Thursday, April 23, 2020

ಭಾರತ 🇮🇳

ಇತಿಹಾಸ ತಿಳಿಸುತ್ತದೆ, ಭರತ ಭೂಮಿಗೆ ಸರಿಸಾಟಿಯಾಗಿ ಯಾರಿಲ್ಲವೆಂದು.
ಎಷ್ಟೋ ಮೊದಲುಗಳು ಇಲ್ಲಿಂದಲೇ ಶುರುವು ಎಂದು ನಮ್ಮ ಹಿರಿಯರು ತೋರಿಸಿದರಲ್ಲ ಅಂದು.

ಪುಣ್ಯಾತ್ಮರು ಹೋರಾಡಿ ಶ್ರಮಿಸಿ,
ನೆತ್ತರು ಹರಿಸಿ, ಪ್ರಾಣತ್ಯಾಗ ಮಾಡಿದ ಪುಣ್ಯ ಭೂಮಿ ನಮ್ಮದು.
ಪ್ರತೀ ದಿನ ಸೈನಿಕರು ದೇಶಕ್ಕಾಗಿ, ನಮಗಾಗಿ, ಹೋರಾಡಲು ನಮಗಿಲ್ಲಿ ಶಾಂತಿಯುತ ಬಾಳು.

ವ್ಯವಸಾಯವೇ ನಮ್ಮ ದೇಶದ ಬೆನ್ನೆಲುಬು.
ರೈತನಿಲ್ಲದ ಜೀವನ ಊಹಿಸಲು ಅಸಾಧ್ಯವು.

ದೇಶದೆಲ್ಲರೂ ಒಂದೇ ಎಂದು ಕೂಗಿ ಹೇಳುವೆ,
ಸಮೃದ್ಧ, ಭವ್ಯ ದೇಶವು ನಮ್ಮಯ ಭಾರತ.

ಜೈ ಹಿಂದ್
                       ----ಚಿನ್ಮಯಿ

No comments:

Post a Comment