Friday, June 19, 2020

ಕಾನನ


ಚಿತ್ರಕ್ಕೆ ಪದ್ಯ-೨೪

ಪಟ್ಟಣದಲ್ಲಿ ಸದಾ ದುಡಿಯುತ್ತಿರಲು
ಜೀವನವೆಂದರೆ ಇಷ್ಟೇನಾ ಎಂದೆನಿಸಿದೆ!
ಅದೇ ಕೆಲಸ, ಅದೇ ಜೀವನ ಸಾಕಾಗಿ
ನವೀನತೆಗಾಗಿ ಮನಃ ಬಯಸಿದೆ.

ಬರಹದ ಜೊತೆ ಪ್ರವಾಸ ಛಾಯಾಗ್ರಹಣವು
ನನ್ನ ಎರಡು ಇಷ್ಟದ ಕೆಲಸಗಳಾಗಿವೆ.
ಇವೆರಡರಲ್ಲಿಯೇ ಪೂರ್ಣಪ್ರಮಾಣವಾಗಿ
ತೊಡಗಿಕೊಳ್ಳಲೆಂದೇ ಸಂಚಾರಿಯಾಗಿರುವೆ.

ನನಗೆ ಸದಾ ಸ್ಪೂರ್ತಿಯಾಗಿರುವುದೇ
ಪ್ರಕೃತಿಯ ಹೃದಯವಾದ ಹಸಿರ ಕಾನನ.
ಅಲ್ಲಿಗೆ ಹೋಗಲೇ ಬೇಕು ಇಲ್ಲದಿದ್ದರೆ
ಶಾಚಿತಿಯಿಂದಿರುವುದಿಲ್ಲ ನನ್ನಯ ತನು ಮನ.

         ----ಚಿನ್ಮಯಿ 

No comments:

Post a Comment