Sunday, December 10, 2023

ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ...

ಮಕ್ಕಳಿಗೆ ವಿದ್ಯೆ, ಬುದ್ಧಿಗಳ ಜೊತೆ ಜೊತೆಯಲ್ಲಿ ಸಂಸ್ಕಾರ ಅವಶ್ಯವಾಗಿ ಕಲಿಸಲೇಬೇಕು- ಏಕೆಂದರೆ, ಸಂಸ್ಕಾರದಿಂದಲೇ ನಿಜವಾದ ಜೀವನದ ಪಾಠ ಅರ್ಥವಾಗೋದು, ಅದುವೇ ಜೀವನಕ್ಕೆ ಬೇಕಾಗಿರೋದು, ವಿದ್ಯೆ ಬುದ್ಧಿಯೆಲ್ಲವೂ ನಂತರವಷ್ಟೇ. ಆದರೇ, ಈಗಿನ ಕಾಲದ ಮುಕ್ಕಾಲೂ ಭಾಗ ತಂದೆ ತಾಯಂದಿರು ಈ ಅತೀ ಸೂಕ್ಷ್ಮ ಹಾಗೂ ಪ್ರಮುಖ ವಿಚಾರವನ್ನು ಕಡೆಗಣಿಸಿ, ಮರೆತು ತಮ್ಮ ಮಕ್ಕಳಿಗೆ ಕಲಿಸದಿರುವುದು ವಿಷಾದದ ಸಂಗತಿ ಹಾಗೂ ಅರ್ಧಮಕ್ಕೆ ಸಮ.

ಮನುಷ್ಯನಿಗೆ ವಿದ್ಯೆ, ಬುದ್ಧಿಗಳು ದೊರಕದಿದ್ದರೂ ಪರವಾಗಿಲ್ಲ ಆದರೇ, ಸಂಸ್ಕಾರ ಅಂತೂ ದೊರಕಲೇ ಬೇಕು- ಏಕೆಂದರೆ, "ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ..."

ಸಂಸ್ಕಾರವಿಲ್ಲದ ದೇಶವು ದೇಶವೇ ಅಲ್ಲ.

ಸಂಸ್ಕಾರವಿಲ್ಲದ ಮನೆಯು ಮನೆಯೇ ಅಲ್ಲ.

ಸಂಸ್ಕಾರವಿಲ್ಲದ ಮನುಷ್ಯನು ಮನುಷ್ಯನೇ ಅಲ್ಲ.


             ----ಚಿನ್ಮಯಿ

No comments:

Post a Comment