Monday, May 4, 2020

ಬದುಕಿಗೆ ಸಾರ್ಥಕತೆ ಸಾಕಲ್ಲ...!

ಬುದ್ದಿಗೆ ಏಳಿಗೆ ಆದರೂನು,
ಬದುಕಿನ ಜೋಳಿಗೆ ತುಂಬಲು
ವಿನಯದ ಮಳಿಗೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.

ಕೋಪದ ಬಾಯಿಗೆ ಸಿಲುಕಿದರೂನು,
ಬದುಕಿನ ಬಾಡಿಗೆ ತುಂಬಲು
ತಾಳ್ಮೆಯ ದೇಣಿಗೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.

ತಪ್ಪಿನ ದಾರಿಯು ಹಿಡಿದರೂನು,
ಬದುಕಿನ ದೋಣಿಯು ಸಾಗಲು
ನಿಜದ ಪಾಲನೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.

ಚಿಂತೆಗೆ ಜಾಗವು ಕೊಟ್ಟರೂನು,
ಬದುಕಿನ ಯೋಗವು ಸಾಗಲು
ಶಾಚಿತಿ ಸ್ಥಾಪನೆ ಬೇಕಲ್ಲ.
ಬದುಕಿಗೆ ಸಾರ್ಥಕತೆ ಸಾಕಲ್ಲ.
                 ----ಚಿನ್ಮಯಿ

No comments:

Post a Comment