Tuesday, November 14, 2023

ದೀಪಾವಳಿ ಹಬ್ಬದಿಂದಿರೋ ಪ್ರಮುಖ ಕಥೆಗಳು-ವಿಶೇಷತೆಗಳು.

ದೀಪಾವಳಿಯು ಬೆಳಕಿನ ಹಬ್ಬ— ಎಲ್ಲಾ ಕಾಲಘಟ್ಟದಲ್ಲೂ ಸುಮಾರು ಕಥೆಗಳಿವೆ. "ಧರ್ಮ-ಅಧರ್ಮ", "ಸತ್ಯ-ಅಸತ್ಯ" ಗಳ ನಡುವಿನ ಮಹಾ ಸಂಘರ್ಷಗಳಿವೆ. ಇಷ್ಟೇಲ್ಲದರಲ್ಲೂ ಗೆದ್ದಿರುವುದು "ಧರ್ಮ-ಸತ್ಯ" ಗಳೇ ಎಂಬುದನ್ನು ನಾವುಗಳೆಲ್ಲರೂ ಅರಿತು ಕೆಳಗಿನ ಪ್ರಮುಖ ಕಥೆಗಳ ಉದಾಹರಣೆಯಂತೆಯೇ ಜೀವಿಸುತ್ತ ನಮ್ಮೊಳಗಿನ ಅಂಧಕಾರವು ನಶಿಸಿ ಬೆಳಕಿನ ಉಗಮದಿಂದ ಬಾಳು ಬೆಳಕಿನೋತ್ಸವವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತ ಹಬ್ಬದಾಚರಣೆಯ ಸಂಭ್ರಮಿಸೋಣ...


"ಸತ್ಯ ಯುಗ (ಚಿನ್ನದ ಯುಗ):"

ಸಮುದ್ರ ಮಂಥನ— ಅಮೃತ-ಮಹಾಲಕ್ಷ್ಮೀಯ ಉಗಮ.

ಬಲಿಯು ಪಾತಾಳದೆಡೆಗೆ— ವಾಮನನ ಪವಿತ್ರ ಪಾದ ಸ್ಪರ್ಶದಿಂದ.


"ತ್ರೇತಾ ಯುಗ:"

ರಾವಣನ ಅಂತ್ಯ— ರಾಮ-ಸೀತೆ-ಲಕ್ಷ್ಮಣರ ಅಯೋಧ್ಯೆಯ ಆಗಮನ.


"ದ್ವಾಪರ ಯುಗ:"

ನರಕಾಸುರನ ವಧೆ— ಕೃಷ್ಣ-ಸತ್ಯಭಾಮೆಯರ ಸಂಗಮದಿಂದ.

ದ್ರೌಪದಿ-ಪಾಂಡವರು— ವನವಾಸ-ಅಜ್ಞಾತವಾಸಗಳಿಂದ ಮುಕ್ತ.


"ಕಲಿ ಯುಗ (ಅಂಧಕಾರ ಯುಗ):"

ಮಹಾಕಾಳಿಯ ರಕ್ಕಸ ರಕ್ತದೋಕುಳಿ— ಮಹಾದೇವನಿಂದಲೇ ಶಾಂತಿಯು ಕೊನೆಗೆ.

ಮಹಾವೀರನ ನಿರ್ವಾಣ— ಜ್ಞಾನೋದಯದಿಂದ ಸರ್ವ ಮುಕ್ತ.

ಮೊಘಲರ ಸೆರೆಯಿಂದ— ಗುರು ಹರಗೋಬಿಂದರ ಬಿಡುಗಡೆಯ ಸಂಭ್ರಮ.


             ----ಚಿನ್ಮಯಿ

No comments:

Post a Comment