Saturday, May 9, 2020

ಹತ್ತನೆ ಮರು ಸಾಹಿತ್ಯ ಬರವಣಿಗೆ

ಹಾಡು: ಸಾಮಜವರಗಮನ (ತೆಲುಗು).
ಚಿತ್ರ: ಅಲಾ ವೈಕುಂಠಪುರಂಲೋ.
ಮೂಲ ಸಾಹಿತ್ಯ: ಸಿರಿವೆನ್ನೆಲಾ ಸೀತಾರಾಮಶಾಸ್ತ್ರೀ.

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..

ಬಾ ಬೇಗನೇ ಬಳಿಗೆ ಸಾಗೋಣ ಜೊತೆಜೊತೆಗೆ ಇರಲು.
ಕಣ್ಣ ಹೊಳಪಿನಿಂದ ಸರಿಸೆ ಹಾಗೆ ಮುಖದ ಮುಂಗುರುಳು.
ಓ ಮನಸೇ ಕಾಯಲು ನಾನಿರುವಾಗ ಏಕೇ ಈ ಕೊರಗು!
ಸದಾ ಕಾಯುತ ಜೊತೆ ಕನಸಿನಲ್ಲೂ ಇರುವೆನು ಕೊನೆವರೆಗು.

ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.
ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..

ಪ್ರೇಮವೆ ಹೂರಣ ಕೇಳದು ಕಾರಣ ಗತಿ ಬದಲಿಸುವಾ
ಸಮಯ ಸ್ವಂತ ಎಂದಿಗೂ ನಮದೆ.
ಹಾಡಿನ ಮೂಲಕ ನಿನ್ನಯ ಮೋಹಕ ಏನಂತ ಬಣ್ಣಿಸಿದರು ಕೂಡ ಭಾಷೆಗೆ ಸಿಗದೆ!
ಸರಿ ತಪ್ಪೇನೆ ಇದ್ದರು, ನಾ ನೀನು ಇಬ್ಬರು ಜೊತೆಯಲೇ ಇರುವೆವು ಬಾರೇ.
ಯಾರೇನೇ ಅಂದರು, ನೀನೆಲ್ಲೇ ಇದ್ದರೂ ಬರುವೆ ನಾನು ಬಿಡೆನು ನಿನ್ನ ಸೇರುವೇ ಕೇಳೇ.

ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.
ಕಾರಣ ತುಸು ತಿಳಿಸೇ ಹೀಗೇಕೆ ಕಂಡೆ ನನಗೆ.
ಮೊಗದ ತುಂಬ ನಗುವ ತುಂಬಿ ನಗಲು ಕೊಟ್ಟೆ ಸಲಿಗೆ.

ಹೇ ನಿನ್ನನ್ನೇ ನೋಡುತ ಕೂರುವೆ ನಾನಿನ್ನು ಕೇಳೇ ಓ ಜೀವ.
ನೀ ನೋಡಿಯೂ ನೋಡದ ಹಾಗೆ ಸಾಗಿದರೆ ತಾಳೇನಾ ನೋವ..
ಬಾ ಬೇಗನೇ ಬಳಿಗೆ ಸಾಗೋಣ ಜೊತೆಜೊತೆಗೆ ಇರಲು.
ಕಣ್ಣ ಹೊಳಪಿನಿಂದ ಸರಿಸೆ ಹಾಗೆ ಮುಖದ ಮುಂಗುರುಳು.

             ----ಚಿನ್ಮಯಿ

No comments:

Post a Comment