Thursday, June 29, 2023

ಅಪ್ಪುಗೆ...

ತಣ್ಣನೆಯ ಗಾಳಿಯೊಡನೆ ಆ ರವಿಯ ಬಿಸಿ ಶಾಖ ಸೇರಿ ಸುಖದ ಭಾಸವಾದಂತೆಯೇ—

ಈ ವಿರಹದ ಬೇಗುದಿಯಲಿ ಬೇಯುತ್ತಿರುವ ಹೃದಯಕ್ಕೆ ಆಕೆಯ ಸನಿಹದ ಅಪ್ಪುಗೆ...


      ----ಚಿನ್ಮಯಿ 

Tuesday, June 20, 2023

Complete Human

Sanathana Dharma teaches us everything for living a life, but one must follow these below three steps to become a "Complete Human"—


As the first step, the one who decodes it.

As the second step, the one who learns from it.

As the third and final step which is most important, the one who follows and practices it in life.


      ----Chinmayi

ಆತ್ಮ ತೃಪ್ತಿ

ತನು-ಮನ-ಹೃದಯ ತೃಪ್ತಿಗಿಂತ ಆತ್ಮ ತೃಪ್ತಿ ಬಹಳ ಮುಖ್ಯ.

             ----ಚಿನ್ಮಯಿ

Take a STAND. Be a CHANGE.

Inject kindness and good thinking inside everyone's mind by helping others or being there for them in their tough times not only who you know even for unknown people also,

then automatically everyone starts—

believing in Humans,

believing in Humanity,

believing in Good and

most importantly believing in God.

         ----Chinmayi

Monday, June 19, 2023

ನಿಮಿತ್ತ

ಚಿತ್ರಕ್ಕೆ ಪದ್ಯ: ೬೮

ಅರ್ಜುನನಂತೆ ಧರ್ಮವಂತನಾದರೇ—


ಮುಂದೆ ಶ್ರೀ ಕೃಷ್ಣ (ಮಹಾವಿಷ್ಣು) ಇದ್ದು,

ಹಿಂದೆ ಆಂಜನೇಯ (ಮಹಾದೇವ) ಇದ್ದು ಹಾಗೂ

ಬ್ರಹ್ಮಾಸ್ತ್ರ (ಬ್ರಹ್ಮದೇವನ ವರದಾನವಾದ ಅಸ್ತ್ರ) ಸಹಾಯದಿಂದ- 

ತ್ರಿಮೂರ್ತಿಗಳ ಆಶೀರ್ವಾದದಿಂದ  "ನಿಮಿತ್ತ"ರಾಗಿ ಧರ್ಮಯುದ್ಧದಲ್ಲಿ ಗೆಲ್ಲುವುದು ಖಚಿತ...


      ----ಚಿನ್ಮಯಿ

Pressure

Things are broken from various External Pressure.

Mind and Heart are broken from our own Internal Pressure.

         ----Chinmayi

Sunday, June 18, 2023

ಸರ್ವ ಶ್ರೇಷ್ಠ ವ್ಯಕ್ತಿತ್ವ

ತನ್ನ ಬಳಿ ಏನೂ ಇಲ್ಲದಿದ್ದರೂ ಅಥವಾ ಸ್ವಲ್ಪವೇ ಇದ್ದರೂ, ಕೊಂಚವು ಯೋಚಿಸದೇ-ಏನನ್ನೂ ಅಪೇಕ್ಷಿಸದೇ ದಾನ ಮಾಡುವವ—

ತನಗೆಷ್ಟೇ ಕಷ್ಟ ಬಂದರೂ, ಅದೇನೇ ಆದರೂ ದೇವರನ್ನು ನಂಬುವವ—


ಈ ಮೇಲಿನೆರಡು ಗುಣವುಳ್ಳವರು ಸರ್ವ ಶ್ರೇಷ್ಠರು ಅಖಂಡ ವಿಶ್ವಗಳಲ್ಲಿಯೂ...


    ----ಚಿನ್ಮಯಿ

Sunday, June 11, 2023

ತಂದೆ

ತಾಯಿ ಹೆತ್ತರು, ತಂದೆಯ ಕಂಗಳಲಿ ಆನಂದಭಾಷ್ಪ.

ಪುಟ್ಟ ಕೈ ಕಾಲುಗಳ ಮೆಲ್ಲನೆ ತಾಕುತ ಅನುಭವಿಸುವವ- ಅಪ್ಪ.


ಎತ್ತಾಡಿಸಿ, ಕೈ ಹಿಡಿದು ನಡೆಸಿ, ಹೆಗಲೇರಿಸಿ ತೋರಿದರು ಪ್ರಪಂಚ-

ಅದೇನೇ ಕಂಡರು ಅವರ ಆ ನಗುವೊಂದೇ ಸುಂದರ ಪ್ರಪಂಚ.


ತುಂಬು ಹೃದಯದಿ ಪ್ರೇಮ ಧಾರೆಯೆರೆದು ಕೋಪದಿಂದಲೇ ಪ್ರೀತಿಸೋ ಏಕೈಕ ವ್ಯಕ್ತಿ.

ಬೇಕು ಬೇಡವ ತಿಳಿದು ತನಗೆ ಕಷ್ಟವಾದರೂ ಇಷ್ಟದಿ ಕೊಡಿಸೋ ಮಹಾನ್ ಶಕ್ತಿ.


ಮನೆಯನ್ನು ಒಬ್ಬರೇ ಮುನ್ನಡೆಸಿ ತನಗೆಷ್ಟೇ ದುಃಖವಿದ್ದರೂ ತೋರದ ಜೀವ.

ಮನೆಯವರ ಸುಖ ಸಂತೋಷವಷ್ಟೇ ಅವರ ಬಾಳಿನ ಮುಖ್ಯ ಧ್ಯೇಯ.


ಬಾಳಿನುದ್ದಕ್ಕೂ ಬೆವರಿಳಿಸಿ ದುಡಿದ ಅಪ್ಪನಿಗೇ ಸರಿಸಾಟಿ ಯಾರಿರಲು ಸಾಧ್ಯ!

ಆ ಪವಿತ್ರ ಬೆವರಿಂದಲೇ ಈ ದೇಹ ಬೆಳೆದು ಜೀವದ ಉಸಿರಾಗಿರುವುದು ಪರಮ ಸತ್ಯ.


ತಾಯಿ ಮಕ್ಕಳಿಗೆ ಗುರುವಾದರೇ ತಂದೆಯೇ ಕುಟುಂಬಕ್ಕೆ ಗುರುವು.

ತಾಯಿ ಆತ್ಮವಾದರೇ ತಂದೆಯೇ ಆತ್ಮದಲ್ಲಡಗಿಹ ಪರಮಾತ್ಮನು.


         ----ಚಿನ್ಮಯಿ

Monday, June 5, 2023

ಹೃದಯ-ಮನಸ್ಸಿನ ಕದನ

ಚಿತ್ರಕ್ಕೆ ಪದ್ಯ- ೬೭

ಹೃದಯ ಮೈಮರೆತಾಗ

ಮನಸ್ಸು ಮೌನವ್ರತ.

ಹೃದಯ ಮೋಸ ಹೋದಾಗ

ಮನಸ್ಸು ಜಾಗೃತ.


     ----ಚಿನ್ಮಯಿ

Thursday, June 1, 2023

ಅನುಮಾನದ ದ್ವಂದ್ವತೆ...

ಅನುಮಾನದ ಬೆಳಕಿನಲ್ಲಿ

ಸತ್ಯದ ನೆರಳು—

ಪ್ರೀತಿ-ನಂಬಿಕೆಗಳ ಗೋರಿಯೊಳಗೆ...


ಅನುಮಾನದ ಬೆಳಕಿನಲ್ಲಿ

ಪ್ರೀತಿ-ನಂಬಿಕೆಯು—

ಸುಳ್ಳಿನ ನೆರಳಿನ ಗೋರಿಯೊಳಗೆ...


     ----ಚಿನ್ಮಯಿ