Monday, November 16, 2020

ಈ ಸಂಜೆ...

ಚಿತ್ರಕ್ಕೆ ಪದ್ಯ-೫೩

ಗಿಡ-ಮರ, ಅಂಬರದ ಬಿಂಬವ

ಪ್ರತಿಬಿಂಬಿಸಿತು ತಿಳಿ ನೀರು.

ತಿಳಿ ನೀರನ್ನು ಕದಡಿದಾಗ ನಾನು

ಪ್ರತಿಬಿಂಬವಾಯಿತು ನುಚ್ಚು ನೂರು. 


ಪ್ರತಿಬಿಂಬ ಮರುಕಳಿಸಿದಾಗ

ನಗುವಿನ ಕಾಂತಿಯು ಕಣ್ತುಂಬ.

ನಾ ಕಣ್ತುಂಬಿಕೊಂಡ ಕಾಂತಿಯ

ತೋರಿಸಿತು ಎನ್ನಯ ಪ್ರತಿಬಿಂಬ.


ಮೋಡಗಳ್ಹಿಂದೆ ರವಿ ಮಲಗಿದಾಗ

ಮೆಲ್ಲನೆ ಶಶಿಯು ಉದಯಿಸಿದ.

ಶಶಿಯು ಬಂದು ಸಂಜೆಯ ಅಳಿಸಿ

ಬೆಳಕಿನ ನಕ್ಷತ್ರಗಳೊಡನೆ ಸೇರಿದ.


ಈ ಸುಮಧುರ ಸಂಜೆಯ ಅತ್ಯದ್ಭುತ

ವೀಕ್ಷಣೆಯನ್ನು ಸೆರೆಹಿಡಿದ ನಾ ಧನ್ಯ.

ಮರುಕ್ಷಣವೇ ಸತ್ತರೂ, ಈ ಸಂಜೆಗೋಸ್ಕರ

ಮರಳಿ ಜನಿಸುವುದು ಎನ್ನ ಜೀವ.

           ----ಚಿನ್ಮಯಿ

Saturday, November 14, 2020

ನೆರವಾಗು

ಚಿತ್ರಕ್ಕೆ ಪದ್ಯ- ೫೨


ನೀ ನೆರವಾಗಿ

ನೊಂದ ಜೀವಕ್ಕೆ,

ನಗುತಲೇ ಬೆಳಗಿಸು

ಆರಿದ ಹಣತೆಯ.

ಕಷ್ಟದಲ್ಲಿರುವ ಕೈಗಳ

ಹಿಡಿದು ಮುನ್ನಡೆಸಿ,

ಜೀನನಾಗದೆ ನೀ

ಚೆಲ್ಲು ಮಮತೆಯ.


ನೀ ನೆರವಾಗಿ

ನಿಂತು ಹಿಮ್ಮೆಟ್ಟದೆ,

ಬೆಳಸಿ ಬೆಳಗಿಸು

ಕುಗ್ಗಿರುವ ಜೀವನವ.

ಅಸೂಯೆಯ ನೀ

ಕೊಂಚವು ತೋರದೆ,

ಮತ್ತೊಬ್ಬರ ನಗುವಿಗೆ

ಕಾರಣವಾಗೋ ಮಾನವ.


ನೀ ನೆರವಾದರೆ

ಮಾನವ ಕುಲಕ್ಕೆ,

ಮಾನವೀಯತೆಯಿಂದ

ನಿನ್ನ ಬಾಳು ವಿಫುಲ.

ಹೊಡೆದ ಮನಸ್ಸುಗಳ

ಮತ್ತೊಮ್ಮೆ ಕೂಡಿಸಿ,

ಬದುಕನ್ನು ಮಾಡು

ಇನ್ನೂ ಕೊಂಚ ಸರಳ.

        ----ಚಿನ್ಮಯಿ

Tuesday, November 10, 2020

ಈಗಿನ ಹಾಗು ಮುಂದಿನ ತಲೆಮಾರುಗಳಿಗೊಂದು ತುಸು ಕಿವಿ ಮಾತು.

ತಲೆಮಾರುಗಳು ಉರುಳಿದಂತೆ ಜನರ ಅಭಿರುಚಿ ಬದಲಾಗುತ್ತಿರುವುದು ಹಾಗು ಓದುಗರ, ಕೇಳುಗರ ಸಂಖ್ಯೆಯು ಪತನವಾಗುತ್ತಿರುವುದು ತೀರ ದುಃಖದ ವಿಷಯವಾಗಿದೆ.

ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಒಬ್ಬರು ಸಹ ಓದುಗರು, ಕೇಳುಗರು ದೊರಕದೆ 'ಡಿಜಿಟಲ್' ಹಾಗು 'ಎಲೆಕ್ಟ್ರಾನಿಕ್ಸ್' ಪ್ರಪಂಚ ಎಂಬ ಜಾಲದಲ್ಲಿ ಸಿಲುಕಿ ಕೊಳೆತು ನಾರುವುದಂತು ಖಚಿತವಾಗಿದೆ. ಇನ್ನಾದರು ಹೆಚ್ಚೆತ್ತು ಆದಷ್ಟು ಸಮಯ ಪುಸ್ತಕಗಳನ್ನು ಓದವುದರಲ್ಲಿ, ಹಳೆಯ ಹಾಡುಗಳನ್ನು ಕೇಳುವುದರಲ್ಲಿ ಕಳೆಯಬೇಕೆಂದು ವಿನಂತಿಸುತ್ತೇನೆ. ಹಾಗೆಯೇ ವಿವಿಧ ಸ್ಥಳಗಳನ್ನು ಸುತ್ತಿ ವಿವಿಧ ಜನಗಳ ಪರಿಚಯ ಮಾಡಿಕೊಂಡು ಬದುಕಿನ ನಿಜವಾದ ಸಾರವನ್ನು ಅನುಭವಿಸಬೇಕೆಂದು ಹೇಳಲು ಇಚ್ಛಿಸುತ್ತೇನೆ.

              ----ಚಿನ್ಮಯಿ

Monday, November 9, 2020

ಸಮಯ

ಚಿತ್ರಕ್ಕೆ ಪದ್ಯ-೫೧


ಮುಂಜಾನೆ ಎದ್ದು ದಿನಚರಿ

ಶುರುಮಾಡುವುದರಲ್ಲಿದೆ ವಿನಯ,

ಏಳದಿದ್ದರೆ ಹಿಂಸಾತ್ಮಕವಾಗಿ

ಖಂಡಿತ ಎಬ್ಬಿಸುವುದು ಸಮಯ.


ಅಮ್ಮ, ಎದ್ದೇಳೋ ಎಂದೊಡನೆ

ಎದ್ದು ತಿಂಡಿಯ ತಿನ್ನಬೇಕು ಗೆಳೆಯ,

ಇಲ್ಲವಾದಲ್ಲಿ ಗ್ರಹಚಾರವು ಕೆಟ್ಟು

ಬೈದರೆ ಪೊಳ್ಳಾಗುವುದು ಸಮಯ.


ಅಸಡ್ಡೆಯಿಂದ ವರ್ತಿಸದೆ ನೀ

ಕೇಳು ನಾ ಹೇಳುವ ಒಂದು ವಿಷಯ,

ಸಮಯದ ಮಹತ್ವ ಇನ್ನಾದರೂ

ಗ್ರಹಿಸು ಮೀರುವ ಮುಂಚೆ ಸಮಯ.

             ----ಚಿನ್ಮಯಿ

Wednesday, November 4, 2020

ಕಡಲ ತೀರದಿ ಮುಸ್ಸಂಜೆ

ಚಿತ್ರಕ್ಕೆ ಪದ್ಯ-೫೦

ಕಡಲ ತೀರದಿ ನೇಸರನು

ಮಬ್ಬಾಗುವಂತಹ ಸಮಯ.

ಅವನ ನೋಡಲು ಕಾತರದಿ

ಒಳ ಸೂರ್ಯನು ಉದಯ.


ಕೆಂಗಣ್ಣ ಭಾಸ್ಕರನು ದಿಟ್ಟಿಸಿ

ನೋಡುತ್ತಿದ್ದಾಗ ನನ್ನನ್ನೇ.

ನಾನೊಮ್ಮೆ ಬಿಂಬಗ್ರಾಹಿಯಿಂದ

ಸೆರೆಹಿಡಿದೆ ಅವನನ್ನು ಮೆಲ್ಲನೆ.


ಸುತ್ತಲಿರುವ ಪರಿಸರದೊಡನೆ

ಪರಿಚಯಿಸಿದಾಗ ಎನ್ನನು ಕಡಲು.

ನಾ ಹಾಗೆ ನಿಂತುಬಿಟ್ಟೆ ವೀಕ್ಷಿಸುತ್ತ

ರವಿ ಸೇರುವ ಕಡೆಮುಗಿಲು.

               ----ಚಿನ್ಮಯಿ

Sunday, November 1, 2020

ಅಮ್ಮ ಹಚ್ಚಿದೊಂದ್ ಹಣತೆ

ಚಿತ್ರಕ್ಕೆ ಪದ್ಯ-೪೯

ಅಮ್ಮ ಹಚ್ಚಿದೊಂದ್ ಹಣತೆ

ಮನೆಯಂಗಳವನ್ನು ಬೆಳಗಿತು.

ಎಲ್ಲರೊಂದೆಂಬ ಸಮತೆ

ಎದೆಯಂಗಳದಿಂದ ಹರಿಸಿತು. 


ಕಗ್ಗತ್ತಲ ಸರಿಸಿ ಬೆಳಕಿನೆಡೆಗೆ

ಕರೆದೊಯ್ಯಿತೀಗ ಹಣತೆ.

ದಾರಿ ಕಾಣದ ಎನಗೆ ಹೆದ್ದಾರಿ

ತೋರಿ ಜ್ಞಾಪಿಸಿತು ಸರಳತೆ.

            ----ಚಿನ್ಮಯಿ

Saturday, October 31, 2020

ಶಿಕ್ಷಣ ಮತ್ತು ಆರೋಗ್ಯ- ಎಲ್ಲರ ಮೂಲಭೂತ ಹಕ್ಕುಗಳು ಹಾಗು ಸೌಕರ್ಯಗಳು.

ಶಿಕ್ಷಣ ಮತ್ತು ಆರೋಗ್ಯ ಎಲ್ಲರ ಮೂಲಭೂತ ಹಕ್ಕುಗಳು ಹಾಗು ಎಲ್ಲರಿಗೂ ಒದಗಿಸುವಂತಹ ಮೂಲಭೂತ ಸೌಕರ್ಯಗಳು, ದುಡ್ಡು ಮಾಡೋ ಮಾರ್ಗವಲ್ಲ.

ಜನಗಳ ಆರ್ಥಿಕ ಸ್ಥಿತಿ, ಭಯ ಹಾಗು ಅಸಹಾಯಕತೆಯನ್ನು ಮೂಲ ಬಂಡವಾಳ ಮಾಡಿಕೊಂಡು ಇಲ್ಲ-ಸಲ್ಲದ ಕಾರಣಕ್ಕೆಲ್ಲಾ ವಿಪರೀತ ದುಡ್ಡನ್ನು ಕೊಳ್ಳೆ ಹೊಡೆಯುತ್ತಿರುವ ನಾಚಿಕೆಗೇಡಿನ ಸರ್ಕಾರಕ್ಕೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗು ಆರೋಗ್ಯ ಕೇಂದ್ರಗಳಿಗೆ ನನ್ನ ಧಿಕ್ಕಾರ ಸದಾ ಇರುತ್ತದೆ.

            ----ಚಿನ್ಮಯಿ

Sunday, October 25, 2020

Humanity is the true religion

When you were born you didn't know which caste and religion you belonged to until your parents, relatives and society added the name tag to you that you belong to this caste, religion etc. 

So learn to live as a human first and follow humanity.

Caste, religion etc were created by humans and hence Just follow the orders of God and live the life peacefully which he has given to us.

                   ----chinmayi

Saturday, October 24, 2020

Electronics- An Ocean of enjoyment in learning

ಚಿತ್ರಕ್ಕೆ ಪದ್ಯ/ಉಲ್ಲೇಖ- ೪೮


According to me, Electronics is like an Ocean. If one learns to dive into it and swim and gets deeper into it, then he/she can enjoy to the fullest and survive easily in the beautiful ocean of electronics.

                     ----chinmayi

Friday, October 2, 2020

ಮಳೆರಾಯನ ಆರ್ಭಟ

ಚಿತ್ರಕ್ಕೆ ಪದ್ಯ-೪೭

ನೀ ನಿಲ್ಲಯ್ಯ ಮಳೆರಾಯ,

ನಿಂತು ಕರುಣೆ ತೋರಿಸಯ್ಯ,

ಹೀಗೇ ನೀ ಅಬ್ಬರಿಸಿದರೆ ಹೇಗಯ್ಯ!?

ಶಾಂತನಾಗೋ ವರುಣದೇವ,

ತಾಳಲಾರೆವು ನಿನ್ನೀ ಆರ್ಭಟವ,

ಪಾಪವ ತೊಳೆದು ಒಮ್ಮೆ ಸುಮ್ಮನಾಗಯ್ಯ.


ದಿನನಿತ್ಯ ಕರ್ಮಗಳು ನಿಂತಿವೆ,

ಜೀವನ ಬಹಳ ಕಷ್ಟಕರವಾಗಿದೆ,

ದಯಮಾಡಿ ನಮ್ಮ ಅಜ್ಞಾನವ ಕ್ಷಮಿಸು.

ಕ್ಷಮೆ ಸ್ವೀಕರಿಸಯ್ಯ ಇಂದ್ರದೇವ,

ವರುಣದೇವನನ್ನು ನಿಯಂತ್ರಿಸು,

ಮರಳಿ ಒಮ್ಮೆ ಧರಿತ್ರಿಯನ್ನು ಸಂತೈಸು.

        ----ಚಿನ್ಮಯಿ

Saturday, September 26, 2020

ಕತ್ತಲಿಂದ ಬೆಳಕಿನೆಡೆಗೆ...!

ಚಿತ್ರಕ್ಕೆ ಪದ್ಯ-೪೬

ಹಗಲಿಂದು ಕಗ್ಗತ್ತಲಾಗಲು,

ಒಳ ಸೂರ್ಯನು ಮಂಕಾದನು,

ಕರಿ ಮೋಡಗಳ ಗೋಡೆಯ ಕಾರಣ!

ಕತ್ತಲೆಯಲ್ಲೂ ಬೆಳದಿಂಗಳಂತೆ,

ನಗೆಯ ಕಾಂತಿಯ ಚಿಮ್ಮಿಸಿದನು,

ಮೋಡಗಳ್ಹಿಂದಿರೋ ಹೊಂಗಿರಣ.


ಕಂಗೆಟ್ಟು ಜೀವನ ಸಾಕಾಗಿ,

ಸೋಲೊಪ್ಪಿ ಸಾಯಬೇಕೇ,

ಎದುರಿಸದೆ ಜೀವನದ ಕಾದಾಟ?

ಯೋಚನೆ ನೂರೆಂಟಿದ್ದರು,

ಸಾಧಿಸೋ ಛಲವಿದ್ದರೆ ಸಾಕು,

ಧರೆಯಾಗುವುದು ನಿಜ ವೈಕುಂಠ.

            ----ಚಿನ್ಮಯಿ

Tuesday, September 22, 2020

ಬೇಲಿಯಾಚೆಯ ಪಿರುತಿ

ಚಿತ್ರಕ್ಕೆ ಪದ್ಯ-೪೫

ಬೇಲಿ ದಾಟಿಹನು,

ಪಾಂಡುವರ್ಣನು.

ನಾಚಿ ನಿಂತಿಹಳು, 

ಕೆಂದು ನಲ್ಲೆಯು.


ನಡುವೆ ಅಂತರಕ್ಕೆ,

ಏನೇ ಇರಲಿ ಕಾರಣ‌.

ಜೇನುನೊಣದಿಂದಲೇ,

ಆಗುವುದಿವರ ಮಿಲನ.

   ‌‌‌‌     ----ಚಿನ್ಮಯಿ

Sunday, September 20, 2020

ಓ ಹೃದಯವೇ...!

ಒಂದೇ ನೋಟದಲ್ಲೇ ಇಷ್ಟಪಡುವೆ,

ಇಷ್ಟಪಟ್ಟ ಮೇಲೆ ಪ್ರೀತಿ ಮಾಡುವೆ.

ಓ ಹೃದಯವೇ ನೀ ಏಕೆ ಹೀಗೆ?


ಇಷ್ಟಪಟ್ಟವರು ಜೊತೆಯಿದ್ದಾಗ ಖುಷಿ ಪಡುವೆ,

ಬಿಟ್ಟೋದಾಗ ನಗೆಯನ್ನು ಮಾಯವಾಗಿಸುವೆ.

ಓ ಹೃದಯವೇ ನೀ ಏಕೆ ಹೀಗೆ?


ತುಂಬಾ ಬೇಗ ಎಲ್ಲರನ್ನೂ ಹಚ್ಚಿಕೊಳ್ಳುವೆ,

ನಂತರ ಸುಮ್ಮನೆ ನೋವು ಪಡುವೆ.

ಓ ಹೃದಯವೇ ನೀ ಏಕೆ ಹೀಗೆ?


ಇರಬಹುದಿತ್ತಲ್ಲವೇ ನೀ ಕಲ್ಲು ಬಂಡೆಯ ಹಾಗೆ!

ಏಕೆ ನೀ ಇರುವೆ ಮೃದು ಹೂವಿನ ಹಾಗೆ!?

ಓ ಹೃದಯವೇ ನೀ ಏಕೆ ಹೀಗೆ?


ಭಾವನೆಗಳನ್ನು ಬದಿಗಿಟ್ಟು ಮಾತಾಡೊಮ್ಮೆ,

ಉತ್ತರಿಸು ನನ್ನ ಪ್ರಶ್ನೆಗಳಿಗೆಲ್ಲಾ ನೀನೊಮ್ಮೆ!

ಓ ಹೃದಯವೇ ನೀ ಏಕೆ ಹೀಗೆ?

         ----ಚಿನ್ಮಯಿ

Saturday, September 19, 2020

ಸಂಗೀತ<->ಸಾಹಿತ್ಯ

ಸಂಗೀತ ಹಾಗು ಸಾಹಿತ್ಯ ಒಂದೇ ಭಾವದ ಎರಡು ಮುಖಗಳು.

ಸಂಗೀತವು ದೇಹವಾದರೆ, ಸಾಹಿತ್ಯವು ಅದರ ಆತ್ಮ.

ಸಾಹಿತ್ಯವು ದೇಹವಾದರೆ, ಸಂಗೀತವು ಅದರ ಆತ್ಮ.

ಒಂದಿಲ್ಲದಿದ್ದರೆ ಇನ್ನೊಂದು ನಿರ್ಜೀವ (ಆತ್ಮವಿಲ್ಲದ) ದೇಹವಿದ್ದಂತೆ.

             ----ಚಿನ್ಮಯಿ

ಮೂರನೆ ಸ್ವಂತ ಸಾಹಿತ್ಯ ಬರವಣಿಗೆ

ಚಿತ್ರಕ್ಕೆ ಪದ್ಯ/ಹಾಡು- ೪೪

ಹಾಡು: RCB Fan Anthem 2020.

ಸಾಹಿತ್ಯ: ಚಿನ್ಮಯಿ (ಹರೀಶ್ ಟಿ ಹೆಚ್).


ಸೋಲೇ ಇರಲಿ RCB.

ಗೆಲುವೇ ಇರಲಿ RCB.

ನೀವೇ ಇರುವಿರಿ ಮನದಲ್ಲಿ.

ನಮ್ಮ ಉಸಿರು RCB.

ನಮ್ಮ ಹೆಸರು RCB.

ನಾವು ಇರುವೆವು ಜೊತೆಯಲ್ಲಿ. ||ಪ||


ಬಾರೋ ಗೆಳೆಯ ಕೇಳು ವಿಷಯ,

IPL ಅಂದರೆ ಮನರಂಜನೆ.

ಯಾರೇ ಬರಲಿ ಯಾರೇ ಇರಲಿ,

ಈ ಸಲ cupuu ನಮ್ದೆನೇ.||೧||


ಗೆಲುವಿನ ಸಮಯ ಬರುವುದು,

Don't underestimate ತಿಳ್ಕೊಳಿ.

ಗೆದ್ದಾಗ ಸಂಭ್ರಮ ಎಲ್ಲೆಡೆಯೂ,

ಆಹ್ವಾನ ನೀಡುವೆವು ಪಾಲ್ಗೊಳ್ಳಿ.||೨||


ಸೋಲೇ ಇರಲಿ RCB.

ಗೆಲುವೇ ಇರಲಿ RCB.

ನೀವೇ ಇರುವಿರಿ ಮನದಲ್ಲಿ.

ನಮ್ಮ ಉಸಿರು RCB.

ನಮ್ಮ ಹೆಸರು RCB.

ನಾವು ಇರುವೆವು ಜೊತೆಯಲ್ಲಿ. ||ಪ||


Fansu ನಾವು loyal ತುಂಬ,

ಬೆರಕೆ fans ತರ ನಾವಲ್ಲ.

ಒಂದೇ teamu ಸಾಯೋ ತನಕ,

Teamu switching ಗೊತ್ತಿಲ್ಲ.||೩||


ಇದ್ದರೇನು ತುಂಬಾ teamuuu,

ನಮ್ಮ teamಯೆ ನಮ್ಮ ಹೆಮ್ಮೆ.

ನಮ್ಮ ಊರು ಬೆಂಗಳೂರು,

ಕೊನೆಯವರೆಗೂ RCBನೇ.||೪||


ಸೋಲೇ ಇರಲಿ RCB.

ಗೆಲುವೇ ಇರಲಿ RCB.

ನೀವೇ ಇರುವಿರಿ ಮನದಲ್ಲಿ.

ನಮ್ಮ ಉಸಿರು RCB.

ನಮ್ಮ ಹೆಸರು RCB.

ನಾವು ಇರುವೆವು ಜೊತೆಯಲ್ಲಿ. ||ಪ||

             ----ಚಿನ್ಮಯಿ

Wednesday, September 16, 2020

ಪ್ರೇಮ: ಒಂದು ರಾಸಾಯನಿಕ ಕ್ರಿಯೆಯಲ್ಲ. Love: it's not a chemical reaction.

 

ವಿಜ್ಞಾನಿಗಳ ಪ್ರಕಾರ ಪ್ರೇಮವೊಂದು ರಾಸಾಯನಿಕ ಕ್ರಿಯೆ ಎಂಬುವುದೇ ಆದರೆ, ಇದಕ್ಕೆ ನನ್ನ ಧಿಕ್ಕಾರವಿರಲಿ.

ಸತ್ಯಾಂಶವೆಂದರೆ, ಪ್ರೇಮವೆಂಬುದು ದೈವಿಕ ಸ್ವರೂಪವಾಗಿದೆ ಹಾಗೂ ಧರ್ಮದ ಒಂದು ಆಧಾರವಾಗಿದೆ.

           ----ಚಿನ್ಮಯಿ

According to scientists if love is just a chemical reaction, then I will completely disdain their statement.

The truth is, love is a divine form and one of the pillar of dharma.

          ----chinmayi

Tuesday, September 15, 2020

ಸಾಧನೆಯ ಮಾರ್ಗ

ಚಿತ್ರಕ್ಕೆ ಪದ್ಯ-೪೩


ಹಾದು ಹೋಗುವ ದಾರಿಯಲ್ಲಿ

ಎರಡು ಮಾರ್ಗಗಳುಂಟು.

ಅತ್ತ ಹೋಗಲ? ಇತ್ತ ಹೋಗಲ?

ಎಂಬ ಯೋಚನೆ ನೂರೆಂಟು.


ಸರಿ ತಪ್ಪುಗಳ ಆಯ್ಕೆಯನ್ನು

ನಾವೇ ಮಾಡಬೇಕು ಕೊನೆಗೆ.

ಇದರ ಮೇಲೆಯೇ ನಿಂತಿದೆ

ನಮ್ಮ ಜೀವನದ ಬೆಳವಣಿಗೆ‌.


ಸಾಧನೆಯ ಶಿಖರವನೇರಲು

ಅಡೆತಡೆಗಳೇ ನಿಜ ಸ್ನೇಹಿತ.

ಸಾಧಿಸೋ ಚಲವೊಂದಿದ್ದರೆ

ಗೆಲುವು ನಮ್ಮದೆ ಖಂಡಿತ.


ಹಾರೋ ಹಕ್ಕಿಗಳ ಹಾಗೆಯೇ

ಹಾರುವುದನ್ನು ಕಲಿಯಬೇಕು.

ಎಷ್ಟೇ ಎತ್ತರ ಹಾರಿದರು ನಾವು

ಮರಳಿ ಭೂಮಿಗೆ ಬರಬೇಕು.

           ----ಚಿನ್ಮಯಿ

Monday, September 14, 2020

Life: A beautiful journey

Life is a journey where in-between birth and death there are four stops or stations called childhood, adulthood, middle age and old age. People are like passengers or travellers who travel with us in this journey of life.

•Some people get into this journey with us from the first stop or station called childhood and very few would travel till the final destination called old age and some may get down in between stations called adulthood and middle age.

•Many people will get in at adulthood station and hard truth is that so many will get down at the same station and not many will travel till middle age and very few will travel till old age.

•Very few people will get in at the middle age station and likewise adulthood station, hard truth is that they will get down at the same middle age station and very very few will travel till final old age destination.

•Hardly a few people will get in at final old age destination and likewise adulthood and middle age stations, hard truth is that they get down at the same old age destination.

However, the true fact of this journey called life is, no one starts their journey with us from birth and no one ends their journey with us at death. Hence, we have to always spend our beautiful journey of life by being happy and enjoying and living every moment of life to the fullest with all the passengers who accompany us and must learn to spread love and happiness to all the passengers whether all of them would travel with us till final old age destination or not.

           ----chinmayi

Saturday, September 12, 2020

ಸಹೋದರರ ಸಂಬಂಧ

ಚಿತ್ರಕ್ಕೆ ಪದ್ಯ-೪೨


ಶ್ರೀ ರಾಮನು ಹೇಳಿದನು, 'ಲಕ್ಷ್ಮಣನಂತಹ ತಮ್ಮನಿರಬೇಕೆಂದು.'

ಶ್ರೀ ಕೃಷ್ಣನು ಹೇಳಿದನು, 'ಬಲರಾಮನಂತಹ ಅಣ್ಣನಿರಬೇಕೆಂದು.'

ಒಟ್ಟಿನಲ್ಲಿ ಶೇಷನಾಗನಂತಹನೊಬ್ಬನು ಮಹಾವಿಷ್ಣುವಿಗೆ ಇರುವ ಹಾಗೆ ನಮಗೆಲ್ಲರಿಗೂ ಇರಬೇಕು.

        ----ಚಿನ್ಮಯಿ

Friday, September 11, 2020

ಸಿಹಿಗನಸು

ರಾತ್ರಿಯ ವೇಳೆಯಲ್ಲಿ ಚಂದ್ರನು ನೆತ್ತಿಯ ಮೇಲಿರಲು ತಣ್ಣನೆಯ ಗಾಳಿ ಸೇವಿಸಿ ಆಕಾಶವನ್ನೇ ದಿಟ್ಟಿಸಿ ನೋಡುತಲಿ ಕೂತಿರುವಾಗ, ನಕ್ಷತ್ರಗಳ ನಡುವಿಂದ ರಪ್ಪಂತ ಜಾರಿತೊಂದು ಉಲ್ಕೆಯು. ಒಂದು ಕ್ಷಣ ಮೂಕವಿಸ್ಮಿತನಾದೆನು ಅತ್ಯದ್ಭುತ ವೀಕ್ಷಣೆ ಇದೆಂದು!

ಆದರೆ, ನಿದ್ದೆಯಿಂದ ಎಚ್ಚರವಾದಾಗ ಕಾಣಿಸಿದ್ದು ಕೊಠಡಿಯ ಗೋಡೆಗಳಷ್ಟೇ ಎಂದು ತಿಳಿದಾಗ ನಸುನಕ್ಕಿದೆನು. ಇನ್ನೊಮ್ಮೆ ಸಿಹಿಗನಸಿನೊಳಗೆ ಮುಳುಗಲೆಂದು ನಿದ್ರಾದೇವಿಗೆ ಶರಣಾದೆನು.

           ----ಚಿನ್ಮಯಿ

Saturday, September 5, 2020

Universe+Nature=Life: The best teachers

Both Universe and Nature forms the Life and hence they are the best teachers for everyone.

Only thing is that, we must learn to interact, perceive and earn knowledge and wisdom from them. Finally, we must be grateful for everything.

                ----chinmayi

Wednesday, September 2, 2020

Life lessons from Pain

In majority of people,

Pain nullifies Anger, Ego and Pride and it silently amplifies Courage and Never give up attitude.

         ----chinmayi

Thursday, August 27, 2020

ಪಶ್ಚಿಮ ಘಟ್ಟಗಳ ಸೌಂದರ್ಯ


ಚಿತ್ರಕ್ಕೆ ಪದ್ಯ-೪೧

ಸ್ವರ್ಗದ ದ್ವಾರವಾದ ಸಕಲೇಶಪುರ,

ಹಾಸನ ಜಿಲ್ಲೆಗೆ ಹೆಮ್ಮೆಯ ಗೋಪುರ.

ಕಾಫಿ ಬಿತ್ತನೆಯ ಚಿಕ್ಕಮಗಳೂರು,

ಸುಂದರ ಸ್ಥಳಗಳಿಗೂ ತವರೂರು.


ಸ್ವಚ್ಛ ಗಾಳಿ ಸೇವನೆಯ ಮಲೆನಾಡು,

ನಿರ್ಮಲ ನಿಸರ್ಗ ತಾಣಗಳ ನೆಲೆಬೀಡು.

ಪುಣ್ಯಕ್ಷೇತ್ರಗಳ ಪ್ರಕೃತಿಯೇ ದಕ್ಷಿಣ ಕನ್ನಡ,

ಹೋಗಲೇಬೇಕು ತಪ್ಪದೇ ಎಲ್ಲರ ಸಂಗಡ.


ಕಾವೇರಿಯ ಉಗಮಸ್ಥಾನವಾದ ಕೊಡಗು,

ಸ್ವರ್ಗದ ಅರಮನೆಗಿಂತಲೂ ಸೊಬಗು‌.

ಇದುವೇ ಪಶ್ಚಿಮ ಘಟ್ಟಗಳ ಸೌಂದರ್ಯ,

ಕರುನಾಡಿನ ಮೂಲ ಚೇತನದ ಸಾನ್ನಿಧ್ಯ.

         ----ಚಿನ್ಮಯಿ

Friday, August 21, 2020

ಅಜ್ಞಾನವೇ ಅಧರ್ಮವು

ಅಜ್ಞಾನಿಗಳಿಗೆ ಬುದ್ದಿ ಹೇಳಿದರೂ ಅರ್ಥವಾಗದು ಏಕೆಂದರೆ, ಅವರು ವಾಸ್ತವಿಕದ ನಿಜ ಸ್ವರೂಪವನ್ನು ಮರೆತಿರುತ್ತಾರೆ ಹಾಗು ಅವರಲ್ಲಿ ಗ್ರಹಿಸುವ ಶಕ್ತಿಯು ಕ್ಷೀಣಿಸಿರುತ್ತದೆ. ಅಂತವರು ಅಧರ್ಮಿಗಳಾಗಿರುತ್ತಾರೆ.

ಆದ್ದರಿಂದ, ಪುನಃ ಧರ್ಮ ಸ್ಥಾಪನೆಗಾಗಿ ಅಂತವರನ್ನು ಸಂಹರಿಸಲು ಭಗವಂತ ಶ್ರೀ ವಿಷ್ಣು ಭುವಿಯಲ್ಲಿ ಪುನಃ ಹುಟ್ಟ ಬೇಕಾಗುತ್ತದೆ.

          ----ಚಿನ್ಮಯಿ

ಕರ್ಮಯೋಗದ ಮೂಲ ಸಿದ್ಧಾಂತ

ಕೆಲವೊಮ್ಮೆ, ಕೆಲವೊಂದನ್ನು ಧರ್ಮಕ್ಕಾಗಿ ತ್ಯಜಿಸಲು ಸಿದ್ದರಾಗಬೇಕು.

ಆದರೆ ಕೆಲವೊಮ್ಮೆ, ಕೆಲವೊಂದನ್ನು ಧರ್ಮಕ್ಕಾಗಿ ತ್ಯಜಿಸಲು ನಿರಾಕರಿಸಬೇಕು.

ಇವೆರಡರ ಮಧ್ಯೆ ಇರುವ ವ್ಯತ್ಯಾಸ ತಿಳಿದು ಧರ್ಮಕ್ಕಾಗಿ ಜೀವನ ಸಾಗಿಸುವವನೆ ಕರ್ಮಯೋಗಿ. 

ಇದುವೇ ಕರ್ಮಯೋಗದ ಮೂಲ ಸಿದ್ಧಾಂತ.

             ----ಚಿನ್ಮಯಿ

Wednesday, August 19, 2020

ನನ್ನಪ್ಪ

ಚಿತ್ರಕ್ಕೆ ಪದ್ಯ-೪೦

ಲುಂಗಿಯ ತೊಟ್ಟಿಹನು ನನ್ನಪ್ಪ.

ಹಳೆ ಸೈಕಲ್‌ ಸವಾರನು ನನ್ನಪ್ಪ.

ಹೋಗುತ್ತಿರುವನು ಹೊಲದ ಕಡೆಗೆ,

ಗಣೇಶ ಬೀಡಿಯ ಹೊಗೆಯ ಜೊತೆಗೆ‌,

ಗಾಳಿಯ ವೇಗವನ್ನು ಮೀರಿ ನನ್ನಪ್ಪ.


ವಲ್ಲಿಯ ಧರಿಸಿಹನು ನನ್ನಪ್ಪ.

ಸಿನಿಮಾ ಪ್ರೇಮಿಯು ನನ್ನಪ್ಪ.

ಹಳೆಯ ಹಾಡನ್ನು ಹಾಡಿಕೊಂಡು,

ಬ್ರೇಕನ್ನು ಕೊಂಚ ಹಿಡಿದುಕೊಂಡು,

ಅನ್ನವ ಬೆಳೆಸಲು ಸಾಗಿಹನು ನನ್ನಪ್ಪ.

         ----ಚಿನ್ಮಯಿ

Tuesday, August 18, 2020

ಅರ್ಥಪೂರ್ಣ ಪ್ರಶ್ನೋತ್ತರ

"ನನ್ನನ್ನು ಯಾರು ಪೂರ್ತಿ ಅರ್ಥ ಮಾಡಿಕೊಂಡಿದ್ದಾರೆ?" ಎಂದು ಹೃದಯಕ್ಕೆ ಪ್ರಶ್ನಿಸಿದಾಗ, ಹೃದಯ ನಸುನಗುತ ಹೀಗೆಂದು ಉತ್ತರಿಸಿತು-


"ನಿನ್ನನ್ನು ನೀನೇ ಪೂರ್ತಿ ಅರ್ಥ ಮಾಡಿಕೊಂಡಿಲ್ಲ, ಇನ್ನೂ ಬೇರೆಯವರ ಚಿಂತೆ ನಿನಗೇತಕೋ!

ಮೊದಲು ನಿನ್ನನ್ನ ನೀನು ಅರ್ಥ ಮಾಡಿಕೋ ಅಷ್ಟೇ ಸಾಕು."

        ----ಚಿನ್ಮಯಿ

ಕಲಿಯುಗದಲ್ಲಿ ತಿಳಿಯಬೇಕಾದ ಕಟು ಸತ್ಯಗಳು

ಚಿತ್ರಕ್ಕೆ ಪದ್ಯ/ಜೀವನದ ಸತ್ಯ-೩೯

"ಪ್ರಶ್ನೆಗಳು-"

•ನಮ್ಮವರು ಇಲ್ಲಿ ಯಾರ್ಯಾರು?

•ನಮ್ಮದು ಎನ್ನುವುದು ಯಾವುದು?

•ಪ್ರಪಂಚದಲ್ಲಿ ನಮ್ಮ ಕರ್ತವ್ಯಗಳು ಏನಿಹುದು?


"ಉತ್ತರಗಳು-"

•ಪರಮಾತ್ಮನೊಬ್ಬನೇ ನಮ್ಮವನು.

•ನಾವು ಮಾಡುವ ಒಳ್ಳೆಯ ಕಾರ್ಯಗಳೇ ನಮ್ಮದು.

•ಧರ್ಮದ ಹಾದಿಯಲ್ಲಿ ನಡೆದು ಸಮಾಜದ ಹಿತಕ್ಕಾಗಿ ಜೀವಿಸುವುದೇ ನಮ್ಮ ಕರ್ತವ್ಯಗಳು.


"ಇತರೆ ಸತ್ಯದ ವಿಷಯಗಳು-"

•ಧರ್ಮದ ಮೂಲ ಆಧಾರವಾದ 'ಕರುಣೆ'ಯನ್ನು ಮೊಟ್ಟ ಮೊದಲಿಗೆ ಜೀವನದಲ್ಲಿ ರೂಪಿಸಿಕೊಳ್ಳಬೇಕಿದೆ.

•ಧರ್ಮದ ಐದು ಆಧಾರಗಳಾದ 'ಜ್ಞಾನ, ಧೈರ್ಯ, ಪ್ರೇಮ, ಸಮರ್ಪಣೆ, ನ್ಯಾಯ'ವನ್ನು ಅರಿಯಬೇಕಿದೆ.

•ಪಂಚ ಮಹಾಭೂತಗಳಾದ 'ಪೃಥ್ವಿ , ಜಲ, ಅಗ್ನಿ, ವಾಯು, ಆಕಾಶ'ದ ಭಿಕ್ಷೆಯೇ ಈ ದೇಹವೆಂಬುದನ್ನು ತಿಳಿಯಬೇಕಿದೆ.

•'ತಮಸ್ಸು, ರಜಸ್ಸು, ಸತ್ತ್ವ' ಎಂಬ ಗುಣಗಳು ಮನುಷ್ಯನ ಸ್ವಭಾವಕ್ಕೆ ಕಾರಣವಾಗಿದೆ.

•'ಭಯ, ಮೋಹ, ಕ್ರೋಧ, ಅಸೂಯೆ, ಅಹಂಕಾರ, ಮದ, ಲೋಭ, ಮಾತ್ಸರ್ಯ, ಕಾಮ'ದಂತಹ ಬಾಧೆಗಳಿಂದ ವಿಮುಕ್ತರಾಗಬೇಕಿದೆ‌.

•ಕೊನೆಯದಾಗಿ, ಆತ್ಮದಿಂದಲೇ ಪರಮಾತ್ಮನನ್ನು ಸೇರಬೇಕಿದೆ.

         ----ಚಿನ್ಮಯಿ

Sunday, August 16, 2020

ಮನುಷ್ಯತ್ವದ ಜೀವನಕ್ಕೊಂದು ಮೌಲ್ಯ

ಬದುಕಿರುವಾಗ, 

ತುಳಿಯುವವರು ಎಷ್ಟೋ!

ಹೀಯಾಳಿಸಿ ನಗುವವರೆಷ್ಟೋ!

ಬೆನ್ನಿಂದೆ ಮಾತನಾಡುವವರೆಷ್ಟೋ!

ಅರ್ಥ ಮಾಡಿಕೊಳ್ಳದ್ದೆ ಬಿಟ್ಟೋಗುವವರೆಷ್ಟೋ!


ಸಾಯುವಾಗ,

ಹೊಗಳುವವರು ಎಷ್ಟೋ!

ನೆನೆದು ನೆನೆದು ಅಳುವವರೆಷ್ಟೋ!

ಅಯ್ಯೋ ಪಾಪಾ ಎನ್ನುವವರೆಷ್ಟೋ!

ಎಂದೂ ಬಾರದ ಪ್ರೀತಿ ಉಕ್ಕಿ ಬರುವುದೆಷ್ಟೋ!


ಬದುಕ್ಕಿದ್ದ ಕಾಲವಷ್ಟೂ ನಿಂದಿಸಿದವರೆಲ್ಲಾ ಸತ್ತಾಗ ಬಂದು ಅಳುವರಯ್ಯ.

ಬದುಕ್ಕಿದ್ದಾಗ ತೋರಿಸದ ಪ್ರೀತಿ ಸತ್ತಾಗ ತೋರುವುದು ತರವಲ್ಲಯ್ಯ.


ಬದುಕ್ಕಿದ್ದ ಜೀವಕ್ಕೆ ಗೌರವ, ಪ್ರೀತಿ, ಕಾಳಜಿ ತೋರಿಸಿರಯ್ಯ.

ಸತ್ತ ಮೇಲೆ ತೋರಿಸಿದರೆ ಆ ಪರಮಾತ್ಮನು ಮೆಚ್ಚನಯ್ಯ.

        ----ಚಿನ್ಮಯಿ

Monday, August 10, 2020

ಪ್ರೇಮಕ್ಕೆ ಸಮ್ಮತಿ.!?

ಹೊಂಗನಸಿನ ಸುಂದರಿಯೇ ನೀ

ಎದುರಿಗೆ ಬಂದಾಗ ಸಂತಸ.

ನಿನ್ನನ್ನು ಹಲವೊಮ್ಮೆ ನೋಡಲು

ನನಗಿಲ್ಲ ಕೊಂಚವೂ ತಾಮಸ.


ಪ್ರೇಮವ ವ್ಯಕ್ತಪಡಿಸಲು ನನಗೆ

ತಿಳಿದಿರೋದು ಇದೊಂದೆ ತರಹ.

ಒಮ್ಮೆ ನಸುನಗುತ ಗುಳಿಕೆನ್ನೆಯಿಂದ

ಒಪ್ಪುವೆಯಾ ಪ್ರೇಮದ ಬಿನ್ನಹ?

          ----ಚಿನ್ಮಯಿ

Sunday, August 9, 2020

ಅಮ್ಮನ ಪ್ರೇಮ

ಚಿತ್ರಕ್ಕೆ ಪದ್ಯ-೩೮

ಅಮ್ಮ ಎಂಬ ಶಬ್ದವೇ

ಎಲ್ಲದಕ್ಕೂ ಮೊದಲು.

ನನ್ನ ಜೀವಕ್ಕೆ ಅವಳೇ

ಪ್ರೇಮದ ಹೊನಲು.


       ಸೂರ್ಯ ಚಂದ್ರ ತಾರೆಯರಂತೆ 

       ಬೆಳಕಾಗಿ ನಿಲ್ಲುವಳು ಬೀರುತಲಿ ಪ್ರಕಾಶ.

       ಮೊಟ್ಟ ಮೊದಲಿನ ಗುರುವಾಗಿ

       ಸ್ವರ್ಣದಂತಾಗಿಸುವಳು ಬದುಕಿನ ವಿಕಾಸ.

       

ಅಮ್ಮ ಎಂದು ಕರೆದರೆ

ಓಡಿ ಬರುವಳು ಬಳಿಗೆ.

ನೆನೆಯುತ ಸೇರುವಳು

ಬಿಟ್ಟಿರದೆ ಒಂದು ಗಳಿಗೆ.


       ಹಸುಳೆ ಇಂದ ಕೊನೆಯವರೆಗೂ

       ಬೆಳಗುವುದು ತಾಯಿಯೆಂಬ ಹಣತೆ.

       ಜೀವನಕ್ಕೊಂದು ದಾರಿ ತೋರಿಸಿ

       ಸಾಕಿ ಸಲಹುವಳು ಬಾರದಂತೆ ಕೊರತೆ.


ಅಮ್ಮ ನಿನ್ನ ನೆನೆದಾಗ

ಎದೆತುಂಬುವುದು ತಕ್ಷಣ‌.

ನನ್ನ ಸಂಪೂರ್ಣ ಬದುಕಿಗೆ

ನೀನೇ ಮೊದಲ ಕಾರಣ.

       ----ಚಿನ್ಮಯಿ

Saturday, August 8, 2020

ಪ್ರೇಮದ ಯಾಚನೆ

ಹರಿಯುವ ಜರಿ ನಾನಾದರೆ,
ಹರಿಯುವ ಮಾರ್ಗ ನೀನೇ.
ಕೆರೆಯ ಕೆಸರು-ಕಮಲದ ಹಾಗೆ,
ನಾವಿಬ್ಬರೂ ಒಂದೆ ಕೇಳೇ.

ಕಾಗದದ ದೋಣಿಯು ಹರಿದರೇನು,
ಮುಂದೆ ಸಾಗಿಸಲು ನಾನಿರುವೆನು.
ಪ್ರೀತಿಯ ಸುಧೆ ನೀಡು ಸಾಕು,
ಚಿರಂಜೀವಿಯಾಗಿ ಚೆಲ್ಲುವೆ ಬೆಳಕು.

ವೃಕ್ಷದ ಕಾಂಡ ನಾನಾದರೆ,
ವೃಕ್ಷದ ಬೇರು ನೀನೇ.
ಅರಳುವ ಪುಷ್ಪದ ಹಾಗೆ,
ಪ್ರೀತಿಯು ಹರಳಂತೆ ಕೇಳೇ.

ವಿಶ್ರಮಿಸಲು ನೆರಳಿಲ್ಲದಿದ್ದರೇನು,
ಫಲ ನೀಡಿ ನೆರಳಾಗಿ ನಾ ನಿಲ್ಲುವೆನು.
ಶುರುಮಾಡಿರುವೆ ನಾ ಪ್ರೀತಿಯ ವ್ಯವಸಾಯ,
ಫಲ ನೀಡಿದರೆ ನೀ ಸಂತಸವೇ ತರುವಾಯ.
            ----ಚಿನ್ಮಯಿ

ಬೆಳಕಾಗು ನೀ

 ಚಿತ್ರಕ್ಕೆ ಪದ್ಯ-೩೭

ಬೆಳಕಾಗು ನೀ ಬೆಳಕಾಗು.

ಬೆಂಕಿಕಡ್ಡಿಯ ಶಾಖವಾಗು.

ಕತ್ತಲು ಕವಿದ ಬಾಳಿಗೆ

ಉಲ್ಲಾಸದ ಬೆಳಕಾಗು.


ಬೆಳಕಾಗು ನೀ ಬೆಳಕಾಗು.

ಜ್ವಾಲೆಯಂತೆ ನಿರ್ಮಲವಾಗು.

ಪೂರ್ತಿ ಬೇಸತ್ತ ಬಾಳಿಗೆ

ಪ್ರೇರಣೆಯ ಬೆಳಕಾಗು.

        ----ಚಿನ್ಮಯಿ

Friday, August 7, 2020

Srinivasa Ramanujan (FRS)


                                     ಚಿತ್ರಕ್ಕೆ ಪದ್ಯ/ಕಥೆ- ೩೬

TamiL naaDu is the land of temples and also the land which has given birth to many of the geniuses of our country. One among them was one of the world's greatest mathematican, "S. Ramanujan." His IQ was so high that he was a gifted talent. Without even a formal education in mathematics, he has created many theorems and formulas which have been used now in many fields and also his new formulas are now used to study the 'black holes.' Though he suffered from poverty and health issues frequently and lived for only 32 years, his achievements towards mathematics in very short span of time is just amazing and if he had lived for even more years, then 'the world's mathematics would have been in other dimension.' His amazing contributions to the field of mathematics is enough to consider him to be as great as "Newton, Einstein, Euler, Gauss, Euclid, Fermat, Leibniz, Descartes, Aryabhata, Brahmagupta, Bhaskaracharya, Pythagoras, Hilbert, Archimedes."

He was just a remarkable and greatest mathematician that India has ever seen and probably the world too.


"An equation for me has no meaning, unless it expresses a thought of God.

----S Ramanujan"


                  ----chinmayi

Friday, July 31, 2020

ಪ್ರೇಮ ನಿವೇದನೆ

ಬಾ ನಲ್ಲೆ ನೀನು ಬಾ
ಹೃದಯದ ಬಾಗಿಲೆಡೆಗೆ.
ಬಾ ನಲ್ಲೆ ಬೇಗ ಬಾ
ನಿಂತಿರುವ ನನ್ನ ಕಡೆಗೆ.
      
      ಕೇಳು ಪ್ರಿಯೆ ಒಮ್ಮೆ ನೀನು
      ಮನಸ್ಸಿನ ಭಾವನೆಯನ್ನು!
      ನೀನೇ ಮೊದಲ ಸಖಿ ನನಗೆ
      ಸಂಶಯವ ಬಿಡು ಇನ್ನು.

ಪ್ರಾಣಕಾಂತೆ, ಪ್ರಾಣಸಖಿಯೇ
ಮಾಡದಿರು ಎಂದಿಗೂ ಚಿಂತೆ.
ಪ್ರಾಣಕಾಂತ, ಪ್ರಾಣಸಖನಾಗಿ
ನಾನಿರುವೆ ಸದಾ ನಿನ್ನ ಜೊತೆ.
      
      ಜೊತೆ ಸೇರಿ ಜೊತೆ ಕೂತು
      ಪ್ರೇಮದೌತಣ ಸವಿಯೋಣ.
      ಸದಾ ಕಾಲ ಹೀಗೆ ನಾವಿಬ್ಬರೂ
      ಖುಷಿಯಿಂದ ಬಾಳೋಣ.

ಬಾ ನಲ್ಲೆ ನೀನು ಬಾ
ಹೃದಯದ ಬಾಗಿಲೊಳಗೆ.
ಬಾ ನಲ್ಲೆ ಬೇಗ ಬಾ
ಪ್ರೀತಿಯ ಸೇರು ಒದ್ದು ಒಳಗೆ.
       ----ಚಿನ್ಮಯಿ

Wednesday, July 22, 2020

ಗೆಂಟುತೋರುಕ


ಚಿತ್ರಕ್ಕೆ ಪದ್ಯ-೩೫

ಹತ್ತಿರದ ನೀಲಿ ಆಕಾಶದಲ್ಲಿಹುದು ವಿಧ ವಿಧ
ಅನಿಲಗಳು, ಚಲಿಸುವ ಮೋಡಗಳು, ಹಾರುವ ಪಕ್ಷಿಗಳು.
ದೂರದಿ ಕಪ್ಪು ಬಾಹ್ಯಾಕಾಶದಲ್ಲಿಹುದು ಅನಂತ
ಮಾರುಚುಕ್ಕಿಗಳು, ಉಲ್ಕೆಗಳು, ನಕ್ಷತ್ರಗಳು, ಗ್ರಹಗಳು.

ಆಕಾಶದಲ್ಲಿರುವುದನ್ನು ಇಳೆಯಿಂದ ಸ್ಪಷ್ಟವಾಗಿ
ಕಾಣಲು ಅಂತಹ ದೊಡ್ಡ ತೊಂದರೆ ಏನು ಅಡ್ಡಿಯಾಗಲ್ಲ.
ಬಾಹ್ಯಾಕಾಶದಲ್ಲಿರುವುದನ್ನು ಧರೆಯಿಂದ ಸ್ಪಷ್ಟವಾಗಿ
ಕಾಣಲು ನಮಗ್ಯಾರಿಗೂ ಅವಶ್ಯ ಸಾಧ್ಯವಾಗುವುದಿಲ್ಲ.

ಇದೀಗ ನಾನು ಉತ್ಸುಕದಿಂದ ಓಡಿ ಓಡಿ ಬಂದೆನು
ಕಣ್ತುಂಬಿಸಿಕೊಂಡು ಆಗಲೆಂದು ಅಂತರಿಕ್ಷದ ನಿರೂಪಕ.
ಇದಕ್ಕಾಗಿಯೇ ನವೀನಯ ವಸ್ತುವೊಂದನ್ನು ತಂದೆನು
ಕಾಣಲೆಂದು ಅಂತರಿಕ್ಷವನ್ನು ಅದುವೇ ಗೆಂಟುತೋರುಕ.
       ----ಚಿನ್ಮಯಿ

Tuesday, July 21, 2020

ನಾವಿಕ


ಚಿತ್ರಕ್ಕೆ ಪದ್ಯ- ೩೪

ಸಾಗರದೊಳು ಸಾಗಿದೆ ನಾನು ಹಡಗಲ್ಲಿ
ಇಂದು ದೂರದ ತೀರವ ಸೇರಲೆಂದು.
ಆ ತೀರದ ಬಳಿಯೇ ಕಾದಿರುವ ಸುಂದರ
ರಾಜಕುಮಾರಿಯನ್ನು ನೋಡಲೆಂದು.

ಅವಳ ಬೇಟಿಯಾಗಲೆಂದು ಹಾತೊರೆದಿರುವ
ನನಗೆ ತಿಳಿದಿದೆ ಪ್ರೇಮವೊಂದು ಮೋಹಕ.
ನನ್ನ ಪ್ರೇಮವ ಬಹುಬೇಗ ಸೇರಲೆಂದು ಹಡಗಿನ
ವೇಗವನ್ನು ಹೆಚ್ಚಿಸುತ್ತಾ ಆದೆನು ನಾನೇ ನಾವಿಕ.
      ----ಚಿನ್ಮಯಿ

Sunday, July 12, 2020

Simplicity and Humbleness

Stay Simple, Stay Humble
      ----chinmayi

Self Learning

Apart from obtaining knowledge from schools and colleges, cultivate the habit of learning whatever you want by yourself.
Try to be a self learner and self learning is the best thing one can do to achieve the goals.
      ----chinmayi

Saturday, July 11, 2020

ಸಂಗೀತ


ಚಿತ್ರಕ್ಕೆ ಪದ್ಯ-೩೩

ಮುಂಜಾನೆಯಲ್ಲಿ ಖಗಗಳ ಇಂಪಾದ
ಸಂಗೀತದಿಂದಲೇ ಹೊಸ ದಿನದ ಸ್ವಾಗತ.
ಮುಸ್ಸಂಜೆಯ ಹೊತ್ತಿನಲ್ಲೂ ಅವುಗಳೇ
ಖುಷಿ ಪಡಿಸುವವು ಹಾಡುತ ಸಂಗೀತ.

ಮಧ್ಯಾಹ್ನದ ಸುಡುವ ಬಿಸಿಲಿನಲ್ಲಿಯೂ
ಸಂಗೀತದಿಂದಲೇ ಮನಸ್ಸು ಪ್ರಶಾಂತ.
ರಾತ್ರಿಯ ವೇಳೆಯಲ್ಲಿ ನೆಮ್ಮದಿಗೆ ಆಸರೆ
ಆಗುವುದು ಕೂಡ ನೆಚ್ಚಿನ ಸಂಗೀತ.

ದಿನದ ಪೂರ ಪರಮ ಸ್ನೇಹಿತನಾಗಿರುವ
ಸಂಗೀತವು ದೇಹದ ಕಣ ಕಣದಲ್ಲೂ ಅಂಕಿತ.
ಪ್ರಾಣ ಉಳಿಸುವ ಸಂಜೀವಿನಿ ಸ್ವರೂಪವೂ
ಕೂಡ ಆಗಿದೆ ಮಧುರ ಸುಮಧುರ ಸಂಗೀತ.

ಸಂಗೀತವಿಲ್ಲದ ಬಾಳು ಬಹಳ ಕಠಿಣ.
ಸಂಗೀತದಿಂದಲೇ ಬೆಳಗುವುದು ಚೇತನ.
        ----ಚಿನ್ಮಯಿ

Friday, July 10, 2020

ಆಸರೆ


ಚಿತ್ರಕ್ಕೆ ಪದ್ಯ-೩೨

ಒಂಬತ್ತು ತಿಂಗಳು ಹೆತ್ತಮ್ಮನ
ಜಠರವೇ ನಮಗಾಗುವುದು ಆಸರೆ.
ನಂತರ ದಿನಗಳಲ್ಲಿ ಹೆತ್ತವರ
ಮಮಕಾರ ಪ್ರೀತಿಯೇ ಉಡುಗೊರೆ.

ಅವರ ನೆರಳಿನಲ್ಲಿ ಬೆಳೆಯುತ್ತ ಮುಂದಿನ
ದಿನಗಳಲ್ಲಿ ಪ್ರೇಮವಾಗುವುದು ನಮ್ಮಲ್ಲಿ ಕಣ್ಮರೆ.
ಯಾವತ್ತಿಗೂ ಅವರಿಲ್ಲದೆ ನಾವೇನಿಲ್ಲವೆಂದು
ಅರಿತು ಜೀವನ ಪೂರ್ತಿ ಅವರಿಗಾಗಬೇಕು ಆಸರೆ.
      ----ಚಿನ್ಮಯಿ

ಸಾಮಾಜಿಕ ಮಾಧ್ಯಮವೆಂಬ ಚಟ


ಚಿತ್ರಕ್ಕೆ ಪದ್ಯ-೩೧

ಉಪನೇತ್ರ ಧರಿಸುತ ತಲೆಯ ತಗ್ಗಿಸುತ
ದಿಟ್ಟಿಸಿ ನೋಡುವಂತಾಗಿದೆ ಚೂಟಿಯುಲಿ.
ಸದಾ ಕೂತಲ್ಲೇ ಕೂತು ನಿಂತಲ್ಲೇ ನಿಂತು
ಸೋಮಾರಿತನದಿಂದ ಸಾಗಿದೆ ಜೀವನ ಶೈಲಿ.

ಅರೆ ಪ್ರಜ್ಞೆಯಿಂದ ಮನೆ ಕೆಲಸವೇನು ಮಾಡದೆ
ದಿನನಿತ್ಯವು ಕೇಳುವಂತಾಗಿದೆ ಹೆತ್ತವರ ಕಿರುಚಾಟ.
ನಿದ್ರೆಯನ್ನು ಕೆಡಿಸುತ ನೆಮ್ಮದಿಯನ್ನು ಕಸಿಯುತ
ರೂಢಿಯಾಗಿದೆ ಸಾಮಾಜಿಕ ಮಾಧ್ಯಮವೆಂಬ ಚಟ.

ಇದರಿಂದ ಆದಷ್ಟು ದೂರ ಉಳಿದರೆ ಒಳಿತು,
ಇಲ್ಲವಾದಲ್ಲಿ ಅವಶ್ಯ ಕಾದಿದೆ ಮಹಾ ಆಪತ್ತು.
       ----ಚಿನ್ಮಯಿ

Thursday, July 9, 2020

ದೇಜ ವು


ಚಿತ್ರಕ್ಕೆ ಪದ್ಯ-೩೦

ಕನಸೊಳು ಕಂಡದ್ದೋ?
ನನಸೊಳು ನಡೆದದ್ದೋ?
ಏನೋ ನವಿರಾದ ಹಳೆಯ ಅನುಭವದಂತಿದೆ.
ಇಲ್ಲಿರುವವನು ನಾನೋ?
ಈ ಜಾಗವು ಪರಿಚಿತವೋ?
ಅರಿಯದೆ ಒಂದು ಕ್ಷಣ ತಡಬಡಿಸಿದಂತಾಗಿದೆ.

ಎಂದೋ ಜರುಗಿದಂತಿದೆ,
ಇಲ್ಲಿಯೇ ಇದ್ದವನಂತಿದೆ,
ಹೀಗೆಲ್ಲಾ ಆಗಲು ಏನೋ ಒಂದು ಇರಬಹುದು ಅವಶ್ಯ ಕಾರಣವು.
ಇದೊಂದು ಮಧುರತೆಯು,
ಸೊಗಸಾದ ಗೊಂದಲವು,
ಇದಕ್ಕೆಲ್ಲಾ ಕಾರಣವು ನರವೈಜ್ಞಾನಿಕ ಅಸಂಗತತೆಯಾದ ದೇಜ ವು.
       ----ಚಿನ್ಮಯಿ

Tuesday, June 30, 2020

ಸೌರ ಗ್ರಹಣ


ಚಿತ್ರಕ್ಕೆ ಪದ್ಯ-೨೯

ಆದಿತ್ಯ-ಧರಿತ್ರಿಯರ ನಡುವೆ ಶಶಧರನು
ಬಂದು ಅರ್ಧ ಬೆಳಕನ್ನು ತಡೆಹಿಡಿದನು.
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ
ಸೌರ ಗ್ರಹಣವನ್ನು ಉಂಟಾಗಿಸಿದನು.

ಧರೆಗೆಂದಲೇ ಭಾಸ್ಕರ ಬೆಳಕನ್ನು ನೀಡಲು
ಸೋಮನು ಅಡ್ಡಿಯಾಗಿ ಕಸಿದನು ಬೆಳಕನ್ನು.
ಪೃಥ್ವಿಗೆ ಹಿಮಾಂಶುವಿನ ಕಡುಗಪ್ಪಿನ ನೆರಳು
ಆವರಿಸಿ ಕ್ಷೀಣಿಸಿತು ನೇಸರನ ಕಿರಣಗಳನ್ನು.

ಚಂದಿರನ ಈ ನಡೆಯಿಂದ ಭುವಿಯಲ್ಲಿ
ಮನುಜರಿಗೆಲ್ಲಾ ನಿಶ್ಚಿಂತೆಯ ವಾತಾವರಣ.
ಕೊನೆಗೆ ಗ್ರಹಣ ಕಳೆದು ಸಂತಸ ತುಂಬಿ
ಇಳೆಗೆ ಜಾರಿತು ಸೂರ್ಯನ ಹೊಂಗಿರಣ.
      ----ಚಿನ್ಮಯಿ

ನಮಗೆ ನಾವೇ ಹೀರೋ


ಚಿತ್ರಕ್ಕೆ ಪದ್ಯ-೨೮

ಪ್ರಥಮ ಮೆಟ್ಟಿಲು ಕಠಿಣವೆಂದು ಅಂಜಬೇಡ
ನೀ ತಿಳಿಯೋ ಎಲ್ಲದಕ್ಕೂ ಶುರುವು ಜೀರೋ.
ಸೋತೆನೆಂದು ಕುಗ್ಗಬೇಡ ಸತತ ಪ್ರಯತ್ನದಿಂದ
ಗೆಲುವು ಸಾಧ್ಯ ತಿಳಿಯೋ ನಮಗೆ ನಾವೇ ಹೀರೋ.

ಕೆಟ್ಟ ಯೋಚನೆಯ ದೂಡಿ ಒಳ್ಳೆಯ ಯೋಜನೆಯ
ಮಾಡಿ ಧೈರ್ಯದಿ ಮುಂದಿನ ಹೆಜ್ಜೆಯ ಕಡೆಗೆ ನೀ ಓಡೋ.
ಅಡೆತಡೆಗಳ ಸರಿಸಿ ಛಲದಿಂದ ಗುರಿಯನ್ನು ಬೆನ್ನಟ್ಟಿ
ಸಾಧನೆಯ ಕಿರೀಟ ಧರಿಸಿ ಜಗಕ್ಕೆ ಹೇಳು ನಮಗೆ ನಾವೇ ಹೀರೋ.
         ----ಚಿನ್ಮಯಿ

Sunday, June 28, 2020

ಕನಸು-ನನಸು


ಚಿತ್ರಕ್ಕೆ ಪದ್ಯ-೨೭

ನೂರಾರು ಕನಸುಗಳನ್ನು ಪ್ರತಿ ದಿನ
ಪ್ರತಿ ಕ್ಷಣ ನಾವೆಲ್ಲ ಕಾಣುವೆವು.
ಆದರೇ ಜೀವನಕ್ಕೆಂದು ಒಂದೆರಡು
ಕನಸುಗಳು ನಮಗೆ ಬೀಳುವವು.

ಆ ಒಂದೆರಡು ಕನಸಿನ ಭಾವದ ಭಾವನೆಯನ್ನು
ಸದಾ ಜೀವಂತವಾಗಿಸಬೇಕು.
ಕನಸುಗಳನ್ನು ನನಸು ಮಾಡಿ ಕಂಡ ಕನಸಿಗೆ
ಪುನರ್ಜನ್ಮ ನೀಡಿ ಜೀವಿಸಬೇಕು.
     ----ಚಿನ್ಮಯಿ

Sunday, June 21, 2020

ಅಕ್ಷಿಯೊಳಗಿನ ನೋಟ


ಚಿತ್ರಕ್ಕೆ ಪದ್ಯ-೨೬

ಮನದೊಳಗೆ ನೆಲೆಸಿರುವ ಸೊಗಸಾದ ಆಸೆಗಳನ್ನು ಅಕ್ಷಿಗಳಿಂದು
ಜೀವಿಸಿ ತನ್ನೊಳಗೆ ಜೀವಂತವಾಗಿಸಿದೆ.
ರೆಪ್ಪೆಗಳೊಳಗೆ ನನ್ನ ನಾನೇ ನೋಡುವಂತಹ ಅವಿಸ್ಮರಣೀಯ
ದೃಶ್ಯ ಕಾಣಲು ಮನವಿಂದು ಕುಣಿದಾಡಿದೆ.
           ----ಚಿನ್ಮಯಿ

ರಂಗು ರಂಗಿನ ಬದುಕು


ಚಿತ್ರಕ್ಕೆ ಪದ್ಯ-೨೫

ಜಗವೆಲ್ಲಾ ರಂಗಿನಿಂದಲೇ
ರಂಗಿಲ್ಲದೆ ಏನಿಲ್ಲ.
ಬಾಳೆಲ್ಲಾ ರಂಗೋಲಿಯಂತಿರಲು
ನಿಶ್ಚಿಂತೆ ಸಾಕಲ್ಲ!

ಎಲ್ಲೆಲ್ಲಿಯೂ ರಂಗಿದೆಯೆಂದು
ಅಕ್ಷಿಗಳು ಹೇಳಿತು.
ರಂಗು ರಂಗಿನ ಬದುಕಿದೆಂದು
ಹಾಡೊಂದ ಹಾಡಿತು.
          ----ಚಿನ್ಮಯಿ

Friday, June 19, 2020

ಕಾನನ


ಚಿತ್ರಕ್ಕೆ ಪದ್ಯ-೨೪

ಪಟ್ಟಣದಲ್ಲಿ ಸದಾ ದುಡಿಯುತ್ತಿರಲು
ಜೀವನವೆಂದರೆ ಇಷ್ಟೇನಾ ಎಂದೆನಿಸಿದೆ!
ಅದೇ ಕೆಲಸ, ಅದೇ ಜೀವನ ಸಾಕಾಗಿ
ನವೀನತೆಗಾಗಿ ಮನಃ ಬಯಸಿದೆ.

ಬರಹದ ಜೊತೆ ಪ್ರವಾಸ ಛಾಯಾಗ್ರಹಣವು
ನನ್ನ ಎರಡು ಇಷ್ಟದ ಕೆಲಸಗಳಾಗಿವೆ.
ಇವೆರಡರಲ್ಲಿಯೇ ಪೂರ್ಣಪ್ರಮಾಣವಾಗಿ
ತೊಡಗಿಕೊಳ್ಳಲೆಂದೇ ಸಂಚಾರಿಯಾಗಿರುವೆ.

ನನಗೆ ಸದಾ ಸ್ಪೂರ್ತಿಯಾಗಿರುವುದೇ
ಪ್ರಕೃತಿಯ ಹೃದಯವಾದ ಹಸಿರ ಕಾನನ.
ಅಲ್ಲಿಗೆ ಹೋಗಲೇ ಬೇಕು ಇಲ್ಲದಿದ್ದರೆ
ಶಾಚಿತಿಯಿಂದಿರುವುದಿಲ್ಲ ನನ್ನಯ ತನು ಮನ.

         ----ಚಿನ್ಮಯಿ 

Sunday, June 14, 2020

ಇನ್ನೂ ಬಾಕಿ ಇದೆ

ನಮ್ಮಿಬ್ಬರ ಅಕ್ಷಿಗಳ ಮಿಲನದಿಂದ ಪ್ರಥಮ
ಪ್ರೇಮವೀಗ ನನ್ನಲ್ಲಿ ಉದ್ಭವವಾಗಿದೆ.
ನಸುನಗುತ ಗುಳಿಕೆನ್ನೆಯಿಂದ ನೀನೊಮ್ಮೆ
ಸಮ್ಮತಿಸುವುದು ಇನ್ನೂ ಬಾಕಿ ಇದೆ.

ನಿನ್ನ ಅಧರಗಳ ಚಲನೆಯಿಂದ ಉದುರುವುದು
ಮುತ್ತುಗಳೆಂದು ನನಗೆ ತಿಳಿದಿದೆ.
ಮಧುರ ಧ್ವನಿಯ ಕೇಳಿ ನನ್ನ ಕರ್ಣಗಳನ್ನು
ಇಂಪಾಗಿಸುವುದು ಇನ್ನೂ ಬಾಕಿ ಇದೆ.

ಉದ್ದನೆಯ ಜಡೆಯನ್ನು ನೀನು ಸರಿಸುವ
ದೃಶ್ಯವು ಮನಕ್ಕೆ ಸಂತಸ ನೀಡಿದೆ.
ಕೇಶಕ್ಕೊಂದು ರೋಜಾ ಹೂವನ್ನು ನಾನು
ಮುಡಿಸುವುದು ಇನ್ನೂ ಬಾಕಿ ಇದೆ.

ನಡುವ ಬಳುಕಿಸುತಲಿ ವೈಯಾರದಿ ನಡೆಯುವ
ನಿನ್ನ ಶೈಲಿಯು ವಿಭಿನ್ನವಾಗಿದೆ.
ಅದ ನೋಡುತಲೇ ಸೋತಿರಲು ನಾನು ಕೊರಳಿಗೆ
ತಾಳಿ ಕಟ್ಟುವುದು ಇನ್ನೂ ಬಾಕಿ ಇದೆ.

ನಿನ್ನ ಪಾದಗಳ ಸ್ಪರ್ಶದಿಂದ ನನ್ನೆದೆಯು
ಹರ್ಷದಿ ಕುಣಿ ಕುಣಿದಾಡಿದೆ.
ನನ್ನ ಬೆರಳುಗಳು ಕಾತರದಿಂದ ಕಾಲುಂಗುರವ
ತೊಡಿಸುವುದು ಇನ್ನೂ ಬಾಕಿ ಇದೆ.
         ----ಚಿನ್ಮಯಿ

Saturday, June 13, 2020

ತ್ರಿಮೂರ್ತಿಗಳಿಂದ ಬದುಕಿನ ಪಾಠ


ಚಿತ್ರಕ್ಕೆ ಪದ್ಯ-೨೩

ಬ್ರಹ್ಮ, ವಿಷ್ಣು, ಮಹೇಶ್ವರರು ಬ್ರಹ್ಮಾಂಡದ
ಸೃಷ್ಟಿ, ಸ್ಥಿತಿ, ಲಯದ ಸೂತ್ರದಾರರು.
"ಅಹಂ" ಇಲ್ಲದೆ, "ನಾನೇ" ಎನ್ನದೆ, ಒಬ್ಬರಿಗೊಬ್ಬರು
ತಮ್ಮ ತಮ್ಮ ಕರ್ತವ್ಯವ ಮಾಡುವರು.

ಒಮ್ಮೆ ಸರಸಿಜಭವನು, ಹರಿಹರರಿಗೆ ನಮಿಸಿದರೆ
ಇನ್ನೊಮ್ಮೆ ನಾರಾಯಣನು, ಬ್ರಹ್ಮ ಈಶರಿಗೆ ನಮಿಸುವನು.
ಇವರಿಬ್ಬರ ಸರದಿ ಮುಗಿದ ಮೇಲೆ ಕೊನೆಯದಾಗಿ
ದೇವರಿಗೆಲ್ಲಾ ದೇವನಾದ ಮಹದೇವನು, ವಿರಿಂಚಿ ಅಚ್ಯುತರಿಗೆ ನಮಿಸುವನು.

ತ್ರಿಮೂರ್ತಿಗಳೇ ಪರಸ್ಪರ ಸೌಹಾರ್ದ ಮೆರೆದಿರುವಾಗ
ಇನ್ನೂ ನರರಾದ ನಮಗೇತಕೆ ಬೇಕು ಅಸೂಯೆ ದ್ವೇಷವೆಲ್ಲಾ!
ಪ್ರೀತಿಯ ಹಂಚಿ ಬಾಗುವುದೇ ಶ್ರೇಷ್ಠ, ಇನ್ನಾದರೂ
ತಗ್ಗಿ ಬಗ್ಗಿ ಬಾಳುವುದನ್ನು ಕಲಿಯಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ.
        ----ಚಿನ್ಮಯಿ

ಜೀವನದ ಅಂತಿಮ ಧ್ಯೇಯ

ಜನನ-ಮರಣದ ನಡುವಿನ ಬದುಕಲ್ಲಿ,
ಸ್ವಾರ್ಥ ತೊರೆದು ಸೌಹಾರ್ದ ಮೆರೆದು ಬಾಳಬೇಕು.
ಕೋಪವ ಸಾಯಿಸಿ ತಾಳ್ಮೆಯ ಉದಯಿಸಿ ಬದುಕಬೇಕು.
ಆದಷ್ಟು ಸತ್ಯ ಧರ್ಮದ ಹಾದಿಯಲ್ಲಿಯೇ ನಡೆಯಬೇಕು.
ಪರರ ಸಂತೋಷದಲ್ಲಿ ನಮ್ಮ ಸಂತೋಷ ನೋಡಬೇಕು.
ಕಷ್ಟ ಎಂದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು.
ಅಹಂಕಾರ ತೊರೆದು ಹೃದಯದಿಂದ ಎಲ್ಲರನ್ನೂ ಪ್ರೇಮಿಸಬೇಕು.
ಇರುವಷ್ಟೂ ದಿನ ಒಳ್ಳೆಯತನದಿಂದ ಜೀವನ ಸಾಗಿಸಬೇಕು.

ಕೊನೆಯದಾಗಿ, ಜೀವನದ ಅಂತಿಮ ಧ್ಯೇಯವಾದ ಮೋಕ್ಷದ ದಾರಿಯನ್ನು ಹುಡುಕಬೇಕು.
ಆತ್ಮವನ್ನು ಪರಮಾತ್ಮನಲ್ಲಿ ಸೇರಿಸಿ ಅಂತಿಮವೇ ಇಲ್ಲದ ಈ ಬದುಕಿನ ಚಕ್ರದಿಂದ ಮುಕ್ತಿಯನ್ನು ಪಡಿಯಬೇಕು.
      ----ಚಿನ್ಮಯಿ

Friday, June 12, 2020

ಕಡಲ ತೀರದ ವರ್ಣನೆ


ಚಿತ್ರಕ್ಕೆ ಪದ್ಯ-೨೨

ಪ್ರಶಾಂತ ವಾತಾವರಣದಲ್ಲಿ
ತಂಗಾಳಿಯು ಬೀಸುತ್ತಿದೆ.
ಸುತ್ತಲೂ ನಿಶಬ್ದವಾಗಿರಲು
ಕಡಲ ಅಲೆಗಳು ಸದ್ದು ಮಾಡುತ್ತಿದೆ.

ನೀಲಿ ಬಣ್ಣದ ತಿಳಿ ನೀರಿನಲ್ಲಿ
ಸಣ್ಣ ಮೀನುಗಳು ಕಾಣುತ್ತಿದೆ.
ಪ್ರೇಮದಿ ಅಲೆಗಳು ಕಡಲ ತೀರದ
ಕಲ್ಲುಗಳನ್ನು ಹಾಯಾಗಿ ತಾಕುತ್ತಿದೆ.

ಈ ಅವಿಸ್ಮರಣೀಯ ಸಮಯದಲ್ಲಿ
ಏಕಾಂತವು ಹಿತವೆನಿಸುತ್ತಿದೆ.
ಇಲ್ಲಿಗೆ ಕಡಲ ತೀರದ ಸೊಗಸಾದ
ವರ್ಣನೆಯು ಸಮಾಪ್ತಿಯಾಗಿದೆ.
          ----ಚಿನ್ಮಯಿ

ಬಾಲ ಕಾರ್ಮಿಕ ಪದ್ಧತಿಯು ಭೂತದಂತೆ


ಚಿತ್ರಕ್ಕೆ ಪದ್ಯ-೨೧

ಖುಷಿಯಿಂದ ನಲಿದು, ಆಟವಾಡುತ
ಬೆಳೆಯಬೇಕಾದ ಮಕ್ಕಳನ್ನು ದುಡಿಯಲು ಕಳುಹಿಸುವುದು ಸರಿಯೇನು?
ಓದಲು ಇಚ್ಛೆ ಇರುವ, ಏನನ್ನೂ ಅರಿಯದ
ಪುಟಾಣಿಗಳಿಂದ ದುಡಿಸಿಕೊಳ್ಳಲು ಮನಸ್ಸಾದರೂ ಹೇಗೆ ಬರುವುದೆಂದು ನಾ ಅರಿಯೆನು!

ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಿ ಮಕ್ಕಳ
ಭವಿಷ್ಯಕ್ಕಾಗಿ "ಬಾಲ ಕಾರ್ಮಿಕ ಪದ್ಧತಿ" ಎಂಬ ಭೂತವನ್ನು ಒದ್ದು ಓಡಿಸಬೇಕಿದೆ.
ಇದೆಲ್ಲವನ್ನು ತಡೆಯಲೆಂದೇ "ಒಕ್ಕೂಟ ರಾಷ್ಟ್ರಗಳ
ಅಂಗವಾಗಿ" "ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು" ಸ್ಥಾಪನೆಯಾಗಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಈ ದಿನವನ್ನು
"ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನವೆಂದು" ಕರೆಯುತ್ತದೆ.
ಇದು ಕಾರ್ಮಿಕರ ಒಳಿತಿಗಾಗಿ ಕೆಲಸ ಮಾಡಿದರೂ
ಮುಖ್ಯವಾಗಿ "ಬಾಲ ಕಾರ್ಮಿಕ ಪದ್ಧತಿಯ" ವಿರುದ್ಧವಾಗಿದೆ.
         ----ಚಿನ್ಮಯಿ

ನನ್ನ ಪ್ರೀತಿಯ ರಾಮ


ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೨೦

ಇವನ ಅಮ್ಮ ಇವನಿಗೆ ಜನುಮ ನೀಡಿ ಸತ್ತಳು.
ಮರಿಯಾಗಿದ್ದಾಗ ಇವನು ನಮ್ಮ ಬಳಿ ಬಂದನು.

ನಮ್ಮಮ್ಮ ಇವನಿಗೆ ''ರಾಮ'' ಎಂದು ಹೆಸರಿಟ್ಟರು.
ಬಲು ತುಂಟನಿವನು, ಆಡುತ ನಲಿಯುತ ಬೆಳೆದನು.

ನಮ್ಮಪ್ಪ ''ಪಾರ್ಲೆ ಜಿ'' ಬಿಸ್ಕತ್ತನ್ನು ದಿನ ನಿತ್ಯ ಉಣಿಸುವರು.
ಆಗಾಗ ಮಾಂಸವನ್ನು ಸಹ ತಿನ್ನುತ್ತ ದೇಹದ ಆರೋಗ್ಯ ಕಾಪಾಡಿಕೊಳ್ಳುವನು.

ಬಹಳ ಚೂಟಿತನದಿಂದ ತರಲೆ ಕೆಲಸಗಳನ್ನು ಮಾಡುತ್ತಲೇ ಇರುವನು.
ಇವನೆಂದರೆ ಎನಗೆ ಬಲು ಇಷ್ಟ, ಅದಕ್ಕೆ ಕೆನ್ನೆಯನ್ನು ಎಳೆದು ಆಟವಾಡುವೆನು.

ತುಂಬಾ ಕಿಲಾಡಿತನದಿಂದ ಕುಪಿತಗೊಂಡಂತೆ ನಟಿಸಿ ಕರೆದಾಗ ಬರುವುದಿಲ್ಲ.
ನಾವೆಂದರೆ ಇವನಿಗೆ ಅಚ್ಚುಮೆಚ್ಚು, ನಮ್ಮನ್ನು ಎಂದಿಗೂ ಬಿಟ್ಟೋಗೋದಿಲ್ಲ.

ನನ್ನ ಪ್ರೀತಿಯ ರಾಮನಿವನು.
ಎನಗೆ ಬಲು ಇಷ್ಟನಿವನು.
          ----ಚಿನ್ಮಯಿ

Thursday, June 11, 2020

ವಾಯುಪುತ್ರರು


ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೧೯

ರಾಮಾಯಣದ ಪ್ರಮುಖ ಸ್ಥೂಲದಾರನು, ಶಿವನ ಅಂಶವುಳ್ಳ
ವಾಯು ಪುತ್ರನು ನಮ್ಮ ಹನುಮಂತನು.
ಅಂಜನ ಸುತನು, ರಾಮನ ಬಂಟನು, ನಿಜಗುಣ ಸೋಮನಾದ
ವೀರಾದಿ ಧೀರನು ನಮ್ಮ ಆಂಜನೇಯನು.

ಮಹಾಭಾರತದ ಪ್ರಮುಖ ಸ್ಥೂಲದಾರನು, ವಜ್ರ ದೇಹ ಸಹನಾಭೂತಿಯುಳ್ಳ
ವಾಯು ಪುತ್ರನು ನಮ್ಮ ವೃಕೋಧರನು.
ಕುಂತಿಯ ಸುತನು, ಹನುಮನ ಅನುಜನು, ಗದಾಯುದ್ಧ ಪ್ರವೀಣನಾದ
ನೂರಾನೆಯ ಬಲದವನು ನಮ್ಮ ಭೀಮಸೇನನು.

ಹೀಗೊಂದು ದಿನವು ಮಹಾಭಾರತದ ಕಾಲದಲ್ಲಿ ಬಲ ಭೀಮನಿಗೆ ಅವನ
ಭುಜ ಬಲದ ಮೇಲೆ ಗರ್ವ ಉಂಟಾಗುವುದು.
ಅಗ್ರಜನಾದ ಹನುಮಂತನು ತನ್ನ ಬಾಲವನ್ನು ಮೇಲಕ್ಕೆತ್ತೆಂದಾಗ
ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.

ನಂತರ ವಾಯುಪುತ್ರರಿಬ್ಬರೂ ತಬ್ಬಿಕೊಳ್ಳುವರು.
          ----ಚಿನ್ಮಯಿ

True Education

True education is not found in the books. It's inside everyone. But the thing is, we need to explore it as soon as possible and live accordingly.
        ----chinmayi

ಬಾಹ್ಯಾಕಾಶದೆಡೆಗೆ ಎನ್ನ ನಡಿಗೆ


ಚಿತ್ರಕ್ಕೆ ಪದ್ಯ/ಸಣ್ಣ ಕಥೆ-೧೮

ಸಣ್ಣ ಪ್ರಾಯದಿಂದಲು ಆಕಾಶವನ್ನೇ
ದಿಟ್ಟಿಸಿ ನೋಡುತ್ತ ಬೆಳೆದೆ.
ಆಕಾಶದಾಚೆಗೆ ಏನಿರಬಹುದೆಂದು
ಗಾಢವಾಗಿ ಯೋಚಿಸುತ್ತಿದೆ!

ಬೆಳೆಯುತ್ತ ಶಾಲೆಯಲ್ಲಿ ಕೆಲವು ಬಾಹ್ಯಾಕಾಶ
ವಿಚಾರಗಳನ್ನು ತಿಳಿದುಕೊಂಡೆ.
ಸೂರ್ಯ, ಚಂದ್ರ, ಗ್ರಹಗಳು, ತಾರೆಗಳನ್ನು
ತಲುಪಬೇಕೆಂದು ಹಂಬಲಿಸುತ್ತಿದೆ.

ಕನಸನ್ನು ಪೂರ್ಣಗೊಳಿಸಲು ಕಾಲೇಜಿನಲ್ಲಿ
ಖಗೋಳ ವಿಜ್ಞಾನವನ್ನು ಓದಿದೆ‌.
ಉತ್ತೀರ್ಣನಾಗಿ ಕೆಲಸವನ್ನೂ ಗಿಟ್ಟಿಸಿ ಬಾಹ್ಯಾಕಾಶದ
ಗ್ರಹದ ಮೇಲೆ ಸಂತಸದಿ ಓಡಿದೆ.
           ----ಚಿನ್ಮಯಿ

Tuesday, June 9, 2020

ನನ್ನ ನೆಚ್ಚಿನ ಬೈಕು


ಚಿತ್ರಕ್ಕೆ ಪದ್ಯ-೧೭

ನಿನ್ನ ಮೇಲೆ ಕುಂತು
ಸವಾರಿಸುವ ಸವಾರ ನಾನು.
ನನ್ನ ಎಲ್ಲೆಡೆಯೂ ಕರೆದೊಯ್ಯುವ
ಪ್ರೀತಿಯ ಬೈಕು ನೀನು.

ನೀನಿಲ್ಲದೆ ಎಲ್ಲಿಗೂ ಹೋಗಲು
ನನ್ನ ಮನಸ್ಸು ಒಪ್ಪದು.
ನಿನ್ನೊಂದಿಗೆ ಜಗವ ಸುತ್ತಲು
ಆಲಸ್ಯವೇ ದೂರ ಓಡುವುದು.

ನನ್ನ ಜೊತೆ ಸದಾಕಾಲವೂ
ಇರುವ ನೆಚ್ಚಿನ ಗೆಳೆಯ ನೀನು.
ಬಾ ಒಮ್ಮೆ ಸಂಚರಿಸೋಣ
ನಿಸರ್ಗದೆಡೆಗೆ ನಾನು ನೀನು.
         ----ಚಿನ್ಮಯಿ

Monday, June 8, 2020

೧೦ ಪದಗಳಲ್ಲಿ ಬದುಕಿನ ಅರ್ಥ


"ಬದುಕು- ಅದೊಂದು ಸುಂದರ ಅನುಭವ. ಬದುಕಿನ ಅನುಭವ ಅರಿತವನೇ ಬಲ್ಲ ಅದರ ರಮ್ಯತೆಯ."
        ----ಚಿನ್ಮಯಿ

ಯಾವುದೂ ಶಾಶ್ವತವಲ್ಲ

ನೀ ಪಡೆದ ಜನುಮ ಶಾಶ್ವತವಲ್ಲ.
ನೀ ಹೆದರೋ ಮರಣ ಶಾಶ್ವತವಲ್ಲ.
ಇವೆರಡರ ನಡುವಿರೋ ಬದುಕಿನ ಅನುಭವವೇ ಶಾಶ್ವತ.

ನಿನ್ನ ಸುಖ-ದುಃಖಗಳು ಶಾಶ್ವತವಲ್ಲ.
ನಿನ್ನ ನೋವು-ನಲಿವು ಶಾಶ್ವತವಲ್ಲ.
ಇದೆಲ್ಲದರಿಂದ ಕಲಿತ ಜೀವನದ ಪಾಠಗಳೇ ಶಾಶ್ವತ.

ನೀ ದುಡಿದ ಹಣವು ಶಾಶ್ವತವಲ್ಲ.
ನೀ ಸುಖಿಸುವ ಅಧಿಕಾರ ಶಾಶ್ವತವಲ್ಲ.
ಇವೆರಡರ ಹಿಂದಿರೋ ದಾನದ ಗುಣಗಳೇ ಶಾಶ್ವತ.

ನಿನ್ನ ಬಂಧು-ಬಳಗ ಶಾಶ್ವತವಲ್ಲ.
ನಿನ್ನ ಸ್ನೇಹ-ಪ್ರೀತಿ ಶಾಶ್ವತವಲ್ಲ.
ಇದೆಲ್ಲದರಿಂದ ದೊರೆತ ಮಧುರ ಕ್ಷಣಗಳೇ ಶಾಶ್ವತ.

ನೀ ಮಾಡುವ ಚಿಂತೆ ಶಾಶ್ವತವಲ್ಲ.
ನೀ ನಡುಗುವ ಭಯ ಶಾಶ್ವತವಲ್ಲ.
ಇವೆರಡರ ಒಳಗಿರೋ ಧೈರ್ಯದ ಮೂಲವೇ ಶಾಶ್ವತ.

ನಿನ್ನ ದೇಹ-ಪ್ರಾಣ ಶಾಶ್ವತವಲ್ಲ.
ನಿನ್ನ ರೂಪ-ಸೌಂದರ್ಯ ಶಾಶ್ವತವಲ್ಲ.
ಇದೆಲ್ಲದರಿಂದ ಅರಿತ ಆತ್ಮದ ಪರಿಶುದ್ಧತೆಯೇ ಶಾಶ್ವತ.

ಇಲ್ಲಿ ಯಾವುದೂ ಶಾಶ್ವತವಲ್ಲ. ಆದರೆ,
ನೀ ಮಾಡಿದ ಒಳ್ಳೆಯ ಕಾರ್ಯಗಳು ಶಾಶ್ವತವಾಗುತ್ತದೆ.
ಅದುವೆ ನಿನ್ನನ್ನು ಸತ್ತ ಮೇಲೂ ಶಾಶ್ವತವಾಗಿ ಉಳಿಸುತ್ತದೆ.
             ----ಚಿನ್ಮಯಿ

Sunday, June 7, 2020

ಹಿಂತಿರುಗದ ಸಮಯ

ನೀ ನನ್ನ ತೊರೆದು ಮರೆತರು
ನಾ ನಿನ್ನ ತೊರೆದು ಮರೆಯಲು ಆಗದು.
ನಿನ್ನ ನೆನಪಲ್ಲೇ ನಾ ಬಾಳಿದರೂ
ಮುಗಿದೋದ ಸಮಯ ಮರಳಿ ಹಿಂತಿರುಗದು.

ನಾನು ನೀನು ಕಳೆದಂತ
ಮಧುರ ಕ್ಷಣಗಳು ನೆನಪಾದವು ಇಂದು.
ಎಷ್ಟೇ ನೆನಸಿಕೊಂಡರೂ
ಮುಗಿದೋದ ಸಮಯ ಮರಳಿ ಹಿಂತಿರುಗದು.

ನಾನಿಲ್ಲಿ ಕಾದಿಹೆನು ನಿನಗಾಗಿ
ಮುಗಿದೋದ ಸಮಯ ಮರಳಿ ಹಿಂತಿರುಗದಿದ್ದರು.
ಬಳಿಬಂದು ಸೇರು ನನ್ನೊಮ್ಮೆ
ಇನ್ನುಳಿದ ಸಮಯ ಜೊತೆಯಾಗಿ ಬದುಕಲು.
         ----ಚಿನ್ಮಯಿ

ಬಾನಿಂದ ವರ್ಷ ಧರೆಗಿಳಿದಾಗ

ಬಾನಿಂದ ವರ್ಷ ಧರೆಗಿಳಿದಾಗ
ತಂಪಾಯಿತು ವಾತಾವರಣ.
ಏನನ್ನೋ ಯೋಚಿಸುತ್ತಿದ್ದ ನನ್ನನ್ನು
ಮೈಮರೆಸಿತು ಸಂಪೂರ್ಣ.

ಬಾನಿಂದ ವರ್ಷ ಧರೆಗಿಳಿದಾಗ
ಹಸಿರಸಿರು ಎಲ್ಲೆಲ್ಲೂ.
ಖುಷಿಯಿಂದ ನೆನೆದೆನು ನಾನೀಗ
ನೋಡುತ್ತ ಕರಿ ಮುಗಿಲು.
          ----ಚಿನ್ಮಯಿ

ಬಯಸಿದ್ದೆಲ್ಲಾ ಸಿಗುವಂತಿದ್ದರೆ

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಬಯಕೆಗೆ ಬೆಲೆ ಇರದು.
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ವೈಫಲ್ಯಕ್ಕೆ ಅರ್ಥವಿರದು.

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ನೋವಿಗೆ ನೆಲೆ ಇರದು.
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಮೌನಕ್ಕೆ ಅರ್ಥವಿರದು.

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಕಣ್ಣೀರಿಗೆ ಸ್ಥಾನ ಇರದು‌‌.
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಪರಾಜಯಕ್ಕೆ ಅರ್ಥವಿರದು.

ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಬದುಕು ಪರಿಪೂರ್ಣವಾಗಲು ಅಸಾಧ್ಯವದು.
ಬಯಸಿದ್ದೆಲ್ಲಾ ಸಿಗದಂತಿದ್ದರೇನೆ,
ಬದುಕಿನ ನೈಜತೆಯ ಅರಿವಾಗುವುದು.
          ----ಚಿನ್ಮಯಿ

Thursday, June 4, 2020

ವರುಷಕ್ಕೊಮ್ಮೆಯಾದರೂ


ಚಿತ್ರಕ್ಕೆ ಪದ್ಯ-೧೬

ವರುಷಕ್ಕೊಮ್ಮೆಯಾದರೂ
ನಾ ಮಾಡುವೆ ಒಬ್ಬಂಟಿ ಯಾನ.
ಮನಃ ಶಾಂತಿ ಪಡೆಯಲೆಂದು
ಸೇರುವೆ ಸ್ವರ್ಗವೆಂಬ ನಿಸರ್ಗ ತಾಣ.

ವರುಷಕ್ಕೊಮ್ಮೆಯಾದರೂ
ಪ್ರಕೃತಿಯ ಮಡಿಲ ಸೇರುವೆನು.
ಶಾಚಿತಿಗೋಸ್ಕರ ಅಲೆದಾಡುವ
ಸಂಚಾರಿ ನಾನಾಗುವೆನು.
           ----ಚಿನ್ಮಯಿ

Wednesday, June 3, 2020

ಅಧರ್ಮದಿಂದಲೇ ವಿನಾಶ

ಅಧರ್ಮದ ಪಾಲನೆ
ವಿನಾಶಕ್ಕೆ ಮುನ್ಸೂಚನೆ.
      ----ಚಿನ್ಮಯಿ

Quote for a meme-1


ಚಿತ್ರಕ್ಕೆ ಪದ್ಯ/ಉಲ್ಲೇಖ-೧೫
When I hear someone say,
"Lockdown is over, Hutto Bhai."
My reaction will be like above picture.
      ----chinmayi

No use of being intelligent!

There's no meaning of having high level outer knowledge if there is a lacking commonsense and a lack of inner knowledge.
        ----chinmayi

ಭೂತಾಯಿಯ ಮಡಿಲು

ಮಳೆರಾಯನ ಸಾನಿಧ್ಯವಿಲ್ಲದೆ
ಭೂತಾಯಿಯ ಮಡಿಲಾಯಿತು ಬರಡು.
ಪಯಿರು ಬೆಳೆಯಲು ನೀರು ಸಾಲದೆ
ಕಾಣಿಯಾಲನ ಬದುಕಾಯಿತು ಕುರುಡು.

ತಿನ್ನಲು ಅನ್ನವಿಲ್ಲದೆ ಶ್ರೀಸಾಮಾನ್ಯರ
ಜೀವನವಾಯಿತು ಅದೋಗತಿ.
ಕುಡಿಯಲು ಸಹ ನೀರು ಸಿಗದೆ ಬದುಕಿನ್ನು
ಪರದಾಟದ-ನರಳಾಟದ ಫಜೀತಿ.

ಪ್ರಕೃತಿಗೆ ದ್ರೋಹ ಬಗೆದರೆ ಇದೆ ಗತಿ
ಎಂದು ಅರಿಯಬೇಕು ಇನ್ನಾದರು.
ಅರಿಯದ್ದಿದ್ದರೆ ಪ್ರಕೃತಿಯ ಭಾರಿ
ವಿಕೋಪಕ್ಕೆ ಬಲಿಯಾಗಬೇಕು ನಾವೆಲ್ಲರು.

ಓ ನಿಸರ್ಗವೇ ಮುನಿಸು ತೊರೆದು ಮನ್ನಿಸು
ಮೂರ್ಖ ಜನರ ಕ್ರೌರ್ಯ ಕೃತ್ಯಗಳನ್ನು.
ದಯಮಾಡಿ ಮಳೆರಾಯನ ದಯಪಾಲಿಸಿ
ಭರ್ತಿಮಾಡು ಭೂತಾಯಿಯ ಮಡಿಲನ್ನು.
       ----ಚಿನ್ಮಯಿ

"ಬದುಕು"- ಅದೊಂದು ಸುಂದರ ಅನುಭವ.

ಜನಿಸಲು ಈ ಭುವಿಯಲ್ಲಿ
ಪಾಪ ಪುಣ್ಯದ ಲೆಕ್ಕಾಚಾರವೆಷ್ಟೋ!
ಜನನದ ನಂತರ ಬದುಕಲ್ಲಿ
ಪಾಪ ಪುಣ್ಯವ ಮಾಡುವವರೆಷ್ಟೋ!

ಇದೆಲ್ಲದರ ನಡುವೆ ಬದುಕನ್ನ
ಹಾಗೋ ಹೀಗೋ ಸಾಗಿಸುವರು.
ಕೊರಗುತ ನರಳುತ ಬದುಕಿನ
ಮೂಲವನ್ನೇ ಮರೆತಿರುವರು.

ಮರಣ ನಿಶ್ಚಿತವೆಂದರು ನಿರ್ಭಯದಿ
ಜೀವಿಸಿ ಸಾಧಿಸಬೇಕು ಅಲ್ಲವೇ?
ಬದುಕೊಂದು ಸುಂದರ ಅನುಭವವೆಂದು
ಅರಿತು ಬಾಳಿದರೆ ಒಳಿತಲ್ಲವೇ?

ಬದುಕಿನ ಅನುಭವ ಅರಿತವನೇ
ಬಲ್ಲ ಅದರ ರಮ್ಯತೆಯ.
ಅರಿಯದವರು ದೂಷಿಸಲಷ್ಟೇ
ಸಾಧ್ಯ ಬದುಕಿನ ವ್ಯಥೆಯ.
       ----ಚಿನ್ಮಯಿ

Tuesday, June 2, 2020

ಹಸಿವು ಕಲಿಸಿದ ಪಾಠ

ಅಂದೊಂದು ಕಾಲದಲ್ಲಿ ಝಣ ಝಣ
ಹಣದ ಮದವೇರಿ ಅಜ್ಞಾನಿಯಾಗಿದ್ದೆ.
ರೈತನ ಕಷ್ಟ ಹಾಗು ಅನ್ನದ ಮಹಿಮೆ
ತಿಳಿಯದೆ ಅಹಂಕಾರದಿ ಮೆರೆಯುತ್ತಿದ್ದೆ.

ಇಂದೊಂದು ಕಾಲ ಬಂತು ಒಂಚೂರು
ಹಣವೇ ಇಲ್ಲದಂತೆ ಬದುಕಲು.
ತಿನ್ನಲು ಏನೂ ಸಿಗದೆ ಪರದಾಡುತ್ತಿರುವೆನು
ನೆನಸಿಕೊಂಡು ಮಾಡಿದ ತಪ್ಪುಗಳು.

ಜೇಬಿನಲ್ಲಿ ಬಿಡಿಗಾಸು ಇಲ್ಲದಂತಾಯಿತೀಗ
ಕೊಂಡು ತಿನ್ನಲು ಅನ್ನವನ್ನು.
ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿಯಾಯಿತೀಗ
ಉಳಿಸಿಕೊಳ್ಳಲು ಪ್ರಾಣವ‌ನ್ನು.

ಖಾಲಿ ಜೇಬು ಹಾಗು ಹಸಿದ ಹೊಟ್ಟೆ
ಕಲಿಸಿದವು ಜೀವನದ ಪಾಠವ.
ಅಜ್ಞಾನವ ಅಳಿಸಿ ಜ್ಞಾನವ ಗಳಿಸಿ
ಅರಿತೆನು ಅನ್ನದ ಋಣವ.

"ಅನ್ನಂ ಪರಬ್ರಹ್ಮ ಸ್ವರೂಪಂ"
             ----ಚಿನ್ಮಯಿ

Monday, June 1, 2020

ಬರಿದಾಗಿದೆ ಈ ಬಾಳು!


ಚಿತ್ರಕ್ಕೆ ಪದ್ಯ-೧೪


ಬರಿದಾಗಿದೆ ಈ ಬಾಳು
ನೀನಿಲ್ಲದೆ ಪ್ರೇಯಸಿ.
ಒಡೆದ ಹೃದಯವ ಜೋಡಿಸು
ನಿನ್ನ ಹೃದಯವ ಸೇರಿಸಿ.

ಚೂರಾಗಿದೆ ಈ ಬಾಳು
ಗಾಡಿಯ ಗಾಜು ಒಡೆದಂತೆ.
ಭದ್ರವಾದ ಗಾಜು ಒಡೆದೋಗದ
ಹಾಗೆ ಪ್ರೀತಿಸು ಮೊದಲಿನಂತೆ.

ಬರಿದಾಗಿದೆ ಈ ಬಾಳು
ನೀನಿಲ್ಲದೆ ರೂಪಸಿ.
ಬಳಿ ಬಂದು ಸೇರು ಒಮ್ಮೆ
ನನ್ನನ್ನು ಪರದೆಯ ಸರಿಸಿ.

ಸವೆದೋಗಿದೆ ಈ ಬಾಳು
ಹಳೆಯ ಗಾಡಿಯ ಚಕ್ರದಂತೆ.
ಹೊಸದಾದ ಚಕ್ರವು ಚಲಿಸುವ ಹಾಗೆ
ಎನ್ನ ಜೊತೆ ಪಯಣಿಸು ಮುಂಚೆಯಂತೆ.
      ----ಚಿನ್ಮಯಿ

ನಿಸರ್ಗವೇ ಸ್ವರ್ಗ


ಚಿತ್ರಕ್ಕೆ ಪದ್ಯ-೧೩

ಮೆಲ್ಲನೆ ಜಾರಿದನು ಮಳೆರಾಯನು
ತಂಪಾಗಿಸಲು ಧರಿತ್ರಿಯ ಒಡಲು.
ಸುತ್ತಲೆಲ್ಲಿ ನೋಡಲು ಹಸಿರ ಚಾಪೆ
ಹಾಸಿದಂತೆ ಕಾಣುತ್ತಿದೆ ಮರ ಗಿಡಗಳು.

ತಣ್ಣನೆಯ ಗಾಳಿ ಬೀಸುತ್ತಿರಲು
ಕಂಡಿತೊಂದು ಖಾಲಿಯ ಮಾರ್ಗ.
ಹಾಗೆ ಸುಮ್ಮನೆ ಅತ್ತ ಸಾಗಿದಾಗ
ಅರಿತೆನು ನಿಜವಾಗಿಯೂ ನಿಸರ್ಗವೇ ಸ್ವರ್ಗ.
          ----ಚಿನ್ಮಯಿ

Sunday, May 31, 2020

ಪ್ರೀತಿಯ ನಿರೀಕ್ಷೆ

ಕನಸೊಳು ಕಾಡಿಸಿ ನಿದ್ದೆಗೆಡಿಸಿ ಎನ್ನ
ಪ್ರೇಮ ಕೈದಿಯಾಗಿಸಿದೆ ನೀ ಮನದನ್ನೆ.
ಪೂರ್ಣ ಚಂದಿರನಂತೆ ನೀ ನಕ್ಕಾಗ
ಆ ಚಂದಿರನ ಪ್ರತಿಬಿಂಬಿವೇ ನಿನ್ನ ಗುಳಿಕೆನ್ನೆ.

ಕನಸ ನನಸಾಗಿಸಲು, ನಿನ್ನ ನಾ ಓಲೈಸಲು
ಪ್ರೀತಿಯೇ ಸಾಕು ಮಾಡಬೇಕಿಲ್ಲ ತಗಾದೆ.
ಕನಸ ನನಸಾಗಿಸುತ, ಎನ್ನ ನೀ ಓಲೈಸುತ
ಒಂದಾಗಿಸುವೆಯ ನಮ್ಮಿಬ್ಬರ ಇರಾದೆ?
          ----ಚಿನ್ಮಯಿ

Saturday, May 30, 2020

ಮುಂದೆ ಸಾಗಲ? ಹಿಂದೆ ಸಾಗಲ?

ಮುಂದೆ ಸಾಗಲ? ಹಿಂದೆ ಸಾಗಲ?
ಎತ್ತ ಸಾಗಲಿ ಚೆನ್ನಕೇಶವ!
ದಾರಿ ತೋರಿಸಿ ಎನ್ನ ಸಾಗಿಸು
ಧರ್ಮದೆಡೆಗೆ ಓ ಮಾಧವ.

ಮುಂದೆ ಸಾಗಲ? ಹಿಂದೆ ಸಾಗಲ?
ನೀನೇ ಆಜ್ಞಾಪಿಸು ಮುಕುಂದನೆ.
ಎತ್ತ ಸಾಗಲು ನೀನೇ ಇರುವಾಗ
ದಿಟ್ಟ ನಡೆಯೊಳು ಮುನ್ನುಗ್ಗುವೆ ಪರನ್ಧಾಮನೆ.
        ----ಚಿನ್ಮಯಿ

Friday, May 29, 2020

ಎನ್ನೆದೆಯನು ತಂಪಾಗಿಸು

ಎನ್ನೆದೆಯನು ತಂಪಾಗಿಸು
ಬಾ ಮಳೆಯೇ ಬಾ.
ತಂಗಾಳಿಯ ಬೀಸುತಲಿ
ಬಾ ಮಳೆಯೇ ಬಾ.

ಮೋಡಗಳ ಸಮ್ಮಿಲನದಿಂದ
ಬಾ ಮಳೆಯೇ ಬಾ.
ಹನಿಗಳ ತೋರಣವಾಗಿ
ಬಾ ಮಳೆಯೇ ಬಾ.

ಭೂ ತಾಯಿಯ ಬಿಸಿ ನೀಗಿಸು
ಬಾ ಮಳೆಯೇ ಬಾ.
ಪ್ರಕೃತಿಯ ನಗಿಸಲು
ಬಾ ಮಳೆಯೇ ಬಾ.

ಗುಡುಗುತಲಿ ಮಿಂಚುತಲಿ
ಬಾ ಮಳೆಯೇ ಬಾ.
ಕಾಯುತಲಿ ನಿಂತಿಹೆನು
ಬಾ ಮಳೆಯೇ ಬಾ.
       ----ಚಿನ್ಮಯಿ

ಕನಸುಗಳನ್ನು ಹೊತ್ತು ಸಾಗುತ್ತಿರುವೆ

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಮನಸ್ಸಲ್ಲೂ, ಎದೆಯಲ್ಲೂ.
ಕನಸುಗಳನ್ನು ಬೆನ್ನು ಹತ್ತಿರುವೆ
ನಿದ್ರೆಯಲ್ಲೂ, ಎಚ್ಚರದಲ್ಲೂ.

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಗುರಿಯನ್ನು ಮುಟ್ಟಲು.
ಕನಸುಗಳನ್ನು ಬೆನ್ನು ಹತ್ತಿರುವೆ
ಶ್ರಮದಿಂದ ನನಸಾಗಿಸಲು.

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಅವಮಾನಗಳಿಗೆ ಉತ್ತರಿಸಲು.
ಕನಸುಗಳನ್ನು ಬೆನ್ನು ಹತ್ತಿರುವೆ
ಅಸಾಧ್ಯವನ್ನು ಸಾಧಿಸಲು.

ಕನಸುಗಳನ್ನು ಹೊತ್ತು ಸಾಗುತ್ತಿರುವೆ
ಜೀವನವ ಸಾರ್ಥಕ ಪಡಿಸಲು.
ಕನಸುಗಳನ್ನು ಬೆನ್ನು ಹತ್ತಿರುವೆ
ಸತ್ತ ಮೇಲೂ ಮತ್ತೆ ಬದುಕುವಂತಾಗಲು.
      ----ಚಿನ್ಮಯಿ

ಬದುಕಿನ ಶಿಖರವನೇರಲು ಶ್ರಮವಿರಬೇಕು

ಬದುಕಿನ ಶಿಖರವನೇರಲು ಶ್ರಮವಿರಬೇಕು,
ಏರುತಲಿ ನಮಗೆ ನಾವೇ ಸ್ಪೂರ್ತಿ ಆಗಬೇಕು.
ಬದುಕಿನ ಶಿಖರವನೇರಲು ತಾಳ್ಮೆಯಿರಬೇಕು,
ಏರಿದ ಮೇಲೆ ಬೀಳದೆ ಅಲ್ಲಿಯೇ ನಿಲ್ಲಬೇಕು.

ಬದುಕಿನ ಶಿಖರವನೇರಿದ ಮೇಲೆ ಸರಳತೆಯಿರಬೇಕು,
'ನಾನೇ' ಎಂಬ ಅಹಂಕಾರ ತೊರೆದು ಬಾಳಬೇಕು.
ಬದುಕಿನ ಶಿಖರವನೇರಿದ ಮೇಲೆ ನಡೆದ ಹಾದಿಯ ಜ್ಞಾಪಿಸಿಕೊಳ್ಳಬೇಕು,
ಮರೆತು ಬಾಳಿದರೆ, ಬೀಳುವುದು ಖಚಿತವೆಂದು ಅರಿಯಬೇಕು.
          ----ಚಿನ್ಮಯಿ

Tuesday, May 26, 2020

ಪ್ರತಿದಿನವೂ ಹೊಸ ಬದುಕು

ಪ್ರತಿದಿನವೂ ಹೊಸ ಬದುಕು,
ಹಳೆ ನೆನಪುಗಳ ಹಾದಿಯಲಿ.
ಪ್ರತಿದಿನವೂ ಹೊಸ ಹುರುಪು,
ಛಲ ತುಂಬಿರುವ ಹೃದಯದಲಿ.

ಪ್ರತಿಕ್ಷಣವೂ ಹೊಸ ಬೆಳಕು,
ಅದೇ ಕಣ್ಣಿನ ನೋಟದಲಿ.
ಪ್ರತಿಕ್ಷಣವೂ ಹೊಸ ಹೊಳಪು,
ನಗೆ ಬೀರುವ ಮೊಗದಲಿ.
           ----ಚಿನ್ಮಯಿ

ಎಲ್ಲೊ ಕೇಳಿದಂತಿದೆ ಧ್ವನಿ

ಎಲ್ಲೊ ಕೇಳಿದಂತಿದೆ ಧ್ವನಿ,
ಅದು,
'ಆಕಾಶವಾಣಿಯೋ!'
'ನನ್ನೊಳಗಿನ ದನಿಯೋ!'
ಇದ ಅರಿಯದೆ ಆದೆನು ನಾನು ಮೌನಿ.

ಎಲ್ಲೊ ಕೇಳಿದಂತಹ ಧ್ವನಿ,
ಹೇಳಿತು,
'ಒಳ್ಳೆಯವನಾಗೋ ಮನುಜನೆಂದು.'
'ಧರ್ಮದ ಹಾದಿಯೊಳು ನಡೆ ಮನುಜನೆಂದು.'
ಇದ ಅರಿಯಲು ಆಗಬೇಕು ನಾವು ಧ್ಯಾನಿ.
       ----ಚಿನ್ಮಯಿ

Saturday, May 23, 2020

ಏಕಾಂತ ಹಿತವೆನಿಸುತ್ತಿದೆ!

ಚಿತ್ರಕ್ಕೆ ಪದ್ಯ-೧೨


ಏಕಾಂತ ಹಿತವೆನಿಸುತ್ತಿದೆ
ಪ್ರಶಾಂತ ವಾತಾವರಣದಲ್ಲಿ ಕೂತಿರುವಾಗ.
ಏಕಾಂಗಿ ನಾನಾಗಿರಲು
ನಿನ್ನನ್ನೇ ನೆನೆದೆನು ನಿಸರ್ಗದ ಮಡಿಲಲ್ಲಿ ಈಗ.

ಏಕಾಂತ ಹಿತವೆನಿಸುತ್ತಿದೆ
ಕಾರ್ಮೋಡಗಳ ಕಂಡಾಗ.
ಏಕಾಂಗಿ ನಾನಾಗಿರಲು
ಮಳೆ ಹನಿಯೇ ಸ್ನೇಹಿತನೀಗ.

ಏಕಾಂತ ಹಿತವೆನಿಸುತ್ತಿದೆ
ಆ ಬೆಟ್ಟ ಗುಡ್ಡಗಳ ನೋಡುವಾಗ.
ಏಕಾಂಗಿ ನಾನಾಗಿರಲು
ಮಂಜು ಕವಿದು ಏನೂ ಕಾಣದಂತಾಗಿದೆ ಈಗ.

ಏಕಾಂತ ಹಿತವೆನಿಸುತ್ತಿದೆ
ನೀರಿನ ಶಬ್ಧವ ಕೇಳುವಾಗ.
ಏಕಾಂಗಿ ನಾನಾಗಿರಲು
ಕಣ್ಣೀರು ಜಾರಿ ಆವಿಯಾಯಿತೀಗ.
           ----ಚಿನ್ಮಯಿ

Friday, May 22, 2020

ಅತೀ ಸುಂದರವಾಗಿದೆ


ಚಿತ್ರಕ್ಕೆ ಪದ್ಯ-೧೧

ಅತೀ ಸುಂದರವಾಗಿದೆ ನೋಡಾ
ಬಾನ ಮುಗಿಲಿನ ಚಿತ್ರಣ.
ದಿನಕರ ತೆರಳಲು ಬಾನಂಗಳವು
ಕೆಂಪು-ಹಳದಿ-ಕೇಸರಿಯ ಮಿಶ್ರಣ.

ಅತೀ ಸುಂದರವಾಗಿದೆ ಕೇಳಾ
ಮರ ಗಿಡದೊಳು ಹಕ್ಕಿಗಳ ಇಂಚರ.
ಗಾಳಿಯ ನಾದಕ್ಕೆ ಪದ ಹಾಡುತ
ಬಂದನೋರ್ವ ಇಗ್ಗಾಲಿ ಸವಾರ.
               ----ಚಿನ್ಮಯಿ

ಬಾಂಧವ್ಯ

"ಸೂಚನೆ: ಸಾಹಿತ್ಯಲೋಕ ಹಾಗು ಪುರಾಣದ ಪ್ರಕಾರ ಭೂಮಿ, ಸೂರ್ಯ ಹಾಗು ಚಂದ್ರನ ಸಂಬಂಧ 'ಪ್ರಿಯಕರರ' ರೀತಿಯಲ್ಲಿರುತ್ತದೆ. ಆದ್ದರಿಂದ, ಈ ಕವನವನ್ನು ನನ್ನ ಸ್ವಂತ ಕಲ್ಪನೆ ಎಂದು ಭಾವಿಸಿ. ಇದೊಂದು ಕಾಲ್ಪನಿಕ ಕವಿತೆ (ಕವಿಸಮಯ)."

ಓರ್ವ ಧರಿತ್ರಿಗೆ ಇಬ್ಬರು ಸುತರು
ಅವರೇ ಅಹಸ್ಕರ ಹಾಗು ಶಶಧರ.
ಭೇದ ಭಾವ ತೋರದ ಹೆತ್ತ ಮಡಿಲೇ
ಸಹಬಾಳ್ವೆಯ ಪ್ರೀತಿಯ ಮಂದಿರ.

ಅಗ್ರಜನೇ ಶ್ರೇಷ್ಠನೆಂದು ಶಶಧರ ಹೇಳಿದನು.
ಅನುಜನೇ ಸಮರ್ಥನೆಂದು ಅಹಸ್ಕರ ಹೇಳಿದನು.
ಇಬ್ಬರ ಮಾತುಗಳ ಕೇಳಿ ಖುಷಿಪಟ್ಟಳು ಧರಿತ್ರಿಯು.
ಇಬ್ಬರ ಪ್ರೀತಿಯ ಕಂಡು ಜನನಿಯ ಜನುಮ ಸಾರ್ಥಕವು.
              ----ಚಿನ್ಮಯಿ

Wednesday, May 20, 2020

ಸ್ವರ್ಗ ಹಾಗು ನರಕ

ಸ್ವರ್ಗ:
ಪುಣ್ಯ ಕಾರ್ಯಗಳ ಪ್ರತಿಬಿಂಬವೇ ಸ್ವರ್ಗ.
ಧರ್ಮದ ಹಾದಿಯಲ್ಲಿ ನಡೆದರೆ ಸ್ವರ್ಗ ಪ್ರಾಪ್ತಿ.

ನರಕ:
ಪಾಪ ಕಾರ್ಯಗಳ ಪ್ರತಿಬಿಂಬವೇ ನರಕ.
ಅಧರ್ಮದ ಹಾದಿಯಲ್ಲಿ ನಡೆದರೆ ನರಕ ಪ್ರಾಪ್ತಿ.

ಸತ್ಯಯುಗ, ತ್ರೇತಾಯುಗ ಹಾಗು ದ್ವಾಪರಯುಗದಲ್ಲಿ ಮೇಲಿನ ಹಾಗೆ ನಡೆಯುತ್ತದೆ. ಆದರೆ, ಕಲಿಯುಗದಲ್ಲಿ ಸ್ವರ್ಗ ನರಕ ಎರಡೂ ಇಲ್ಲಿಯೇ.
              ----ಚಿನ್ಮಯಿ

ಕೃಷ್ಣಾರ್ಜುನರ ಸಂಭಾಷಣೆ


ಚಿತ್ರಕ್ಕೆ ಪದ್ಯ-೧೦

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣಾರ್ಜುನರ ನಡುವೆ ನಡೆಯುವ ಸಣ್ಣ ಸಂಭಾಷಣೆಯ ಕುರಿತಾಗಿ ಭಗವದ್ಗೀತೆಯಲ್ಲಿ ಸ್ವತಃ ಭಗವಂತ ಶ್ರೀ ಕೃಷ್ಣನೇ ಬರೆದಿದ್ದಾನೆ. ಇದರ ಅನುಸಾರವಾಗಿ ನನ್ನದೊಂದು ಸಣ್ಣ ಅರ್ಪಣೆ.

ನೀ ಹೇಳೋ ಮಾಧವ.
ನೀ ಹೇಳೋ ಮಾಧವ.
ಯಾಕೀ ಕ್ರೂರ ಕೃತ್ಯವು?
ಯಾಕೀ ಘೋರ ಅಂತ್ಯವು?
ನನಗಾಗದು ಯುದ್ಧ ಮಾಡಲು.
ಜೊತೆಗಾರರ ಮಟ್ಟ ಹಾಕಲು.

ನೀ ಕೇಳೋ ಮಾನವ.
ನೀ ಕೇಳೋ ಮಾನವ.
ಜಗದ ಪಾಲನೆಗೆ ಅನಿವಾರ್ಯ ಈ ಕೃತ್ಯವು.
ಆಗಲಿದೆ ಧರ್ಮದಿಂದ ಅಧರ್ಮದ ಅಂತ್ಯವು.
ನಿನ್ನ ತಪ್ಪೇನಿಲ್ಲ, ನಡೆ ಧರ್ಮದ ಯುದ್ಧಕ್ಕೆ ನೀ ಹೂಡು ಬಾಣವ.
ಎಲ್ಲವೂ ನನ್ನಿಂದಲೇ, ನೀ ಕ್ಷತ್ರಿಯನು ಮರೆಯದಿರು ನಿನ್ನ ಕಾಯಕವ.
              ----ಚಿನ್ಮಯಿ

Tuesday, May 19, 2020

ನಮ್ಮ ಭವ್ಯ ಭಾರತ

ಸನಾತನ ಧರ್ಮದ ಮೂಲಧಾತು ಇದೆ.
ನಮ್ಮ ಭರತವರ್ಷವೇ ಪ್ರಾಣಧಾತು ನಮಗೆ.
ವೇದ, ಪುರಾಣ, ಉಪನಿಷತ್ಗಳ ಜನ್ಮ ಭೂಮಿ ಇದೆ.
ಸಾಧು ಸಂತರಿಂದ ಜ್ಞಾನ ವಿಜ್ಞಾನದ ಏಳಿಗೆ.

ಭಗವಂತನು ಬರೆದ ಭಗವದ್ಗೀತೆಯ ಸ್ಥಾನ ಇದೆ.
ರಾಮಾಯಣದಿಂದ ಸಂಬಂಧಗಳಲ್ಲಿ ಒಳ್ಳೆತನ ಇರಬೇಕೆಂದು (ಹೆಣ್ಣಿನ ವ್ಯಾಮೋಹ ಬೇಡವೆಂದು) ಅರಿವಾಗುವುದು.
ಶರಣರು ಸಂತರು ಹುಟ್ಟಿದ ಪುಣ್ಯ ಭೂಮಿ ಇದೆ.
ಮಹಾಭಾರತದಿಂದ ಸಂಬಂಧಗಳಲ್ಲಿ ಹಗೆತನ ಇರಬಾರದೆಂದು (ಮಣ್ಣಿನ ವ್ಯಾಮೋಹ ಬೇಡವೆಂದು) ಅರಿವಾಗುವುದು.

ಸಾಹಿತ್ಯ, ಸಂಗೀತ, ನಾಟ್ಯದ ಮಡಿಲು ಇದೆ.
ಎಷ್ಟೋ ಮೊದಲುಗಳು ಶುರುವು ನಮ್ಮಿಂದಲೇ.
ಕಾವ್ಯ, ಕಲೆ, ಕ್ರೀಡೆಗಳ ಉತ್ಸಾಹದ ಬೇರು ಇದೆ.
ಮೊದಲ ವಿಶ್ವವಿದ್ಯಾಲಯ ಶಿಕ್ಷಣ ಶುರುವು ಇಲ್ಲಿಂದಲೇ.

ಮಾನವೀಯತೆಯ ಜಗಕ್ಕೆ ತಿಳಿಸಿದ ದೇಶ ಇದೆ.
ಆಚಾರ ವಿಚಾರಗಳ ಹೆಮ್ಮೆಯ ಭೂಮಿ ನಮ್ಮದು.
ನಮಗೆ ಯುಗ ಯುಗಗಳ ಇತಿಹಾಸವಿದೆ.
ವೀರ ಶೂರರು ಅಂಜದೆ ಹೋರಾಡಿದ ಭವ್ಯ ಭಾರತವಿದು.

ಕೇಳಿರಿ ಹೇಳುವೆ ಹಾಡುತ.
ಹಾಡಿರಿ ಜೊತೆ ಶೃತಿ ಸೇರಿಸುತ.
ಇದುವೇ ನಮ್ಮ ಭವ್ಯ ಭಾರತ.
ಇದುವೇ ನಮ್ಮ ಭವ್ಯ ಭಾರತ.
                ----ಚಿನ್ಮಯಿ

Saturday, May 16, 2020

ಪಂಚ ಮಹಾ ಭೂತಗಳು


ಚಿತ್ರಕ್ಕೆ ಪದ್ಯ-೯

''ಪೃಥ್ವಿ''ಯೇ ಮಾತೆಯಾಗಿ, ಮನೆಯಾಗಿ
ನಮಗೆ 'ಉಂಗುರದ ಬೆರಳೇ' ಸಂಕೇತ.
'ಮೂಗಿ'ನಿಂದಲೇ ವಾಸನೆಯನ್ನು ಹಿಡಿಯುವಂತೆ
ಪೃಥ್ವಿಯಲ್ಲಿ ಸಮನಾಗಿ ಜೀವಿಸುವುದೇ ನಿಮಿತ್ತ.

"ಜಲ"ವೇ ದೇವನಾಗಿ, ಪ್ರಾಣ ಧಾತುವಾಗಿ
ನಮಗೆ 'ಕಿರು ಬೆರಳೇ' ಸಂಕೇತ.
'ನಾಲಿಗೆ'ಯಿಂದಲೇ ರುಚಿ ಕಂಡು
ಜಲವು ನಮ್ಮೊಳಗೆ ಸೇರುವುದೇ ನಿಮಿತ್ತ.

"ಅಗ್ನಿ"ಯೇ ದೇವನಾಗಿ, ಬಾಳಿಗೆ ಬೆಳಕಾಗಿ
ನಮಗೆ 'ಹೆಬ್ಬೆರಳೇ' ಸಂಕೇತ.
'ನಯನ'ದಿಂದಲೇ ಅಗ್ನಿಯನ್ನು ವೀಕ್ಷಿಸಿ
ನಮ್ಮ ಬಾಳಿನ ದೀಪ ಉರಿಸುವುದೇ ನಿಮಿತ್ತ.

"ವಾಯು"ವೇ ದೇವನಾಗಿ, ಜೀವ ಧಾತುವಾಗಿ
ನಮಗೆ 'ತೋರು ಬೆರಳೇ' ಸಂಕೇತ.
'ಚರ್ಮ'ದಿಂದಲೇ ವಾಯುವನ್ನು ಸ್ಪರ್ಶಿಸಿ
ನಮ್ಮೊಳಗೆ ಸ್ವೀಕರಿಸುವುದೇ ನಿಮಿತ್ತ.

"ಆಕಾಶ"ವೇ ದೇವನಾಗಿ, ರಕ್ಷಣಾ ಕವಚವಾಗಿ
ನಮಗೆ 'ನಡು ಬೆರಳೇ' ಸಂಕೇತ.
'ಕರ್ಣ'ದಿಂದಲೇ ಶಬ್ದವನ್ನು ಗ್ರಹಿಸುವಂತೆ
ಆಕಾಶದಡಿ ಸುರಕ್ಷಿತವಾಗಿರುವುದೇ ನಿಮಿತ್ತ.
             ----ಚಿನ್ಮಯಿ

Wednesday, May 13, 2020

ಕಡಲು

ಅಳಿವೆಯನ್ನು ನೋಡಲು
ತವಕದಿ ನಾ ಕುಣಿ ಕುಣಿದು ಬಂದೆನು.
ಸಿಹಿನೀರು-ಉಪ್ಪುನೀರು ಸಂಗಮವಾಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು‌.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಅಳಿವೆಯನ್ನು.

ಅಲೆಗಳ ಮಧುರ ನಾದದ
ಸೆಳೆತಕ್ಕೆ ನಾ ಓಡಿ ಓಡಿ ಬಂದೆನು.
ನಿಟ್ಟುಸಿರಿಂದ ಅಲೆಗಳು ನಿಶಬ್ದವಾಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ನಿಶಬ್ದವನ್ನು.

ಮರಳಲ್ಲಿ ಪಾದದ ನಕ್ಷೆಯನ್ನು
ಬಿಡಿಸಲು ಕಾತರದಿ ನಾ ಬಂದೆನು.
ಬಿಡಿಸುವಾಗಲೇ ನಕ್ಷೆಯನ್ನು ಅಲೆಗಳು ಅಳಿಸಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಅಲೆಗಳನ್ನು.

ಸೂರ್ಯನು ನಾಚುತ ಕರೆದಾಗ
ಗಾಳಿಯಲ್ಲಿ ತೇಲುತ ನಾ ಬಂದೆನು.
ದೂರದಿ ಅಲ್ಲಿ ಎಲ್ಲೋ ಸೂರ್ಯನು ಮುಳುಗಲು
ಮೌನಿಯಾಗಿ ವೀಕ್ಷಿಸಿದೆನು ಕಡಲನು‌.
ಮೌನಿಯಾಗಿ ವೀಕ್ಷಿಸಿದೆನು ನಾ ಕಡಲ ತೀರದ ಸೂರ್ಯನನ್ನು.
               ----ಚಿನ್ಮಯಿ

Sunday, May 10, 2020

ಅಮ್ಮನಿಗೊಂದು ಲಾಲಿ ಹಾಡು

ಜಠರದಲ್ಲೇ ಲಾಲಿ ನಾದವ ಕೇಳಿದೆನು ನಾ ಅಂದು.
ಮಮತೆಯ ಲಾಲಿ ನಾದವ ನಾ ಹಾಡುವೆ ನಿನಗಿಂದು.

ನಿಷ್ಕಲ್ಮಶ ಹೃದಯದ ತಾಯಿಯೇ
ಕಂದಮ್ಮನ ಆರೈಕೆಗೆ ವಾತ್ಸಲ್ಯದ ನೆರಳು.
ಕತ್ತಲಿಂದ ಬೆಳಕಿನ ಕಡೆಗೆ
''ಅ ಆ'' ಕಲಿಸಿ, ಜ್ಞಾನವ ಹೊದಿಸಿ ದೂಡಿದಳು.

ದಿನಕರನ ಪ್ರಕಾಶದಂತೆ ನಗುತ
ಸಂತಸದ ಮಳೆಯನ್ನು ಸುರಿಸಿದಳು.
ಚಂದಿರನ ಹತ್ತಿರ ಕರೆದೊಯ್ಯುವೆ
ಎಂದು ಸಿಹಿ ಸುಳ್ಳು ಹೇಳಿ ಅನ್ನವ ಉಣಿಸಿದಳು.

ಸಮಚಿತ್ತ ಯೋಚನೆ ಮಾಡುತಲಿ
ಸದ್ಭಾವನೆಯ ಮೂಲಧಾತು ಆಗಿದಳು.
ಔದಾರ್ಯವ ಧಾರೆ ಎರೆದು
ಪ್ರಾಜ್ಞವಂತಿಕೆಗೆ ದಾರಿಯ ತೋರಿದಳು.

ಇನ್ನೆಷ್ಟು ಲಾಲಿಯ ಹಾಡಲಿ ನಿನಗೆಂದು
ಹಾಡಲು ಸಾಕಾಗಿ ಬತ್ತಿ ಹೋಯಿತು ಕೊರಳು.
ಲಾಲಿಯ ಹಾಡ ಕೇಳುವ ಬಯಕೆಯಿಂದು
ಕೇಳುತ ನಲಿಯುತ ಸೇರುವೆ ಮಡಿಲು.
             ----ಚಿನ್ಮಯಿ

ನನ್ನ ಕಾಡಿದ ಕನ್ಯೆ

ಇವಳ ಪ್ರತಿ ಮಾತಿನಲ್ಲೂ ಸರಳತೆ,
ಏನಂತ ವರ್ಣಿಸಲಿ ಇವಳೆ ಸೌಂದರ್ಯ ರಾಶಿ.
ಇವಳ ಪ್ರತಿ ನೋಟದಲ್ಲೂ ಮುಗ್ಧತೆ,
ಆಹಾ! ಬಲು ಅಪರೂಪ ಇಂತಹ ರೂಪದರ್ಶಿ.

ನನ್ನ ನಗುವೇ ತಲೆಬಾಗಿತು ಇವಳ ಮುಗುಳು ನಗುವಿಗೆ,
ಇವಳೇ ನನಗೆ ಬಹಳ ಅಚ್ಚುಮೆಚ್ಚಿನ ಗೆಳತಿ.
ನನ್ನ ಹೃದಯ ಕರಗಿತು ಇವಳ ಸ್ನೇಹ ತುಂಬಿದ ಹಿತ ನುಡಿಗೆ,
ಕೇಳೇ ನೀ, ನನಗೆ ನೀನೆಂದರೆ ಬಹಳ ಪ್ರೀತಿ.

ಸಾಮಾಜಿಕ ಕಳಕಳಿಯುಳ್ಳ ಸೌಮ್ಯ ಹೆಣ್ಣು ನೀನು,
ಎಲ್ಲರ ಮೆಚ್ಚುಗೆ ಪಡೆದ ನೀನು ತುಂಟುತನದ ಜಾಣ್ಮೆ.
ಮುದ್ದು ಮುದ್ದಾದ ಗೊಂಬೆಯು ನೀ ನನ್ನ ಅಮ್ಮು,
ಐಶ್ವರ್ಯ ನಿನ್ನ ಹೆಸರು ಹಾಗು ನೀನು ನನ್ನ ಕಾಡಿದ ಕನ್ಯೆ.

           ----ಚಿನ್ಮಯಿ

Girl's beauty

The beauty of the beautiful girl consists of-
Silky hairs,
Dazzy eyes,
Naughty smile,
Hotty style,
Crazy lips,
Curvy hips.
Soulful heart,
Heartful love.
What a beauty😍
           ----chinmayi

Collab 2 with fellow mates

ಕಳೆದುಹೋದ ಹಳೆಯ ಲೇಖನಿಯೊಮ್ಮೆ ದೊರೆತರೆ,
ಪದಗಳ ಕಳೆಯದೆ ಲಿಪಿಯ ಲಿಖಿಸುವೆ.
      ----ಶರ್ಮಾದಿತ್ಯ

ನನ್ನ ಪ್ರೀತಿಯ ಅದರಲ್ಲಿ ಬಿಂಬಿಸುವೆ,
ಮನದಾಳದ ಮಾತನ್ನು ವರ್ಣಿಸುವೆ...!
            ----ಸೂರ್ಯ ಕಿರಣ್

ಖಾಲಿ ಹಾಳೆಯೊಂದು ಜೊತೆ ಸಿಕ್ಕರೆ,
ಕನ್ನಡ ನಿಘಂಟನ್ನು ಸಹ ಮುದ್ರಿಸುವೆ.
           ----ಚಿನ್ಮಯಿ

ಮುದ್ರಿಸುವಾಗ ಅರ್ಥಗಳೊಡನೆ ಭಾವನೆಯನ್ನು ಸೇರುಸುವೆ,
ಅವರಿವರೆಂಬ ಭೇದವಿಲ್ಲದೆ ಓದುಗರಿಗೆಲ್ಲ ಹಂಚುವೆ.
           ----ಕಿರಣ್
                 
ಹಿಂತಿರುಗುವಾಗ ಮನದೊಳಗೆ ಖುಷಿ ಪಟ್ಟು,
ಕನ್ನಡದ ಪ್ರೇಮವ ನಾ ಸಾರಿ ಹೇಳುವೆ.
          ----ರಘು

ಸಾರಿ ಹೇಳುವಾಗ ಓದುಗರ ಮನಃ ಮುಟ್ಟುವೆ,
ಕನ್ನಡದ ಪ್ರೇಮವ ನೆನಪಿಸಿ ಸಂತಸ ಪಡಿಸುವೆ.
           ----ಹೇಮ್

*ಶರ್ಮಾದಿತ್ಯ*🤝🏽 *ಸೂರ್ಯ ಕಿರಣ್* 🤝🏽 *ಚಿನ್ಮಯಿ* 🤝🏽 *ಕಿರಣ್* 🤝🏽 *ರಘು* 🤝🏽 *ಹೇಮ್*💛❤️

Collab 1 with fellow mates

Singing a song without feeling is of no meaning.
----chinmayi

Like wise,
Doing anything without feeling is of no meaning.
----manahshaayi

And also,
Living a life without feeling is of no meaning.
----Kiran

Then also,
Writing a quote without feeling is of no meaning
----RAgHU

Seeking excuses without trying for opportunities is of no meaning...
----Sharmaditya

Loving without any feeling is of no meaning...🖤
----Surya kiran

*Chinmayi* 🤝🏽 *manahshaayi* 🤝🏼 *Kiran* 🤝🏽 *RAgHU* 🤝🏽 *sharmaditya* 🤝🏽 *Surya kiran*💛❤️

Feelings of a song

Singing a song without feeling is of no meaning.
       ----chinmayi

ಸ್ನೇಹ ಹಾಗು ಪ್ರೀತಿ

ಸ್ನೇಹ ಎರಡಕ್ಷರದ ಪದ, ಎಲ್ಲಿ ನೋಡಿದರೂ ಉಲ್ಲಾಸಕರ,
ಪ್ರೀತಿ ಎರಡಕ್ಷರದ ಕಂಬನಿ, ಸ್ನೇಹಕ್ಕೆ ಪ್ರೀತಿಯೇ ಸಹಕಾರ.
             ----ಚಿನ್ಮಯಿ
ಸ್ನೇಹದ ಕಡಲಲ್ಲಿ ಯಾವಾಗಲೂ ನಾವು ತೇಲುತ್ತಲೇ ಇರಬೇಕು, ಯಾವತ್ತೂ ನಾವು ಅದರಲ್ಲಿ ಮುಳುಗಿ ಹೋಗಬಾರದು.
          ----ಚಿನ್ಮಯಿ

          ----ಚಿನ್ಮಯಿ

ಕೊರೊನ ಸಮಯದ ಯುಗಾದಿ

ಸದ್ಯದ ಪರಿಸ್ಥಿತಿಯಲ್ಲಿ, ಯುಗಾದಿಯೋ ಅಥವಾ ಯುಗಾಂತ್ಯವೋ ತಿಳಿಯುತ್ತಿಲ್ಲ.!
ಅದೇನೇ ಆದರೂ ಎಲ್ಲಾ ಒಳ್ಳೆಯದೇ ಆಗುತ್ತದೆಂದು ಅಪಾರ ನಂಬಿಕೆ ನಮಗೆ ಇದೆಯಲ್ಲ.

ದೈವದ ಕೃಪೆಯಿಂದ 'ಸರ್ವೇ ಜನಾಃ ಸುಖಿನೋ ಭವಂತು' ಎಂದು,
ಈ ಯುಗಾದಿಯಿಂದಾದರು ಜನರೆಲ್ಲರೂ ಒಳ್ಳೆಯ ಬುದ್ದಿ ಕಲಿಯಲೆಂದು,
ಆಶಿಸುತ್ತಾ,

ಎಲ್ಲರಿಗೂ ಚಂದ್ರಮಾನ ಯುಗಾದಿಯ ಶುಭಾಶಯಗಳನ್ನು ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುವೆ.

           ----ಚಿನ್ಮಯಿ

Social distancing for Corona Virus

Let's all join hands to create awareness for Corona Virus🤝🏽.
But shldn't join hands to spread Corona Virus😂🙏🏽.
                 ----chinmayi

Marks v/s Knowledge

Marks doesn't define anyone's ability.
Marks may prove who's intelligent, but doesn't prove who's intellectual which is actually needed.
Make up your mind. Knowledge is essence, marks is nonsense.
                   ----chinmayi

Collection of small kannaDa quotes

ನಗುತಾ ಇರುವೇ ಒಳಗು ಹೊರಗು,
ನಿನಗೆಂದೆಯೇ ಹಗಲು ಇರುಳು.
                     ----ಚಿನ್ಮಯಿ
ನಗು ಚೆಂದ ಮೊಗದಿಂದ,
ನುಡಿ ಚೆಂದ ಬಾಯಿಂದ,
ದನಿ ಚೆಂದ ಕರ್ಣದಿಂದ,
ಖುಷಿ ಕೊಡುವೆ ಪ್ರೀತಿಯಿಂದ.
                    ----ಚಿನ್ಮಯಿ😊
ಜೀವನದ ಅಲೆಗಳಲ್ಲಿ ಏರು-ಪೇರು.
ಒಮ್ಮೆ ಸುಖ, ಒಮ್ಮೆ ದುಃಖ.
ಸಾವಿನ ಆಚೆಯು ಬದುಕು!?
ಜೀವನ ಬಹಳ ನಿಗೂಡ.!
                  ----ಚಿನ್ಮಯಿ
ಮರೆಯಲಾಗದ ಅನುಭವದ ಜೊತೆಯಲ್ಲಿ ಸ್ವಲ್ಪ ಮಸ್ತಿ-ಕುಸ್ತಿ.
ಈ ಕಣ್ಣಂಚಿನಲ್ಲಿ (ಬಿಂಬಗ್ರಾಹಿಯಲ್ಲಿ) ಸೆರೆಯಾದ ನೆನಪುಗಳ ಚಿತ್ರವೇ ನಮ್ಮೀ ಸ್ನೇಹದ ಸೃಷ್ಟಿ-ದೃಷ್ಟಿ.
                 ----ಚಿನ್ಮಯಿ

               ----ಚಿನ್ಮಯಿ

Collection of small English quotes

Temperature goes high when I enter,
Cuz Am an Hot Guy and an Hunter...🔥🔥
                 ----chinmayi
Life is Awesome, but, I'm a BESHARAM,
Go around the World to seek, the knowledge upto the Peak...!😁
               ---chinmayi
Stay Stylish,
Stay Youngest,
Stay Happy,
Stay Bold,
Stay On.
         ----chinmayi
Natural healing in Nature for heart's beneath feeling...!‌
                    ----chinmayi
Smile so that your inner sickness gets cured,
Laugh so that your outer sickness gets cured.
                    ----chinmayi
Smiling always is the only Key to Happiness I'm blessed with😀❤️
                      ----chinmayi
Adventure is something that makes me to get everything💓.
               ----chinmayi
When sun kisses us, our smile makes applause.
                     ----chinmayi
Smiling reduces Sickness, so i always keep a smile on my face 😊
             ----chinmayi
Sometimes,
Inner smile bestows happiness😊,
Outer smile bestows pain...!🙂
              ----chinmayi
Deal everything in one Smile😁
             ----chinmayi
Just smile and keep smiling always😄😀✌️
             ----chinmayi
Smiling is the only thing ik to survive amongst the fake people around me😀.
                ----chinmayi
Peaceful Mind + Happy Mood = Pleasant Day😀
            ----chinmayi
Styling is my work.
Focusing is photographer's work.
Watching, Liking and Commenting is their work.
            ----chinmayi
When you smile, it is like performing Magic with some Logic, because our smile could be the main reason for someone else's happiness...
So always keep a smile😃😉
                ----chinmayi
Feel the weather like you feel yourself 😁
               ----chinmayi
Laughter is the best Medicine but laughing in the midst of fog at Nandi Hills is the best Feeling 😁😊
             ----chinmayi
Slayers nd Stalkers are my Body Guards😎
             ----chinmayi
MATHS is such an amazing subject because, It explains that "TEEN" or "TEENAGE" starts from THIR'TEEN1⃣3⃣ and ends with NINE'TEEN1️⃣9⃣.
Logically accepted👍🏽😉.
          ----chinmayi
Born with CLASS 😁,
Blessed with MASS 😎,
Now with GLASS 🤓.
             ----chinmayi
Behind me Nature 😍
Beside me Teacher.
Henceforth bright is my Future.
                  ----chinmayi

          ----chinmayi

Old life and Present life

I feel, life was much better and happier when we were in our childhood days.
There existed zero- ego, sadness, wickedness and only innocence and happiness were surrounded between all of us.

We have lost those golden days and now those are only the remains of our golden memories.
The old footprints doesn't erase so easily and will remain always as our life's happiest moments.

I personally miss the old me and I wish I could go back and live the old life which I love the most.
But, this doesn't happen and this is how life is and we have to just go with the flow and live the present life to our best.

The least we can do is to live the life happily further on by remembering and learning from our beautiful old days.
Let's make our lives even more beautiful and meaningful by not living as human being rather let's try to live as being human always.
           
                  ----chinmayi