Saturday, May 9, 2020

ಒಂಭತ್ತನೆ ಮರು ಸಾಹಿತ್ಯ ಬರವಣಿಗೆ

ಹಾಡು: ಮಾಟೇ ವಿನದುಗ (ತೆಲುಗು).
ಚಿತ್ರ: ಟ್ಯಾಕ್ಸಿವಾಲ.
ಮೂಲ ಸಾಹಿತ್ಯ: ಕೃಷ್ಣ ಕಾಂತ್.

ನನ್ನ ಸನಿಹವೇ (ನನ್ನ ಸನಿಹವೇ),
ನನ್ನ ಸನಿಹವೇ (ನನ್ನ ಸನಿಹವೇ).

ಕಡಲ ದಾಟುತ, ಒಡಲ ಸೇರುತ, ಉಸಿರು ನೀಡುವೆ ನಾ ನಿನಗೆ.
ಮಿಲನ ಮೂಡಲು, ಕಾರಣ ಕೇಳಲು ಜನಿಸಿತು ಈ ಸಲಿಗೆ.
ಮನಸೇ ಗಮನ ಹರಿಸೆ, ಪರದೆ ಚೂರು ಸರಿಸೆ.
ನೀ ಕದ್ದೆಯ ಕನಸ ಕನವರಿಕೆ ಈಗ...?
ನಾ ಎದ್ದೆನು ನೆನೆದು ನಿನ್ನ ಕಣ್ಣಾಗ.

ನನ್ನ ಸನಿಹವೆ ಸನಿಹವೆ ಸನಿಹವೆ, ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.

ಕಡಲ ದಾಟುತ, ಒಡಲ ಸೇರುತ, ಉಸಿರು ನೀಡುವೆ ನಾ ನಿನಗೆ.
ಮಿಲನ ಮೂಡಲು, ಕಾರಣ ಕೇಳಲು ಜನಿಸಿತು ಈ ಸಲಿಗೆ.
ಮನಸೇ ಗಮನ ಹರಿಸೆ, ಪರದೆ ಚೂರು ಸರಿಸೆ.
ನೀ ಕದ್ದೆಯ ಕನಸ ಕನವರಿಕೆ ಈಗ...?
ನಾ ಎದ್ದೆನು ನೆನೆದು ನಿನ್ನ ಕಣ್ಣಾಗ.

ಸಣ್ಣ ಸಣ್ಣ ಸಣ್ಣ ಬವಣೆ ಸರಿಸುವೆ ನಾ ನಿನಗೆಂದೇ,
ಸಾಕು ತೋರಿಸೆಯ ಅಂದದ ಮೊಗ ಇಂದೇ?
ಆಆಆಆ...
ಗಾಯಕ ಆಗುವೆ ನೀ ಬರೆದ ಹಾಡಿಗೆ,
ಹಾಡಿನ ಭಾವಕ್ಕೆ ಸಂಗೀತ ನೀಡೆಲೆ.

ಕಣ್ಣ ಮುಂದೆ ನೀನು, ಹಾದು ಹೋಗು ಇನ್ನು, ಮರೆಯದೆಲೇ ಕೊಂಚ ಮರೆಯದೆಲೇ.
ಏನೇ ಆದರೂನು, ಯಾರೇ ಬಂದರೂನು ಪ್ರೀತಿಸುವೆ ಸದಾ ಜೊತೆಯಿರುವೆ.
ಎದೆಯಲ್ಲಿರೊ ಹೆಸರ ಉಸಿರಲ್ಲಿ ತುಂಬಿ, ಖುಷಿಯಿಂದ ಕುಣಿದಾಡೋ ಕ್ಷಣವದುವೇ ಬಂತು.

ನನ್ನ ಸನಿಹವೆ ಸನಿಹವೆ ಸನಿಹವೆ, ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಒಲುಮೆಯೆ ಒಲುಮೆಯೆ ಬಾರೇ.
ನನ್ನ ಸನಿಹವೆ ಸನಿಹವೆ ಸನಿಹವೆ,
ಬಾರೇ ಬಾರೇ ಬಾರೇ.

ಕಡಲ ದಾಟುತ, ಒಡಲ ಸೇರುತ, ಉಸಿರು ನೀಡುವೆ ನಾ ನಿನಗೆ.
ಮಿಲನ ಮೂಡಲು, ಕಾರಣ ಕೇಳಲು ಜನಿಸಿತು ಈ ಸಲಿಗೆ.
ಮನಸೇ ಗಮನ ಹರಿಸೆ, ಪರದೆ ಚೂರು ಸರಿಸೆ.
ಅಪರೂಪದ ವಿನಿಮಯ, ಇಂದಿಗೂ ಸವಿನಯ.
ಎಂದೂ ಕೊರಗದೆ ನನ್ನನೇ ಸೇರು ನೀ....
                         ----ಚಿನ್ಮಯಿ

No comments:

Post a Comment