Friday, May 22, 2020

ಬಾಂಧವ್ಯ

"ಸೂಚನೆ: ಸಾಹಿತ್ಯಲೋಕ ಹಾಗು ಪುರಾಣದ ಪ್ರಕಾರ ಭೂಮಿ, ಸೂರ್ಯ ಹಾಗು ಚಂದ್ರನ ಸಂಬಂಧ 'ಪ್ರಿಯಕರರ' ರೀತಿಯಲ್ಲಿರುತ್ತದೆ. ಆದ್ದರಿಂದ, ಈ ಕವನವನ್ನು ನನ್ನ ಸ್ವಂತ ಕಲ್ಪನೆ ಎಂದು ಭಾವಿಸಿ. ಇದೊಂದು ಕಾಲ್ಪನಿಕ ಕವಿತೆ (ಕವಿಸಮಯ)."

ಓರ್ವ ಧರಿತ್ರಿಗೆ ಇಬ್ಬರು ಸುತರು
ಅವರೇ ಅಹಸ್ಕರ ಹಾಗು ಶಶಧರ.
ಭೇದ ಭಾವ ತೋರದ ಹೆತ್ತ ಮಡಿಲೇ
ಸಹಬಾಳ್ವೆಯ ಪ್ರೀತಿಯ ಮಂದಿರ.

ಅಗ್ರಜನೇ ಶ್ರೇಷ್ಠನೆಂದು ಶಶಧರ ಹೇಳಿದನು.
ಅನುಜನೇ ಸಮರ್ಥನೆಂದು ಅಹಸ್ಕರ ಹೇಳಿದನು.
ಇಬ್ಬರ ಮಾತುಗಳ ಕೇಳಿ ಖುಷಿಪಟ್ಟಳು ಧರಿತ್ರಿಯು.
ಇಬ್ಬರ ಪ್ರೀತಿಯ ಕಂಡು ಜನನಿಯ ಜನುಮ ಸಾರ್ಥಕವು.
              ----ಚಿನ್ಮಯಿ

No comments:

Post a Comment