Thursday, April 23, 2020

ನನ್ನಯ ದೇವಕನ್ಯೆ

ನೀನೊಂದು ಸಾಗರದಡಿ ಅಡಗಿರುವ ಹರಳು,
ನೀನೆಂದು ಚಿಗುರಿನ ಹೂವಿನಂತೆ ಅರಳು.
ಕ್ಷೀರಸಾಗರದಲ್ಲಿ ಮಿಂದೆದ್ದಾ ಸೌಂದರ್ಯ ಕನ್ಯೆಯಂತೆ ನೀ ಸಾಗಲು,
ಆ ದೃಶ್ಯ ವೀಕ್ಷಣೆಯಿಂದ ನನ್ನ ನಯನಗಳೇ ಮರುಳು.

ದೇವಲೋಕದಿಂದ ನೀ ಸೀದ ನನ್ನೆಡೆಗೆ ಬಂದಂತೆ ಭಾಸವಾಗಲು,
ನಾ ದೇವನೋ ಮನುಷ್ಯನೋ ಎಂಬುದು ಅರಿಯದೆ ನಾನು ದಿಗ್ಭ್ರಾಂತಿ!
ಒಂದು ಕ್ಷಣ ಮೈಮರೆತಂತೆ ಕಣ್ಣು ತೆರೆದಾಗ ನೀ ಎದುರಿಗೆ ಕುಂತಿರಲು,
ನನಗರಿಯಿತಾಗ ನೀ ದೇವತೆ ಈ ದೇವನ ಬಳಿ ಬಂದಿರುವೆ ಪಡೆಯಲು ವಿಶ್ರಾಂತಿ.
                 ----ಚಿನ್ಮಯಿ

No comments:

Post a Comment