Friday, October 29, 2021

ನಾನು-ನಾವು

ನೂರಾರು ಹೃದಯದೊಳು ಗೂಡು ಕಟ್ಟು,

ಝಣ ಝಣ ಕಾಂಚಾಣವ ದೂರವಿಟ್ಟು.

ತನ್ನ ಗರ್ಭದೊಳು ಚಿರನಿದ್ರಾ ಲಾಲಿಯಾಡುವಾಗ ಭೂಮಿ,

ಹೊತ್ಕೊಂಡ್ ಹೋಗೋದ್ ಏನಿದೆ ಸ್ವಾಮಿ?

ಒಳ್ಳೆತನದಿ ಬಾಳಿದರಷ್ಟೇ ನೀ ಸಿರಿವಂತ,

ಸ್ನೇಹ ಪ್ರೀತಿ ವಿಶ್ವಾಸದಿಂದಲೇ ನೀ ಜೀವಂತ.


ಮೂರ್ನಾಲ್ಕ್ ದಿನದ ಬಾಳಿದು.

ಇರುವಷ್ಟ್ ದಿನ ಒಳ್ಳೆದ್ ಮಾಡು.

'ನಾನು'ವೇ ಅಂಧಕಾರ.

'ನಾವು'ವೇ ಸಾಕ್ಷಾತ್ಕಾರ.

       ----ಚಿನ್ಮಯಿ

No comments:

Post a Comment