Saturday, May 9, 2020

ಮೊದಲನೆ ಮರು ಸಾಹಿತ್ಯ ಬರವಣಿಗೆ

ಹಾಡು: ಕುಣಿದು ಕುಣಿದು ಬಾರೇ.
ಚಿತ್ರ: ಮುಂಗಾರು ಮಳೆ.
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ.

Male
ಚಿನ್ನ-ರನ್ನ ಎಂಬ
ಪದಗಳು ಎದೆಯ ತುಂಬಾ,
ತುಂಬಿಕೊಂಡು ನಾನು
ಬಾಳೊ ಆಸೆಯಿನ್ನು
ಮನಸಿಗೆ ಸಮೀಪವಾದವಳೇ
ಮನಸ್ಸಿನಲ್ಲಿ ಕೂರು ಬಾರೇ
ದೂಡು ಚಿಂತೆಯಾ, ದೂಡು ಚಿಂತೆಯಾ
ನಿನ್ನ ಆ ನಗುವಲ್ಲಿ ನನಗೆ ಇಲ್ಲ ಸಂಶಯ..

Female
ನನಗೆ ಗೆಳೆಯ ನೀನು
ನಿನಗೆ ಗೆಳತಿ ನಾನು,
ಪ್ರೀತಿಯ ಆಳ ತಿಳಿದವನೇ
ಮುತ್ತಿನ ತೇರು ಏರುವ ಬಾರೋ
ದೂಡು ಚಿಂತೆಯಾ......ಆ..ಓ..

Female
ಹಣೆಯಲ್ಲಿ ತಿಲಕವಾಗಿದೇ ನಿನ್ನಯ,
ಹಗುರವಾದ ಮುದ್ದಾದ ಸಿಹಿ ಚುಂಬನ.

Male
ಕಣ್ಣಲ್ಲಿ ಸೆರೆಯಾsಗಿದೆ ಆ ನಿನ್ನಯ,
ಮಧುರವಾದ ನಗುವೆಂಬ ಸಿರಿ ಸಿಂಚನ.

Female
ನನಗೇ ಇನ್ನು ಆಸರೆ, ಅದುವೆ ನಿನ್ನ ಉಸಿರೇ.
ನನ್ನೊಳಗೆ ಇರುವವನೇ,
ಬಾನಿಗೇಣಿ ಹಾಕುವ ಬಾರೋ
ದೂಡು ಚಿಂತೆಯಾ..... ಆಆಆ

Male
ನಲುಮೆ, ಭಾನಿರೋತನಕ ಜೊತೆಗಿರುವೆನು,
ನೀನ್ನಿಲ್ಲದೆ ಏನಿಲ್ಲ ನನಗೆ ಚೆಲುವೆ

Female
ಮನಸನ್ನು ಕದ್ದಿರುವೇ ಇನ್ನೇನು,
ನೀನೇ ನನಗೆ ಎಲ್ಲಾ ಓ  ನನ್ನೊಲವೆ.

Male
ಚಿನ್ನ-ರನ್ನ ಎಂಬ
ಪದಗಳು ಎದೆಯ ತುಂಬಾ,
ಮನಸಿಗೆ ಸಮೀಪವಾದವಳೇ
ಮನಸ್ಸಿನಲ್ಲಿ ಕೂರು ಬಾರೇ
ದೂಡು ಚಿಂತೆಯಾ, ದೂಡು ಚಿಂತೆಯಾ
ನಿನ್ನ ಆ ನಗುವಲ್ಲಿ ನನಗೆ ಇಲ್ಲ ಸಂಶಯ..

Female
ನನಗೆ ಗೆಳೆಯ ನೀನು
ನಿನಗೆ ಗೆಳತಿ ನಾನು,
ಪ್ರೀತಿಯ ಆಳ ತಿಳಿದವನೇ
ಮುತ್ತಿನ ತೇರು ಏರುವ ಬಾರೋ
ದೂಡು ಚಿಂತೆಯಾ......ಆ..ಓ..
                   ----ಚಿನ್ಮಯಿ

No comments:

Post a Comment