Thursday, April 23, 2020

ಕಾವೇರಿ

ಕಾವೇರಿ ಮಾತೆಯು ಪ್ರಕೃತಿ ಸ್ವರೂಪಿ,
ಹರಿಯುತ್ತ ಸೇರುವಳು ಎಲ್ಲರಿಗೂ ಸಮನಾಗಿ.

ಕನಸಿನ ಆಶಯ ನಾವು ಕಾಣುತ,
ಮನಸಿನ ಆಸೆಯ ಕಳೆದುಕೊಳ್ಳುತ.
ಎದ್ದು ಬಂದೆವು. ಓ ಎದ್ದು ಬಂದೆವು,
ನ್ಯಾಯಕ್ಕೆ ನಾವು ಎಂದೂ ಸಿದ್ದವು.

ರಾಜಕೀಯ ದ್ರೋಹ ಎಂದೂ ಮರೆವೆವು,
ನ್ಯಾಯದ ಸುತ್ತ ಸದಾ ಇರುವೆವು.
ಎರಡೂ ರಾಜ್ಯಗಳ ಮುಖಂಡರಿಗೆ ಮಖಕ್ಕೆ ಉಗಿವೆವು,
ಸೋಲನ್ನು ನಾವು ಎಂದೂ ಒಪ್ಪೆವು.

ಕರುನಾಡು ಇದು ಚಿನ್ನದ ನಾಡು,
ಮಾನವೀಯತೆ ಮೆರೆವ ಶಾಂತಿಯ ಬೀಡು.
ತೊಂದರೆ ಕೊಟ್ಟರೆ ನಾವು ಉಗ್ರ ಪ್ರತಾಪಿ,
ಸಹನೆ ಕಾಪಾಡಿದರೆ ಹಂಚುತ್ತೇವೆ ಪ್ರೀತಿ.

ಕನಸಿನ ಆಶಯ ನಾವು ಕಾಣುತ್ತ,
ಮನಸಿನ ಆಸೆಯ ಕಳೆದುಕೊಳ್ಳುತ್ತ.
ನಮಗೆ ನಮ್ಮವರೆ ಮೋಸ ಮಾಡುತ್ತ,
ಕೊನೆಗೆ ನಮಗೆ ನ್ಯಾಯ ಸಿಗತ್ತ...?

ನಾ ಅರಿಯನು...!
                        ----ಚಿನ್ಮಯಿ

No comments:

Post a Comment