Saturday, September 26, 2020

ಕತ್ತಲಿಂದ ಬೆಳಕಿನೆಡೆಗೆ...!

ಚಿತ್ರಕ್ಕೆ ಪದ್ಯ-೪೬

ಹಗಲಿಂದು ಕಗ್ಗತ್ತಲಾಗಲು,

ಒಳ ಸೂರ್ಯನು ಮಂಕಾದನು,

ಕರಿ ಮೋಡಗಳ ಗೋಡೆಯ ಕಾರಣ!

ಕತ್ತಲೆಯಲ್ಲೂ ಬೆಳದಿಂಗಳಂತೆ,

ನಗೆಯ ಕಾಂತಿಯ ಚಿಮ್ಮಿಸಿದನು,

ಮೋಡಗಳ್ಹಿಂದಿರೋ ಹೊಂಗಿರಣ.


ಕಂಗೆಟ್ಟು ಜೀವನ ಸಾಕಾಗಿ,

ಸೋಲೊಪ್ಪಿ ಸಾಯಬೇಕೇ,

ಎದುರಿಸದೆ ಜೀವನದ ಕಾದಾಟ?

ಯೋಚನೆ ನೂರೆಂಟಿದ್ದರು,

ಸಾಧಿಸೋ ಛಲವಿದ್ದರೆ ಸಾಕು,

ಧರೆಯಾಗುವುದು ನಿಜ ವೈಕುಂಠ.

            ----ಚಿನ್ಮಯಿ

No comments:

Post a Comment