Wednesday, June 3, 2020

"ಬದುಕು"- ಅದೊಂದು ಸುಂದರ ಅನುಭವ.

ಜನಿಸಲು ಈ ಭುವಿಯಲ್ಲಿ
ಪಾಪ ಪುಣ್ಯದ ಲೆಕ್ಕಾಚಾರವೆಷ್ಟೋ!
ಜನನದ ನಂತರ ಬದುಕಲ್ಲಿ
ಪಾಪ ಪುಣ್ಯವ ಮಾಡುವವರೆಷ್ಟೋ!

ಇದೆಲ್ಲದರ ನಡುವೆ ಬದುಕನ್ನ
ಹಾಗೋ ಹೀಗೋ ಸಾಗಿಸುವರು.
ಕೊರಗುತ ನರಳುತ ಬದುಕಿನ
ಮೂಲವನ್ನೇ ಮರೆತಿರುವರು.

ಮರಣ ನಿಶ್ಚಿತವೆಂದರು ನಿರ್ಭಯದಿ
ಜೀವಿಸಿ ಸಾಧಿಸಬೇಕು ಅಲ್ಲವೇ?
ಬದುಕೊಂದು ಸುಂದರ ಅನುಭವವೆಂದು
ಅರಿತು ಬಾಳಿದರೆ ಒಳಿತಲ್ಲವೇ?

ಬದುಕಿನ ಅನುಭವ ಅರಿತವನೇ
ಬಲ್ಲ ಅದರ ರಮ್ಯತೆಯ.
ಅರಿಯದವರು ದೂಷಿಸಲಷ್ಟೇ
ಸಾಧ್ಯ ಬದುಕಿನ ವ್ಯಥೆಯ.
       ----ಚಿನ್ಮಯಿ

No comments:

Post a Comment