Thursday, April 23, 2020

ಸೈನಿಕ

ಓ ಸೈನಿಕ, ಪ್ರಾಣ ರಕ್ಷಕ.
ದೇಶ ರಕ್ಷಕ, ಶತ್ರು ಭಕ್ಷಕ,
ನೀನೇ ಸೈನಿಕ ನೀನೇ ಸೈನಿಕ.

ಭಯೋತ್ಪಾದಕರ ದಾಳಿಗೆ ಅಗಲಿದ ವೀರ ಸೈನಿಕರಿಗೆ ನಮ್ಮೆಲ್ಲರ ನಮನ,
ಮೋದಿ ಅವರು ಸೈನಿಕರಿಗೆ ಸ್ವತಂತ್ರ ನೀಡಿ ಸೆಳೆದರು ನಮ್ಮೆಲ್ಲರ ಗಮನ.

ರಕ್ತದ ಕಣ ಕಣದಲ್ಲೂ ದೇಶದ ಅಭಿಮಾನ,
ಶತ್ರುವಿನ ಎದೆ ಬಗೆಯಲು ಏತಕೆ ಬಿಗುಮಾನ?

ಏಳು ಬೇಟೆಯಾಡು, ನಡೆಸಿಬಿಡು ಅಂತಕರ ಮಾರಣಹೋಮ,
ಪ್ರತೀಕಾರದ ಕಿಚ್ಚಿಗೆ ಯುದ್ದ ಸಾರಿ ಮಾಡಿಬಿಡು ಶತ್ರುವಿನ ನಿರ್ಣಾಮ.

ಭಯೋತ್ಪಾದಕರ ಹುಟ್ಟಡಗಿಸಿ ಸತ್ತ ಯೋಧರ ಆತ್ಮಕ್ಕೆ ಶಾಂತಿ ಕೊಡಿಸಿ,
ಭಾರತೀಯರೆಲ್ಲರೂ ನಿಮ್ಮೊಂದಿಗೆ ಇದ್ದೀವಿ ರಣ ಕಹಳೆ ಬಾರಿಸಿ.
                    ----ಚಿನ್ಮಯಿ

No comments:

Post a Comment