Wednesday, December 21, 2022

ತೆಗಳಿಕೆ <-> ಹೊಗಳಿಕೆ

ಸೇವಿಸಿದರೆ ತೆಗಳಿಕೆಯೆಂ ಖಾದ್ಯ,

ಹೊಗಳಿಕೆಯಿಂ ಬೆಳವಣಿಗೆ ಸಾಧ್ಯ.

          ----ಚಿನ್ಮಯಿ

Wednesday, December 14, 2022

ಕಾಮ..ಪ್ರೇಮ..

ಮನಸ್ಸಿಗೆ ಕಾಮದೂಟ ಉಣಿಸಿದರೆ ಮನುಷ್ಯನಾಗುವನು ಕಾಮಾಸುರ.

ಮನಸ್ಸಿಗೆ ಪ್ರೇಮದೂಟ ಉಣಿಸಿದರೆ ಮನುಷ್ಯನ ಹೃದಯ ಪ್ರೇಮ ಮಂದಿರ.

              ----ಚಿನ್ಮಯಿ

Sunday, December 11, 2022

ಮಳೆಗಾಲದ ಬೆಂಗಳೂರಿನ ಕಷ್ಟದ ಕಥೆಗಳು

ಅಂಕು-ಡೊಂಕಿನ ರಸ್ತೆಯ ಮೇಗಡೆ ದಿನವೂ ಸವಾರಿ.

ಗಾಡಿ ಜೊತೆ ಬಾಡಿ ಬೌಂಸಿಂಗ್ ಹ್ಯಾಂಡಲ್ ಸ್ವಿಂಗಿಂಗ್.


ಬೇಸಿಗೆ-ಚಳಿಗಾಲದಲ್ಲಿ ಪರವಾಗಿಲ್ಲ ರಸ್ತೆ ಕಾಣುವುದು,

ಬೈಕ್-ಕಾರ್ ಓಡ್ಸ್ಬೋದು.

ಮಳೆಗಾಲದ ಕಥೆಯೇ ಬೇರೆ,

ಆಗಲೇ ಉದಯಿಸುವುದು ಸಿಟ್ಟಿನ ಮೋರೆ.


ಗಾಡಿ ಓಡ್ಸೋ ಕಷ್ಟಕ್ಕೆ ಆಗಾಗ ನೆನೆಸ್ಕೊಂಡ್ ನೆನೆಸ್ಕೊಂಡ್ ಉಗಿಯುವೆವು,

"ಎಂಎಲ್ಎ - ಎಂಎಲ್ ಸಿ - ಎಂಪಿ" ಗಳಿಗೆ "ಥೂ ಬ್ಯಾವರ್ಸಿಗಳ ನಿಮ್ಮ್ ಮಕ್ಕೆ, ಉದ್ದಾರ ಆಗಕ್ಕಿಲ್ಲ ದ್ಯಾವ್ರಾಣೆ" ಎಂದು.


        ----ಚಿನ್ಮಯಿ