Monday, November 16, 2020

ಈ ಸಂಜೆ...

ಚಿತ್ರಕ್ಕೆ ಪದ್ಯ-೫೩

ಗಿಡ-ಮರ, ಅಂಬರದ ಬಿಂಬವ

ಪ್ರತಿಬಿಂಬಿಸಿತು ತಿಳಿ ನೀರು.

ತಿಳಿ ನೀರನ್ನು ಕದಡಿದಾಗ ನಾನು

ಪ್ರತಿಬಿಂಬವಾಯಿತು ನುಚ್ಚು ನೂರು. 


ಪ್ರತಿಬಿಂಬ ಮರುಕಳಿಸಿದಾಗ

ನಗುವಿನ ಕಾಂತಿಯು ಕಣ್ತುಂಬ.

ನಾ ಕಣ್ತುಂಬಿಕೊಂಡ ಕಾಂತಿಯ

ತೋರಿಸಿತು ಎನ್ನಯ ಪ್ರತಿಬಿಂಬ.


ಮೋಡಗಳ್ಹಿಂದೆ ರವಿ ಮಲಗಿದಾಗ

ಮೆಲ್ಲನೆ ಶಶಿಯು ಉದಯಿಸಿದ.

ಶಶಿಯು ಬಂದು ಸಂಜೆಯ ಅಳಿಸಿ

ಬೆಳಕಿನ ನಕ್ಷತ್ರಗಳೊಡನೆ ಸೇರಿದ.


ಈ ಸುಮಧುರ ಸಂಜೆಯ ಅತ್ಯದ್ಭುತ

ವೀಕ್ಷಣೆಯನ್ನು ಸೆರೆಹಿಡಿದ ನಾ ಧನ್ಯ.

ಮರುಕ್ಷಣವೇ ಸತ್ತರೂ, ಈ ಸಂಜೆಗೋಸ್ಕರ

ಮರಳಿ ಜನಿಸುವುದು ಎನ್ನ ಜೀವ.

           ----ಚಿನ್ಮಯಿ

No comments:

Post a Comment