Wednesday, May 20, 2020

ಕೃಷ್ಣಾರ್ಜುನರ ಸಂಭಾಷಣೆ


ಚಿತ್ರಕ್ಕೆ ಪದ್ಯ-೧೦

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣಾರ್ಜುನರ ನಡುವೆ ನಡೆಯುವ ಸಣ್ಣ ಸಂಭಾಷಣೆಯ ಕುರಿತಾಗಿ ಭಗವದ್ಗೀತೆಯಲ್ಲಿ ಸ್ವತಃ ಭಗವಂತ ಶ್ರೀ ಕೃಷ್ಣನೇ ಬರೆದಿದ್ದಾನೆ. ಇದರ ಅನುಸಾರವಾಗಿ ನನ್ನದೊಂದು ಸಣ್ಣ ಅರ್ಪಣೆ.

ನೀ ಹೇಳೋ ಮಾಧವ.
ನೀ ಹೇಳೋ ಮಾಧವ.
ಯಾಕೀ ಕ್ರೂರ ಕೃತ್ಯವು?
ಯಾಕೀ ಘೋರ ಅಂತ್ಯವು?
ನನಗಾಗದು ಯುದ್ಧ ಮಾಡಲು.
ಜೊತೆಗಾರರ ಮಟ್ಟ ಹಾಕಲು.

ನೀ ಕೇಳೋ ಮಾನವ.
ನೀ ಕೇಳೋ ಮಾನವ.
ಜಗದ ಪಾಲನೆಗೆ ಅನಿವಾರ್ಯ ಈ ಕೃತ್ಯವು.
ಆಗಲಿದೆ ಧರ್ಮದಿಂದ ಅಧರ್ಮದ ಅಂತ್ಯವು.
ನಿನ್ನ ತಪ್ಪೇನಿಲ್ಲ, ನಡೆ ಧರ್ಮದ ಯುದ್ಧಕ್ಕೆ ನೀ ಹೂಡು ಬಾಣವ.
ಎಲ್ಲವೂ ನನ್ನಿಂದಲೇ, ನೀ ಕ್ಷತ್ರಿಯನು ಮರೆಯದಿರು ನಿನ್ನ ಕಾಯಕವ.
              ----ಚಿನ್ಮಯಿ

No comments:

Post a Comment