ಎನ್ನ ನಲ್ಮೆಯ-ಆರಾಧ್ಯ ದೈವ ಶ್ರೀ ಮಹಾ ವಿಷ್ಣುವಿನ ೨೪ ಅವತಾರಗಳಲ್ಲಿ ಬಹಳ ಪ್ರಮುಖ ಅವತಾರಗಳು ದಶಾವತಾರಗಳು...

ಅವುಗಳ ಹೆಸರು, ಅವುಗಳೆಲ್ಲವೂ ಯಾವೆಲ್ಲಾ ಯುಗಗಳಲ್ಲಿ ನಡೆದಿದೆ ಹಾಗೂ ಅವುಗಳಿಂದ ಸಕಲರ ಜೀವನಕ್ಕೆ ತಾತ್ಪರ್ಯಗಳು, ಅವುಗಳ ಕುರಿತಾಗಿ ಸಂಪೂರ್ಣ ಮಾಹಿತಿ ಕೆಳಗಿನಂತಿವೆ—


೧) ಸತ್ಯಯುಗ (ಕೃತಯುಗ / ಸುವರ್ಣ ಯುಗ)

೧) ಮತ್ಸ್ಯ:

ಇಡೀ ಬ್ರಹ್ಮಾಂಡಗಳಲ್ಲಿ ಜೀವಿಗಳ ಸೃಷ್ಟಿ ಮೊಟ್ಟಮೊದಲಿಗೆ ನೀರಿನಲ್ಲೇ ಶುರುವಾಗಿದ್ದು ಅನ್ನೋದು ಎಲ್ಲರಿಗೂ ತಿಳಿದ ವಿಚಾರವೇ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಮನುಷ್ಯ ಕುಲದ ಉಗಮದ ಮೂಲ ಕರ್ತೃಕಾರನಾದ 'ಮನು'ವನ್ನು ಹಾಗೂ ಸಪ್ತ ಋಷಿಗಳನ್ನು ಮಹಾಪ್ರಳಯದಿಂದ ಒಂದು ಬೃಹತ್ತಾಕಾರದ ಮೀನು ಪಾರುಮಾಡುವುದು, ಇದರಿಂದಲೇ ಎಲ್ಲಾ ಮನುಷ್ಯರು ಆಗಿನಿಂದಲೂ-ಈಗಿನವರೆಗೂ ಜೀವಿಸುತ್ತಿರುವುದು, ಇನ್ನೂ ಮುಂದೆಯೂ ಜೀವಿಸುವುದೇ ತಾತ್ಪರ್ಯವು. ಇದರಲ್ಲಿ ಕರ್ಮಸ್ಥಾಪನೆಯಿಂದಲೇ ಧರ್ಮಸ್ಥಾಪನೆಯಾಗಿದೆ.


೨) ಕೂರ್ಮ:

ನೀರಿನ ಜೀವಿಗಳ ಸೃಷ್ಟಿಯ ನಂತರ ನೀರು ಹಾಗೂ ನೆಲ ಎರಡರ ಮೇಲೂ ಜೀವಿಸಬಲ್ಲ ಜೀವಿಗಳ ಸೃಷ್ಟಿಯ ವಿಚಾರವು ಸಹ ಎಲ್ಲರಿಗೂ ತಿಳಿದಿದೆ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಬೃಹತ್ತಾಕಾರದ ಆಮೆಯ ಸಹಾಯದಿಂದ ಸಮುದ್ರ ಮಂಥನವು ನಡೆಯುವುದು, ಅದರಿಂದ ಹಾಲಾಹಲ, ಕೌಸ್ತುಭ, ಚಂದ್ರ, ಲಕ್ಷ್ಮಿ, ಅಪ್ಸರೆಯರು, ಕಾಮಧೇನು, ಪಾರಿಜಾತ, ಐರಾವತ, ಧನ್ವಂತರಿ, ಶಂಖ, ತುಳಸಿ, ಅಮೃತ ಹಾಗೂ ಮುಂತಾದವುಗಳು ಜನಿಸಿದರಿಂದ ಜಗವು ಸಾಗಲೆಂಬುದೇ ತಾತ್ಪರ್ಯವು. ಇದರಲ್ಲಿಯೂ ಕರ್ಮಸ್ಥಾಪನೆಯಿಂದಲೇ ಧರ್ಮಸ್ಥಾಪನೆಯಾಗಿದೆ.


೩) ವರಾಹ:

ನೀರಿನ, ನೀರು-ನೆಲದ ಜೀವಿಗಳ ನಂತರ ನೆಲದಲ್ಲಿ ಮಾತ್ರ ವಾಸಿಸುವ ಜೀವಿಗಳ ಸೃಷ್ಟಿಯ ಕುರಿತು ಎಲ್ಲರಿಗೂ ತಿಳಿದ ವಿಚಾರವೇ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಸೂರ್ಯನ ಹಿಡಿತದಿಂದ ಭೂ ದೇವಿಯನ್ನು ಓರ್ವ ಹಿರಣ್ಯಾಕ್ಷ ಎಂಬ ರಾಕ್ಷಸನು ದೂರಮಾಡುವನೋ, ಮತ್ತೊಮ್ಮೆ ಸೌರಮಂಡಲದ ಸಮತೋಲನಕ್ಕೆಂದಲೇ ಅವನೊಡನೇ ಹಂದಿಯೊಂದು ಸೆಣಸಾಡಿ ಗೆದ್ದು ತನ್ನ ಎರಡು ಮುಂಗಡ ಹಲ್ಲುಗಳ ಮೇಲೆ ಭೂ ದೇವಿಯನ್ನ ತಿರುಗಿಸುತ್ತಲೇ ತಂದು ಸಮತೋಲನ ಸರಿಮಾಡುವುದೆಂಬುದೇ ತಾತ್ಪರ್ಯವು. ಇದರಲ್ಲಿ ಸೃಷ್ಟಿಯ ಲಯಕ್ಕೋಸ್ಕರ ಧರ್ಮಸ್ಥಾಪನೆಯಾಗಿದೆ‌.


೪) ನರಸಿಂಹ:

ನೆಲದ ಜೀವಿಗಳ ಸೃಷ್ಟಿಯ ನಂತರ ಮಂಗಗಳ ಜಾತಿಯಿಂದ ಮಾನವ ರೂಪೀಕರಣವು ಕೊಂಚ ಕೊಂಚವೇ ಹೇಗೆ ಶುರುವು ಎಂಬುದು ಪರೋಕ್ಷವಾಗಿ ಅರ್ಧ ಸಿಂಹ-ಅರ್ಧ ಮನುಷ್ಯನ ರೂಪದಲ್ಲಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಮ್ಮನಾದ ಹಿರಣ್ಯಾಕ್ಷನ ಸೇಡು ತೀರಿಸಿಕೊಳ್ಳಲು ಜಿದ್ದು ಬಿದ್ದ ಓರ್ವ ಹಿರಣ್ಯ ಕಶಿಪು ಎಂಬ ರಾಕ್ಷಸನ ವಧೆ ಅವನ ಸ್ವಂತ ಮಗನಾದ ಮಹಾವಿಷ್ಣುವಿನ ಮಹಾ ಭಕ್ತನಾದ ಪ್ರಹ್ಲಾದನ ಸಹಾಯದಿಂದ ಹಾಗೂ ಆ ರಾಕ್ಷಸನ ಅತೀ ಬುದ್ಧಿವಂತಿಕೆಯ ವರಗಳನ್ನು ತಪ್ಪಿಸಿ ಆಗುವುದೆಂಬುದೇ ತಾತ್ಪರ್ಯವು. ಇದರಲ್ಲಿ ಸಂಬಂಧಗಳಿಂದ ಮೂಢರಾದ ಅಧರ್ಮಿಗಳ ನಾಶದಿಂದ ಧರ್ಮಸ್ಥಾಪನೆಯಾಗಿದೆ.


೨) ತ್ರೇತಾಯುಗ

೫) ವಾಮನ:

ಮಂಗಗಳಿಂದ ನಿಧಾನವಾಗಿ ಅದೇಗೆ ಸಣ್ಣಗಾತ್ರದ ಮನುಷ್ಯರ ರೂಪೀಕರಣವಾಯಿತೆಂಬುದನ್ನು ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಏಳು ಚಿರಂಜೀವಿಗಳಲ್ಲೊಬ್ಬನಾದ ಹಾಗೂ ರಾಕ್ಷಸ ಜಾತಿಗಳ ಒಡೆಯನಾದ ಓರ್ವ ಮಹಾಬಲಿಯು ಸ್ವರ್ಗಾಧಿಪತಿಯಾದ ಇಂದ್ರ ದೇವನ ಸೋಲಿಸಿ ತ್ರಿಲೋಕಗಳಧಿಪತಿಯಾಗಿ ಮೆರೆಯುವ ಅಹಂ ಅನ್ನು ಇಳಿಸಿ ತನ್ನ ಮೂರೆಜ್ಜೆಗಳನ್ನಿರಿಸಲು ಜಾಗ ಕೇಳಿದಾಗ ವಿಷ್ಣುವಿನ ಮಹಾಭಕ್ತನಾದ ಮಹಾಬಲಿಯು ತನ್ನೆರಡೆಜ್ಜೆಗಳನ್ನು ಎರಡೂ ಲೋಕಗಳಲ್ಲಿರಿಸಲು ದಾನ ನೀಡಿದನು ಹಾಗೆಯೇ ಸ್ವರ್ಗವನ್ನು ಪುನಃ ಇಂದ್ರನಿಗೇ ಹಿಂತಿರುಗಿಸಲು ವಾಮನ ಸಹಾಯ ಮಾಡಿದನು ಮತ್ತು ಕೊನೆಯ ಹೆಜ್ಜೆಗೆ ತನ್ನ ತಲೆಯನ್ನು ದಾನ ಮಾಡಿದನು ಇದರಿಂದಲೇ ಮಹಾಬಲಿಯನ್ನು ಖಾಯಂ ಪಾತಳಕ್ಕೆ ಕಳುಹಿಸೋ ಬಹಳ ಸಣ್ಣ ಗಾತ್ರದ ಮನುಷ್ಯನ್ನೊಬ್ಬನ ಮಹಾ ಪರಾಕ್ರಮದ ವಿಚಾರವೇ ತಾತ್ಪರ್ಯವು. ಇದರಲ್ಲಿ ಅಹಂ ಇಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.


೬) ಪರಶುರಾಮ:

ಮಂಗಗಳಿಂದ ಮನುಷ್ಯ ನಿಧಾನವಾಗಿ ರೂಪೀಕರಣವಾದ ನಂತರ ಅದೇಗೆ ಅರಣ್ಯದಲ್ಲಿ ಜೀವಿಸಲಾರಂಭಿಸಿದ, ಶಸ್ತ್ರಾಸ್ತ್ರಗಳನ್ನು ತಯಾರಿ ಮಾಡುವುದನ್ನು, ಅದರ ಬಳಕೆ ಹೇಗೆ ಕಲಿತನೆಂಬುದು ಹಾಗೂ ಪ್ರಾಣಿಯಿಂದ ರೂಪೀಕರಣವಾದ್ದರಿಂದ ವಿಪರೀತ ಕೋಪವೇಗೆ ಇತ್ತೆಂಬುದು ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಂದೆಯ ಆಜ್ಞೆಯಂತೆಯೇ ಸ್ವಂತ ತಾಯಿಯಾದ ರೇಣುಕಾಳ ತಲೆ ಕಡಿದನು, ಮಗನ ಸದ್ಯಃಪಿತೃವಾಕ್ಯಪರಿಪಾಲನಾ ಬುದ್ಧಿಯನ್ನು ಕಂಡು ಸಂತೃಪ್ತನಾದ ಜಮದಗ್ನಿ ವರವೊಂದನ್ನು ಕೇಳಿಕೊಳ್ಳಲು ಹೇಳಲು ಆತ ತನ್ನ ಪ್ರಿಯಮಾತೆಯನ್ನು ಮತ್ತೆ ಬದುಕಿಸಬೇಕೆಂದೂ ಇನ್ನು ಮುಂದೆ ಇಂಥ ಉಗ್ರಕೋಪ ಪ್ರದರ್ಶನವನ್ನು ಬಿಟ್ಟುಬಿಡಬೇಕೆಂದೂ ಬೇಡಿಕೊಂಡ, ರೇಣುಕಾ ಮಾತೆ ಬದುಕಿದಳು ಹಾಗೂ ಕಾಮಧೇನುಗೋಸ್ಕರ ಅಧರ್ಮದಿ ತನ್ನ ತಂದೆಯ ಕೊಂದ ಓರ್ವ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನ ಕೊಂದು ತದನಂತರ ಇದಕ್ಕೆ ಪ್ರತೀಕಾರವಾಗಿ ಭೂಮಿಯ ಮೇಲಿನ ಎಲ್ಲಾ ಕ್ಷತ್ರಿಯರನ್ನು ೨೧ ಬಾರಿ ಮಾರಣಹೋಮ ನಡೆಸುವುದಾಗಿ ಪ್ರತಿಜ್ಞೆ ಮಾಡಿ ೨೧ ಬಾರಿ ಮಾರಣಹೋಮ ನಡೆಸಿ ಕೊನೆಗೆ ಶಾಂತನಾಗಿ ರಾಮ-ಕೃಷ್ಣರಿಗೇ ಪರೀಕ್ಷೆ ಮಾಡಿ ಅದೆಷ್ಟೋ ಕ್ಷತ್ರಿಯರಿಗೆ ತ್ರೇತಾಯುಗದಿಂದ-ದ್ವಾಪರಯುಗ-ಕಲಿಯುಗದವರೆಗೂ ತರಬೇತುಗಾರನಾಗಿ ಜೀವಿಸುತ್ತಿರುವ ಹಾಗೂ ಹತ್ತನೇ ಹಾಗೂ ಅಂತಿಮ ಅವತಾರವಾದ ಕಲಿಯುಗದ ಕಲ್ಕಿಯ ಗುರುವಾಗಿ ಮತ್ತೆ ಕಾಣಿಸಿಕ್ಕೊಳ್ಳುವ ಏಳು ಚಿರಂಜೀವಿಯರಲ್ಲೊಬ್ಬನಾದ ಸಾಕ್ಷಾತ್ ಮಹಾದೇವನ ಶಿಷ್ಯನಾದ ಓರ್ವ ಮಹಾಕ್ಷತ್ರಿಯನ ಯಶೋಗಾಥೆಯೇ ತಾತ್ಪರ್ಯವು. ಇದರಲ್ಲಿಯೂ ಅಹಂ ಇಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.


೭) ರಾಮ:

ಮನುಷ್ಯ ಪರಿಪೂರ್ಣತೆಗೊಳಗಾಗಿ ಹೇಗೆ ಬೆಳೆಯುವನೆಂಬುದರ ಕುರಿತಾಗಿ ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಂದೆಯಾದ ದಶರಥನ ಆಜ್ಞೆಯಂತೆಯೇ ಪಿತೃವಾಕ್ಯಪರಿಪಾಲನೆಗೋಸ್ಕರ ಹಾಗೂ ತನ್ನ ಚಿಕ್ಕಮ್ಮನ ದುರಾಲೋಚನೆಯ ಆಸೆಯಂತೆ ಎಲ್ಲಾ ರಾಜ್ಯ ಸುಖಗಳು-ಐಭೋಗಗಳನ್ನು ತ್ಯಜಿಸಿ ಪ್ರೀತಿಯ ತಮ್ಮ ಆದಿಶೇಷನವತಾರಿಯಾದ ಲಕ್ಷ್ಮಣ-ಮಡದಿ ಜಾನಕಿಯೊಂದಿಗೆ ವನವಾಸದೆಡೆಗೆ ಪಯಣ ಸಾಗಿಸಿ ಅದೆಷ್ಟೋ ಕಷ್ಟ ಅನುಭವಿಸಿ ಕೊನೆಗೆ ತನ್ನ ಪ್ರಿಯ ಹೆಂಡತಿಯನ್ನು ಪರಸ್ತ್ರೀಯಂದೂ ಕಾಣದೇ ಅಧರ್ಮದಿ ಮೋಹ-ಕಾಮಾಪೇಕ್ಷೆಯಿಂದ ಅಪಹರಿಸಿ ತನ್ನಧೀನದಲ್ಲಿರಿಸಿಕೊಂಡಿದ್ದ ಓರ್ವ ಮಹಾ ಬ್ರಾಹ್ಮಣ-ಪರಶಿವನ ಮಹಾಭಕ್ತನಾದ-ರಾಕ್ಷಸನಾದ ರಾವಣನನ್ನು ತನ್ನ ಅಯೋಧ್ಯೆಯ ಸೇನೆ ಸಹಾಯದ ಅಪೇಕ್ಷೆಯಿಲ್ಲದೇ ತನ್ನ ಪ್ರಿಯ ತಮ್ಮನಾದ ಲಕ್ಷ್ಮಣನ, ಸುಗ್ರೀವನ ವಾನರ ಸೇನೆಯ, ಮಹಾವೀರ-ರಾಮನ ಮಹಾಭಕ್ತ-ಏಳು ಚಿರಂಜೀವಿಯರಲ್ಲೊಬ್ಬನಾದ ರಾಮಭಂಟ ಹನುಮಂತನ, ಇನ್ನೋರ್ವ ಚಿರಂಜೀವಿಯಾದ ರಾವಣನ ತಮ್ಮನಾದ ವಿಭೀಷಣನ ಸಹಾಯದಿಂದ ಕೊಂದು ಸಕಲ ಸ್ತ್ರೀ ಕುಲದ ರಕ್ಷಣೆಯೆಂದೇ ಭಾವಿಸಿ ಮಾತೆ ಸೀತೆಯನ್ನು ರಾವಣನ ಲಂಕೆಯಿಂದ ಬಿಡುಗಡೆ ಮಾಡಿ ಅಯೋಧ್ಯೆಗೆ ಮರಳಿ ರಾಜನಾದನು, ಮಹಾ ವಿಷ್ಣುವಿನ ಪೂರ್ಣಾವತಾರನಾಗಿಯೂ ಸಹ ಮನುಷ್ಯನಾಗಿ ಭೂಮಿ ಮೇಲೆ ಹುಟ್ಟಿದ ಮೇಲೆ ಕಷ್ಟ ತಪ್ಪದೆಂಬುದು ವಿಧಿಯ ತಾಳಕ್ಕೆ ತಕ್ಕಂತೆ ಜೀವಿಸಲೇಬೇಕೆಂಬುದನ್ನು ತೋರಿಸಿ, ತಂದೆಗೆ ತಕ್ಕ ಮಗನಾಗಿ, ತಂದೆಯಾಗಿ, ಸಂಬಂಧಿಕನಾಗಿ, ಏಕ ಪತ್ನಿಯ ಪತಿಯಾಗಿ-ಸೀತೆಯ ರಾಮನಾಗಿ, ರಾಜನಾಗಿ, ಬಹಳ ಮುಖ್ಯವಾಗಿ 'ಮರ್ಯಾದ ಪುರುಷೋತ್ತಮ'ನಾಗಿ ಬಾಳಿ ಎಲ್ಲರಿಗೂ ಮಾದರಿಯಾದ ಓರ್ವ ಮಹಾಪುರುಷನ ಯಶೋಗಾಥೆಯನ್ನೇ ಮನುಷ್ಯರೆಲ್ಲರಿಗೂ ಆದರ್ಶವಾಗಲೆಂದು ವಾಲ್ಮೀಕಿಯು ಬರೆದನು 'ರಾಮಾಯಣ'- ಅದುವೇ ತಾತ್ಪರ್ಯವು. ಇದರಲ್ಲಿ ಹೆಣ್ಣಿನ ವ್ಯಾಮೋಹದಿಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.


೩) ದ್ವಾಪರಯುಗ

೮) ಕೃಷ್ಣ:

ಪರಿಪೂರ್ಣತೆಯೊಡನೆ ಅನಂತ ಬುದ್ಧಿವಂತಿಕೆಯ ಒಡೆಯನಾಗಿ ಬೆಳೆಯುವ ಮನುಷ್ಯನ ಕುರಿತಾಗಿ ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ಜನ್ಮ ಕೊಟ್ಟವರಾದ ದೇವಕಿ-ವಸುದೇವರೊಡನೆ ಒಂದು ಕ್ಷಣ ಕಳೆಯದೆ-ಬಾಲ್ಯ ಕೂಡ ಕಳೆಯದೆ, ತನ್ನನ್ನು ಹೆರದಿದ್ದರೂ ಸ್ವಂತ ತಾಯಿಯಾಗೇ ಪ್ರೀತಿ ಕೊಟ್ಟು ಸಾಕಿ ಬೆಳೆಸಿದ ಯೊಶೋಧೆಯ ತುಂಟ ಕೃಷ್ಣನಾಗಿ ಬಾಳಿ, ತಾನು ಪ್ರೀತಿಸಿದವಳಾದ ರಾಧೆಯೊಡನೆ ಮದುವೆ ಆಗದಿದ್ದರು ಅನಂತ ಪ್ರೇಮಕಥೆಯ ಪಾತ್ರಧಾರಿಯಾಗಿ ರಾಧೆಯ ಕೃಷ್ಣನಾಗಿ ಜೀವಿಸಿದ, ತನ್ನ ಎಂಟು ಪ್ರಿಯ ಪತ್ನಿಗಳೊಡನೆ ಪ್ರಿಯ ಪತಿಯಾಗಿ ಜೀವಿಸಿದ, ೧೬೦೦೦ ಸ್ರ್ತೀಯರನ್ನು ನರಕಾಸುರನ ವಧಿಸಿ ಕಾಪಾಡಿ ಸಮಾಜ ಅವರನ್ನು ಸ್ವೀಕರಿಸದಿದ್ದಾಗ ಪ್ರೀತಿಯಿಂದಲೇ ಅವರೆಲ್ಲರನ್ನೂ ಸಖಿಯರನ್ನಾಗಿಸಿ ಆಶ್ರಯ ನೀಡಿದ, ತನ್ನ ಪ್ರಿಯ ಅಣ್ಣನಾದ ಆದಿಶೇಷನವತಾರಿಯಾದ ಬಲರಾಮನೊಡನೆ ಜೀವಿಸಿದ, 'ಮಹಾಭಾರತ'ದಂತಹ ಮಹಾದೃಶ್ಯಕಾವ್ಯವನ್ನು ಜಗಕ್ಕೇ ಪರಿಚಯಿಸಿ, ಪಾಂಡವರ ಆಪ್ತನಾಗಿ ಬಾಳಿದ, ಒಡಹುಟ್ಟಿದವಳಲ್ಲದಿದ್ದರೂ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯು ಇಡೀ ಸ್ತ್ರೀ ಕುಲದ ನ್ಯಾಯ ರಕ್ಷಣೆಯಂದೇ ಭಾವಿಸಿ ಧರ್ಮಸ್ಥಾಪನೆಗೋಸ್ಕರ ಸ್ವಂತವರೆಂದೂ ಕಾಣದೇ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಮಧ್ಯ ಪಾಂಡವನಾದ ಆಪ್ತ ಅರ್ಜುನನ ಸಾರಥಿಯಾಗಿಯೇ ಧರ್ಮಯುದ್ಧವನ್ನೇ ಮುನ್ನೆಡೆಸಿ, ಅವನಿಗೆ ನಡೆಯುತ್ತಿರುವುದರ ಕುರಿತಾಗಿ ಕಳವಳವಿದ್ದಾಗ ಯುದ್ಧಭೂಮಿಯಲ್ಲಿಯೇ ಭಗವದ್ಗೀತೆಯ ಸಾಕ್ಷಾತ್ಕಾರಗೊಳ್ಳಿಸಿ ಹಾಗೆಯೇ ಕಲಿಯುಗದ ಜನರಿಗೆಲ್ಲರಿಗೂ ದಾರಿದೀಪವಾಗುವಂತೆ ಮುಂಗಡವಾಗಿಯೇ ಮಾಡಿ, ತನ್ನನಂತ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿ ಸತ್ಯದರಿವನ್ನು ಮೂಡಿಸಿ, ಕೊನೆಗೆ ಎಲ್ಲಾ ಮಹಾ ಯೋಧರನ್ನೂ ನಿಮಿತ್ತ ಮಾಡಿ ಮಹಾಯುದ್ಧದಲ್ಲಿ ಹೋರಾಡದಿದ್ದರೂ ಕೊನೆಗೆ ಅಧರ್ಮಿ ದುರ್ಯೋಧನನನ್ನು ಎರಡನೇ ಪಾಂಡವನಾದ ಬಲ ಭೀಮನ ಕೈಯಲ್ಲಿ ಕೊಲ್ಲಿಸಿ ಧರ್ಮವನ್ನೇ ಜಯಭೇರಿಯಾಗಿಸಿ, ಹುಟ್ಟಿದಾಗಿಂದಲು ಸಾವನ್ನು ತನ್ನ ಸ್ವಂತ ಸೋದರ ಮಾವನಾದ ಕಂಸನ ರೂಪದಲ್ಲೇ ಹೆದುರಿಸಿ, ಹೆಗಲೇರಿಸಿಕೊಂಡೇ ಬಾಳಿ ಕೊನೆಗೆ ಅವನನ್ನ ಕೊಂದು, ತನ್ನ ವಂಶಸ್ಥರಾದ ಯದುವಂಶಿಗಳನ್ನು ಗಾಂಧಾರಿಯ ಶಾಪದ ನಿಮಿತ್ತವಾಗಿ ಅವರವರೇ ನಾಶ ಮಾಡಿಕೊಳ್ಳೋ ಹಾಗೆ ಮಾಡಿ, ಕೊನೆಗೆ ರಾಮನು ವಾಲಿಯನ್ನ ಹಿಂದೆಯಿಂದ ಕೊಂದ ಕರ್ಮಕ್ಕೆ ಈ ಜನ್ಮದಲ್ಲಿ ವಾಲಿಯು ಬೇಟೆಗಾರನಾದ ಜಾರನಾಗಿ ತಾನು ದೇವರಾದರೂ ತನ್ನನ್ನು ಕೊಲ್ಲೋ ಹಾಗೇ ಮಾಡಿ ಕರ್ಮ ಸಿದ್ಧಾಂತದ ಕುರಿತಾಗಿ ತಿಳಿಸಿ, ತಾನು ಮಹಾವಿಷ್ಣುವಿನ ಪೂರ್ಣಾವತಾರವಾದರೂ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ತಪ್ಪದೆಂಬುದು ವಿಧಿಯ ತಾಳಕ್ಕೆ ಕುಣಿಯಲೇಬೇಕೆಂದು ಆದರೇ ಅದನ್ನ ಹೇಗೆಲ್ಲಾ ಹೆದುರಿಸಿ ಹೋರಾಡಬೇಕೆಂಬುದನ್ನು ತೋರಿಸಿ ತಾನು ಭೂಮಿಗೆ ಬಂದ ಕಾರ್ಯ ಮುಗುಸಿ, 'ಸಕಲ ಜಗಗಳ ಮಹಾಗುರು'ವಾದ, 'ಯುಗಯುಗಳ ಮಹಾಪುರುಷ'ನಾದ ಕೃಷ್ಣನ ಯಶೋಗಾಥೆಯನ್ನೇ 'ಮಹಾಭಾರತ'ವಾಗಿ ಭಗವಂತ ಶಿವನ ಮಗನಾದ ವಿದ್ಯಾಧಿಪತಿಯಾದ ಗಣೇಶನ ಕೈ ಬರಹದಲ್ಲಿ ಬರೆಸಿದನು ವೇದವ್ಯಾಸನು- ಅದುವೇ ತಾತ್ಪರ್ಯವು. ಇದರಲ್ಲಿ ಮನುಷ್ಯನ ಅಹಂ, ಹೆಣ್ಣಿನ-ಮಣ್ಣಿನ ವ್ಯಾಮೋಹಕ್ಕೊಳಗಾದ ರಕ್ತ ಸಂಬಂಧಿಕರಾದರೂ ಸಹ ಅಧರ್ಮ ಮಾಡಿದವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.


೪) ಕಲಿಯುಗ (ಕರಾಳಯುಗ)

೯) ಬುದ್ಧ:

ಮನುಷ್ಯ ಅತೀ ಬುದ್ಧಿವಂತನಾಗಿ ಅವನಲ್ಲಿ ಕ್ರೂರ ಹೆಚ್ಚಾದಾಗ ತಾಳ್ಮೆ, ಧರ್ಮ, ಶಾಂತಿಯ ಬೀಜ ಮರಳಿ ಅವನಲ್ಲಿ ಬಿತ್ತುವ ಪ್ರಯತ್ನವು ಪರೋಕ್ಷವಾಗಿ ತೋರಿಸಿರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಕಲಿಯುಗದ ರಾಜನಾದ ಮನುಷ್ಯರ ಒಳರಾಕ್ಷಸ ಕಲಿಯ ಪ್ರಭಾವದಿಂದ ವೇದ-ಪುರಾಣ-ಉಪನಿಷತ್ಗಳ ಮೇಲೆ ಜನರಿಗೆ ನಂಬಿಗೆ ಹೋದಾಗ ಶಾಂತಿ, ತಾಳ್ಮೆ ದಾರಿಯಲ್ಲಿ ಅವರನ್ನು ದಾರಿಗೆ ತರಲೆಂದೇ ಮಹಾ ವಿಷ್ಣು ಈ ಅವತಾರ ತಾಳಿದ ಹಾಗೂ ಅದುವೇ ಹಾಗಿದೆ ಈ ಅವತಾರದ ತಾತ್ಪರ್ಯವು. ಇದರಲ್ಲಿ ಮನುಷ್ಯನ ಎಲ್ಲಾ ದುರ್ಗುಣಗಳ ಒಳಗಿನಿಂದಲೇ ನಶಿಸಿ ಅವನಲ್ಲಿರೋ ಅಧರ್ಮ ನಾಶಮಾಡಿ ಧರ್ಮಸ್ಥಾಪನೆಯಾಗಿದೆ.


೧೦) ಕಲ್ಕಿ:

ಮನುಷ್ಯರ ಬುದ್ಧಿವಂತಿಕೆಯು ಅತಿರೇಕದ ಮಿತಿಮೀರಿದಾಗ, ಕಲಿಯುಗದ ರಾಜನಾದ ಮನುಷ್ಯರ ಒಳರಾಕ್ಷಸ ಕಲಿಯ ಅತೀವ ಪ್ರಭಾವದಿಂದ ಮಾನವೀಯತೆಯ ಗುಣಗಳನ್ನೇ ಮನುಜನು ಕಳೆದುಕೊಂಡು ಬಾಳುವಾಗ ಬುದ್ಧನ ಜ್ಞಾನದಿಂದ ಮೊದಲು ಸರಿಮಾಡೋ ಪ್ರಯತ್ನ ನಂತರ ಕೃಷ್ಣನ ಭಗವದ್ಗೀತೆಯಿಂದ ಸರಿಮಾಡೋ ಪ್ರಯತ್ನದ ಕುರಿತಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಕಾಲ ಸರಿದಂತೆ ಮನುಷ್ಯನ ಸ್ವಂತ ಶತ್ರುವಾದ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಜಯಿಸಲಾರಂಭಿಸುವುದೋ, ನಂತರ ಈ ಯುಗದ ಕೊನೆಯಲ್ಲಿ ಇದೇ ಯುಗದ ಮಹಾ ವಿಷ್ಣುವಿನ ದಶಾವತಾರದ ಕೊನೆಯ ಅವತಾರವಾದ ಮಹಾಯೋಧ ಮಹಾಜ್ಞಾನಿ ಕಲ್ಕಿಯ ಧರ್ಮಸ್ಥಾಪನೆಗೋಸ್ಕರ ಅಧರ್ಮದ ಸರ್ವನಾಶದಿ ಯುಗಾಂತ್ಯದ ಸಿದ್ಧಾಂತ, ನಂತರ ಮರಳಿ ಸತ್ಯಯುಗ ಸ್ಥಾಪನೆ ಕುರಿತಾಗಿ ತೋರುವುದೇ ಈ ಅವತಾರದ ತಾತ್ಪರ್ಯವು. ಇದರಲ್ಲಿ ಎಲ್ಲಾ ಮನುಷ್ಯನೊಳಗೇ ನೆಲೆಸಿಹ ಕಲಿಯುಗದ ರಾಜನಾದ ಮಹಾ ಬಲಶಾಲಿ ಕಲಿಯ ಅರಿಷಡ್ವರ್ಗಗಳ ಗುಣಗಳಿಂದ ಕೂಡಿದ ಅಧರ್ಮವನ್ನು ಏಳು ಚಿರಂಜೀವಿಗಳಾದ ಅಶ್ವತ್ಥಾಮ, ಮಹಾಬಲಿ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮರ ಸಹಾಯದಿಂದ ಅದರಲ್ಲೂ ಪರಶುರಾಮನು ಕಲಿಸುವ ವಿದ್ಯೆಯಿಂದ ಕಲ್ಕಿಯು ನಶಿಸಿ ಧರ್ಮಸ್ಥಾಪನೆ ಮಾಡುವನು...


                      ----ಚಿನ್ಮಯಿ

Tuesday, August 6, 2024

ಎಲ್ಲರಿಲ್ಲಿ ಹುಳುಗಳೇ...

ಚಿತ್ರಕ್ಕೆ ಪದ್ಯ- ೮೪


ಎಲ್ಲರಿಲ್ಲಿ ಹುಳುಗಳೇ....

ಮುಂದಿನ ಚಿಟ್ಟೆ ರೂಪ ತಾಳೋ ಆಶಾಕಿರಣದೆಡೆಗೆ ಪಯಣಿಸೋ ಎಲ್ಲರಿಲ್ಲಿ ಹುಳುಗಳೇ....

ಹುಳುವಾಗೇ ಕೋಶಾವಸ್ಥೆಯಲ್ಲೇ ಜೀವಿಸಿ ಸಾಯುವುದೋ ಅಥವಾ ಚಿಟ್ಟೆಯಾಗಿ ಹೊರಹೊಮ್ಮಿ ಸ್ವಲ್ಪ ಕಾಲ ಬದುಕಿದರೂ ಸತ್ತ ನಂತರವೂ ಬದುಕುಳಿಯುವುದೋ—

ಆಯ್ಕೆ ನಮಗೇ ಬಿಟ್ಟಿದ್ದು...!?


"ರೂಪಾಂತರ" ಕನ್ನಡ ಚಲನಚಿತ್ರ ನೋಡಿದ ಮೇಲೆ ಪ್ರೇರಿತನಾಗಿ ಬರೆದ ಸಾಲುಗಳಿವು.


                    ----ಚಿನ್ಮಯಿ

Sunday, August 4, 2024

ಪರಾಗಸ್ಪರ್ಶ

ಕುಸುಮವು ನೀನು.

ದುಂಬಿಯು ನಾನು.

ಪ್ರೇಮವೇ ಜೇನು.

ಪರಾಗಸ್ಪರ್ಶದಿ ಪ್ರೇಮಾರಂಭ.


     ----ಚಿನ್ಮಯಿ

The Impact

The impact on everybody that we created when we were alive must speak a lot after we die.

That's the greatest way of living the fullest life. 


                  ----Chinmayi

Thursday, July 18, 2024

ರಾಧೆಶ್ಯಾಮ

ಚಿತ್ರಕ್ಕೆ ಪದ್ಯ- ೮೩


ಓ ಸಖಿಯೇ,

ಕೇಳೆನ್ನ ಸತಿಯೇ,

ನಿನ್ನೆದೆಯಂಗಳದೊಳು ಎನ್ನ ಕೊಳಲ ದನಿಯ ನಿನಾದ.

ಎನ್ನೆದೆಯಂಗಳದಿ ಪ್ರೇಮ ನಾದ ಲಹರಿಗಳು ಪ್ರಮೋದ.

ನೀನೆನ್ನ ರಾಧೆಯು.

ನಾನಿನ್ನ ಶ್ಯಾಮನು.


ಓ ಸಖನೇ,

ಕೇಳೆನ್ನ ಪತಿಯೇ,

ಸಾಕಿನ್ನು ಗೋಪಿಕೆಯರೊಡನೆಯ ರಾಸಲೀಲೆಯು.

ಬೇಕಿನ್ನು ನನ್ನೊಡನೆಯ ತುಂಟ ಪ್ರೇಮ ಲೀಲೆಯು.

ನೀನೆನ್ನ ಕೃಷ್ಣನು.

ನಾನಿನ್ನ ಭಾಮೆಯು.


ಓ ಪ್ರಿಯೆಯೇ,

ಓ ಪ್ರಿಯನೇ,

ನಮ್ಮನಂತ ಪ್ರೇಮಕಥೆಯ ಜಗಕ್ಕೇಳುವ ಬಾ.

ನೃತ್ಯ ಮಂಜರಿಯೊಡನೆ ಕುಣಿದು ನಲಿದಾಡುವ ಬಾ.

ನೀನೆನ್ನ ಲಕ್ಷ್ಮಿಯು.

ನೀನೆನ್ನ ವಿಷ್ಣುವು.


                ----ಚಿನ್ಮಯಿ

Wednesday, July 17, 2024

ಚಿರಕಾಲ ಆಭಾರಿ

ನನ್ನಗಲಿಕೆಯ ಮುನ್ನವೇ—

ನಿಜವಾದ ಬದುಕಿನರ್ಥ ತಿಳಿದೆನು.

ಬದುಕುವುದೇಗೆಂದು ಕಲಿತು ಬದುಕಿದೆನು.

ನಾ ನಿಮಿತ್ತವಷ್ಟೇ ಇಲ್ಲಿ, ಇದಕ್ಕೆಲ್ಲಾ ಮೂಲ ಕಾರಣವಾದ ಭಗವಂತನಿಗೆ ನಾ ಚಿರಕಾಲ ಆಭಾರಿ.


             ----ಚಿನ್ಮಯಿ

ಎಡೆಬಿಡದ ಆತ್ಮ ಯಾತ್ರೆ

ಚಿತ್ರಕ್ಕೆ ಪದ್ಯ- ೮೨

ನೀ ಜನಿಸಿದ ನಕ್ಷತ್ರದೆಡೆಗೇ ನಿನ್ನ ದೇಹವ ತೊರೆದು ನಿನ್ನದಾಗಿದ್ದ ಆತ್ಮದ ಶವಯಾತ್ರೆ—

ಮತ್ತೋರ್ವರ ಬದುಕಿಗುಸಿರಾಗಲೆಂದು ಪಂಕ್ತಿಯಲ್ಲಿ ಕಾದಿದೆ ಕಾಣುತ ಅಗಣಿತ ಆತ್ಮಗಳ ಜಾತ್ರೆ.


              ----ಚಿನ್ಮಯಿ

ಹಾಲಿನಿಂದ ಬದುಕಿಗೊಸನುಭವ

ಹಾಲನ್ನು ಹೆಪ್ಪಾಕಿದರೆ ಮೊಸರಾಗುವುದು.

ಮೊಸರನ್ನು ಕಡೆದರೆ ಮಜ್ಜಿಗೆಯಾಗುವುದು.

ಮಜ್ಜಿಗೆಯನ್ನು ಇನ್ನೆಚ್ಚು ಕಡೆದರೆ ಬೆಣ್ಣೆಯಾಗುವುದು.

ಬೆಣ್ಣೆಯನ್ನು ಕಾಯಿಸಿದರೆ ತುಪ್ಪವಾಗುವುದು.


ಈ ಮೇಲಿನ ಪ್ರಕ್ರಿಯೆಯಂತೆ ಹಾಲು ಕೊಂಚ ಕೊಂಚವೇ ಸಮಯಕ್ಕನುಸಾರವಾಗಿ ಪರಿವರ್ತನೆಯಿಂದ ಹೊಸನುಭವಗೊಳಗಾಗುವುದು.

ಇದೇ ರೀತಿಯಲ್ಲಿ, ಮನುಷ್ಯ ಕೂಡ ಸಮಯಕ್ಕನುಸಾರವಾಗಿ ಪರಿವರ್ತನೆಗೊಳಗಾಗಿ ಬದುಕಿನೊಸನುಭವ ಅನುಭವಿಸಿದರೇನೆ ಬದುಕು ಪರಿಪೂರ್ಣ.

                     ----ಚಿನ್ಮಯಿ

Inner Self = True Ultimate Guru

Right from our childhood if we start studying, understanding, analysing, decoding and revising our great epic and ancient writings, then I hope we can limit ourselves to depend upon external Guru's for seeking truth, knowledge and wisdom of life.

Because, when we practice and adapt those teachings in our lives, our inner self (GOD) will become our ultimate Guru and will teach everything to us.

                      ----Chinmayi

Sunday, July 14, 2024

ಪ್ರಥಮ ಸೂರ್ಯ ಕಿರಣಗಳು

ಚಿತ್ರಕ್ಕೆ ಪದ್ಯ- ೮೧


ಪ್ರತಿದಿನ ದೇಹಕ್ಕೆ ಸೂರ್ಯದೇವನ ಪ್ರಥಮ ಕಿರಣಗಳ ಸ್ಪರ್ಶವು ಆತ್ಮಜ್ಯೋತಿ ಬೆಳಗಲು—

ಒಳ ನೆಲಸಿಹ ಪರಮಾತ್ಮನಿಗೆ ಅದುವೇ ಕಿರಣೋತ್ಸವಭಿಷೇಕರ್ಚನೆಯು.


               ----ಚಿನ್ಮಯಿ

Sunday, July 7, 2024

ಅವಳ ಪ್ರೇಮ... ಅವಳ ನೆನಪು...

ಚಿತ್ರಕ್ಕೆ ಪದ್ಯ- ೮೦


ಅವಳ ಪ್ರೇಮ. ಹೃದಯ ಧಾಮ.

ಅವಳ ನೆನಪು. ಮನದ ಹೊಳಪು.


ಅವಳೋ ರೂಪರಾಶಿ. ಅವಳೇ ರೂಪದರ್ಶಿ.

ಸೌಮ್ಯ ಲತೆಗಳೇ ಕೇಶವು. ಎರಡು ದಿವ್ಯಾಸ್ತ್ರಗಳೇ ಹುಬ್ಬು.

ಕೆಂದಾವರೆಯೇ ನಯನಗಳು. ರಮ್ಯ ಕಾಂತಿಯು ನೋಟವು.

ಇಬ್ಬನಿಯೇ ಮೊಗದ ಸಿಗ್ಗು. ನಗುವು ಅರಳೋ ಮೊಗ್ಗು.

ಅಧರ ಕುಸುಮ ಜೇನೆ. ಭ್ರಮರ ಎಂದೂ ನಾನೆ.


ಅವಳೋ ಪ್ರೇಮದರಸಿ. ಅವಳೇ ಹೃದಯವಾಸಿ.

ಕೊರಳ ದನಿ ಕೊಳಲ ಇಂಚರ. ನಡುವ ಬಳುಕು ಅಮೋಘ ಸಾಗರ.

ಬೆರಳಸ್ಪರ್ಷವೇ ಕೆನ್ನೆಗಾವಲು. ಪಾದಗುರುತೇ ಕಾಯಂ ಅಮಲು.

ಹೃದಯ ನಿರ್ಮಲ ದೇವಸ್ಥಾ‌ನ. ಮನಸ್ಸು ಅನಂತ ಚೇತನ.

ಅವಳೆನ್ನ ಬದುಕ ಅಧ್ಯಾಪಕಿಯು‌. ಅವಳನುರಾಗವೇ ಅಧ್ಯಯನವು.


ಅವಳ ಪ್ರೇಮ. ಸುಧೆಯ ಸುಮ.

ಮಧುರ ನೆನಪು. ಅಗಣಿತ ಬೆಳಕು.


          ----ಚಿನ್ಮಯಿ

Thursday, July 4, 2024

ಬೆಳಕು

ಚಿತ್ರಕ್ಕೆ ಪದ್ಯ- ೭೯


ಹಗಲಿಗೆ ಆದಿತ್ಯನೇ ಬೆಳಕು.

ಇರುಳಿಗೆ ಚಂದ್ರ-ತಾರೆಯರೇ ಬೆಳಕು.

ತಗಡುಗತ್ತಲೆಗೆ ಕಂದೀಲೇ ಬೆಳಕು.

ಕಂಗಾಲ ಜೀವಕ್ಕೆ ಭರವಸೆಯೇ ಬೆಳಕು.


ಬೀಸೋ ಗಾಳಿಗೆ ದಿಕ್ಕುಗಳೇ ಬೆಳಕು.

ಹರಿಯುವ ನೀರಿಗೆ ಹಾದಿಯೇ ಬೆಳಕು.

ಅಂಧಕಾರಕ್ಕೆ ಜ್ಞಾನವೇ ಬೆಳಕು.

ಸಂಪೂರ್ಣತೆಗೆ ವಿನಯವೇ ಬೆಳಕು.


ಹಾರೋ ಹಕ್ಕಿಗೆ ಆಕಾಶವೇ ಬೆಳಕು.

ಜಾರೋ ಜಲಪಾತಕ್ಕೆ ನೆಲವೇ ಬೆಳಕು.

ಸಂದಿಗ್ಧತೆಗೆ ಮೌನವೇ ಬೆಳಕು.

ಸಂಕೀರ್ಣತೆಗೆ ಧ್ಯಾನವೇ ಬೆಳಕು.


ಬಿಳಿ ಮೇಘಗಳಿಗೆ ಕರಿ ಮೇಘಗಳೇ ಬೆಳಕು.

ವಿಶಾಲ ಸಾಗರಕ್ಕೆ ನದಿಗಳೇ ಬೆಳಕು.

ಸುಂದರ ಸೃಷ್ಟಿಗೆ ಭೀಕರ ಅಂತ್ಯವೇ ಬೆಳಕು.

ಧರ್ಮಕ್ಕೆ ಅಧರ್ಮವೇ ಬೆಳಕು.


ಬೀಳೋ ವೃಕ್ಷಕ್ಕೆ ತನ್ನ ಬೀಜವೇ ಬೆಳಕು.

ಬಾಡೋ ಕುಸುಮಕ್ಕೆ ದುಂಬಿಯೇ ಬೆಳಕು.

ನಾಳೆಗಳಿಗೆ ಇಂದು-ನಿನ್ನೆಗಳೇ ಬೆಳಕು.

ಇಂದಿಗೆ ಈ ಕ್ಷಣವೇ ಬೆಳಕು.


ಬೆಳೆವ ಪೈರಿಗೆ ಮಣ್ಣು-ನೀರು-ಗಾಳಿಯೇ ಬೆಳಕು.

ಬೆಳೆದ ಭತ್ತಕ್ಕೆ ಕುಡುಗೋಲೇ ಬೆಳಕು.

ಬಾಲ್ಯಕ್ಕೆ ಆಟ-ಪಾಠ-ಮುಗ್ಧತೆಯೇ ಬೆಳಕು.

ಯೌವ್ವನಕ್ಕೆ ಬಾಲ್ಯದ ಕಲಿಕೆಯೇ ಬೆಳಕು.


ಕೆಟ್ಟದಕ್ಕೆ ಒಳ್ಳೆಯದೇ ಬೆಳಕು.

ಒಳ್ಳೆಯದಕ್ಕೆ ಕರ್ಮ ಸಿದ್ಧಾಂತವೇ ಬೆಳಕು.

ಮುಪ್ಪಿಗೆ ಬಾಲ್ಯ-ಯೌವ್ವನದ ಸಿಹಿ ನೆನಪುಗಳೇ ಬೆಳಕು.

ಮುಪ್ಪಿಗೆ ಜೀವನವಧಿಯ ಅನುಭವಗಳೇ ಬೆಳಕು.


ಸರಿಯುವ ಸಮಯಕ್ಕೆ ಋತುಗಳೇ ಬೆಳಕು.

ದಿಟ್ಟ ಜ್ಞಾನಾರ್ಜನೆಗೆ ಋಷಿಗಳೇ ಬೆಳಕು.

ಹಸಿವಿಗೆ ಅನ್ನಪೂರ್ಣೆಯೇ ಬೆಳಕು.

ಹಸಿದವನಿಗೆ ಅನ್ನದಾತನೇ ಬೆಳಕು.


ಜಗದ ಹಸಿವಿಗೆ ರೈತನೇ ಬೆಳಕು.

ದೇಶದ ಉಳಿವಿಗೆ ಯೋಧನೇ ಬೆಳಕು.

ಮಕ್ಕಳ ಬೆಳವಣಿಗೆಗೆ ತಂದೆ-ತಾಯಿಯರೇ ಬೆಳಕು.

ಅಡ್ಡ ದಾರಿಗೆ ಒಳ್ಳೆ ಸಂಗಡವೇ ಬೆಳಕು.


ಕಂಗಳಿಗೆ ತನ್ನ ರೆಪ್ಪೆಗಳೇ ಬೆಳಕು.

ಮಿಂಚುಹುಳುವಿಗೆ ತನ್ನ ಬೆನ್ನೇ ಬೆಳಕು.

ಧೈರ್ಯಕ್ಕೆ ಭಯವೇ ಬೆಳಕು.

ಸಂಶಯಕ್ಕೆ ಕಾಲವೇ ಬೆಳಕು.


ಹೆಮ್ಮರಕ್ಕೆ ಸಸಿಯೇ ಬೆಳಕು.

ಹಿರಿಯರಿಗೆ ಹಸುಳೆಯೇ ಬೆಳಕು.

ಹಿರಿತನಕ್ಕೆ ಕಿರಿತನವೇ ಬೆಳಕು.

ಸಿರಿತನಕ್ಕೆ ಬಡತನವೇ ಬೆಳಕು.


ಭೋರ್ಗರೆಯುವ ಅಲೆಗಳಿಗೆ ತೀರವೇ ಬೆಳಕು.

ಅಹಂಕಾರದ ನಿಯಂತ್ರಣಕ್ಕೆ ಸಂಸ್ಕಾರವೇ ಬೆಳಕು.

ಉರಿಯುವ ಜ್ವಾಲಾಮುಖಿಗೆ ಪಾತಾಳವೇ ಬೆಳಕು.

ಎದೆಯ ಜ್ವಾಲೆಗೆ ಮನಃ ಶಾಂತಿಯೇ ಬೆಳಕು.


ಸಾವಿಗೆ ಹುಟ್ಟೇ ಬೆಳಕು.

ಮರು ಹುಟ್ಟಿಗೆ ಸಾವೇ ಬೆಳಕು.

ಸೋಲಿಗೆ ಗೆಲುವೇ ಬೆಳಕು.

ಮರು ಗೆಲುವಿಗೆ ಸೋಲೇ ಬೆಳಕು.


ಹೆದ್ದಾರಿಗೆ ಬೀದಿ ದೀಪಗಳೇ ಬೆಳಕು.

ಕಾಲ್ದಾರಿಗೆ ರೂಢಿಯೇ ಬೆಳಕು.

ಹಣತೆಗೆ ಎಣ್ಣೆಯೇ ಬೆಳಕು.

ಸಮತೆಗೆ ಮನೋಭಾವವೇ ಬೆಳಕು.


ಪ್ರೇಮಕ್ಕೆ ಆತ್ಮ ಸಮ್ಮಿಲನವೇ ಬೆಳಕು.

ಸಂಸಾರಕ್ಕೆ ನಂಬಿಕೆ-ಗೌರವಗಳೇ ಬೆಳಕು.

ಬಾಳ್ವೆಗೆ ನಗು ಮೊಗವೇ ಬೆಳಕು.

ಬಾಳಿಗೆ ಸಂತೃಪ್ತ ನಗುವೇ ಬೆಳಕು.


ಸ್ನೇಹಕ್ಕೆ ಅಜ್ಞಾತತೆಯೇ ಬೆಳಕು.

ಆತ್ಮೀಯತೆಗೆ ಪರಿಚಯವೇ ಬೆಳಕು.

ದ್ವೇಷಕ್ಕೇ ಸಂಯಮವೇ ಬೆಳಕು.

ಸಂಬಂಧಕ್ಕೆ ಕ್ಷಮೆಯೇ ಬೆಳಕು.


ಸೌಂದರ್ಯಕ್ಕೆ ಕುರೂಪವೇ ಬೆಳಕು.

ಜರಿಯುವಿಕೆಗೆ ಸರಳತೆಯೇ ಬೆಳಕು.

ಮೂಢತೆಗೆ ವಿಜ್ಞಾನವೇ ಬೆಳಕು.

ಬದುಕಿಗೆ ಸುಜ್ಞಾನವೇ ಬೆಳಕು.


ಕಲ್ಲು ಬಂಡೆಗೆ ಉಳಿ ಪೆಟ್ಟೇ ಬೆಳಕು.

ವಿಗ್ರಹಕ್ಕೆ ಅಭಿಷೇಕವೇ ಬೆಳಕು‌.

ಸಾಧಕನಿಗೆ ಗುರಿಯೇ ಬೆಳಕು.

ಸಾಧನೆಗೆ ಕ್ಷಮತೆಯೇ ಬೆಳಕು.


ಉತ್ತರಕ್ಕೆ ದಕ್ಷಿಣವೇ ಬೆಳಕು.

ಪೂರ್ವಕ್ಕೆ ಪಶ್ಚಿಮವೇ ಬೆಳಕು.

ಸರಿ ಉತ್ತರಕ್ಕೆ ಹಲವು ಪ್ರಶ್ನೆಗಳೇ ಬೆಳಕು.

ಮರುಪ್ರಶ್ನೆಗೆ ತಪುತ್ತರವೇ ಬೆಳಕು.


ಇತಿಹಾಸಕ್ಕೆ ಪುರಾಣಗಳೇ ಬೆಳಕು.

ಸತ್ಯಾನ್ವೇಷಣೆಗೆ ಪುರಾವೆಗಳೇ ಬೆಳಕು.

ಜಗದ ಸುಂದರತೆಗೆ ಅಂತರಂಗ ಶುದ್ಧಿಯೇ ಬೆಳಕು.

ಪರಿಪೂರ್ಣ ಬಾಳಿಗೆ ಬದುಕಿದ ರೀತಿಯೇ ಬೆಳಕು.


ಉತ್ತಮ ಸಮಾಜಕ್ಕೆ ವೇದ-ಉಪನಿಷತ್ಗಳೇ ಬೆಳಕು.

ಒಳ ಅರಿವಿಗೆ ಭಗವದ್ಗೀತೆಯೇ ಬೆಳಕು.

ದೇಹದ ಕಾಂತಿಗೆ ಆತ್ಮವೇ ಬೆಳಕು.

ಅಂತಃಕರಣಕ್ಕೆ ಪರಮಾತ್ಮನೇ ಬೆಳಕು.


                    ----ಚಿನ್ಮಯಿ

Tuesday, July 2, 2024

Why is India not yet developed...?

As everyone knows, before the entry of Islamic rulers and European countries into India and before colonisation and atrocities by them, India had a very rich culture, intellect and education. Even India was the wealthiest country in the world.

It's been 77 years since India got independence from Portugese, French and English, but it's still in struggling stages and it's still called a developing nation. The main reasons for these are the mind-set and comfort zone of we the great Indians. Most of us have become narrow minded.

If we realise and overcome this soon, we can become the superpower in the world in the terms of knowledge teaching and sharing, economy etc just like we used to be long long ago.


                         ----Chinmayi

Sunday, June 30, 2024

ನಿಸರ್ಗದ ಪ್ರೇಮ ಪ್ರಸಂಗ

ಕೊಳದ ಪ್ರಿಯಕರ ಮಳೆ.

ಗಾಳಿಯ ಸ್ನೇಹಿತ ಮಳೆ.

ಮಳೆಯ ಸ್ಪರ್ಶವೇ—

ಕೊಳದ ಉಸಿರು.

ಗಾಳಿಯ ನಸುನಗೆ.


ರೆಂಬೆ-ಕೊಂಬೆಗಳ ಸಡಗರ.

ಚಿಗುರೆಲೆಗಳ ಹರ್ಷೋದ್ಗಾರ.

ಪ್ರೀತಿಯು ಮಾಗಲು—

ಮರದ ಪುನಃ ಜನನ.

ಮಣ್ಣಲಿ ಪ್ರೇಮಾಂಕುರ.


          ----ಚಿನ್ಮಯಿ

ನಿರಂತರ ಧ್ಯಾನ...

ತುಂಬಾ ನೊಂದಿದೆ ಹೃದಯ-ಮನಸ್ಸು. ಆದರೂ, ಬದುಕಿನ ಜೊತೆಗಿನ ಬೆಸುಗೆ-ಸ್ನೇಹ ಹಾಗೆಯೇ ಹಚ್ಚ ಹಸುರೇ, ಕಾರಣವಿಷ್ಟೇ—

ಪ್ರೀತಿಯು ಮಾಗಿದೆ-

"ನಾನು ಬದುಕನ್ನ ಪ್ರೀತಿಸುತ್ತೇನೆ.

ಬದುಕು ನನ್ನನ್ನ ಪ್ರೀತಿಸುತ್ತದೆ."


ಬಹುಶಃ ಇದುವೇ ನಿರಂತರ ಧ್ಯಾನ...


         ----ಚಿನ್ಮಯಿ

Tuesday, June 25, 2024

ಪ್ರೇಮ-ಆಕರ್ಷಣೆ— ಇವೆರಡರ ವ್ಯತ್ಯಾಸ

ಓರ್ವ ಮನುಷ್ಯ ಇನ್ನೋರ್ವ ಮನುಷ್ಯನನ್ನ ಕಂಗಳಿಂದ ಹಾಗೂ ಮನಸ್ಸಿನಿಂದಷ್ಟೇ ಇಷ್ಟಪಟ್ಟರೇ ಅದು ಆಕರ್ಷಣೆ, ಅದೇ ಹೃದಯದಿಂದ ಇಷ್ಟಪಟ್ಟರೇ ಅದು ಪ್ರೇಮ.

ಹಾಗೆಯೇ, ಎಲ್ಲಾ ಪ್ರಾಣಿ, ಪಕ್ಷಿ, ಪ್ರಕೃತಿಯ ನಿಗೂಡತೆ-ಸೌಂದರ್ಯ ಹಾಗೂ ವಸ್ತುಗಳ ವಿಚಾರದಲ್ಲಿಯೂ ಅದುವೇ ವ್ಯತ್ಯಾಸ.


ಹಾಗೆಯೇ, ಆಹಾರ-ಪಾನೀಯಗಳ ವಿಚಾರದಲ್ಲಿಯೂ ನಾಲಗೆಯಿಂದಷ್ಟೇ ಇಷ್ಟಪಟ್ಟರೇ ಅದು ಕೇವಲ ರುಚಿ ಹಾಗೂ ಆಕರ್ಷಣೆ, ಅದೇ ಹೃದಯದಿಂದ ಇಷ್ಟಪಟ್ಟರೇ ಅದು ಅಮೃತ, ಗೌರವ ಹಾಗೂ ಪ್ರೇಮ.


                     ----ಚಿನ್ಮಯಿ

Saturday, June 15, 2024

Parama Shakthi = Parama Shiva × (Parama Divya Jnaana)² (♾️ ) => E = mc²

ಚಿತ್ರಕ್ಕೆ ಪದ್ಯ/ಉಲ್ಲೇಖ- ೭೮

Albert Einstein's famous equation of "Theory of Relativity, E=mc²" was already stated in our puranas in the form of slokhas for "Ardhanaareeshwara Thathva."


Let me explain this in a simple way to make everyone understand,

From modern physics, we know that the quantity of matter within a given object is called "Mass" and when Shiva is known as the "Ultimate Matter (Paramaathma)" in this whole multiverse,  it's obvious that "Infinite Mass" also is himself. Wherein, on the other hand from modern physics, we know that the ability to do work, which is the ability to exert a force causing displacement of an object is called an "Energy" and when Paarvathi is known as the "Ultimate Energy (Parama Shakthi)" in this whole multiverse, it's obvious that she's the prime source of everything in this whole multiverse.

Also, we know that when they are together there's always an "Ultimate Speed of Light (Parama Divya Jnaana)."

So, now finally by combining the above stated statements, we understand that, Shiva and Paarvathi (Shakthi)— together manifested form is called as "Ardhanaareeshwara." Hence the "Ardhanaareeshwara Thathva" states that Shakthi (Ultimate Energy) is directly proportional to Shiva (Ultimate Mass) and also to the Parama Divya Jnaana (Ultimate Speed of Light).


                   ----Chinmayi

                       🙏🏽🙇🏾‍♂️🕉️🤍

Monday, June 10, 2024

ಬದುಕ ಸಂಕೀರ್ಣತೆ... ಬದುಕ ಸಂಪೂರ್ಣತೆ...

ಭವದ ಭಾವವೇ ನಗೆಯು.

ಜಗದ ಸಾರವೇ ಒಲವು.

ಕೂಡಲಿ ಹೃದಯ-ಮನವು.

ದ್ವೇಷ-ಅಸೂಯೆ-ಜಾತಿ—

ಸಂದಿಗ್ಧತೆಯ ಸಾರಥಿ.

ಬೆಳಗಲಿ ಪ್ರೇಮ ಜ್ಯೋತಿ.


ಇರುಳ ಮೌನ ಬಹಳ..

ಬೆಳಕ ಮಾತು ಸರಳ.

ಸಾಗೋ ಕಾಲ ವಿರಳ.

ನಗಲು ಕಾರಣ ಬೇಕೆ?

ತುಟಿಯ ಹೊಳಪು ಸಾಕೆ?

ನಲಿಯಲಿ ಮೊಗದ ರೇಖೆ.


         ----ಚಿನ್ಮಯಿ

Saturday, June 8, 2024

Mastering Calmness through Mastering Anger

Sometimes anger leading to the destruction of Adharma will be the path towards upholding Dharma just like Kurukshetra Warfare. Hence, first one must try to make peace deal and if that doesn't work out for good, then getting angry is a must, only when it's required.

But, one has to make sure that the same anger if it's leading towards Hatred and Ego, then it must be avoided strictly. Hence, getting angry unnecessarily is creating a void within oneself which affects both mentally and physically.


If one understands this thin difference between the above two statements, then they will master their anger which in turn masters their calmness.


                     ----Chinmayi

Wednesday, June 5, 2024

The Last Day

The day I stop learning and stop seeking from the universe will be the last day of mine on this beautiful planet "Earth."

                     ----Chinmayi

Sunday, May 19, 2024

ಅತ್ಯುನ್ನತ ಅನಂತ ಪ್ರೇಮ

ಧರೆಗೆ ಆದಿತ್ಯನ ಮುಂಜಾನೆ ನಮನ—

ಶಶಿಯ ಅತಿ ವಿನಯ ನಿರ್ಗಮನ.

ಆಗಸದಿ ಸಂಜೆಯ ಕೇಸರಿ ಚಿತ್ರಣ—

ಕಪ್ಪು ಚುಕ್ಕೆ ಶ್ವೇತವರ್ಣೀಯನ ಆಗಮನ.

ತ್ರಿನಂಟು ಎದೆಯಾಳದಷ್ಟಿದೆ.

ಅತ್ಯುನ್ನತ ಅನಂತ ಪ್ರೇಮವಿದೆ‌.


ಭೋರ್ಗರೆಯುವ ಅಲೆಗಳು ಶಾಂತ—

ಕಡಲೆದೆಯ-ತೀರದ ಗೆಳೆತನದಿಂದ.

ಮರಗಳು ಜೀವರಾಶಿಗಳು ಆನಂದ—

ಸಿಹಿನೀರು-ಉಪ್ಪುನೀರಿನ ಮಿಲನದಿಂದ.

ನೆಲದ ಖುಷಿ ಮುಗಿಲು ಮುಟ್ಟಿದೆ.

ಅತ್ಯುನ್ನತ ಅನಂತ ಪ್ರೇಮವಿದೆ‌.


ಮೇಘಗಳ ನಗೆ ತೋರಣ ಭುವಿಯೆಡೆ ಪಯಣ—

ಚಿಗುರೆಲೆಗಳೊಡನೆ ಹನಿಗಳ ಸ್ಪಂದನ.

ಗಿಡ-ಮರಗಳ ಸುಖಾಭಿಲಾಷೆ ನರ್ತನ—

ಗಾಳಿಯೊಡಗಿನ ಮಧುರ ಸಂಕಲನ.

ಪ್ರಕೃತಿಯ ಚಮತ್ಕಾರವಿದೆ.

ಅತ್ಯುನ್ನತ ಅನಂತ ಪ್ರೇಮವಿದೆ‌.


ಬೇರು ತಾ ನೀರ ಕುಡಿಯದೆ—

ತ್ಯಾಗದಿ ಉಣಿಸಲು ಚಿಗುರೆಲೆಗಳಿಗೆ.

ಹೂವು ತಾ ಜೇನ ಅನುಭವಿಸದೆ—

ವಾತ್ಸಲ್ಯದಿ ಎರೆಯಲು ದುಂಬಿಗೆ.

ಜಗದಿ ಪ್ರೇಮೋದಯವಾಗಿದೆ.

ಅತ್ಯುನ್ನತ ಅನಂತ ಪ್ರೇಮವಿದೆ‌.


     ----ಚಿನ್ಮಯಿ

Wednesday, May 1, 2024

ದೇಹದಿ ಪ್ರೇಮಾಂಕುರ

ಕೇಶರಾಶಿಯ ಬಾಚುವಂಬಲವಾದಾಗ—

ತಂಗಾಳಿಯ ತಾಳಕ್ಕೆ ಕೇಶವು ಕುಣಿದಿದೆ!

ನಾಜೂಕಾಗಿ ಪ್ರೇಮದಿ ಬಾಚೆಂದಾಗ—

ಹೃದಯದುಲ್ಲಾಸವು ಮುಗಿಲನು ತಾಕಿದೆ.


ಕೆಂದಾವರೆ ಕಣ್ಣ ಕಾಂತಿ ಸ್ಪರ್ಶಿಸಲೆಂದಾಗ—

ರೆಪ್ಪೆಗಳ ಸರಸ-ಸಲ್ಲಾಪ ಕಹಿ ಬೇನೆ.

ಹತ್ತಿರ ಬಂದೊಮ್ಮೆ ಕಣ್ಣ ತೆರೆ ಎಂದಾಗ—

ಕಹಿ ಬೇನೆಯೆಲ್ಲವೂ ಸಿಹಿ ಜೇನೆ.


ಕೆಂದುಟಿಯ ಜೇನ ಸವಿಯಲೆಂದಾಗ—

ತಡೆಯಾಜ್ಞೆ ಸರಿಯೇ ಹೇಳೇ ತಂಗಾಳಿ?

ತಂಗಾಳಿ-ತನ್ನೊಡನೆ ಸನಿಹ ಬಾ ಎಂದಾಗ—

ಎದೆಯೊಳಗೆ ಮಜದ ಸಜೆಯೇ ಕಚಗುಳಿ.


ಕೊರಳ ಕೊಳಲ ನಿನಾದ ಆಲಿಸಲೆಂದಾಗ—

ಸರತಿ ಸಾಲೇ ತುಂಬಿರಲು ಸಪ್ಪೆ ಮೋರೆ.

ದೂರದ ದನಿಯೊಂದು ಸಮೀಪಿಸೆಂದಾಗ—

ನನ್ನೊಡನೆ ಮುಗಿಬಿದ್ದವು ಚುಕ್ಕಿತಾರೆ.


ಕಾದಂಬರಿ ಬರೆಯುವಾಗ ಹೊಕ್ಕಳು ತಡೆವಾಗ—

ಬೆರಳುಗಳ ಆಸೆಗೆ ಮೂಡಿತು ಹತಾಶೆ!

ನಡುವು ಬಳುಕುತ ಹೊಕ್ಕಳ ಜರುಗೆಂದಾಗ—

ಶುರುವಾಯ್ತು ನಡುವ-ಬೆರಳ ವರಸೆ.


        ----ಚಿನ್ಮಯಿ

Thursday, March 28, 2024

Learning from everything in the nature and the universe

Not only living things can impact "us" (human beings) to live, also non-living things, which don't live can make an impact on us to live by inspiring us.

The only thing is that we must make ourselves ready to grasp all the signs from nature and the universe.

                     ----Chinmayi

Sunday, March 10, 2024

ಅರಿವು

ಈ ಸಕಲ ಬ್ರಹ್ಮಾಂಡಗಳಲ್ಲಿ ನನಗೆ ಸಮಾಧಾನ ಮಾಡುವ ಹಾಗೂ ಎಲ್ಲಾ ನೋವು-ದುಃಖಗಳನ್ನು ಅನುಭವಿಸಿ, ಜೀವಿಸಿ, ಆನಂದಿಸಿ ಜೊತೆ-ಜೊತೆಗೆ ಬಾಳುವ ಏಕೈಕ ವ್ಯಕ್ತಿಯಂದರೆ ಅದು "ನಾನಷ್ಟೇ"—

ಈ ಸತ್ಯದ ಅರಿವಾಗಲು ನಾ ಪ್ರೀತಿಗೆ ಬೀಳಬೇಕಾಯ್ತು...


                   ----ಚಿನ್ಮಯಿ

Tuesday, February 20, 2024

ಕಲಿಯುಗ

'ಅಧರ್ಮ-ಧರ್ಮ'ಗಳ ನಡುವಿನ ಸಂಘರ್ಷಗಳ ಫಲಿತಾಂಶವಾಗಿ ಪ್ರತಿ ಕ್ಷಣ ಪ್ರತಿ ನಿತ್ಯ ಧರ್ಮಸ್ಥಾಪನೆಗೋಸ್ಕರ ಯುಗಪೂರ 'ಕಲಿ'ಯುವುದೇ 'ಕಲಿ'ಯುಗ...

              ----ಚಿನ್ಮಯಿ

ತ್ರಿಪದಿ- ೩

ಸಕಲ ಜಗವನು ಜಗದ ನರನನು ನರನ—

ಅಖಿಲ ತನುವನು ನಡುಗಿಸುತ್ತ ವೈರಾಣು

ಸಕಲ ಮನದಲಿ "ನಾನು" ನಶಿಸಿದೆ ಚಿನ್ಮಯಿ


"ಭಾವಾರ್ಥ:"

ಸಮಸ್ತ ಬ್ರಹ್ಮಾಂಡಗಳಲ್ಲಿರೋ ಎಲ್ಲಾ ಮನುಷ್ಯರ ದೇಹಕ್ಕೆ ಖಾಯಿಲೆ ಬರುವುದು ಸಾಮಾನ್ಯ ಹಾಗೂ ಆ ಖಾಯಿಲೆಯ ಮೂಲ ಸೂತ್ರಧಾರನೇ "ವೈರಾಣು." ಮನುಷ್ಯರ ಕಣ್ಣಿಗೂ ಕಾಣದ ಈ ಸಣ್ಣಗಾತ್ರದ ಜೀವಿಯಾದ ವೈರಾಣುವು ದೊಡ್ಡ ಗಾತ್ರದ ಮನುಷ್ಯರ ದೇಹವ ಸೇರಿ ಅದೆಷ್ಟೋ ನೋವು ನರಳಾಟ ಸಂಕಟಗಳಿಗೆ ಕಾರಣವಾಗುತ್ತದೆ ಹಾಗೂ ದೇಹವನ್ನೇ ನಡುಗಿಸುತ್ತದೆ. ಬಹುಶಃ ಇದೆಲ್ಲದರ ಹಿಂದಿರೋ ಮುಖ್ಯ ಕಾರಣವು ಮನುಷ್ಯರ "ನಾನು- ನಾನೇ" ಎಂಬ ಅಹಂ ಅನ್ನು ನಶಿಸುವುದೇ ಅನಿಸುತ್ತದೆ...


         ----ಚಿನ್ಮಯಿ

Tuesday, January 23, 2024

WORTH and HARDWORK

ಚಿತ್ರಕ್ಕೆ ಪದ್ಯ/ಉಲ್ಲೇಖ- ೭೭

If you have a thought- "your worth and hard work means nothing in this universe". Then, just look at this stone called "Krishna Shile." People thought it was a normal stone, fit for nothing and it was just sitting in the same place for several years. But, now the same stone has been carved as "Rama Idol" in Ayodhya. Isn't this the finest example to give a thought about "waiting patiently for an amazing results in the whole universe...!?"

Hence, just wait patiently for your time and just keep going with the flow and when it is time, your worth will be valued and hard work will be paid.

                        ----Chinmayi

Monday, January 22, 2024

22/01/2024

ಚಿತ್ರಕ್ಕೆ ಪದ್ಯ/ಉಲ್ಲೇಖ- ೭೬

It took 496 years to bring back the lost glory and I'm blessed as others are for living in this era to witness this Epic moment. I'll relive this day for an infinite number of times... 

I'm awaiting for much more lost glories to be revived ASAP.


Jai Sri Raama 

🥹🙏🏽🙇🏾‍♂️🤍🕉️🥹


               ----Chinmayi

Sunday, January 21, 2024

"ರಾಮ-ಕೃಷ್ಣ"= ಪರಿಪೂರ್ಣ ಮಹಾವಿಷ್ಣು ಅವತಾರಿಗಳು

ಚಿತ್ರಕ್ಕೆ ಪದ್ಯ- ೭೫

ನನ್ನ ಇದುವರೆಗಿನ ಜೀವನವನ್ನು ಇಬ್ಬರ ಜೀವನ ಚರಿತ್ರೆಯನುಸಾರವಾಗಿ ಜೀವಿಸಲು ಪ್ರಯತ್ನಿಸಿದ್ದೇನೆ ಹಾಗೂ ಇನ್ನು ಮುಂದೆಯೂ ಹಾಗೆಯೇ ಜೀವಿಸಲು ಪ್ರಯತ್ನಿಸುವೆನು— 

ಅವರಿಬ್ಬರೇ "ರಾಮ-ಕೃಷ್ಣರು."


ಅವರಿಬ್ಬರ ಯಶೋಗಾಥೆ ಹಾಗೂ ಧರ್ಮ ಹೋರಾಟದ ಕುರಿತು ಓದಿ, ಕೇಳಿ, ನೋಡಿ ಜ್ಞಾನೋದಯವಾಗಿದ್ದೇನೆಂದರೆ— 

ಓರ್ವರು ಸಂಬಂಧಗಳಿಗೆ ಗೌರವ ನೀಡಿದರು-

ತಂದೆಗೆ ತಕ್ಕ ಮಗನಾಗಿ ಬಾಳಿದರು.

ಒಡವುಟ್ಟಿದವರು, ಸ್ನೇಹಿತರು, ಮಕ್ಕಳಿಗಾಗಿ ಜೀವಿಸಿದರು.

ಏಕ ಪತ್ನಿಯ ಪ್ರಿಯಕನಾಗಿದ್ದರು.

ಬಹು ಮುಖ್ಯವಾಗಿ ತನ್ನ ಪ್ರಿಯ ಮಡದಿಗೆ ಕೆಡುಕಾದಾಗ ಇಡೀ ಸ್ರ್ತೀ ಕುಲವನ್ನು ಕಾಪಾಡುವ ಸಲುವಾಗಿ ಧರ್ಮ ಯುದ್ಧವನ್ನೇ ಮಾಡಿ ಅಧರ್ಮವನ್ನು ನಶಿಸಿದರು.

ತನ್ನ ಬದುಕನ್ನು ಕಷ್ಟದಲ್ಲಿ ಸಾಗಿಸಿ ನಂತರ ಸುಖ ಕಂಡರು.


ಇನ್ನೊರ್ವರು-

ಎರಡೂ ತಂದೆ ತಾಯಿಯ ಮುದ್ದು ಮಗನಾಗಿದ್ದರು.

ಒಡಹುಟ್ಟಿದವರು, ಸ್ನೇಹ ಬಳಗ, ಮಕ್ಕಳೊಡನೆ ಲವಲವಿಕೆಯಿಂದ ಜೀವಿಸಿದರು.

ಪ್ರೇಯಸಿ ಸಿಗದಿದ್ದರೂ ಆಕೆಯ ಅನಂತ ಪ್ರಿಯತಮನಾಗಿದ್ದರು.

ಎಂಟು ಪತ್ನಿಗಳ ಪ್ರಿಯಕರನಾಗಿದ್ದರು ಹಾಗೂ ಜೊತೆಗೆ ಹದಿನಾರು ಸಾವಿರ ಜೊತೆಗಾರ್ತಿಯರ ರಕ್ಷಕನಾಗಿದ್ದರು.

ಬಹು ಮುಖ್ಯವಾಗಿ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯನ್ನು ಸ್ರ್ತೀ ಕುಲದ ರಕ್ಷಣೆಯೆಂದೇ ಭಾವಿಸಿ ಧರ್ಮಯುದ್ಧ ಕುರುಕ್ಷೇತ್ರವನ್ನೇ ನಡೆಸಿದರು.

ಸಂಬಂಧಗಳಿಗೆ ಗೌರವ ನೀಡಿದ್ದಾದರೂ ಸಂಬಂಧಿಕರನ್ನೇ ಧರ್ಮಕ್ಕಾಗಿ ಕೊಂದು ಧರ್ಮವನ್ನೇ ಜಯಭೇರಿಯನ್ನಾಗಿಸಿದರು.

ತನ್ನ ಬದುಕನ್ನು ಪರಿಪೂರ್ಣತೆಯಿಂದ ಜೀವಿಸಿದರು.


"ರಾಮನು ಮರ್ಯಾದ ಪುರುಷೋತ್ತಮನು."

"ಕೃಷ್ಣನು ಯುಗ ಯುಗಗಳ ಮಹಾಪುರುಷನು."


                   ----ಚಿನ್ಮಯಿ

Sunday, December 24, 2023

ಅಖಿಲ ಬ್ರಹ್ಮಾಂಡಗಳ ಅನ್ನದಾತ— "ರೈತ"

ಚಿತ್ರಕ್ಕೆ ಪದ್ಯ- ೭೪


ದೇವರ ರೂಪಿ ದೈವ ಸ್ವರೂಪಿ

ಅನ್ನಪೂರ್ಣೆಯ ಮಗನು.

ನಿಸ್ವಾರ್ಥ ಹೃದಯೀ ಕರುಣಾಮಯೀ

ವೈಕುಂಠವಾಸಿಯವತಾರನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಧರೆಯ ತಾಕಿ ಭಕ್ತಿಯ ತೋರಿ

ಎತ್ತುಗಳೊಡನೆ ಉಳುವನು.

ಭತ್ತವ ನಾಟಿ ಪ್ರೇಮದಿ ಸಾಕಿ

ನೀರುಣಿಸುತಲೇ ಬೆಳೆಸುವನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಬಿಸಿಲಲೂ ಗೆಯ್ಮೆ ಚಳಿಯಲೂ ಗೆಯ್ಮೆ

ಹಗಲಿರುಳ ಲೆಕ್ಕಿಸದವನು.

ಮಳೆಯೇ ವರ ಮಳೆಯೇ ಶಾಪ—

ಆದರೂ ಬಿಡದ ಚಲಗಾರನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಒಮ್ಮೊಮ್ಮೆ ಲಾಭ ಒಮ್ಮೊಮ್ಮೆ ನಷ್ಟ

ಇಷ್ಟ-ಕಷ್ಟಗಳೊಡನೆ ಜೀವಿಸುವನು.

ಬರೀ ನಷ್ಟ ಭಾರೀ ನಷ್ಟ—

ಏನೇ ಆದರೂ ನಿಸ್ವಾರ್ಥನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ದೈವಕ್ಕೆ ಅನ್ನವ ಪ್ರೀತಿಯ ಜೊತೆಗೆ

ಉಣಿಸುವ ಮಹಾನುಭಾವನು.

ಭೆದವೇ ತೋರದೆ ಎಲ್ಲರ ತೃಪ್ತಿಗೆ

ಏಕೈಕ ಕಾರಣವು ಇವನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


      ----ಚಿನ್ಮಯಿ

Sunday, December 10, 2023

ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ...

ಮಕ್ಕಳಿಗೆ ವಿದ್ಯೆ, ಬುದ್ಧಿಗಳ ಜೊತೆ ಜೊತೆಯಲ್ಲಿ ಸಂಸ್ಕಾರ ಅವಶ್ಯವಾಗಿ ಕಲಿಸಲೇಬೇಕು- ಏಕೆಂದರೆ, ಸಂಸ್ಕಾರದಿಂದಲೇ ನಿಜವಾದ ಜೀವನದ ಪಾಠ ಅರ್ಥವಾಗೋದು, ಅದುವೇ ಜೀವನಕ್ಕೆ ಬೇಕಾಗಿರೋದು, ವಿದ್ಯೆ ಬುದ್ಧಿಯೆಲ್ಲವೂ ನಂತರವಷ್ಟೇ. ಆದರೇ, ಈಗಿನ ಕಾಲದ ಮುಕ್ಕಾಲೂ ಭಾಗ ತಂದೆ ತಾಯಂದಿರು ಈ ಅತೀ ಸೂಕ್ಷ್ಮ ಹಾಗೂ ಪ್ರಮುಖ ವಿಚಾರವನ್ನು ಕಡೆಗಣಿಸಿ, ಮರೆತು ತಮ್ಮ ಮಕ್ಕಳಿಗೆ ಕಲಿಸದಿರುವುದು ವಿಷಾದದ ಸಂಗತಿ ಹಾಗೂ ಅರ್ಧಮಕ್ಕೆ ಸಮ.

ಮನುಷ್ಯನಿಗೆ ವಿದ್ಯೆ, ಬುದ್ಧಿಗಳು ದೊರಕದಿದ್ದರೂ ಪರವಾಗಿಲ್ಲ ಆದರೇ, ಸಂಸ್ಕಾರ ಅಂತೂ ದೊರಕಲೇ ಬೇಕು- ಏಕೆಂದರೆ, "ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ..."

ಸಂಸ್ಕಾರವಿಲ್ಲದ ದೇಶವು ದೇಶವೇ ಅಲ್ಲ.

ಸಂಸ್ಕಾರವಿಲ್ಲದ ಮನೆಯು ಮನೆಯೇ ಅಲ್ಲ.

ಸಂಸ್ಕಾರವಿಲ್ಲದ ಮನುಷ್ಯನು ಮನುಷ್ಯನೇ ಅಲ್ಲ.


             ----ಚಿನ್ಮಯಿ

Sunday, November 26, 2023

Beautiful Phase of Life- Childhood

"Then:"

For each and everyone, childhood is so special. Our back in the old days when we were young were just amazing. If we just rewind it and think, those days were the golden days of our lives—

So much innocence.

So much fun and cute fights.

So much playful nature.

So many games (both outdoor and indoor) we used to play.

So many wounds and smiles and pains behind them.

So many heartful friendships.

At last, yeah we used to study sometimes when we felt like.

See, this was the life which we can remember always and wish to rewind and live it yet again during our adulthood and older ages. Indeed, our parents were supportive and strict back then.


"Now:"

But parents nowadays, probably have forgotten how they grew up and making their kids live a "Machine Life" rather than "Human Life". The sad part is they are only strict and not supportive at all. There's also studying and it's a part of it I agree but only studying is not good at all. However, most importantly there is adulthood to struggle hard in life to build a so-called "Good Life." 

If this is the case of true life, then why snatch that beautiful phase of life from your kids. A humble request from my side is that please allow your kids to live the most beautiful phase of their life to the fullest and please don't make them regret in their adulthood and older ages that they didn't enjoy their life at all because that's the only phase of life where kids laugh, smile, cry, shout, play, enjoy and do N number of things.


"Heartfelt Conclusion:"

The only phase of life to enjoy the most with a true heart along with nature and true people and learn as much as we can is the "Childhood" and that's the beautiful phase of everyone's life.


                    ----Chinmayi

Wednesday, November 15, 2023

ಗೆಲುವು ಒಳ್ಳೆಯತನಕ್ಕೇ

ಹಿಂದೆ ಮೋಸ ಮಾಡಿ ಮುಂದೆ ಬುದ್ಧಿವಂತ ಎಂದು ಕರೆಸಿಕೊಂಡು ನೂರು ಕಾಲ ಬದುಕುವುದಕ್ಕಿಂತ,

ಹಿಂದೆ-ಮುಂದೆ ಎರಡೂ ಕಡೆಯಲ್ಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿ ಒಳ್ಳೆಯದನ್ನೇ ಕೋರುತ ದಡ್ಡ ಎಂದು ಕರೆಸಿಕೊಂಡು ಕೊಂಚ ಕಾಲ ಬದುಕುವುದೇ ಲೇಸು...


                   ----ಚಿನ್ಮಯಿ