Wednesday, March 22, 2023

'ರಾಜ ರತ್ನ-ಯುವರತ್ನ-ಕರ್ನಾಟಕ ರತ್ನ' "ಡಾ|| ಪುನೀತ್ ರಾಜ್‍ಕುಮಾರ್"

ಚಿತ್ರಕ್ಕೆ ಪದ್ಯ- ೬೫


ನಾ ಬರೆಯಲು ಹೋದರೆ ನಿಮ್ಮ ಕುರಿತು,

ಕೈ ನಡುಕ ಶುರುವಾಗಿ ಲೇಖನಿ ಜಾರಿತು.


ಒಂಥರ ಸುಮಧುರ ಭಯದಿ ಎದೆಬಡಿತ ಏರಿದೆ,

ಆ ನಗು ಮುಖವು ಸದಾ ಒಳ-ಒಳಗೆ ಕಾಡಿದೆ.

ನೀವ್ ಇಲ್ಲದಿದ್ದರೂ ಇದ್ದೀರಿ ಅನ್ನೋ ಭಾವನೆ ಒಲವು,

ಅತೀವ ದುಃಖದಲ್ಲೂ ನಗುವುದ ಹೇಳಿಕೊಟ್ಟ ನೀವೇ ಗುರುವು.


ಬದುಕ ಅನುಭವಿಸಲು, ಜೀವಿಸಲು, ಸತ್ತ ಮೇಲೂ ಬದುಕಲು ತೋರಿದ ಮಹಾನ್ ವ್ಯಕ್ತಿತ್ವದ ವ್ಯಕ್ತಿ—

ಎಷ್ಟೋ ಆತ್ಮದೊಳು ಪರಮಾತ್ಮನಾಗಿ ಸದಾ ಜೀವಿಸುತ್ತಿರುವ ಚಿರಂಜೀವಿಯಂತ ಚೇತನ ಶಕ್ತಿ—

ನೀವೇ ಅದು ನೀವೇ ಎಂದೆಂದಿಗೂ ನೀವೇ.


ನಾ ಬರೆಯಲು ಹೋದರೆ ನಿಮ್ಮ ಕುರಿತು,

ಕೈ— ತಾ ಕುಣಿದು ಶಾಯಿಯ ಕುಣಿಸಿತು.


      ----ಚಿನ್ಮಯಿ

No comments:

Post a Comment