Wednesday, June 3, 2020

ಭೂತಾಯಿಯ ಮಡಿಲು

ಮಳೆರಾಯನ ಸಾನಿಧ್ಯವಿಲ್ಲದೆ
ಭೂತಾಯಿಯ ಮಡಿಲಾಯಿತು ಬರಡು.
ಪಯಿರು ಬೆಳೆಯಲು ನೀರು ಸಾಲದೆ
ಕಾಣಿಯಾಲನ ಬದುಕಾಯಿತು ಕುರುಡು.

ತಿನ್ನಲು ಅನ್ನವಿಲ್ಲದೆ ಶ್ರೀಸಾಮಾನ್ಯರ
ಜೀವನವಾಯಿತು ಅದೋಗತಿ.
ಕುಡಿಯಲು ಸಹ ನೀರು ಸಿಗದೆ ಬದುಕಿನ್ನು
ಪರದಾಟದ-ನರಳಾಟದ ಫಜೀತಿ.

ಪ್ರಕೃತಿಗೆ ದ್ರೋಹ ಬಗೆದರೆ ಇದೆ ಗತಿ
ಎಂದು ಅರಿಯಬೇಕು ಇನ್ನಾದರು.
ಅರಿಯದ್ದಿದ್ದರೆ ಪ್ರಕೃತಿಯ ಭಾರಿ
ವಿಕೋಪಕ್ಕೆ ಬಲಿಯಾಗಬೇಕು ನಾವೆಲ್ಲರು.

ಓ ನಿಸರ್ಗವೇ ಮುನಿಸು ತೊರೆದು ಮನ್ನಿಸು
ಮೂರ್ಖ ಜನರ ಕ್ರೌರ್ಯ ಕೃತ್ಯಗಳನ್ನು.
ದಯಮಾಡಿ ಮಳೆರಾಯನ ದಯಪಾಲಿಸಿ
ಭರ್ತಿಮಾಡು ಭೂತಾಯಿಯ ಮಡಿಲನ್ನು.
       ----ಚಿನ್ಮಯಿ

No comments:

Post a Comment