Friday, October 2, 2020

ಮಳೆರಾಯನ ಆರ್ಭಟ

ಚಿತ್ರಕ್ಕೆ ಪದ್ಯ-೪೭

ನೀ ನಿಲ್ಲಯ್ಯ ಮಳೆರಾಯ,

ನಿಂತು ಕರುಣೆ ತೋರಿಸಯ್ಯ,

ಹೀಗೇ ನೀ ಅಬ್ಬರಿಸಿದರೆ ಹೇಗಯ್ಯ!?

ಶಾಂತನಾಗೋ ವರುಣದೇವ,

ತಾಳಲಾರೆವು ನಿನ್ನೀ ಆರ್ಭಟವ,

ಪಾಪವ ತೊಳೆದು ಒಮ್ಮೆ ಸುಮ್ಮನಾಗಯ್ಯ.


ದಿನನಿತ್ಯ ಕರ್ಮಗಳು ನಿಂತಿವೆ,

ಜೀವನ ಬಹಳ ಕಷ್ಟಕರವಾಗಿದೆ,

ದಯಮಾಡಿ ನಮ್ಮ ಅಜ್ಞಾನವ ಕ್ಷಮಿಸು.

ಕ್ಷಮೆ ಸ್ವೀಕರಿಸಯ್ಯ ಇಂದ್ರದೇವ,

ವರುಣದೇವನನ್ನು ನಿಯಂತ್ರಿಸು,

ಮರಳಿ ಒಮ್ಮೆ ಧರಿತ್ರಿಯನ್ನು ಸಂತೈಸು.

        ----ಚಿನ್ಮಯಿ

No comments:

Post a Comment