Thursday, April 23, 2020

ನಮ್ಮ ಕನ್ನಡಿಗರ ಗಮನಕ್ಕೆ!

ನಮ್ಮ ಕನ್ನಡಿಗರ ಗಮನಕ್ಕೆ ಒಂದು ಮಾತು,
ಕೇಳಿದರೆ ಅದುವೇ ಕನ್ನಡ ಭಾಷೆಗೆ ಒಳಿತು,
ಇಲ್ಲವೇ ಕಾದಿದೆ ಸ್ವತಂತ್ರೀಯ ಭಾಷೆಗೆ ಆಪತ್ತು...!

ಕನ್ನಡ ಭಾಷೆಯು ಅಮೃತಾ ಎಂಬುದು ನೀನು ಅರಿತುಕೋ,
ಗಾಂಚಲಿ ಬಿಟ್ಟು ಕನ್ನಡ ಮಾತಾಡೋದು ಮೊದಲು ಕಲಿತುಕೋ.

ಚಿನ್ನದ ಗಣಿಯ ನಾಡು ಇದು ಎಂಬುದು ನಿನಗೆ ಮತ್ತೊಮ್ಮೆ ತಿಳಿಯಲಿ,
ಯಾಕೋ ಪಾಪ ಮರೆತು ಮೆರೆಯುತ್ತಿರುವೆ! ನಿನ್ನೀ ಸೊಕ್ಕು ನಾಶವಾಗಲಿ.

ಪರಭಾಷೆಗೆ ಗೌರವ ನೀಡು ಆದರೆ, ನಮ್ಮ ಕರ್ನಾಟಕವೇ ನಮಗೆ ನಾಡು-ಬೀಡು.
ಸುಮ್ಮನೆ ಅಸಡ್ಡೆ ತೋರದಿರು ನನ್ನ-ನಿನ್ನ ಕನ್ನಡಕ್ಕೇ ಗೆಳೆಯ,
ಮೆಲ್ಲನೆ ಅಳಿವುದು ಕನ್ನಡ, ಅದಕ್ಕೇ ಇರಲಿ ಕನ್ನಡವೇ ನಿನ್ನ ಸನಿಹ.

ಜೀವನದಿ ಕಾವೇರಿ, ಪ್ರೀತಿಯಿಂದ ಸವಿಯಿರಿ-ಕುಡಿಯಿರಿ,
ಜೀವನಾಡಿ ಕನ್ನಡ, ಖುಷಿಯಿಂದ ನಡೆಯಿರಿ-ನುಡಿಯಿರಿ.

ಕನ್ನಡ ಜೇನಿನಂತೆ, ಕಲಿಯೋದು ಹಾಗು ಬರೆಯೋದು ಬಹಳ ಸಲೀಸು,
ನಾವೆಲ್ಲರೂ, ತಾಯಿ ಕಾವೇರಿ ಹಾಗು ಭುವನೇಶ್ವರಿಯ ಮುದ್ದಿನ ಕೂಸು(ಗಳು).

 ಮಲೆನಾಡಿನ ಮಲೆಯಲ್ಲಿ, ಮಲೆಯ ಮೂಲೆಯಲ್ಲೂ ಸ್ವರ್ಗದ ಸಮ್ಮಿಳನ,
ಮಳೆನಾಡಿನ ಉಸಿರಲ್ಲಿ, ಮಳೆಯ ಸುಗಂಧದಲ್ಲೂ ಕನ್ನಡಿಗರ ತನು-ಮನ.

೮ ಜ್ಞಾನಪೀಠ ಪ್ರಶಸ್ತಿಗಳ ಸುರಿಮಳೆ,
ಶಿಖರದ ಮೇಲೆಯು ಕಾಫಿಯ ಬೆಳೆ.

ಹೀಗೇ ಮುಂದುವರಿದರೆ,
ಮುಂದಿನ ದಿನಗಳಲ್ಲಿ ಕನ್ನಡ ತಿಳಿ-ಕಲಿ-ನುಡಿ-ನಡೆ ಮಾತುಗಳು ಮಾಯವಾಗಿ,
ಕನ್ನಡ ಎಕ್ಕಡಾ? ಎನ್ನಡಾ ಕನ್ನಡ? ಪರಿಸ್ಥಿತಿ ಬರುವುದಂತೂ ಖಚಿತವಾದ ಕಹಿ.

ಅದಕ್ಕೇ,

ನಮ್ಮ ಕನ್ನಡಿಗರ ಗಮನಕ್ಕೆ ಒಂದು ಮಾತು,
ಕೇಳಿದರೆ ಅದುವೇ ಕನ್ನಡ ಭಾಷೆಗೆ ಒಳಿತು,
ಇಲ್ಲವೇ ಕಾದಿದೆ ಸ್ವತಂತ್ರೀಯ ಭಾಷೆಗೆ ಆಪತ್ತು...!

ಕನ್ನಡ ಭಾಷೆ  ಅಮೃತಾ ಎಂಬುದು ನೀನು ಅರಿತುಕೋ,
ಗಾಂಚಲಿ ಬಿಟ್ಟು ಕನ್ನಡ ಮಾತಾಡೋದು ಮೊದಲು ಕಲಿತುಕೋ.
               ----ಚಿನ್ಮಯಿ

No comments:

Post a Comment