Thursday, April 23, 2020

ಗೆಳೆಯ ಗೆಳೆಯ

ಮನಸಿದ್ದರೆ ಮಾರ್ಗವು ಉಂಟು ಗೆಳೆಯ ಗೆಳೆಯ,
ಛಲವಿದ್ದರೆ ಜಯವು ಉಂಟು ಗೆಳೆಯ ಗೆಳೆಯ.

ಅನಿಸಿದ್ದನ್ನು ಒಮ್ಮೆ ಅಂಜದೆ ಮಾಡು,
ಜಗತ್ತನ್ನು ಒಮ್ಮೆ ಎದುರಿಸಿ ನೋಡು,
ಜಯಭೇರಿಯು ನಿನ್ನ ಪಾಲಿಗೆ ಖಚಿತ,
ಕಿರುನಗೆಯು ನಿನ್ನ ಮೊಗಕೆ ಉಚಿತ.

ಸರಿಯಾದ ಹಾದಿಯಲ್ಲಿ ನಿನ್ನ  ಹೆಜ್ಜೆ ಗುರುತು,
ಅದರಲ್ಲೇ ಅಡಗಿದೆ ನಿನ್ನಯ ಸ್ವತ್ತು.
ಬಾಳಿಗೆ ಬೆಳಕು ನಿನ್ನ ಪ್ರತಿಬಿಂಬವು,
ನಾಳಿನ ಚಿಂತೆಯು  ಈಗಲೇ ಕೊನೆಯು.
                     ----ಚಿನ್ಮಯಿ

No comments:

Post a Comment