नहीं होंगे तो नकारात्मक भाव का निकास,
कैसे होगा जीवन में बढ़िया विकास...!?
शुद्ध करो श्वास और ले लो पूरा सकारात्मक सास,
रब में रखो संपूर्ण विश्वास तो ज़रूर होगा जीवन विकास.
----चिन्मयी
ಸಾಹಿತ್ಯ ಲೋಕದಲ್ಲಿ ಅಂಬೆಗಾಲು
नहीं होंगे तो नकारात्मक भाव का निकास,
कैसे होगा जीवन में बढ़िया विकास...!?
शुद्ध करो श्वास और ले लो पूरा सकारात्मक सास,
रब में रखो संपूर्ण विश्वास तो ज़रूर होगा जीवन विकास.
----चिन्मयी
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೮ |
As soon as I kept my feet upon the holiest lands on the Earth— "Mathura, Gokul and Vrindavan.", the 'Positive Vibes' that passed throughout my body especially when my Mind, Heart and Soul were connected and synched up were just unique and were on another level which can't be explained through words but can only be experienced, felt and lived.
After visiting my gurudHaiva— "Sri Krishna's" birth place and where he was brought up and grown up, my eyes were filled with happy tears and my heart was filled with love, devotion and my mind was in a peaceful state and my soul was satisfied ultimately.
What else does a human being needs other than this in the entire lifetime...!?
----Chinmayi
I knew from birth that the best life was the village life and the happiest and cultured people can be found in the villages, but in between my city life, I had forgotten this true essence of life.
Yet again, I realised and rediscovered the lost glory and I'm the happiest person alive at present just because of the above reasons and I definitely want to thank one friend of mine and the people around him for this to have happened.
----Chinmayi
The greatest and truest standard of living always lies in- 'how one treats others with utmost respect.'
----Chinmayi
If a person who always tries to be calm gets frustrated frequently, then the environment and the people around him/her are the most toxic.
----Chinmayi
Well, it's just simple, I've understood the importance of living a life in the present moment through various life situations and experiences, but mostly through my gurudeva "Sri Krishna" and learnt and practiced the same for very long. The result, you see now— "Perhaps, I'm living my life with happiness, satisfaction to the fullest and definitely without any sort of regrets."
----Chinmayi
ಹಾಡು: ನಗು ಎಂದಿದೆ ಮಂಜಿನ ಬಿಂದು
ಚಿತ್ರ: ಪಲ್ಲವಿ ಅನುಪಲ್ಲವಿ
ಮೂಲ ಸಾಹಿತ್ಯ: ಆರ್. ಎನ್. ಜಯಗೋಪಾಲ್
ಮೂಲ ಗಾಯನ: ಎಸ್. ಜಾನಕಿ
ಸಂಗೀತ: ಇಳಯರಾಜ
ಮರುಸಾಹಿತ್ಯ ಹಾಡು: ನಭ ವಾರಿಧಿ ಸೇರಿದೆ ಈಗ
--------------------------------------------------------------
--------------------------------------------------------------
ನಭ ವಾರಿಧಿ ಸೇರಿದೆ ಈಗ.
ನಭ ವಾರಿಧಿ ಸೇರಿದೆ ಈಗ.
ಮಳೆ ಹನಿಯ ಭಾವ ಮೇಘ.
ನಭ ವಾರಿಧಿ ಸೇರಿದೆ ಈಗ.
||ಪ||
ಚಿಗುರೆಲೆ ಒಮ್ಮೆ ನಕ್ಕರೆ ಗಾಳಿಗೆ ಬಂತು ಜೀವ.
ಮರಗಿಡ ಸೋಕೋ ಜೀವಂತ ಅಂಶವೇ ನೀರ ಭಾವ.
ಹಾಸಲು ಹಾಸಿಗೆ ಕಾನನವು.
ಮೂಡಿದೆ ಹಸುರಿಗೆ ಸಂತಸವು.
ಚಿಲಿಪಿಲಿ ಒಲವದು ಓ.
ಇಂದು ಮಾಗಲು ಓ.
ಎಂಥ ಸಂಭ್ರಮವೋ.
ಹಾಡೋ ಹಕ್ಕಿಯ ಇಂಚರ ಕಾವ್ಯ.
ಓಡೋ ಜಿಂಕೆಯ ಕುಣಿತ ಭವ್ಯ. ||೧||
ಆ....ತನನ....
ಜಾರುತ ಸಾಗೋ ಜಲ ಧಾರೆ
ಪಯಣವು ಮೌನ ಗಾನ.
ತರುಲತೆ ಬಳ್ಳಿ ನದಿ ಜೊತೆ
ನಡೆಸಿದೆ ಪ್ರೇಮ ಯಾನ.
ತೀರದಲಿ ಅಲೆಯ ಬರವಣಿಗೆ.
ನದಿಯದು ಕಡಲಿನ ಪ್ರೇಮನಗೆ.
ಮೂಡಿದೆ ಜೀವಸುಧೆ.
ಬಾನ ಅನುರಾಗ ಹಾಹಾ ಸೋಜಿಗ.
ಹಾರೋ ಹಕ್ಕಿಯ ಚಾರಣ ಲಾಸ್ಯ.
ಈಜೋ ಮೀನಿನ ನೆಗೆತ ದಿವ್ಯ.
ಹಾರೋ ಹಕ್ಕಿಯ ಚಾರಣ ಲಾಸ್ಯ. ||೨||
----ಚಿನ್ಮಯಿ
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೭ |
ನೇಸರನ ರಥ ಬದಲಿಸಲು ಪಥ ಧನುವಿನಿಂದ ಮಕರದೆಡೆಗೆ,
ಆಗಸದಿ ಕಾಣುವುದೊಂದು ದಿವ್ಯ ಜ್ಯೋತಿ—
ಅದುವೇ ಅಯ್ಯಪ್ಪ ಸ್ವಾಮಿಯ ಕಾಂತಿ.
ಮಾಗಿಯ ಕಾಲ ಅಂತ್ಯದಿ ಸುಗ್ಗಿಯ ಕಾಲ ಶುರುವು,
ಅನ್ನದಾತನ ನಗುವೇ ಹಸಿವಿನ ಸುಖ ಕಾಮನೆ—
ಅದುವೇ ಸಂಕ್ರಮಣದ ಸಿಹಿ ಸೂಚನೆ.
ಅವರೆಕಾಯಿ-ಕಡಲೆಕಾಯಿ-ಗೆಣಸು-ಕಬ್ಬು ಸವಿಯುತಲಿ,
ಎಳ್ಳು-ಬೆಲ್ಲದ ಸಂಗಮದಿ ನಗು ನಗುತ ನಲಿಯುತಲಿ,
ಹಬ್ಬದ ಸಂಭ್ರಮಾಚರಣೆಯಲ್ಲೇ ಜೀವಿಸೋಣ.
ಸರ್ವರಿಗೂ ಸುಗ್ಗಿಯ ಹಬ್ಬ- "ಮಕರ ಸಂಕ್ರಾಂತಿ"ಯ ಶುಭಕಾಮನೆಗಳು.
----ಚಿನ್ಮಯಿ
ನಾವೆಲ್ಲರೂ ಒಂದೇ. ನಮ್ಮೆಲ್ಲರ ಗುರಿ ಒಂದೇ- ಅದುವೇ "ಭಗವಂತನ ಧ್ಯಾನದೊಳು ತಲ್ಲೀನರಾಗಿ ಲೀನವಾಗೋದು."
ಇದನ್ನು ಸಾಕಾರಗೊಳ್ಳಿಸಲು ಮನುಷ್ಯರಾದ ನಾವುಗಳು ಹಲವಾರು ಧರ್ಮಗಳನ್ನು, ಕರ್ಮಗಳನ್ನು, ಜಾತಿಗಳನ್ನು, ನೀತಿಗಳನ್ನು, ಮತಗಳನ್ನು, ಪಥಗಳನ್ನು, ಚಿಂತೆಗಳನ್ನು, ಚಿಂತನೆಗಳನ್ನು, ಭಾವಗಳನ್ನು, ಭಾವನೆಗಳನ್ನು, ರೂಪಗಳನ್ನು, ರೂಪಕಗಳನ್ನು ಹಾಗೂ ಇನ್ನೂ ಅನೇಕ ಇತ್ಯಾದಿಗಳನ್ನು ಚೌಕಟ್ಟಾಗಿ ಸೃಷ್ಟಿಸಿಕೊಂಡು ಹರಸಾಹಸ ಪಡುತ್ತಿದ್ದೇವೆ. ಇಂತಹ ಅನೇಕ ವಿಶಿಷ್ಟ, ವೈವಿಧ್ಯ ಗೊಂದಲಗಳಿಂದಲೇ ನಾವುಗಳು ತಲ್ಲೀನತೆಯಿಂದ ಭಗವಂತನಲ್ಲಿ ಲೀನವಾಗೋದು ಅತೀ ಕಠಿಣವಾಗಿಬಿಟ್ಟಿದೆ.
ಇಂತಹ ಎಲ್ಲಾ ಕಟ್ಟುಪಾಡುಗಳನ್ನೆಲ್ಲಾ ಭೇದಿಸಿ ದಾಟಿ ಜ್ಞಾನ ಮಂದಿರದೊಳು ಪ್ರೇಮ ಜ್ಯೋತಿಯ ಬೆಳಗಿದರೇ ತಲ್ಲೀನರಾಗಿ ಭಗವಂತನಲ್ಲಿ ಲೀನವಾಗೋದ್ರಲ್ಲಿ ಸಂಶಯವೇ ಇಲ್ಲ.
ಇದನ್ನ ಬಹಳ ಸ್ಪಷ್ಟವಾಗಿ ಹೇಳುವಂತಹ ಸಕಲ ಬ್ರಹ್ಮಾಂಡದ ಒಂದೇ ಒಂದು ಆತ್ಮ— ಭಾಷೆ, ಭಾವ, ವಿದ್ಯೆ, ಜ್ಞಾನ ಅಂದ್ರೆ ಅದುವೇ "ಸನಾತನ ಧರ್ಮ." ಇಲ್ಲಿ 'ಸನಾತನ'ವೆಂದರೇ ಶಾಶ್ವತವಾಗಿರುವಂತಹದು ಹಾಗೂ 'ಧರ್ಮ'ವೆಂದರೇ ನಮ್ಮಾತ್ಮದಲ್ಲಡಗಿಹ ಪರಮಾತ್ಮನೆಂಬ ನಂದಾದೀಪದ ಬೆಳಕನ್ನು ಬೆಳಗಿಸಿ ಅದರ ಬೆಳಕಲ್ಲೇ ನಡೆದು ಬದುಕಿದರೆ ಅದೇ ಬೆಳಕಲ್ಲೇ ಮುಕ್ತಿ ಸಿಗುವುದೆಂಬುದನ್ನು ತಿಳಿಸುವಂತಹ ದಾರಿದೀಪವದು.
"ವಸುಧೈವ ಕುಟುಂಬಕಂ."
"ಸರ್ವೇ ಜನಾಃ ಸುಖಿನೋ ಭವಂತು."
"ಸರ್ವ ಜೀವರಾಶಿ ಸುಖಿನೋ ಭವಂತು."
"ಸರ್ವೇ ಭವಂತು ಸುಖಿನಃ."
🙏🏽🙇🏾♂️🕉️🤍
----ಚಿನ್ಮಯಿ
First Breath at Birth, No Name.
Last Breath at Death, Imprint Name.
In between B (Birth) and D (Death), there's always a C (Choices for current state of joy and happiness) and through that C, the journey between B and D must be complete, fulfilling and meaningful.
With much respect
"Gaur Gopal Das" ji 🙏🏽🙇🏾♂️🤍
----Chinmayi
ज़िंदगी में जीतना enjoy करसकते हो उतना enjoy करो और प्रती क्षण, प्रति दिन में खुश रहने को कोशिश करो क्यूंकि—
"ज़िंदगी ना मिलेगी दोबारा."
----चिन्मयी
Literally everyone has forgotten the Diamond (present state of living the life happily with satisfaction) and all are running behind Gold (past, future, money, materialistic pleasures).
----Chinmayi
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೬ |
A for Artuu
B for Batuu
C for Catuu
D for Dotuu
ಹೊಡಿ ಒಂಭತ್ತು...
ಹೊಡಿ ಒಂಭತ್ತು...
E for Eatuu
F for Fatuu
G for Gutuu
H for Hutuu
ಹೊಡಿ ಒಂಭತ್ತು...
ಹೊಡಿ ಒಂಭತ್ತು...
I for Insectuu
J for Jetuu
K for Kiteuu
L for Lightuu
ಹೊಡಿ ಒಂಭತ್ತು...
ಹೊಡಿ ಒಂಭತ್ತು...
M for Meatuu
N for Nutuu
O for Outuu
P for Putuu
ಹೊಡಿ ಒಂಭತ್ತು...
ಹೊಡಿ ಒಂಭತ್ತು...
Q for Quietuu
R for Restuu
S for Situu
T for Tightuu
ಹೊಡಿ ಒಂಭತ್ತು...
ಹೊಡಿ ಒಂಭತ್ತು...
U for Upittu
V for Vibrateuu
W for Whiteuu
X for Xpertuu
Y for Yeastuu
Z for Zomatouu
ಹೊಡಿ ಒಂಭತ್ತು...
ಹೊಡಿ ಒಂಭತ್ತು...
ಹೊಡಿ ಒಂಭತ್ತು...
ಹೊಡಿ ಒಂಭತ್ತು...
----ಚಿನ್ಮಯಿ
ನಾವು ಮನುಷ್ಯರು ಈಗಲೂ ಸಹ ನಮ್ಮ ಮೆದುಳನ್ನು ಅದರ ಪೂರ್ಣ ಪ್ರಮಾಣವಾದ ಶೇಖಡ ೧೦೦ ರಷ್ಟು ಉಪಯೋಗಿಸುತ್ತಿಲ್ಲ ಹಾಗೂ ಅದರಂತೆಯೇ ಪರಿಪೂರ್ಣ ಬುದ್ಧಿವಂತರಾಗಿಲ್ಲ, ಇಷ್ಟಿದ್ದರೂ "ನಾನೇ, ನನ್ನಿಂದಲೇ" ಎನ್ನುವ ಅಹಂ ಅದೆಷ್ಟೋ ಅಡಗಿದೆ ನಮ್ಮೊಳಗೆ...
ಇನ್ನೂ ನಾವು ನಮ್ಮ ಮೆದುಳನ್ನು ಶೇಖಡ ೧೦೦ ರಷ್ಟು ಉಪಯೋಗಿಸಿ ಪರಿಪೂರ್ಣ ಬುದ್ಧಿವಂತರಾಗಿಬಿಟ್ಟಿದ್ರೇ "ನಾನೇ ದೇವರೆಂಬ" ಅತಿರೇಖದ ಅಹಂನ ಭ್ರಾಂತಿಯಲ್ಲಿಯೇ ನಾವು ಬದುಕಿ ನಮ್ಮನ್ನು ಹಿಡಿಯೋರ್ಯಾರಿರ್ತ್ತಿರ್ಲಿಲ್ಲ...
ಅದಕ್ಕೇ, ಆ ಕಿಲಾಡಿ ದೇವರು ಮೂರ್ಖ ಮಾನವರಾದ ನಮಗೆ ಆ ಶಕ್ತಿ-ಯುಕ್ತಿ ಕೊಟ್ಟಿಲ್ಲ...
----ಚಿನ್ಮಯಿ
ಮನುಜಮತ-ಜಾತ್ಯಾತೀತಗಳೊರಟಿಹುದು ಸ್ಮಶಾನ ಯಾತ್ರೆ.
ಆಡಂಬರ-ಒಣಜಂಭದಿಂ ನಡೆದಿಹುದೂರ ಜಾತ್ರೆ.
ನರನಾಡಿಗಳಲ್ಲೆಲ್ಲಾವರಿಸಿಹುದು ಮೌಢ್ಯತೆ.
ಆತ್ಮಶುದ್ಧಿಯಿಲ್ಲದ ಪೂಜೆಗಿಹುದೇ ಪೂಜ್ಯತೆ...!?
ಪಾವಿತ್ರ್ಯತೆ ಈಗಿಹುದೇ ದೇವಸ್ಥಾನಗಳಲ್ಲೆಂಬುದ ನಾ ಕಾಣೆ...!
ಇದ್ದರೂ ದೇವರಲ್ಲಿಹನೇ ಎಂಬುದೊಂದ್ಯಕ್ಷ ಪ್ರಶ್ನೆ...?
----ಚಿನ್ಮಯಿ
ನೀ ಸಾಯುವ ಸಮಯದಲ್ಲಿ ನಿನ್ನ ಗುರುತಾಗಿ ಅಳಿಸಲಾಗದಂತಹ ಶಾಹಿಯಂತೆ ಉಳಿಯುವುದೊಂದೇ—
ನಿರ್ಲಿಪ್ತ, ಸಂತೋಷ, ಆತ್ಮತೃಪ್ತ ಭಾವದಿ ಜೀವಿಸಿದೆನೆಂದು...!?
----ಚಿನ್ಮಯಿ
At the time of your death, the only thing that remains as an indelible mark of yours is—
that you lived a life of detachment, happiness and self-satisfaction...!?
----Chinmayi
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೩ |
ಕನ್ನಡ ಭಾಷೆಯದು—
"ಸರಸತಿಗೊಲುಮೆ.
ಮಹಾಲಕ್ಷ್ಮೀಗ್ಗರಿಮೆ.
ಭುವನೇಶ್ವರಿಗಿರಿಮೆ."
ಪಂಪ-ರನ್ನ-ಪೊನ್ನ—
ತ್ರಿವಳಿ ಕನ್ನಡದ್ ರತ್ನ.
ಕುಮಾರವ್ಯಾಸ-ಹರಿಹರ-ಜನ್ನ—
ಹಳಗನ್ನಡ ರಸಿಕರೆದೆಯ ಚಿನ್ನ.
ರಾಘವಾಂಕನ ಕನ್ನಡ ಕೊಡುಗೆ—
ಷಟ್ಪದಿಯೊಳ ದೈವ ಬರವಣಿಗೆ.
ಅಲ್ಲಮ-ಅಕ್ಕಮಹಾದೇವಿ-ಬಸವಣ್ಣ—
ವಚನ ಸಾಹಿತ್ಯದಿ ಜಗ ಬೆಳಗಿದ ಭಕ್ತಿ ಕಿರಣ.
ಕವಿ,ಮೇಧಾವಿ,ತತ್ವಜ್ಞಾನಿ ಸರ್ವಜ್ಞ—
ತ್ರಿಪದಿ ಭಕ್ತಿಯೊಳು ಆತ್ಮ ನಿರ್ವಿಘ್ನ.
ಪುರಂದರದಾಸ-ಕನಕದಾಸ-ವಿಜಯದಾಸ—
ಭಕ್ತಿ ಪಥದಿ ಕರ್ನಾಟಕ ಸಂಗೀತ-ದಾಸ ಸಾಹಿತ್ಯ ಎಲ್ಲೆಡೆ ಪ್ರವಾಸ.
ಸಂತ ಶಿಶುನಾಳ ಶರೀಫ—
ಗುಡು ಗುಡಿಯ ಸೇದುವುದೇ ಭಕ್ತಿಯ ಆಲಾಪ.
ಕುವೆಂಪು-ಬೇಂದ್ರೆ-
ಕಾರಂತ-ಮಾಸ್ತಿ-
ಗೋಕಾಕ್-ಮೂರ್ತಿ-
ಕಾರ್ನಾಡ್-ಕಂಬಾರ—
೮ ದಿಕ್ಕಿನೊಳು ವಿಸ್ತಾರಗೊಂಡ ಕನ್ನಡ ಸಾಹಿತ್ಯದ ೮ ಶಿಖರ.
ಬೀಚಿ-ನರಸಿಂಹಸ್ವಾಮಿ—
ಹನಿಗವನವೇ ಪ್ರೇಮ ಧ್ವನಿ.
ಕೈಲಾಸಂ ಪ್ರಹಸನ ಪ್ರಪಿತಾಮಹ—
ನಗೆಹನಿಗಳ ಹಾಸ್ಯಮಯ ಪ್ರವಾಹ.
ಮಂಕುತಿಮ್ಮನ ಕಗ್ಗ—
ಪಾಂಚಜನ್ಯದ್ ಸಗ್ಗ.
ಶ್ರೀಕಂಠಯ್ಯ-ಅಡಿಗ—
ನವ ಕಾವ್ಯ ಅಲೆಯ ಪ್ರಯೋಗ.
ವಿ.ಸೀತಾರಾಮಯ್ಯ-ಎಂ.ವಿ.ಸೀತಾರಾಮಯ್ಯ—
ಸುಪ್ರಸಿದ್ದ ಗದ್ಯ-ಕವಿರಾಜಮಾರ್ಗ ಮರು ಪರಿಚಯ.
ಜೋಗಿ-ಲಂಕೇಶ—
ಪತ್ರಿಕೋದ್ಯಮ ಸಂತಸ.
ದೇವನೂರು ಮಹಾದೇವ—
ದಲಿತರ ಪಾಲಿನ ಸಾಹಿತ್ಯ ಭಾವ.
ಬೆಳಗೆರೆ-ಬೈರಪ್ಪ—
ಕಾದಂಬರಿ ಬರಹಗಳ ಜೇನುತುಪ್ಪ.
ತ್ರಿವೇಣಿ-ವೈದೇಹಿ-ವಾಣಿ—
ಮಹಿಳೆಯರಾಧಾರಿತ ಕಾದಂಬರಿಗಳ ತ್ರಿವಳಿ ಧ್ವನಿ.
ರಾಷ್ಟ್ರ ಕವಿ ಗೋವಿಂದ ಪೈ ರವರ ಬಹುಭಾಷ ವಿದ್ಯೆ—
ಸಾಹಿತ್ಯ ಸರಸ್ವತಿಗದುವೇ ನೈವೇದ್ಯೆ.
ಶಿವರುದ್ರಪ್ಪ-ನಿಸಾರ—
ಎದೆಯ ಹಾಡೇ ನಿತ್ಯೋತ್ಸವಾಗರ.
ರಾಜರತ್ನಂ-ತೇಜಸ್ವಿ—
ಮಕ್ಕಳೇ ಪ್ರಕೃತಿಯೊಳ ಚಿನ್ಮಯಿ.
ಲಕ್ಷ್ಮೀಶ-ಕಣವಿ—
ಜೈಮಿನಿ ಭಾರತದೊಳ್ ಚೆಂಬೆಳಕಿನ ಕವಿ.
ತರಾಸು-ಅನಕೃ—
ಕನ್ನಡ ಪ್ರಗತಿಶೀಲವೂ.
ಪುತಿನ-ಸುಬ್ಬಣ್ಣ—
ನವೋದಯ ನವ್ಯ ಕನ್ನಡಕ್ಕೆ ಮ್ಯಾಗ್ಸೆಸ್ಸೆ ಆಗಮನ.
ಸ್ವಾಮಿ-ಅಯ್ಯಂಗಾರ್-ವೆಂಕಟೇಶ್ ಮೂರ್ತಿ—
ಸಸ್ಯವಿಜ್ಞಾನ-ವ್ಯಂಗ್ಯ-ಭಾವಗೀತೆ ಸಾಹಿತ್ಯ ಸ್ಪೂರ್ತಿ.
ನಾಗರಾಜ್-ಬರಗೂರು-ಪಾಟೀಲ್-ಗೀತಾ-ಸಿದ್ದಲಿಂಗಯ್ಯ—
ಉದಯವಾಗಿ ಮೊಳಗಿತು ಬಂಡಾಯ ಸಾಹಿತ್ಯ.
ಜಿ.ಕೆ.ವೆಂಕಟೇಶ್-ಉದಯಶಂಕರ್-ಜಯಗೋಪಾಲ—
ಹಳೆಯ ಹಾಡುಗಳ ಭಾವ ಲೀಲಾಜಾಲ.
ಮನೋಮೂರ್ತಿ-ಕಲ್ಯಾಣ್-ಹಂಸಲೇಖ—
ಸಂಗೀತ-ಸಾಹಿತ್ಯಗಳ ನಾಕ.
ಭಟ್ಟರು-ಕಾಯ್ಕಿಣಿ—
ನಿರ್ದೇಶನ-ಸಾಹಿತ್ಯದ ಸಂಜೀವಿನಿ.
ಕಣ್ಣನ್-ಪ್ರಾಣೇಶ್-ಸುಧಾ ಬರಗೂರು—
ಹರಟೆ ಕಟ್ಟೆಯ ಹಾಸ್ಯ ಕಲಾವಿದರು.
ವಿಲಾಸ್ ನಾಯಕ—
ಏಷ್ಯಾದ ಅತೀ ವೇಗದ ವರ್ಣಚಿತ್ರಕಾರ-ಅಂತರಾಷ್ಟ್ರೀಯ ಮಟ್ಟದಿ ಚಿತ್ರಕಲಾ ಸಾಧಕ.
ಜಿ.ವಿ.ಅಯ್ಯರ್-ಎಸ್.ಸಿದ್ದಲಿಂಗಯ್ಯ-ದೊರೈ-ಭಗವಾನ—
ಕನ್ನಡದ್ ಭೀಷ್ಮ-ವಿಭಿನ್ನ ಚಲನಚಿತ್ರಗಳ ಉಗಮ.
ಪುಟ್ಟಣ್ಣ-ಶಂಕ್ರಣ್ಣ—
ಸಿನಿರಸಿಕರಿಗೌತಣ.
ಗಿರೀಶ್ ಕಾಸರವಳ್ಳಿ-ನಾಗತಿಹಳ್ಳಿ ಚಂದ್ರಶೇಖರ—
ಹೊಸ ಅಲೆ ಚಲನಚಿತ್ರಗಳು ಜಗದಿ ವಿಸ್ತಾರ.
ಉಪೇಂದ್ರ-ರಕ್ಷಿತ್-ರಿಷಭ್-ರಾಜ್-ಪವನ—
ಅಮೋಘ ನಿರ್ದೇಶನದಿ ಕನ್ನಡ ಪಾವನ.
ನರಸಿಂಹರಾಜು—
ಹಾಸ್ಯ ಚಕ್ರವರ್ತಿಯು.
ಲೋಕೇಶ್-ಶ್ರೀನಾಥ್-ಅನಂತ್ ನಾಗ್-ಅಂಬರೀಶ್-ವಿಷ್ಣುವರ್ಧನ್-ರಾಜಕುಮಾರ—
ನವರಸ ನಟನೆಯು ಅಜರಾಮರ.
ಮಾಲಾಶ್ರೀ-ಉಮಾಶ್ರೀ-ಲಕ್ಷ್ಮೀ-ಕಲ್ಪನಾ-ಮಂಜುಳ-ಭಾರತಿ-ಜಯಂತಿ-ಆರತಿ—
ಕನ್ನಡದ ಕಲಾ ಸರಸ್ವತಿಗಳಿಗೆ ಹೃದಯದಾರತಿ.
ಸಾಧುಕೋಕಿಲ-ಜಗ್ಗೇಶ—
ನವರಸ ಹಾಸ್ಯವು ಪ್ರಕಾಶ.
ರವಿಚಂದ್ರನ್-ಶಿವಣ್ಣ-ಸುದೀಪ್-ಪುನೀತ—
ಕ್ರಿಯಾಶೀಲ-ಸೃಜನಶೀಲ ಕಲೆಯು ಸದಾ ವಿನೀತ.
ಜೋಶಿ-ಗವಾಯಿ—
ಹಿಂದೂಸ್ತಾನಿಯು ಚಿರಸ್ಥಾಯಿ.
ಅನಂತಸ್ವಾಮಿ-ಅಶ್ವತ್ಥ—
ಸುಗಮ ಸಂಗೀತದ ಆದಿ ಪಥ.
ಜಾನಕಿ-ಚಿತ್ರ-ವಾಣಿ ಜಯರಾಮ—
ಕಂಠವೇ ಕೋಗಿಲೆಯ ಧಾಮ.
ಪಿ.ಬಿ.ಶ್ರೀ- ಎಸ್.ಪಿ.ಬಿ—
ಕೇಳುಗರೇ ಭಾಗ್ಯಶಾಲಿ.
ಪಲ್ಲವಿ-ರಾಜೇಶ್ ಕೃಷ್ಣನ್-ವಿಜಯಪ್ರಕಾಶ—
ಗಾಯನದಿ ಬದುಕು ವಿಕಾಸ.
ಯಕ್ಷಗಾನ-ಡೊಳ್ಳು ಕುಣಿತ—
ನಟರಾಜನ ಎದೆಯ ಬಡಿತ.
ಬೇಲೂರು-ಹಳೇಬೀಡು—
ಜಕಣ್ಣ-ಡಂಕಣ್ಣ ಶಿಲ್ಪಕಲೆ ಗೂಡು.
ಹಂಪಿ-ಬಾದಾಮಿ-ಐಹೊಳೆ—
ಶಿಲಾಕೃತಿಗಳ ಹೊನ್ನ ಮಳೆ.
ಸಹ್ಯಾದ್ರಿ-ಪಶ್ಚಿಮ ಘಟ್ಟಗಳ ಸಾಲು—
ಕರುನಾಡಿನ ಪಾಲಿಗೆ ಸ್ವರ್ಗದ ಮೆಟ್ಟಿಲು.
----ಚಿನ್ಮಯಿ
ಇಬ್ಬನಿ ತಬ್ಬಿದ ಇಳೆಯಲಿ—
ಚಿಗುರೆಲೆಗಳ ಅನುರಾಗದರ್ಷೋದ್ಗಾರವೇ ಒಲವಿನ ರಾಗ...
ತರು ಲತೆಗಳ ಸುಖಾಭಿಲಾಷೆ ನರ್ತನವೇ ಐಸಿರಿ ಐಭೋಗ...
ಗಾಳಿಗೂ ಮಂಜಿಗೂ ಮುಂಜಾನೆ ಮಳೆ ಹನಿಗಳ ಪ್ರೇಮಯಾಗ...
ಹಚ್ಚ ಹಸುರಿನ ಸ್ವಚ್ಛ ಇನಿಯರೆಲ್ಲರಿಗೂ ಅದುವೇ ಸುಯೋಗ...
ಖಗ-ಮೃಗಗಳ ಸಂತಸಧಿಪತಿಯೇ ಮುಗಿಲಾತ್ಮೀಯ ಗೆಳೆಯ ಮೇಘ...
ಇದ ಹೃದಯದಿ ಅನುಭವಿಸಿ ಜೀವಿಸೋ ನರನೇ ಸೃಷ್ಟಿಯ ಸರ್ವೋತ್ತಮ ಅಂಗ...
----ಚಿನ್ಮಯಿ
I'm a Writer. I'm an Artist.
I won't stop writing until I die...
Even after my death, my art lives on through my writings...
----Chinmayi
ನಾನು ಆಗಿನ ಹರೀಶ್ ಆಗಿದ್ದಾಗ—
ನನ್ನ ತಂದೆ-ತಾಯಿಗೆ ಕೋಪದಿಂದ, ಅಹಂಕಾರದಿಂದ ಎದುರುತ್ತರ ಕೊಟ್ಟಿದ್ದೇನೆ, ಕಿರುಚಾಡಿದ್ದೇನೆ, ಬೈದಿದ್ದೇನೆ, ತಳ್ಳಿದ್ದೇನೆ, ಬಿದ್ದಾಗ ಮೇಲಕ್ಕೆತ್ತದೆ ಹಾಗೆ ನಿಂತಿದ್ದೇನೆ, ತುಂಬಾನೆ ನೋಯಿಸಿದ್ದೇನೆ...
ಇಷ್ಟೆಲ್ಲಾ ಮಾಡಿದರೂ ಅವರು ನನ್ನನ್ನು ಪ್ರೀತಿಸಿದರು ಹಾಗೂ ಪ್ರೀತಿಸುತ್ತಲೇ ಇರುವರು.
ಹಾಗೆಯೇ ನನ್ನ ಮಾಜಿ ಪ್ರೇಯಸಿಯೊಡನೆಯೂ ಕೂಡ ಅದೇ ವರ್ತನೆಯಗಿತ್ತು- ಕೋಪದಿಂದ, ಅಹಂಕಾರದಿಂದ ಕಿರುಚಾಡಿದ್ದೇನೆ, ಹೊಡೆದಿದ್ದೇನೆ, ಬೈದಿದ್ದೇನೆ, ತಳ್ಳಿದ್ದೇನೆ, ಬಿದ್ದಾಗ ಮೇಲಕ್ಕೆತ್ತದೆ ಹಾಗೆ ನಿಂತಿದ್ದೇನೆ, ತುಂಬಾನೆ ನೋಯಿಸಿದ್ದೇನೆ...
ಇಷ್ಟೆಲ್ಲಾ ಮಾಡಿದರೂ ಅವಳು ನನ್ನನ್ನು ೮ ವರ್ಷ ಪ್ರೀತಿಸಿದಳು.
ಹಾಗೆಯೇ ನನ್ನ ಎಷ್ಟೋ ಸ್ನೇಹಿತರೊಡನೆ ಕೂಡ ಮೇಲಿನ ರೀತಿಯದೇ ವರ್ತನೆಯಾಗಿತ್ತು...
ಆದರೂ ಅವರೆಲ್ಲರೂ ಸಹ ನನ್ನನ್ನು ಪ್ರೀತಿಸಿದರು ಹಾಗೂ ಪ್ರೀತಿಸುತ್ತಲೇ ಇರುವರು.
ಇಷ್ಟೆಲ್ಲಾ ಮಾಡಿದ ನಾನೊಬ್ಬ ಮಹಾಪಾಪಿ, ಅವರೆಲ್ಲರ ಪ್ರೀತಿಗೆ ನಾನು ಅರ್ಹನಲ್ಲದವನು...
ಆದರೇ ನನ್ನ ತಪ್ಪುಗಳನ್ನು ಅರಿತುಕೊಂಡು, ತಿದ್ದಿಕೊಂಡು ಹೊಚ್ಚ ಹೊಸ ಮನುಷ್ಯನಾಗಿರುವ ಈಗಿನ ಹರೀಶ್ ಬೇರೆ. ಈಗ ಅದೆಷ್ಟು ಆಗತ್ತೋ ಅಷ್ಟು ಪ್ರೀತಿಯನಷ್ಟೇ ನೀಡುತ್ತಿದ್ದೇನೆ ಎಲ್ಲರಿಗೂ ಬಗೆ-ಬಗೆಯ ರೀತಿಯಲ್ಲಿ...
ಅದೇನೆ ಆದರೂ ಸಹ ಆಗಿನ ಹರೀಶ್ ಮಾಡಿರುವ ಮಹಾಪಾಪಗಳಿಗೆ ಈಗಿನ ಹರೀಶ್ ಅವುಗಳನ್ನು ನೆನೆ-ನೆನೆದು ಕೊರಗುವುದೇ ಪ್ರಾಯಶ್ಚಿತ್ತ. ಆದರೇ, ಮಾಡಿರುವ ಎಲ್ಲಾ ಕರ್ಮಗಳಿಗೂ ತಕ್ಕ ಶಿಕ್ಷೆಗೋಸ್ಕರ ಕಾಯುತ್ತಿದ್ದೇನೆ, ಶಿಕ್ಷೆ ಹತ್ತಿರ ಬಂದಾಗ ಸಂತೋಷದಿಂದ ಸ್ವೀಕರಿಸುತ್ತೇನೆ...
ಕರ್ಮಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ.
----ಚಿನ್ಮಯಿ
When I was the old Harish—
In the sense of anger and ego, I've given back answers, shouted, scolded, pushed away my parents and when they had fallen down did not lend any helping hand and stood and watched them, mainly given so much pain and sorrow to them... Despite that also, they loved me unconditionally all these years and kept on loving me always.
Similarly, in the sense of anger and ego, I've shouted, beaten up, scolded, pushed away my Ex-girlfriend and when she had fallen down did not lend any helping hand and stood and watched her, mainly given so much pain and sorrow to her... Despite that also, she loved me unconditionally for 8 long years.
Also I've acted similarly as I said above with most of my friends too... Despite that also, they loved me unconditionally all these years and kept on loving me always.
After doing so much, I'm the biggest sinner and I'm unworthy of all their love towards me... But, I've become a new human being- the new Harish after analysing and correcting my sins and I'm an entirely different person now. For now, I'm only giving love how much ever it's possible in abundance for everyone in different varieties as per the Life...
However, the new Harish has to suffer by always remembering all the great sins done by the old Harish and that's the atonement. But, I'm eagerly waiting for the severe punishment to be imposed on me for all the karma's done, and when the punishment is nearby, I'll be very happy to receive it since I abide by the law of Karma.
----Chinmayi
ನೆರಳಿಗೆ ನೆರಳು ಸೋಕಲೀಗ ಅದೇನೋ ಸೋಜಿಗ.
ಉಸಿರಿಗೆ ತಾ ಉಸಿರಾಗೆಂಬ ಮನವಿಯೇ ಮೋಹಕ.
ಸರಸ ಸಲ್ಲಾಪದಿ ಹುಬ್ಬಿನೆರಡರ ಸುಖಾಭಿಲಾಷಿ ನೃತ್ಯ ಕಾಳಗ.
ಪ್ರೇಮೋದಯಕ್ಕೀಗ ಮುಗುಳುನಗೆಯೇ ಕಾಯಂ ವೀಕ್ಷಕ.
----ಚಿನ್ಮಯಿ
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೨ |
In the whole world full of selfishness and egocentric, there was a great man who was born in and who lived in and who gave everything back to the greatest country in the world and through his selflessness, humility and simplicity, his Legacy will be forever eternal.
"LEGENDS NEVER DIE"
🙏🏽🙇🏾♂️🤍
----Chinmayi
कभी कभी जीवन मे अल्वीदा केहना बहुत मुश्किल का काम है—
लेकिन केहना तो बहुती ज़रूरत...
क्यूंकि आज का अल्वीदा से कल का नहे जीवन है—
कल का अनुभव के मुलाकात के साथ...
----चिन्मयी
ನನ್ನಣೆಯ ಪುಸ್ತಕದಲ್ಲಿ—
ಈಗಿನವರೆಗಿನ ಬದುಕಿನ ಪುಟಗಳಲ್ಲಿ—
ಆ ಬ್ರಹ್ಮದೇವ ಬರೆಯಲಿಲ್ಲ ಪ್ರೇಮದ ಅಧ್ಯಾಯ...
ಬರೆದಿದ್ದರೂ ಅದು ಕೊಂಚ ಕಾಲಕ್ಕೆ ಸೀಮಿತವಾಯಿತಷ್ಟೇ...
ಇನ್ಮುಂದಿನ ಬದುಕಿನ ಪುಟಗಳಲ್ಲಿ—
ಬಹುಶಃ ಇದ್ದರೂ ಇರಬಹುದೇನೋ ಪ್ರೇಮ ಪ್ರಣಯ...
ಇದ್ದರೆ ಸಂಪೂರ್ಣ ಭಾಗ್ಯಶಾಲಿ, ಇಲ್ಲದಿದ್ದರೆ ಕನಸಿನ ಪ್ರೇಮಲೋಕಕ್ಕೆ ಭಾಗಶಃ ಚಕ್ರವರ್ತಿಯಾಗುವೆನಷ್ಟೇ...
----ಚಿನ್ಮಯಿ
"ಓ ದೇವರೇ ನೀನೆಲ್ಲಿರುವೇ...!?"—
"ನಾನಿರುವಾಗ ನಿನ್ನೊಳಗೆ ಬೇರೆಲ್ಲಿ ಹುಡುಕುವೆ...!?
ನಿನ್ನೊಳಗೆ ನೀನಾಗಿಯೇ ನಾನು ಬದುಕಿರುವೆ...
ಒಳ ಕಣ್ತೆರೆದು ನೋಡೊಂದು ಸಲ.
ಕಾಣುತ್ತಲೇ ಬಳಿ ಇರುವೆನು ಅನಂತ ಕಾಲ."
----ಚಿನ್ಮಯಿ
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೯೦ |
ಮನುಷ್ಯರೆಲ್ಲರಲ್ಲೂ ಸಹ ಅಡಗಿರುವ ದಶಗುಣಗಳೆಂದರೆ—
ಅಹಂ, ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯ, ಬುದ್ಧಿ, ಮನಸ್ಸು, ಚಿತ್ತ.
ಇವುಗಳಿಂದಲೇ ರಾವಣನನ್ನು ಸಹ ದಶಕಂಠ, ದಶಮುಖ ಎಂದು ಕರೆಯಲಾಗುವುದು. ರಾವಣನಿಗೆ ಇವುಗಳಲ್ಲೆದರ ಮೇಲೂ ಹಿಡಿತವಿತ್ತು ಆದರೇ ನಿಯಂತ್ರಣವಿರಲಿಲ್ಲ. ಆದ್ದರಿಂದಲೇ ಅವನ ಸರ್ವನಾಶವಾಗಿದ್ದು. ಇದರಲ್ಲಿ ಹೇಗೆ ನಮ್ಮ ಸ್ವಂತ ದಶಗುಣಗಳೇ ನಿಯಂತ್ರಣವಿಲ್ಲದಿದ್ದರೆ ನಮಗೆ ಹಿತಶತ್ರುವಾಗಬಹುದೆಂಬುದನ್ನು ಕಲಿಸುತ್ತದೆ.
ಮಹಾವಿಷ್ಣುವಿನ ದಶಾವತಾರದಿಂದ ಹೇಗೆ ಪ್ರಾಣಿಗಳಿಂದ ನಾವೆಲ್ಲರೂ ಮನುಷ್ಯರಾದೆವು ಹಾಗೂ ಬುದ್ಧಿವಂತಿಕೆಯ ಅಧಿಪತಿಯಾದ ಮೇಲೆ ಅದೇ ದಶಗುಣಗಳ ಹಿಡಿತ ಹಾಗೂ ನಿಯಂತ್ರಣದಿಂದ ಮಹಾಜ್ಞಾನಿ, ಪುರುಷೋತ್ತಮನಾಗಬಹುದೆಂಬುದನ್ನು ಒಂದೊಂದೇ ವಿಭಾಗವಾಗಿ ಅವತಾರಗಳ ರೂಪದಿಂದ ಕಲಿಸುತ್ತದೆ.
ಎರಡೂ ಕಥೆಗಳಿಂದ ಎಲ್ಲಾ ಮನುಷ್ಯರು ಸಹ ದಶಗುಣಗಳ ಮೇಲೆ ಹಿಡಿತದ ಜೊತೆಗೆ ನಿಯಂತ್ರಣವು ಇದ್ದರೇ ಮೇಧಾವಿ ಜೊತೆಗೆ ಪುರುಷೋತ್ತಮರಾಗಿಯೂ ಬದುಕಬಹುದೆಂಬುದನ್ನು ಕಲಿಸುತ್ತದೆ ಅದರದೇ ವಿಶಿಷ್ಟ ರೀತಿಯಲ್ಲಿ, ಆದರೇ ನಾವುಗಳು ಅದನ್ನು ಗ್ರಹಿಸಿ, ಅರ್ಥೈಸಿಕೊಂಡು, ಬದುಕಿ ಬಾಳಬೇಕಷ್ಟೇ...
----ಚಿನ್ಮಯಿ
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೮೯ |
In the initial days of my youth, I was never like this. I was a different Harish, I was an "Atheist" and "Ignorant" at the early stage of my life. I was an "Angry youth with too much Ego" residing inside me. I was not listening to even my parents and was scolding them and have hurt them so much.
But, Sri Krishna changed my entire life when he made me understand the true essence of life. I always even now till my last breath feel guilty for my mistakes and at the same time, I'm eternally thankful to the lord for bringing out the real me, a brand new human being who was already inside me.
I've surrendered myself to you oh Paramaathma.
"I'm nothing. You are everything. As you reside inside everyone including me, I'm everything."
Thank You for an infinite number of times for letting me know this ultimate truth of life.
ನನ್ನ ಪ್ರಕಾರ:
ಕಲಿಯುಗದಲ್ಲಿ ನಾನೇ ಅರ್ಜುನನು.
ನೀನೇ ಸದಾಕಾಲಕ್ಕೂ ಶ್ರೀ ಕೃಷ್ಣನು.
----Chinmayi
It's been 77 years since earning independence from the bloody Britishers, Portugese and French, so many martyrs have been given their blood, body and soul to see Bhaarath free and to set Bhaarath free.
But I think their sacrifice is not respected since even now indirectly we are under slavery in the form of Politics (Political Leaders) who are ruling us from our own country, Jobs (Corporate and Industrial companies) especially from all over the world who are ruling us from our own country. No one bothers and addresses these things which are actually serious issues since no one wants to do it due to their fear, comfort zones etc.
So we have to question ourselves: "are we really free even after 77 years of Independence...!?"
----Chinmayi
One can or may fail in any aspect of life but must and should never ever fail as being human, which completes life on the whole.
----Chinmayi
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೮೮ |
If at all—
We Men are raised properly in the environment where it respects Women.
We Men know the true value of Women and respect them.
We Men stop behaving like insane creatures.
We Men are humanely educated.
We Men learn to control our lust through mastering to control our thoughts.
Then—
Rest everything will automatically fall into place.
We Men are the sole reason for this heinous crime and it's a severe punishable offence even if it takes a death penalty, it must be exercised else Humanity will be at its highest stake.
----Chinmayi
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೮೭ |
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಮೊಟ್ಟ ಮೊದಲಿಗೆ 'ಕಾನ್ ಸ್ಟೇಬಲ್', ನಂತರ 'ಹೆಡ್ ಕಾನ್ ಸ್ಟೇಬಲ್' ಹಾಗೂ ತದನಂತರ ನಿವೃತ್ತಿ ಹೊಂದುವ ಸಮಯದಲ್ಲಿ 'ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ಪೆಕ್ಟರ್' ಆಗಿ ಸುಧೀರ್ಘ ೩೪ ವರ್ಷ ರಾಜ್ಯದ ಹೆಮ್ಮೆಯ ಪೊಲೀಸಾಗಿ ರಾಜ್ಯ ಹಾಗೂ ದೇಶಸೇವೆ ಸಲ್ಲಿಸಿದ ನಿಷ್ಠಾವಂತ ಅಧಿಕಾರಿಯು ನನ್ನ ತಂದೆ. ಅವರ ವೃತ್ತಿ ಸಮಯದಲ್ಲಿ ಎಷ್ಟೋ ಕಾಲ ಮನೆಯಿಂದ ಹೊರಗೆ ಉಳಿದಿದ್ದು ಇದೆ ಹಾಗೂ ಅದೆಷ್ಟೋ ಅನಾರೋಗ್ಯ, ಕಷ್ಟಗಳನ್ನ ಅನುಭವಿಸಿ ಕೂಡ ವೃತ್ತಿ ಧರ್ಮವ ಪ್ರಾಮಾಣಿಕವಾಗೇ ನಿರ್ವಹಿಸಿ ಗೆದ್ದ ವೀರನು ನನ್ನ ತಂದೆ. ನಿವೃತ್ತಿ ಹೊಂದೋ ಸಮಯದಲ್ಲಿ ವಾಸಿಯೇ ಆಗದಂತಹ ಬೆನ್ನಿನ ಅನಾರೋಗ್ಯದ ನಡುವೆಯೂ ಅದೆಷ್ಟೇ ನೋವಿದ್ದರೂ ಲೆಕ್ಕಿಸದೇ ತಮ್ಮ ೬೦ ವರ್ಷ ತುಂಬುವವರೆಗೂ ಸೇವೆ ಸಲ್ಲಿಸಿ ನೆಮ್ಮದಿಯಿಂದ, ಹೆಮ್ಮೆಯಿಂದ ನಿವೃತ್ತಿ ಹೊಂದರು ನನ್ನ ತಂದೆ.
ಅವರು ಬದುಕಿದ ರೀತಿಯೇ ನನಗೆ ಸ್ಪೂರ್ತಿ ಹಾಗೂ ಇಂತಹ ಯೋಧನಿಂದ ಪರೋಕ್ಷವಾಗಿ ಕಲಿತ ಜೀವನದ ಪಾಠಗಳು— ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಧರ್ಮ, ಕರ್ಮ ಇನ್ನೂ ಅನೇಕ ವಿಚಾರ-ಆಚಾರಗಳಿಂದಲೇ ನನ್ನ ಈಗಿನ ಬದುಕು ಬೆಳಗಿದೆ, ಇದಕ್ಕೆಲ್ಲದಕ್ಕೂ ಕಾರಣವಾದ ಈ ಯೋಧನಿಗೆ ನನ್ನ ಸಲಾಂ.
ಇಷ್ಟೆಲ್ಲದರ ಮಧ್ಯೆ ನನ್ನ ತಾಯಿಯ ತ್ಯಾಗ, ಕಷ್ಟ ಹಾಗೂ ಅವಳು ನಮ್ಮಪ್ಪನ ಅನುಪಸ್ಥಿತಿಯಲ್ಲಿ ನನ್ನನ್ನು ಹಾಗೂ ನನ್ನ ಅಣ್ಣನನ್ನು ಕೋಪದಿಂದಲೇ ಪ್ರೇಮ ಧಾರೆಯೆರೆದು ಬೆಳೆಸಿದ ರೀತಿಯನ್ನು ನೆನಪಿಸಿಕೊಳ್ಳಲೇಬೇಕು. ಇಂತಹ ತ್ಯಾಗಮಯಿಗೆ ನನ್ನ ಸಲಾಂ.
ಅದೇಷ್ಟೋ ಕಷ್ಟ ನೋಡಿ ಬೆಳೆದ ನಾನು-ನನ್ನಣ್ಣ ಆದರೂ ಸಹ ನಮಗೆ ಕಷ್ಟವೇ ಅನಿಸಬಾರದಂತೇ ಬೆಳೆಸಿದ ನಮ್ಮ ತಂದೆ-ತಾಯಿ, ಇವರಿಬ್ಬರೂ ಕಟ್ಟಿಕೊಟ್ಟಂತಹ ಈ ಬಂಗಾರದ ಬಾಳು ನಮಗೆ ದೀಕ್ಷೆ.
ಪ್ರತಿಯೊಂದಕ್ಕೂ ಇಬ್ಬರಿಗೂ ಸದಾಕಾಲವೂ ನಾವು ಚಿರಋಣಿ...
----ಚಿನ್ಮಯಿ
ಕರ್ಮದ ಹಾಗೂ ಪರಿಸ್ಥಿತಿಯ ಅನುಸಾರವಾಗಿ ಒಮ್ಮೊಮ್ಮೆ—
ನಾ ಬ್ರಾಹ್ಮಣನು.
ನಾ ಕ್ಷತ್ರಿಯನು.
ನಾ ವೈಶ್ಯಯನು.
ನಾ ಶೂದ್ರನು.
ಚತುರ್ವರ್ಣದಲ್ಲಿ ಎಲ್ಲವೂ ನಾನೇ ಆಗಿರುವಾಗ ಇನ್ನೆಲ್ಲಿಹುದು ಮನುಜನ ಸೃಷ್ಟಿಯ ಜಾತಿಯು...!?
----ಚಿನ್ಮಯಿ
ಹೃದಯದ ಬೀದಿಯಲ್ಲಿ
ಒಲವಿನ ತೇರಿನಲ್ಲಿ
ಪ್ರೇಮ ದೇವತೆಯು ನೀನೇ.
ಅನುಕ್ಷಣ ತೇರ ಎಳೆಯುತ್ತ
ಮನದಲ್ಲೇ ಆರಾಧಿಸೋ
ಪ್ರೇಮ ಭಕ್ತನು ನಾನೇ.
----ಚಿನ್ಮಯಿ
![]() |
ಚಿತ್ರಕ್ಕೆ ಪದ್ಯ / ಉಲ್ಲೇಖ- ೮೫ |
ಸಕಲ ಬ್ರಹ್ಮಾಂಡಗಳ ಪರಮಾತ್ಮ ಹಾಗೂ ಎನ್ನ ನಲ್ಮೆಯ-ಆರಾಧ್ಯ ದೈವ ಶ್ರೀ ಮಹಾ ವಿಷ್ಣುವಿನ ೨೪ ಅವತಾರಗಳಲ್ಲಿ ಬಹಳ ಪ್ರಮುಖ ಅವತಾರಗಳು ದಶಾವತಾರಗಳು...
ಅವುಗಳ ಹೆಸರು, ಅವುಗಳೆಲ್ಲವೂ ಯಾವೆಲ್ಲಾ ಯುಗಗಳಲ್ಲಿ ನಡೆದಿದೆ ಹಾಗೂ ಅವುಗಳಿಂದ ಸಕಲರ ಜೀವನಕ್ಕೆ ತಾತ್ಪರ್ಯಗಳು, ಅವುಗಳ ಕುರಿತಾಗಿ ಸಂಪೂರ್ಣ ಮಾಹಿತಿ ಕೆಳಗಿನಂತಿವೆ—
೧) ಸತ್ಯಯುಗ (ಕೃತಯುಗ / ಸುವರ್ಣ ಯುಗ)
೧) ಮತ್ಸ್ಯ:
ಇಡೀ ಬ್ರಹ್ಮಾಂಡಗಳಲ್ಲಿ ಜೀವಿಗಳ ಸೃಷ್ಟಿ ಮೊಟ್ಟಮೊದಲಿಗೆ ನೀರಿನಲ್ಲೇ ಶುರುವಾಗಿದ್ದು ಅನ್ನೋದು ಎಲ್ಲರಿಗೂ ತಿಳಿದ ವಿಚಾರವೇ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಮನುಷ್ಯ ಕುಲದ ಉಗಮದ ಮೂಲ ಕರ್ತೃಕಾರನಾದ 'ಮನು'ವನ್ನು ಹಾಗೂ ಸಪ್ತ ಋಷಿಗಳನ್ನು ಮಹಾಪ್ರಳಯದಿಂದ ಒಂದು ಬೃಹತ್ತಾಕಾರದ ಮೀನು ಪಾರುಮಾಡುವುದು, ಇದರಿಂದಲೇ ಎಲ್ಲಾ ಮನುಷ್ಯರು ಆಗಿನಿಂದಲೂ-ಈಗಿನವರೆಗೂ ಜೀವಿಸುತ್ತಿರುವುದು, ಇನ್ನೂ ಮುಂದೆಯೂ ಜೀವಿಸುವುದೇ ತಾತ್ಪರ್ಯವು. ಇದರಲ್ಲಿ ಕರ್ಮಸ್ಥಾಪನೆಯಿಂದಲೇ ಧರ್ಮಸ್ಥಾಪನೆಯಾಗಿದೆ.
೨) ಕೂರ್ಮ:
ನೀರಿನ ಜೀವಿಗಳ ಸೃಷ್ಟಿಯ ನಂತರ ನೀರು ಹಾಗೂ ನೆಲ ಎರಡರ ಮೇಲೂ ಜೀವಿಸಬಲ್ಲ ಜೀವಿಗಳ ಸೃಷ್ಟಿಯ ವಿಚಾರವು ಸಹ ಎಲ್ಲರಿಗೂ ತಿಳಿದಿದೆ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಬೃಹತ್ತಾಕಾರದ ಆಮೆಯ ಸಹಾಯದಿಂದ ಸಮುದ್ರ ಮಂಥನವು ನಡೆಯುವುದು, ಅದರಿಂದ ಹಾಲಾಹಲ, ಕೌಸ್ತುಭ, ಚಂದ್ರ, ಲಕ್ಷ್ಮಿ, ಅಪ್ಸರೆಯರು, ಕಾಮಧೇನು, ಪಾರಿಜಾತ, ಐರಾವತ, ಧನ್ವಂತರಿ, ಶಂಖ, ತುಳಸಿ, ಅಮೃತ ಹಾಗೂ ಮುಂತಾದವುಗಳು ಜನಿಸಿದರಿಂದ ಜಗವು ಸಾಗಲೆಂಬುದೇ ತಾತ್ಪರ್ಯವು. ಇದರಲ್ಲಿಯೂ ಕರ್ಮಸ್ಥಾಪನೆಯಿಂದಲೇ ಧರ್ಮಸ್ಥಾಪನೆಯಾಗಿದೆ.
೩) ವರಾಹ:
ನೀರಿನ, ನೀರು-ನೆಲದ ಜೀವಿಗಳ ನಂತರ ನೆಲದಲ್ಲಿ ಮಾತ್ರ ವಾಸಿಸುವ ಜೀವಿಗಳ ಸೃಷ್ಟಿಯ ಕುರಿತು ಎಲ್ಲರಿಗೂ ತಿಳಿದ ವಿಚಾರವೇ. ಈ ಅವತಾರದ ಪ್ರಮುಖ ತಾತ್ಪರ್ಯವು ಅದುವೇ ಹಾಗೂ ಅದೇಗೆ ಸೂರ್ಯನ ಹಿಡಿತದಿಂದ ಭೂ ದೇವಿಯನ್ನು ಓರ್ವ ಹಿರಣ್ಯಾಕ್ಷ ಎಂಬ ರಾಕ್ಷಸನು ದೂರಮಾಡುವನೋ, ಮತ್ತೊಮ್ಮೆ ಸೌರಮಂಡಲದ ಸಮತೋಲನಕ್ಕೆಂದಲೇ ಅವನೊಡನೇ ಹಂದಿಯೊಂದು ಸೆಣಸಾಡಿ ಗೆದ್ದು ತನ್ನ ಎರಡು ಮುಂಗಡ ಹಲ್ಲುಗಳ ಮೇಲೆ ಭೂ ದೇವಿಯನ್ನ ತಿರುಗಿಸುತ್ತಲೇ ತಂದು ಸಮತೋಲನ ಸರಿಮಾಡುವುದೆಂಬುದೇ ತಾತ್ಪರ್ಯವು. ಇದರಲ್ಲಿ ಸೃಷ್ಟಿಯ ಲಯಕ್ಕೋಸ್ಕರ ಧರ್ಮಸ್ಥಾಪನೆಯಾಗಿದೆ.
೪) ನರಸಿಂಹ:
ನೆಲದ ಜೀವಿಗಳ ಸೃಷ್ಟಿಯ ನಂತರ ಮಂಗಗಳ ಜಾತಿಯಿಂದ ಮಾನವ ರೂಪೀಕರಣವು ಕೊಂಚ ಕೊಂಚವೇ ಹೇಗೆ ಶುರುವು ಎಂಬುದು ಪರೋಕ್ಷವಾಗಿ ಅರ್ಧ ಸಿಂಹ-ಅರ್ಧ ಮನುಷ್ಯನ ರೂಪದಲ್ಲಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಮ್ಮನಾದ ಹಿರಣ್ಯಾಕ್ಷನ ಸೇಡು ತೀರಿಸಿಕೊಳ್ಳಲು ಜಿದ್ದು ಬಿದ್ದ ಓರ್ವ ಹಿರಣ್ಯ ಕಶಿಪು ಎಂಬ ರಾಕ್ಷಸನ ವಧೆ ಅವನ ಸ್ವಂತ ಮಗನಾದ ಮಹಾವಿಷ್ಣುವಿನ ಮಹಾ ಭಕ್ತನಾದ ಪ್ರಹ್ಲಾದನ ಸಹಾಯದಿಂದ ಹಾಗೂ ಆ ರಾಕ್ಷಸನ ಅತೀ ಬುದ್ಧಿವಂತಿಕೆಯ ವರಗಳನ್ನು ತಪ್ಪಿಸಿ ಆಗುವುದೆಂಬುದೇ ತಾತ್ಪರ್ಯವು. ಇದರಲ್ಲಿ ಸಂಬಂಧಗಳಿಂದ ಮೂಢರಾದ ಅಧರ್ಮಿಗಳ ನಾಶದಿಂದ ಧರ್ಮಸ್ಥಾಪನೆಯಾಗಿದೆ.
೨) ತ್ರೇತಾಯುಗ
೫) ವಾಮನ:
ಮಂಗಗಳಿಂದ ನಿಧಾನವಾಗಿ ಅದೇಗೆ ಸಣ್ಣಗಾತ್ರದ ಮನುಷ್ಯರ ರೂಪೀಕರಣವಾಯಿತೆಂಬುದನ್ನು ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಏಳು ಚಿರಂಜೀವಿಗಳಲ್ಲೊಬ್ಬನಾದ ಹಾಗೂ ರಾಕ್ಷಸ ಜಾತಿಗಳ ಒಡೆಯನಾದ ಓರ್ವ ಮಹಾಬಲಿಯು ಸ್ವರ್ಗಾಧಿಪತಿಯಾದ ಇಂದ್ರ ದೇವನ ಸೋಲಿಸಿ ತ್ರಿಲೋಕಗಳಧಿಪತಿಯಾಗಿ ಮೆರೆಯುವ ಅಹಂ ಅನ್ನು ಇಳಿಸಿ ತನ್ನ ಮೂರೆಜ್ಜೆಗಳನ್ನಿರಿಸಲು ಜಾಗ ಕೇಳಿದಾಗ ವಿಷ್ಣುವಿನ ಮಹಾಭಕ್ತನಾದ ಮಹಾಬಲಿಯು ತನ್ನೆರಡೆಜ್ಜೆಗಳನ್ನು ಎರಡೂ ಲೋಕಗಳಲ್ಲಿರಿಸಲು ದಾನ ನೀಡಿದನು ಹಾಗೆಯೇ ಸ್ವರ್ಗವನ್ನು ಪುನಃ ಇಂದ್ರನಿಗೇ ಹಿಂತಿರುಗಿಸಲು ವಾಮನ ಸಹಾಯ ಮಾಡಿದನು ಮತ್ತು ಕೊನೆಯ ಹೆಜ್ಜೆಗೆ ತನ್ನ ತಲೆಯನ್ನು ದಾನ ಮಾಡಿದನು ಇದರಿಂದಲೇ ಮಹಾಬಲಿಯನ್ನು ಖಾಯಂ ಪಾತಳಕ್ಕೆ ಕಳುಹಿಸೋ ಬಹಳ ಸಣ್ಣ ಗಾತ್ರದ ಮನುಷ್ಯನ್ನೊಬ್ಬನ ಮಹಾ ಪರಾಕ್ರಮದ ವಿಚಾರವೇ ತಾತ್ಪರ್ಯವು. ಇದರಲ್ಲಿ ಅಹಂ ಇಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೬) ಪರಶುರಾಮ:
ಮಂಗಗಳಿಂದ ಮನುಷ್ಯ ನಿಧಾನವಾಗಿ ರೂಪೀಕರಣವಾದ ನಂತರ ಅದೇಗೆ ಅರಣ್ಯದಲ್ಲಿ ಜೀವಿಸಲಾರಂಭಿಸಿದ, ಶಸ್ತ್ರಾಸ್ತ್ರಗಳನ್ನು ತಯಾರಿ ಮಾಡುವುದನ್ನು, ಅದರ ಬಳಕೆ ಹೇಗೆ ಕಲಿತನೆಂಬುದು ಹಾಗೂ ಪ್ರಾಣಿಯಿಂದ ರೂಪೀಕರಣವಾದ್ದರಿಂದ ವಿಪರೀತ ಕೋಪವೇಗೆ ಇತ್ತೆಂಬುದು ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಂದೆಯ ಆಜ್ಞೆಯಂತೆಯೇ ಸ್ವಂತ ತಾಯಿಯಾದ ರೇಣುಕಾಳ ತಲೆ ಕಡಿದನು, ಮಗನ ಸದ್ಯಃಪಿತೃವಾಕ್ಯಪರಿಪಾಲನಾ ಬುದ್ಧಿಯನ್ನು ಕಂಡು ಸಂತೃಪ್ತನಾದ ಜಮದಗ್ನಿ ವರವೊಂದನ್ನು ಕೇಳಿಕೊಳ್ಳಲು ಹೇಳಲು ಆತ ತನ್ನ ಪ್ರಿಯಮಾತೆಯನ್ನು ಮತ್ತೆ ಬದುಕಿಸಬೇಕೆಂದೂ ಇನ್ನು ಮುಂದೆ ಇಂಥ ಉಗ್ರಕೋಪ ಪ್ರದರ್ಶನವನ್ನು ಬಿಟ್ಟುಬಿಡಬೇಕೆಂದೂ ಬೇಡಿಕೊಂಡ, ರೇಣುಕಾ ಮಾತೆ ಬದುಕಿದಳು ಹಾಗೂ ಕಾಮಧೇನುಗೋಸ್ಕರ ಅಧರ್ಮದಿ ತನ್ನ ತಂದೆಯ ಕೊಂದ ಓರ್ವ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನ ಕೊಂದು ತದನಂತರ ಇದಕ್ಕೆ ಪ್ರತೀಕಾರವಾಗಿ ಭೂಮಿಯ ಮೇಲಿನ ಎಲ್ಲಾ ಕ್ಷತ್ರಿಯರನ್ನು ೨೧ ಬಾರಿ ಮಾರಣಹೋಮ ನಡೆಸುವುದಾಗಿ ಪ್ರತಿಜ್ಞೆ ಮಾಡಿ ೨೧ ಬಾರಿ ಮಾರಣಹೋಮ ನಡೆಸಿ ಕೊನೆಗೆ ಶಾಂತನಾಗಿ ರಾಮ-ಕೃಷ್ಣರಿಗೇ ಪರೀಕ್ಷೆ ಮಾಡಿ ಅದೆಷ್ಟೋ ಕ್ಷತ್ರಿಯರಿಗೆ ತ್ರೇತಾಯುಗದಿಂದ-ದ್ವಾಪರಯುಗ-ಕಲಿಯುಗದವರೆಗೂ ತರಬೇತುಗಾರನಾಗಿ ಜೀವಿಸುತ್ತಿರುವ ಹಾಗೂ ಹತ್ತನೇ ಹಾಗೂ ಅಂತಿಮ ಅವತಾರವಾದ ಕಲಿಯುಗದ ಕಲ್ಕಿಯ ಗುರುವಾಗಿ ಮತ್ತೆ ಕಾಣಿಸಿಕ್ಕೊಳ್ಳುವ ಏಳು ಚಿರಂಜೀವಿಯರಲ್ಲೊಬ್ಬನಾದ ಸಾಕ್ಷಾತ್ ಮಹಾದೇವನ ಶಿಷ್ಯನಾದ ಓರ್ವ ಮಹಾಕ್ಷತ್ರಿಯನ ಯಶೋಗಾಥೆಯೇ ತಾತ್ಪರ್ಯವು. ಇದರಲ್ಲಿಯೂ ಅಹಂ ಇಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೭) ರಾಮ:
ಮನುಷ್ಯ ಪರಿಪೂರ್ಣತೆಗೊಳಗಾಗಿ ಹೇಗೆ ಬೆಳೆಯುವನೆಂಬುದರ ಕುರಿತಾಗಿ ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ತಂದೆಯಾದ ದಶರಥನ ಆಜ್ಞೆಯಂತೆಯೇ ಪಿತೃವಾಕ್ಯಪರಿಪಾಲನೆಗೋಸ್ಕರ ಹಾಗೂ ತನ್ನ ಚಿಕ್ಕಮ್ಮನ ದುರಾಲೋಚನೆಯ ಆಸೆಯಂತೆ ಎಲ್ಲಾ ರಾಜ್ಯ ಸುಖಗಳು-ಐಭೋಗಗಳನ್ನು ತ್ಯಜಿಸಿ ಪ್ರೀತಿಯ ತಮ್ಮ ಆದಿಶೇಷನವತಾರಿಯಾದ ಲಕ್ಷ್ಮಣ-ಮಡದಿ ಜಾನಕಿಯೊಂದಿಗೆ ವನವಾಸದೆಡೆಗೆ ಪಯಣ ಸಾಗಿಸಿ ಅದೆಷ್ಟೋ ಕಷ್ಟ ಅನುಭವಿಸಿ ಕೊನೆಗೆ ತನ್ನ ಪ್ರಿಯ ಹೆಂಡತಿಯನ್ನು ಪರಸ್ತ್ರೀಯಂದೂ ಕಾಣದೇ ಅಧರ್ಮದಿ ಮೋಹ-ಕಾಮಾಪೇಕ್ಷೆಯಿಂದ ಅಪಹರಿಸಿ ತನ್ನಧೀನದಲ್ಲಿರಿಸಿಕೊಂಡಿದ್ದ ಓರ್ವ ಮಹಾ ಬ್ರಾಹ್ಮಣ-ಪರಶಿವನ ಮಹಾಭಕ್ತನಾದ-ರಾಕ್ಷಸನಾದ ರಾವಣನನ್ನು ತನ್ನ ಅಯೋಧ್ಯೆಯ ಸೇನೆ ಸಹಾಯದ ಅಪೇಕ್ಷೆಯಿಲ್ಲದೇ ತನ್ನ ಪ್ರಿಯ ತಮ್ಮನಾದ ಲಕ್ಷ್ಮಣನ, ಸುಗ್ರೀವನ ವಾನರ ಸೇನೆಯ, ಮಹಾವೀರ-ರಾಮನ ಮಹಾಭಕ್ತ-ಏಳು ಚಿರಂಜೀವಿಯರಲ್ಲೊಬ್ಬನಾದ ರಾಮಭಂಟ ಹನುಮಂತನ, ಇನ್ನೋರ್ವ ಚಿರಂಜೀವಿಯಾದ ರಾವಣನ ತಮ್ಮನಾದ ವಿಭೀಷಣನ ಸಹಾಯದಿಂದ ಕೊಂದು ಸಕಲ ಸ್ತ್ರೀ ಕುಲದ ರಕ್ಷಣೆಯೆಂದೇ ಭಾವಿಸಿ ಮಾತೆ ಸೀತೆಯನ್ನು ರಾವಣನ ಲಂಕೆಯಿಂದ ಬಿಡುಗಡೆ ಮಾಡಿ ಅಯೋಧ್ಯೆಗೆ ಮರಳಿ ರಾಜನಾದನು, ಮಹಾ ವಿಷ್ಣುವಿನ ಪೂರ್ಣಾವತಾರನಾಗಿಯೂ ಸಹ ಮನುಷ್ಯನಾಗಿ ಭೂಮಿ ಮೇಲೆ ಹುಟ್ಟಿದ ಮೇಲೆ ಕಷ್ಟ ತಪ್ಪದೆಂಬುದು ವಿಧಿಯ ತಾಳಕ್ಕೆ ತಕ್ಕಂತೆ ಜೀವಿಸಲೇಬೇಕೆಂಬುದನ್ನು ತೋರಿಸಿ, ತಂದೆಗೆ ತಕ್ಕ ಮಗನಾಗಿ, ತಂದೆಯಾಗಿ, ಸಂಬಂಧಿಕನಾಗಿ, ಏಕ ಪತ್ನಿಯ ಪತಿಯಾಗಿ-ಸೀತೆಯ ರಾಮನಾಗಿ, ರಾಜನಾಗಿ, ಬಹಳ ಮುಖ್ಯವಾಗಿ 'ಮರ್ಯಾದ ಪುರುಷೋತ್ತಮ'ನಾಗಿ ಬಾಳಿ ಎಲ್ಲರಿಗೂ ಮಾದರಿಯಾದ ಓರ್ವ ಮಹಾಪುರುಷನ ಯಶೋಗಾಥೆಯನ್ನೇ ಮನುಷ್ಯರೆಲ್ಲರಿಗೂ ಆದರ್ಶವಾಗಲೆಂದು ವಾಲ್ಮೀಕಿಯು ಬರೆದನು 'ರಾಮಾಯಣ'- ಅದುವೇ ತಾತ್ಪರ್ಯವು. ಇದರಲ್ಲಿ ಹೆಣ್ಣಿನ ವ್ಯಾಮೋಹದಿಂದ ಅಧರ್ಮಕ್ಕೊಳಗಾಗುವವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೩) ದ್ವಾಪರಯುಗ
೮) ಕೃಷ್ಣ:
ಪರಿಪೂರ್ಣತೆಯೊಡನೆ ಅನಂತ ಬುದ್ಧಿವಂತಿಕೆಯ ಒಡೆಯನಾಗಿ ಬೆಳೆಯುವ ಮನುಷ್ಯನ ಕುರಿತಾಗಿ ಪರೋಕ್ಷವಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ತನ್ನ ಜನ್ಮ ಕೊಟ್ಟವರಾದ ದೇವಕಿ-ವಸುದೇವರೊಡನೆ ಒಂದು ಕ್ಷಣ ಕಳೆಯದೆ-ಬಾಲ್ಯ ಕೂಡ ಕಳೆಯದೆ, ತನ್ನನ್ನು ಹೆರದಿದ್ದರೂ ಸ್ವಂತ ತಾಯಿಯಾಗೇ ಪ್ರೀತಿ ಕೊಟ್ಟು ಸಾಕಿ ಬೆಳೆಸಿದ ಯೊಶೋಧೆಯ ತುಂಟ ಕೃಷ್ಣನಾಗಿ ಬಾಳಿ, ತಾನು ಪ್ರೀತಿಸಿದವಳಾದ ರಾಧೆಯೊಡನೆ ಮದುವೆ ಆಗದಿದ್ದರು ಅನಂತ ಪ್ರೇಮಕಥೆಯ ಪಾತ್ರಧಾರಿಯಾಗಿ ರಾಧೆಯ ಕೃಷ್ಣನಾಗಿ ಜೀವಿಸಿದ, ತನ್ನ ಎಂಟು ಪ್ರಿಯ ಪತ್ನಿಗಳೊಡನೆ ಪ್ರಿಯ ಪತಿಯಾಗಿ ಜೀವಿಸಿದ, ೧೬೦೦೦ ಸ್ರ್ತೀಯರನ್ನು ನರಕಾಸುರನ ವಧಿಸಿ ಕಾಪಾಡಿ ಸಮಾಜ ಅವರನ್ನು ಸ್ವೀಕರಿಸದಿದ್ದಾಗ ಪ್ರೀತಿಯಿಂದಲೇ ಅವರೆಲ್ಲರನ್ನೂ ಸಖಿಯರನ್ನಾಗಿಸಿ ಆಶ್ರಯ ನೀಡಿದ, ತನ್ನ ಪ್ರಿಯ ಅಣ್ಣನಾದ ಆದಿಶೇಷನವತಾರಿಯಾದ ಬಲರಾಮನೊಡನೆ ಜೀವಿಸಿದ, 'ಮಹಾಭಾರತ'ದಂತಹ ಮಹಾದೃಶ್ಯಕಾವ್ಯವನ್ನು ಜಗಕ್ಕೇ ಪರಿಚಯಿಸಿ, ಪಾಂಡವರ ಆಪ್ತನಾಗಿ ಬಾಳಿದ, ಒಡಹುಟ್ಟಿದವಳಲ್ಲದಿದ್ದರೂ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯು ಇಡೀ ಸ್ತ್ರೀ ಕುಲದ ನ್ಯಾಯ ರಕ್ಷಣೆಯಂದೇ ಭಾವಿಸಿ ಧರ್ಮಸ್ಥಾಪನೆಗೋಸ್ಕರ ಸ್ವಂತವರೆಂದೂ ಕಾಣದೇ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಮಧ್ಯ ಪಾಂಡವನಾದ ಆಪ್ತ ಅರ್ಜುನನ ಸಾರಥಿಯಾಗಿಯೇ ಧರ್ಮಯುದ್ಧವನ್ನೇ ಮುನ್ನೆಡೆಸಿ, ಅವನಿಗೆ ನಡೆಯುತ್ತಿರುವುದರ ಕುರಿತಾಗಿ ಕಳವಳವಿದ್ದಾಗ ಯುದ್ಧಭೂಮಿಯಲ್ಲಿಯೇ ಭಗವದ್ಗೀತೆಯ ಸಾಕ್ಷಾತ್ಕಾರಗೊಳ್ಳಿಸಿ ಹಾಗೆಯೇ ಕಲಿಯುಗದ ಜನರಿಗೆಲ್ಲರಿಗೂ ದಾರಿದೀಪವಾಗುವಂತೆ ಮುಂಗಡವಾಗಿಯೇ ಮಾಡಿ, ತನ್ನನಂತ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿ ಸತ್ಯದರಿವನ್ನು ಮೂಡಿಸಿ, ಕೊನೆಗೆ ಎಲ್ಲಾ ಮಹಾ ಯೋಧರನ್ನೂ ನಿಮಿತ್ತ ಮಾಡಿ ಮಹಾಯುದ್ಧದಲ್ಲಿ ಹೋರಾಡದಿದ್ದರೂ ಕೊನೆಗೆ ಅಧರ್ಮಿ ದುರ್ಯೋಧನನನ್ನು ಎರಡನೇ ಪಾಂಡವನಾದ ಬಲ ಭೀಮನ ಕೈಯಲ್ಲಿ ಕೊಲ್ಲಿಸಿ ಧರ್ಮವನ್ನೇ ಜಯಭೇರಿಯಾಗಿಸಿ, ಹುಟ್ಟಿದಾಗಿಂದಲು ಸಾವನ್ನು ತನ್ನ ಸ್ವಂತ ಸೋದರ ಮಾವನಾದ ಕಂಸನ ರೂಪದಲ್ಲೇ ಹೆದುರಿಸಿ, ಹೆಗಲೇರಿಸಿಕೊಂಡೇ ಬಾಳಿ ಕೊನೆಗೆ ಅವನನ್ನ ಕೊಂದು, ತನ್ನ ವಂಶಸ್ಥರಾದ ಯದುವಂಶಿಗಳನ್ನು ಗಾಂಧಾರಿಯ ಶಾಪದ ನಿಮಿತ್ತವಾಗಿ ಅವರವರೇ ನಾಶ ಮಾಡಿಕೊಳ್ಳೋ ಹಾಗೆ ಮಾಡಿ, ಕೊನೆಗೆ ರಾಮನು ವಾಲಿಯನ್ನ ಹಿಂದೆಯಿಂದ ಕೊಂದ ಕರ್ಮಕ್ಕೆ ಈ ಜನ್ಮದಲ್ಲಿ ವಾಲಿಯು ಬೇಟೆಗಾರನಾದ ಜಾರನಾಗಿ ತಾನು ದೇವರಾದರೂ ತನ್ನನ್ನು ಕೊಲ್ಲೋ ಹಾಗೇ ಮಾಡಿ ಕರ್ಮ ಸಿದ್ಧಾಂತದ ಕುರಿತಾಗಿ ತಿಳಿಸಿ, ತಾನು ಮಹಾವಿಷ್ಣುವಿನ ಪೂರ್ಣಾವತಾರವಾದರೂ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ತಪ್ಪದೆಂಬುದು ವಿಧಿಯ ತಾಳಕ್ಕೆ ಕುಣಿಯಲೇಬೇಕೆಂದು ಆದರೇ ಅದನ್ನ ಹೇಗೆಲ್ಲಾ ಹೆದುರಿಸಿ ಹೋರಾಡಬೇಕೆಂಬುದನ್ನು ತೋರಿಸಿ ತಾನು ಭೂಮಿಗೆ ಬಂದ ಕಾರ್ಯ ಮುಗುಸಿ, 'ಸಕಲ ಜಗಗಳ ಮಹಾಗುರು'ವಾದ, 'ಯುಗಯುಗಳ ಮಹಾಪುರುಷ'ನಾದ ಕೃಷ್ಣನ ಯಶೋಗಾಥೆಯನ್ನೇ 'ಮಹಾಭಾರತ'ವಾಗಿ ಭಗವಂತ ಶಿವನ ಮಗನಾದ ವಿದ್ಯಾಧಿಪತಿಯಾದ ಗಣೇಶನ ಕೈ ಬರಹದಲ್ಲಿ ಬರೆಸಿದನು ವೇದವ್ಯಾಸನು- ಅದುವೇ ತಾತ್ಪರ್ಯವು. ಇದರಲ್ಲಿ ಮನುಷ್ಯನ ಅಹಂ, ಹೆಣ್ಣಿನ-ಮಣ್ಣಿನ ವ್ಯಾಮೋಹಕ್ಕೊಳಗಾದ ರಕ್ತ ಸಂಬಂಧಿಕರಾದರೂ ಸಹ ಅಧರ್ಮ ಮಾಡಿದವರ ನಾಶವಾಗಿ ಧರ್ಮಸ್ಥಾಪನೆಯಾಗಿದೆ.
೪) ಕಲಿಯುಗ (ಕರಾಳಯುಗ)
೯) ಬುದ್ಧ:
ಮನುಷ್ಯ ಅತೀ ಬುದ್ಧಿವಂತನಾಗಿ ಅವನಲ್ಲಿ ಕ್ರೂರ ಹೆಚ್ಚಾದಾಗ ತಾಳ್ಮೆ, ಧರ್ಮ, ಶಾಂತಿಯ ಬೀಜ ಮರಳಿ ಅವನಲ್ಲಿ ಬಿತ್ತುವ ಪ್ರಯತ್ನವು ಪರೋಕ್ಷವಾಗಿ ತೋರಿಸಿರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಕಲಿಯುಗದ ರಾಜನಾದ ಮನುಷ್ಯರ ಒಳರಾಕ್ಷಸ ಕಲಿಯ ಪ್ರಭಾವದಿಂದ ವೇದ-ಪುರಾಣ-ಉಪನಿಷತ್ಗಳ ಮೇಲೆ ಜನರಿಗೆ ನಂಬಿಗೆ ಹೋದಾಗ ಶಾಂತಿ, ತಾಳ್ಮೆ ದಾರಿಯಲ್ಲಿ ಅವರನ್ನು ದಾರಿಗೆ ತರಲೆಂದೇ ಮಹಾ ವಿಷ್ಣು ಈ ಅವತಾರ ತಾಳಿದ ಹಾಗೂ ಅದುವೇ ಹಾಗಿದೆ ಈ ಅವತಾರದ ತಾತ್ಪರ್ಯವು. ಇದರಲ್ಲಿ ಮನುಷ್ಯನ ಎಲ್ಲಾ ದುರ್ಗುಣಗಳ ಒಳಗಿನಿಂದಲೇ ನಶಿಸಿ ಅವನಲ್ಲಿರೋ ಅಧರ್ಮ ನಾಶಮಾಡಿ ಧರ್ಮಸ್ಥಾಪನೆಯಾಗಿದೆ.
೧೦) ಕಲ್ಕಿ:
ಮನುಷ್ಯರ ಬುದ್ಧಿವಂತಿಕೆಯು ಅತಿರೇಕದ ಮಿತಿಮೀರಿದಾಗ, ಕಲಿಯುಗದ ರಾಜನಾದ ಮನುಷ್ಯರ ಒಳರಾಕ್ಷಸ ಕಲಿಯ ಅತೀವ ಪ್ರಭಾವದಿಂದ ಮಾನವೀಯತೆಯ ಗುಣಗಳನ್ನೇ ಮನುಜನು ಕಳೆದುಕೊಂಡು ಬಾಳುವಾಗ ಬುದ್ಧನ ಜ್ಞಾನದಿಂದ ಮೊದಲು ಸರಿಮಾಡೋ ಪ್ರಯತ್ನ ನಂತರ ಕೃಷ್ಣನ ಭಗವದ್ಗೀತೆಯಿಂದ ಸರಿಮಾಡೋ ಪ್ರಯತ್ನದ ಕುರಿತಾಗಿ ತೋರುವುದೇ ಈ ಅವತಾರದ ಪ್ರಮುಖ ತಾತ್ಪರ್ಯವು ಹಾಗೂ ಅದೇಗೆ ಕಾಲ ಸರಿದಂತೆ ಮನುಷ್ಯನ ಸ್ವಂತ ಶತ್ರುವಾದ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಜಯಿಸಲಾರಂಭಿಸುವುದೋ, ನಂತರ ಈ ಯುಗದ ಕೊನೆಯಲ್ಲಿ ಇದೇ ಯುಗದ ಮಹಾ ವಿಷ್ಣುವಿನ ದಶಾವತಾರದ ಕೊನೆಯ ಅವತಾರವಾದ ಮಹಾಯೋಧ ಮಹಾಜ್ಞಾನಿ ಕಲ್ಕಿಯ ಧರ್ಮಸ್ಥಾಪನೆಗೋಸ್ಕರ ಅಧರ್ಮದ ಸರ್ವನಾಶದಿ ಯುಗಾಂತ್ಯದ ಸಿದ್ಧಾಂತ, ನಂತರ ಮರಳಿ ಸತ್ಯಯುಗ ಸ್ಥಾಪನೆ ಕುರಿತಾಗಿ ತೋರುವುದೇ ಈ ಅವತಾರದ ತಾತ್ಪರ್ಯವು. ಇದರಲ್ಲಿ ಎಲ್ಲಾ ಮನುಷ್ಯನೊಳಗೇ ನೆಲೆಸಿಹ ಕಲಿಯುಗದ ರಾಜನಾದ ಮಹಾ ಬಲಶಾಲಿ ಕಲಿಯ ಅರಿಷಡ್ವರ್ಗಗಳ ಗುಣಗಳಿಂದ ಕೂಡಿದ ಅಧರ್ಮವನ್ನು ಏಳು ಚಿರಂಜೀವಿಗಳಾದ ಅಶ್ವತ್ಥಾಮ, ಮಹಾಬಲಿ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮರ ಸಹಾಯದಿಂದ ಅದರಲ್ಲೂ ಪರಶುರಾಮನು ಕಲಿಸುವ ವಿದ್ಯೆಯಿಂದ ಕಲ್ಕಿಯು ನಶಿಸಿ ಧರ್ಮಸ್ಥಾಪನೆ ಮಾಡುವನು...
----ಚಿನ್ಮಯಿ
![]() |
ಚಿತ್ರಕ್ಕೆ ಪದ್ಯ- ೮೪ |
ಎಲ್ಲರಿಲ್ಲಿ ಹುಳುಗಳೇ....
ಮುಂದಿನ ಚಿಟ್ಟೆ ರೂಪ ತಾಳೋ ಆಶಾಕಿರಣದೆಡೆಗೆ ಪಯಣಿಸೋ ಎಲ್ಲರಿಲ್ಲಿ ಹುಳುಗಳೇ....
ಹುಳುವಾಗೇ ಕೋಶಾವಸ್ಥೆಯಲ್ಲೇ ಜೀವಿಸಿ ಸಾಯುವುದೋ ಅಥವಾ ಚಿಟ್ಟೆಯಾಗಿ ಹೊರಹೊಮ್ಮಿ ಸ್ವಲ್ಪ ಕಾಲ ಬದುಕಿದರೂ ಸತ್ತ ನಂತರವೂ ಬದುಕುಳಿಯುವುದೋ—
ಆಯ್ಕೆ ನಮಗೇ ಬಿಟ್ಟಿದ್ದು...!?
"ರೂಪಾಂತರ" ಕನ್ನಡ ಚಲನಚಿತ್ರ ನೋಡಿದ ಮೇಲೆ ಪ್ರೇರಿತನಾಗಿ ಬರೆದ ಸಾಲುಗಳಿವು.
----ಚಿನ್ಮಯಿ
The impact on everybody that we created when we were alive must speak a lot after we die.
That's the greatest way of living the fullest life.
----Chinmayi
![]() |
ಚಿತ್ರಕ್ಕೆ ಪದ್ಯ- ೮೩ |
ಓ ಸಖಿಯೇ,
ಕೇಳೆನ್ನ ಸತಿಯೇ,
ನಿನ್ನೆದೆಯಂಗಳದೊಳು ಎನ್ನ ಕೊಳಲ ದನಿಯ ನಿನಾದ.
ಎನ್ನೆದೆಯಂಗಳದಿ ಪ್ರೇಮ ನಾದ ಲಹರಿಗಳು ಪ್ರಮೋದ.
ನೀನೆನ್ನ ರಾಧೆಯು.
ನಾನಿನ್ನ ಶ್ಯಾಮನು.
ಓ ಸಖನೇ,
ಕೇಳೆನ್ನ ಪತಿಯೇ,
ಸಾಕಿನ್ನು ಗೋಪಿಕೆಯರೊಡನೆಯ ರಾಸಲೀಲೆಯು.
ಬೇಕಿನ್ನು ನನ್ನೊಡನೆಯ ತುಂಟ ಪ್ರೇಮ ಲೀಲೆಯು.
ನೀನೆನ್ನ ಕೃಷ್ಣನು.
ನಾನಿನ್ನ ಭಾಮೆಯು.
ಓ ಪ್ರಿಯೆಯೇ,
ಓ ಪ್ರಿಯನೇ,
ನಮ್ಮನಂತ ಪ್ರೇಮಕಥೆಯ ಜಗಕ್ಕೇಳುವ ಬಾ.
ನೃತ್ಯ ಮಂಜರಿಯೊಡನೆ ಕುಣಿದು ನಲಿದಾಡುವ ಬಾ.
ನೀನೆನ್ನ ಲಕ್ಷ್ಮಿಯು.
ನೀನೆನ್ನ ವಿಷ್ಣುವು.
----ಚಿನ್ಮಯಿ
ನನ್ನಗಲಿಕೆಯ ಮುನ್ನವೇ—
ನಿಜವಾದ ಬದುಕಿನರ್ಥ ತಿಳಿದೆನು.
ಬದುಕುವುದೇಗೆಂದು ಕಲಿತು ಬದುಕಿದೆನು.
ನಾ ನಿಮಿತ್ತವಷ್ಟೇ ಇಲ್ಲಿ, ಇದಕ್ಕೆಲ್ಲಾ ಮೂಲ ಕಾರಣವಾದ ಭಗವಂತನಿಗೆ ನಾ ಚಿರಕಾಲ ಆಭಾರಿ.
----ಚಿನ್ಮಯಿ
ಹಾಲನ್ನು ಹೆಪ್ಪಾಕಿದರೆ ಮೊಸರಾಗುವುದು.
ಮೊಸರನ್ನು ಕಡೆದರೆ ಮಜ್ಜಿಗೆಯಾಗುವುದು.
ಮಜ್ಜಿಗೆಯನ್ನು ಇನ್ನೆಚ್ಚು ಕಡೆದರೆ ಬೆಣ್ಣೆಯಾಗುವುದು.
ಬೆಣ್ಣೆಯನ್ನು ಕಾಯಿಸಿದರೆ ತುಪ್ಪವಾಗುವುದು.
ಈ ಮೇಲಿನ ಪ್ರಕ್ರಿಯೆಯಂತೆ ಹಾಲು ಕೊಂಚ ಕೊಂಚವೇ ಸಮಯಕ್ಕನುಸಾರವಾಗಿ ಪರಿವರ್ತನೆಯಿಂದ ಹೊಸನುಭವಗೊಳಗಾಗುವುದು.
ಇದೇ ರೀತಿಯಲ್ಲಿ, ಮನುಷ್ಯ ಕೂಡ ಸಮಯಕ್ಕನುಸಾರವಾಗಿ ಪರಿವರ್ತನೆಗೊಳಗಾಗಿ ಬದುಕಿನೊಸನುಭವ ಅನುಭವಿಸಿದರೇನೆ ಬದುಕು ಪರಿಪೂರ್ಣ.
----ಚಿನ್ಮಯಿ
Right from our childhood if we start studying, understanding, analysing, decoding and revising our great epic and ancient writings, then I hope we can limit ourselves to depend upon external Guru's for seeking truth, knowledge and wisdom of life.
Because, when we practice and adapt those teachings in our lives, our inner self (GOD) will become our ultimate Guru and will teach everything to us.
----Chinmayi
![]() |
ಚಿತ್ರಕ್ಕೆ ಪದ್ಯ- ೮೦ |
ಅವಳ ಪ್ರೇಮ. ಹೃದಯ ಧಾಮ.
ಅವಳ ನೆನಪು. ಮನದ ಹೊಳಪು.
ಅವಳೋ ರೂಪರಾಶಿ. ಅವಳೇ ರೂಪದರ್ಶಿ.
ಸೌಮ್ಯ ಲತೆಗಳೇ ಕೇಶವು. ಎರಡು ದಿವ್ಯಾಸ್ತ್ರಗಳೇ ಹುಬ್ಬು.
ಕೆಂದಾವರೆಯೇ ನಯನಗಳು. ರಮ್ಯ ಕಾಂತಿಯು ನೋಟವು.
ಇಬ್ಬನಿಯೇ ಮೊಗದ ಸಿಗ್ಗು. ನಗುವು ಅರಳೋ ಮೊಗ್ಗು.
ಅಧರ ಕುಸುಮ ಜೇನೆ. ಭ್ರಮರ ಎಂದೂ ನಾನೆ.
ಅವಳೋ ಪ್ರೇಮದರಸಿ. ಅವಳೇ ಹೃದಯವಾಸಿ.
ಕೊರಳ ದನಿ ಕೊಳಲ ಇಂಚರ. ನಡುವ ಬಳುಕು ಅಮೋಘ ಸಾಗರ.
ಬೆರಳಸ್ಪರ್ಷವೇ ಕೆನ್ನೆಗಾವಲು. ಪಾದಗುರುತೇ ಕಾಯಂ ಅಮಲು.
ಹೃದಯ ನಿರ್ಮಲ ದೇವಸ್ಥಾನ. ಮನಸ್ಸು ಅನಂತ ಚೇತನ.
ಅವಳೆನ್ನ ಬದುಕ ಅಧ್ಯಾಪಕಿಯು. ಅವಳನುರಾಗವೇ ಅಧ್ಯಯನವು.
ಅವಳ ಪ್ರೇಮ. ಸುಧೆಯ ಸುಮ.
ಮಧುರ ನೆನಪು. ಅಗಣಿತ ಬೆಳಕು.
----ಚಿನ್ಮಯಿ