Thursday, March 28, 2024

Learning from everything in the nature and the universe

Not only living things can impact "us" (human beings) to live, also non-living things, which don't live can make an impact on us to live by inspiring us.

The only thing is that we must make ourselves ready to grasp all the signs from nature and the universe.

                     ----Chinmayi

Sunday, March 10, 2024

ಅರಿವು

ಈ ಸಕಲ ಬ್ರಹ್ಮಾಂಡಗಳಲ್ಲಿ ನನಗೆ ಸಮಾಧಾನ ಮಾಡುವ ಹಾಗೂ ಎಲ್ಲಾ ನೋವು-ದುಃಖಗಳನ್ನು ಅನುಭವಿಸಿ, ಜೀವಿಸಿ, ಆನಂದಿಸಿ ಜೊತೆ-ಜೊತೆಗೆ ಬಾಳುವ ಏಕೈಕ ವ್ಯಕ್ತಿಯಂದರೆ ಅದು "ನಾನಷ್ಟೇ"—

ಈ ಸತ್ಯದ ಅರಿವಾಗಲು ನಾ ಪ್ರೀತಿಗೆ ಬೀಳಬೇಕಾಯ್ತು...


                   ----ಚಿನ್ಮಯಿ

Tuesday, February 20, 2024

ಕಲಿಯುಗ

'ಅಧರ್ಮ-ಧರ್ಮ'ಗಳ ನಡುವಿನ ಸಂಘರ್ಷಗಳ ಫಲಿತಾಂಶವಾಗಿ ಪ್ರತಿ ಕ್ಷಣ ಪ್ರತಿ ನಿತ್ಯ ಧರ್ಮಸ್ಥಾಪನೆಗೋಸ್ಕರ ಯುಗಪೂರ 'ಕಲಿ'ಯುವುದೇ 'ಕಲಿ'ಯುಗ...

              ----ಚಿನ್ಮಯಿ

ತ್ರಿಪದಿ- ೩

ಸಕಲ ಜಗವನು ಜಗದ ನರನನು ನರನ—

ಅಖಿಲ ತನುವನು ನಡುಗಿಸುತ್ತ ವೈರಾಣು

ಸಕಲ ಮನದಲಿ "ನಾನು" ನಶಿಸಿದೆ ಚಿನ್ಮಯಿ


"ಭಾವಾರ್ಥ:"

ಸಮಸ್ತ ಬ್ರಹ್ಮಾಂಡಗಳಲ್ಲಿರೋ ಎಲ್ಲಾ ಮನುಷ್ಯರ ದೇಹಕ್ಕೆ ಖಾಯಿಲೆ ಬರುವುದು ಸಾಮಾನ್ಯ ಹಾಗೂ ಆ ಖಾಯಿಲೆಯ ಮೂಲ ಸೂತ್ರಧಾರನೇ "ವೈರಾಣು." ಮನುಷ್ಯರ ಕಣ್ಣಿಗೂ ಕಾಣದ ಈ ಸಣ್ಣಗಾತ್ರದ ಜೀವಿಯಾದ ವೈರಾಣುವು ದೊಡ್ಡ ಗಾತ್ರದ ಮನುಷ್ಯರ ದೇಹವ ಸೇರಿ ಅದೆಷ್ಟೋ ನೋವು ನರಳಾಟ ಸಂಕಟಗಳಿಗೆ ಕಾರಣವಾಗುತ್ತದೆ ಹಾಗೂ ದೇಹವನ್ನೇ ನಡುಗಿಸುತ್ತದೆ. ಬಹುಶಃ ಇದೆಲ್ಲದರ ಹಿಂದಿರೋ ಮುಖ್ಯ ಕಾರಣವು ಮನುಷ್ಯರ "ನಾನು- ನಾನೇ" ಎಂಬ ಅಹಂ ಅನ್ನು ನಶಿಸುವುದೇ ಅನಿಸುತ್ತದೆ...


         ----ಚಿನ್ಮಯಿ

Tuesday, January 23, 2024

WORTH and HARDWORK

ಚಿತ್ರಕ್ಕೆ ಪದ್ಯ/ಉಲ್ಲೇಖ- ೭೭

If you have a thought- "your worth and hard work means nothing in this universe". Then, just look at this stone called "Krishna Shile." People thought it was a normal stone, fit for nothing and it was just sitting in the same place for several years. But, now the same stone has been carved as "Rama Idol" in Ayodhya. Isn't this the finest example to give a thought about "waiting patiently for an amazing results in the whole universe...!?"

Hence, just wait patiently for your time and just keep going with the flow and when it is time, your worth will be valued and hard work will be paid.

                        ----Chinmayi

Monday, January 22, 2024

22/01/2024

ಚಿತ್ರಕ್ಕೆ ಪದ್ಯ/ಉಲ್ಲೇಖ- ೭೬

It took 496 years to bring back the lost glory and I'm blessed as others are for living in this era to witness this Epic moment. I'll relive this day for an infinite number of times... 

I'm awaiting for much more lost glories to be revived ASAP.


Jai Sri Raama 

🥹🙏🏽🙇🏾‍♂️🤍🕉️🥹


               ----Chinmayi

Sunday, January 21, 2024

"ರಾಮ-ಕೃಷ್ಣ"= ಪರಿಪೂರ್ಣ ಮಹಾವಿಷ್ಣು ಅವತಾರಿಗಳು

ಚಿತ್ರಕ್ಕೆ ಪದ್ಯ- ೭೫

ನನ್ನ ಇದುವರೆಗಿನ ಜೀವನವನ್ನು ಇಬ್ಬರ ಜೀವನ ಚರಿತ್ರೆಯನುಸಾರವಾಗಿ ಜೀವಿಸಲು ಪ್ರಯತ್ನಿಸಿದ್ದೇನೆ ಹಾಗೂ ಇನ್ನು ಮುಂದೆಯೂ ಹಾಗೆಯೇ ಜೀವಿಸಲು ಪ್ರಯತ್ನಿಸುವೆನು— 

ಅವರಿಬ್ಬರೇ "ರಾಮ-ಕೃಷ್ಣರು."


ಅವರಿಬ್ಬರ ಯಶೋಗಾಥೆ ಹಾಗೂ ಧರ್ಮ ಹೋರಾಟದ ಕುರಿತು ಓದಿ, ಕೇಳಿ, ನೋಡಿ ಜ್ಞಾನೋದಯವಾಗಿದ್ದೇನೆಂದರೆ— 

ಓರ್ವರು ಸಂಬಂಧಗಳಿಗೆ ಗೌರವ ನೀಡಿದರು-

ತಂದೆಗೆ ತಕ್ಕ ಮಗನಾಗಿ ಬಾಳಿದರು.

ಒಡವುಟ್ಟಿದವರು, ಸ್ನೇಹಿತರು, ಮಕ್ಕಳಿಗಾಗಿ ಜೀವಿಸಿದರು.

ಏಕ ಪತ್ನಿಯ ಪ್ರಿಯಕನಾಗಿದ್ದರು.

ಬಹು ಮುಖ್ಯವಾಗಿ ತನ್ನ ಪ್ರಿಯ ಮಡದಿಗೆ ಕೆಡುಕಾದಾಗ ಇಡೀ ಸ್ರ್ತೀ ಕುಲವನ್ನು ಕಾಪಾಡುವ ಸಲುವಾಗಿ ಧರ್ಮ ಯುದ್ಧವನ್ನೇ ಮಾಡಿ ಅಧರ್ಮವನ್ನು ನಶಿಸಿದರು.

ತನ್ನ ಬದುಕನ್ನು ಕಷ್ಟದಲ್ಲಿ ಸಾಗಿಸಿ ನಂತರ ಸುಖ ಕಂಡರು.


ಇನ್ನೊರ್ವರು-

ಎರಡೂ ತಂದೆ ತಾಯಿಯ ಮುದ್ದು ಮಗನಾಗಿದ್ದರು.

ಒಡಹುಟ್ಟಿದವರು, ಸ್ನೇಹ ಬಳಗ, ಮಕ್ಕಳೊಡನೆ ಲವಲವಿಕೆಯಿಂದ ಜೀವಿಸಿದರು.

ಪ್ರೇಯಸಿ ಸಿಗದಿದ್ದರೂ ಆಕೆಯ ಅನಂತ ಪ್ರಿಯತಮನಾಗಿದ್ದರು.

ಎಂಟು ಪತ್ನಿಗಳ ಪ್ರಿಯಕರನಾಗಿದ್ದರು ಹಾಗೂ ಜೊತೆಗೆ ಹದಿನಾರು ಸಾವಿರ ಜೊತೆಗಾರ್ತಿಯರ ರಕ್ಷಕನಾಗಿದ್ದರು.

ಬಹು ಮುಖ್ಯವಾಗಿ ತನ್ನ ತಂಗಿಯಾದ ದ್ರೌಪದಿಯ ರಕ್ಷಣೆಯನ್ನು ಸ್ರ್ತೀ ಕುಲದ ರಕ್ಷಣೆಯೆಂದೇ ಭಾವಿಸಿ ಧರ್ಮಯುದ್ಧ ಕುರುಕ್ಷೇತ್ರವನ್ನೇ ನಡೆಸಿದರು.

ಸಂಬಂಧಗಳಿಗೆ ಗೌರವ ನೀಡಿದ್ದಾದರೂ ಸಂಬಂಧಿಕರನ್ನೇ ಧರ್ಮಕ್ಕಾಗಿ ಕೊಂದು ಧರ್ಮವನ್ನೇ ಜಯಭೇರಿಯನ್ನಾಗಿಸಿದರು.

ತನ್ನ ಬದುಕನ್ನು ಪರಿಪೂರ್ಣತೆಯಿಂದ ಜೀವಿಸಿದರು.


"ರಾಮನು ಮರ್ಯಾದ ಪುರುಷೋತ್ತಮನು."

"ಕೃಷ್ಣನು ಯುಗ ಯುಗಗಳ ಮಹಾಪುರುಷನು."


                   ----ಚಿನ್ಮಯಿ